• About
  • Advertise
  • Careers
  • Contact
Tuesday, May 20, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಹಳ್ಳಿ, ಪಟ್ಟಣ ಮನುಷ್ಯ ಮನದೊಳಗೆ ಬದುಕುತ್ತಿದ್ದ ಗುಬ್ಬಚ್ಚಿಗಳು ಎಲ್ಲಿಗೆ ಹೋದವೋ..?

cknewsnow desk by cknewsnow desk
March 20, 2022
in GUEST COLUMN, STATE
Reading Time: 1 min read
0
ಹಳ್ಳಿ, ಪಟ್ಟಣ ಮನುಷ್ಯ ಮನದೊಳಗೆ ಬದುಕುತ್ತಿದ್ದ ಗುಬ್ಬಚ್ಚಿಗಳು ಎಲ್ಲಿಗೆ ಹೋದವೋ..?
950
VIEWS
FacebookTwitterWhatsuplinkedinEmail

ಇಂದು ವಿಶ್ವ ಗುಬ್ಬಚ್ಚಿಗಳ ದಿನ

by Dr. M Venkataswamy

Photos by Vishwanath Suvarna

ನನಗಾಗ ಐದೋ ಆರೋ ವರ್ಷಗಳ ವಯಸ್ಸು ಇರಬೇಕು. ಮನೆ ಮೇಲೆ ಹಾಸಿದ್ದ ಹಂಚಿ ಹುಲ್ಲನ್ನು ತೂರಿಕೊಂಡ ಬಂದ ಸೂರ್ಯನ ಕಿರಣಗಳು ಗೋಡೆ ಮತ್ತು ನೆಲದ ಮೇಲೆ ಬೆಳ್ಳನೆ ಕೋಲುಗಳಂತೆ ಬೀಳುತ್ತಿದ್ದವು. ಆ ಬೆಳಕಿನಲ್ಲಿ ಒಲೆಯಲ್ಲಿ ಏಳುತ್ತಿದ್ದ ಹೊಗೆಯ ಮೋಡಗಳು ಮತ್ತು ಧೂಳಿನ ಕಣಗಳು ಬ್ರಹ್ಮಾಂಡದಲ್ಲಿನ ಕೋಟಿಕೋಟಿ ನಕ್ಷತ್ರಗಳಂತೆ ಮಿನುಗುತ್ತ ಹಾರಾಡುತ್ತಿದ್ದವು.

ಮನೆಯ ಒಳಗೆ ಹಂಚಿ ಹುಲ್ಲಿನಲ್ಲಿ ಗೂಡುಗಳನ್ನು ಮಾಡಿಕೊಂಡಿದ್ದ ಗುಬ್ಬಚ್ಚಿಗಳು ಚಿವ್… ಚಿವ್… ಎನ್ನುತ್ತ ಪರ‍್ರನೆ ಹಾರುತ್ತ ಗೂಡುಗಳ ಒಳಗಿದ್ದ ಮರಿಗಳಿಗೆ ಹುಳುಹುಪ್ಪಟೆಗಳನ್ನು ತಂದು ತಿನ್ನಿಸುತ್ತಿದ್ದವು. ರೆಕ್ಕೆಗಳಿಲ್ಲದ ಮರಿಗಳು ಬಿಳಿಕೆಂಪು ಚರ್ಮದ ದೇಹಗಳೊಂದಿಗೆ ಉದ್ದನೆ ಕೊಕ್ಕುಗಳನ್ನು ಗೂಡುಗಳಿಂದ ಹೊರಕ್ಕೆ ಚಾಚಿ ಬಾಯಿ ತೆರೆದು ತಾಯಿ ಗುಬ್ಬಚ್ಚಿಗಳು ಕೊಡುತ್ತಿದ್ದ ಆಹಾರವನ್ನು ಮೆಲ್ಲುತ್ತಿದ್ದವು. ಹುಲ್ಲು ತೃಣಗಳು, ಹುಳುಹುಪ್ಪಟೆಗಳು, ಕೆಲವೊಮ್ಮೆ ಮೊಟ್ಟೆಗಳೂ ಸಹ ನೆಲಕ್ಕೆ ಬಿದ್ದುಬಿಡುತ್ತಿದ್ದವು. ಆಗ ಗುಬ್ಬಚ್ಚಿಗಳು ಮನೆಯೆಲ್ಲ ಚೀರಾಡುತ್ತ ಹಾರಾಡುತ್ತಿದ್ದವು. ಈಗ ನನಗೆ 65 ವರ್ಷಗಳು. ಹಂಚಿ ಹುಲ್ಲಿನ ಮನೆಗಳು ಸಿಮೆಂಟ್ ಮನೆಗಳಾಗಿ ಈ ಗುಬ್ಬಚ್ಚಿಗಳೆಲ್ಲ ಎಲ್ಲಿಗೊ ಹೋದವೊ ಕಾಣಿಸುತ್ತಿಲ್ಲ.

ಗುಬ್ಬಚ್ಚಿ ಒಂದು ಸಣ್ಣ ಬೂದು ಮತ್ತು ಕಂದು ಬಣ್ಣದ ಪಕ್ಷಿಯಾಗಿದ್ದು ಮಸುಕಾದ ಕಣ್ಣುಗಳು ಮತ್ತು ತೆಳುವಾದ ಕೊಕ್ಕು ಹೊಂದಿರುತ್ತದೆ. ಜಗತ್ತಿನಾದ್ಯಂತ ಮುಖ್ಯವಾಗಿ 26 ಗುಬ್ಬಿ ಜಾತಿಗಳು ಇದ್ದು ಅವುಗಳಲ್ಲಿ 5 ಜಾತಿಯ ಗುಬ್ಬಿಗಳು ಭಾರತದಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. ಮತ್ತೆ ಇವುಗಳಲ್ಲಿ ಹಲವು ಮಿಶ್ರಣ ಬಣ್ಣಗಳ ಗುಬ್ಬಚ್ಚಿಗಳಿವೆ. ಸಾಂಗ್ ಸ್ಪ್ಯಾರೋ ಗುಬ್ಬಚ್ಚಿ ವ್ಯಾಪಕವಾಗಿ ಕಂಡುಬರುವ ಗುಬ್ಬಚ್ಚಿ. ಫಾಕ್ಸ್, ವೈಟ್ ಥ್ರೋಟೆಡ್, ವೆಸ್ಪರ್, ಲಾರ್ಕ್, ಗೋಲ್ಡನ್ ಕ್ರೌನ್, ಜೇಡಿ ಮಣ್ಣು ಬಣ್ಣ, ಚಿಪ್ಪಿಂಗ್, ಸವನ್ನಾ, ಯುರೇಷಿಯನ್, ಇಂಡಿಯನ್ ಹೀಗೆ.

ಮೊದಲಿಗೆ ಕಾಡಿನಲ್ಲಿದ್ದ ಅದಿಮ ಮನುಷ್ಯ ನಾಗರಿಕನಾದಂತೆ ತನ್ನ ಸುತ್ತಲಿನ ಪಕ್ಷಿ-ಪ್ರಾಣಿಗಳ ಜೊತೆಗೆ ಒಡನಾಟವನ್ನು ಬೆಳೆಸಿಕೊಳ್ಳತೊಡಗಿದ. ಕಾಡಿನಲ್ಲಿ ವಾಸಿಸುತ್ತಿದ್ದ ಮನುಷ್ಯ ಬಯಲಿಗೆ ಬಂದು ನೆಲೆಸುತ್ತಿದ್ದಂತೆ ತನ್ನ ಜೊತೆಗೆ ಪಕ್ಷಿ-ಪ್ರಾಣಿಗಳನ್ನು ಪಳಗಿಸಿ ಜೊತೆಗೆ ತಂದ. ಎಷ್ಟೊ ಪ್ರಾಣಿಗಳು ಇಂದಿಗೂ ಮನುಷ್ಯನಿಂದ ದೂರವೇ ಉಳಿದುಕೊಂಡರೂ ಆನೇಕ ಪಕ್ಷಿ-ಪ್ರಾಣಿಗಳು (ಜಾನುವಾರಗಳು) ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆಗೆ ಬದುಕು ನಡೆಸುತ್ತಿವೆ. ಅವುಗಳಲ್ಲಿ ಹೆಬ್ಬೆಟ್ಟು ಗಾತ್ರ ದೇಹದ ಗುಬ್ಬಚ್ಚಿಗಳು ಸೇರಿವೆ. ಅವುಗಳ ಉದ್ದನೆ ಕೊಕ್ಕು, ಬಾಲ, ಬಣ್ಣಬಣ್ಣದ ರೆಕ್ಕೆಗಳು ನೂರಾರು ಬಗೆಯ ಸದ್ದು, ಹಾರಾಡುವ ರೀತಿ ನಿಸಿರ್ಗದ ಸೌಂದರ್ಯವನ್ನು ಹೆಚ್ಚಿಸಿವೆ. ಗುಬ್ಬಚ್ಚಿಗಳನ್ನು ವೀಕ್ಷಿಸುವುದೇ ಒಂದು ಆನಂದ.

ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಮನೆ ಗುಬ್ಬಚ್ಚಿಗಳು ಮತ್ತು ನಗರಗಳಲ್ಲಿ ವಾಸಿಸುವ ಇತರ ಸಾಮಾನ್ಯ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಮುಖ್ಯವಾಗಿ ಅವು ಅಳಿಯದಂತೆ ಕಾಪಾಡಿಕೊಳ್ಳಬೇಕಿದೆ. ಫ್ರಾನ್ಸ್ನ ಇಕೋ-ಸಿಸ್ ಫೌಂಡೇಶನ್ ಮತ್ತು ವಿಶ್ವದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಭಾರತದ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ ಕೂಡ ಕೈಜೋಡಿಸಿದೆ. ಈ ಸಂಸ್ಥೆಯನ್ನು ಮೊಹಮ್ಮದ್ ದಿಲಾವರ್ ನಾಸಿಕ್‌ನಲ್ಲಿ ಮನೆ ಗುಬ್ಬಚ್ಚಿಗಳಿಗೆ ಸಹಾಯ ಮಾಡುವ ಆಲೋಚನೆಯಿಂದ ಮೊದಲಿಗೆ ಪ್ರಾರಂಭಿಸಿದರು. ನಂತರ ವಿಶ್ವದ ವಿವಿಧ ಭಾಗಗಳಲ್ಲಿ ಗುಬ್ಬಚ್ಚಿಗಳ ದಿನವನ್ನು 2010ರಲ್ಲಿ ಮೊದಲಿಗೆ ಆಚರಿಸಲಾಯಿತು. ಈ ಜಾಗೃತಿ ಅಭಿಯಾನದಲ್ಲಿ ಗುಬ್ಬಚ್ಚಿಗಳ ಮೆರವಣಿಗೆ, ಮಾಧ್ಯಮಗಳೊಂದಿಗೆ ಸಂವಾದ ಮತ್ತು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲಾಯಿತು.

ಈ ಮನೆ ಗುಬ್ಬಚ್ಚಿಗಳು (ಪಾಸರಿಡೇ ಕುಟುಂಬ) ಯಾವ ಕಾಲದಿಂದ ಮನುಷ್ಯನ ಜೊತೆಗೆ ಮತ್ತು ಮನೆಗಳ ಒಳಗೆ ವಾಸಿಸಲು ಪ್ರಾರಂಭಿಸಿದವೊ ತಿಳಿಯದು. ಗುಬ್ಬಚ್ಚಿಗಳ ಹಲವಾರು ಪ್ರಭೇದಗಳು ಜಗತ್ತಿನ ಹೆಚ್ಚು ಭಾಗಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಇವು 6 ಅಂಗುಲ ಉದ್ದ ಮತ್ತು 25-40 ಗ್ರಾಮ್ ತೂಕವನ್ನು ಹೊಂದಿವೆ. ಹೆಣ್ಣು ಮತ್ತು ಎಳೆ ಗುಬ್ಬಿಗಳು ಮಸುಕಾದ ಕಂದು ಮತ್ತು ಬೂದು ಬಣ್ಣವನ್ನು ಹೊಂದಿದ್ದರೆ, ಗಂಡು ಗುಬ್ಬಿಗಳು ಹೊಳೆಯುವ ಕಪ್ಪು, ಬಿಳಿ ಮತ್ತು ಕಂದು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತವೆ. ಪಾಸರ್ ಕುಟುಂಬದ 26 ಪ್ರಭೇದಗಳಲ್ಲಿ ಒಂದಾದ ಮನೆ ಗುಬ್ಬಚ್ಚಿ ಯುರೋಪ್‌ನ ಹೆಚ್ಚಿ ಭಾಗಗಳು, ಮೆಡಿಟರೇನಿಯನ್ ಜಲಾನಯನ ಪ್ರದೇಶ, ಏಷ್ಯಾದ ಹೆಚ್ಚಿನ ಭಾಗಗಳಲ್ಲಿ, ಆಸ್ಟೆçÃಲಿಯಾ, ಆಫ್ರಿಕಾ ಮತ್ತು ಅಮೆರಿಕದ ಹಲವಾರು ಭಾಗಗಳಲ್ಲಿ ಕಂಡುಬರುತ್ತವೆ.

ಗುಬ್ಬಚ್ಚಿಗಳು ಮನುಷ್ಯನ ಜೊತೆಗೆ ಗಾಢ ಸಂಬಂಧ ಹೊಂದಿದ್ದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೈವಿಧ್ಯಮಯ ಆವಾಸಸ್ಥಾನಗಳು ಮತ್ತು ಹವಾಮಾನಗಳಲ್ಲಿ ಕಂಡುಬರುತ್ತವೆ. ವಿಶೇಷವೆಂದರೆ ಗುಬ್ಬಚ್ಚಿಗಳು ಕಾಡುಪ್ರದೇಶಗಳು, ಹುಲ್ಲುಗಾವಲು ಮತ್ತು ಮರುಭೂಮಿಗಳಿಂದ ದೂರವಿದ್ದು ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಊರುಗಳ ತುಂಬಾ ಕಂಡಬರುತ್ತಿದ್ದವು. ಗುಬ್ಬಿಗಳು ಬಿಸಿಲು, ಚಳಿ, ಮಳೆಗಾಳಿ ಇನ್ನಿತರ ಹವಾಮಾನ ವೈಪ್ಯರೀತಿಗಳಿಂದ ತಪ್ಪಿಸಿಕೊಳ್ಳಲು ಜನರ ಆವಾಸಸ್ಥಾನಗಳನ್ನು ಆಯ್ಕೆ ಮಾಡಿಕೊಂಡರಬೇಕು. ಹೆಚ್ಚಾಗಿ ಧಾನ್ಯ ಮತ್ತು ಕಳೆಗಳ ಬೀಜಗಳನ್ನು ತಿನ್ನುವ ಗುಬ್ಬಚ್ಚಿಗಳು ಕೀಟಗಳು ಮತ್ತು ಇತರ ಆಹಾರವನ್ನು ತಿನ್ನುತ್ತವೆ.

ಮನೆ ಗುಬ್ಬಚ್ಚಿಗಳು ಮನುಷ್ಯನ ಜೊತೆಗೆ ಬಾಳುವೆ ನಡೆಸುವುದರ ಜೊತೆಜೊತೆಗೆ ಸಾಂಸ್ಕೃತಿಕವಾಗಿ ಶಿಸ್ತನ್ನು ಪಾಲಿಸಿಕೊಂಡು ಬಂದಿವೆ. ಆದರೆ ಆಧುನಿಕ ಜಗತ್ತಿನಲ್ಲಿ ಕೃಷಿಯಲ್ಲಿ ಕೀಟನಾಶಕಗಳನ್ನು ಹೆಚ್ಚೆಚ್ಚು ಬಳಸುವುದರಿಂದ ಈ ಗುಬ್ಬಚ್ಚಿಗಳನ್ನು ಹಿಂಸಿಸಲಾಗುತ್ತಿದೆ. ಮಹಾನಗರಗಳು, ನಗರಗಳು ಮತ್ತು ಪಟ್ಟಣಗಳ ಬಹುಮಹಡಿಯ ಕಟ್ಟಡಗಳು, ಟಿವಿ ಟವರುಗಳು, ಹೈವೊಲ್ಟೇಜ್ ವಿದ್ಯುತ್ ಕಂಬಗಳು, ಬಿಸಿಲಿಗೆ ಪ್ರತಿಫಲಿಸುವ ಕನ್ನಡಿಗಳು, ವಾಹನಗಳು ಉಗುಳುವ ಅನಿಲಗಳು, ಪರಿಸರ ಮಾಲಿನ್ಯ ಎಲ್ಲವೂ ಗುಬ್ಬಿಗಳ ನಾಶಕ್ಕೆ ಕಾರಣವಾಗಿವೆ.

ಒಟ್ಟಿನಲ್ಲಿ ಗುಬ್ಬಚ್ಚಿಗಳು ತಿನ್ನುವ ಆಹಾರ, ಜಲಮಾಲಿನ್ಯ, ಕೀಟನಾಶಕಗಳ ಉಪಯೋಗ ಇತ್ಯಾದಿಯಿಂದ ಅತ್ತ ನಗರಗಳು ಇತ್ತ ಗ್ರಾಮೀಣ ಪ್ರದೇಶಗಳಲ್ಲೂ ಸಂಕಷ್ಟಕ್ಕೆ ಗುರಿಯಾಗಿವೆ. ಇನ್ನು ಪ್ರವಾಹ, ಚಂಡಮಾರುತ ಇತ್ಯಾದಿ ನೈಸರ್ಗಿಕ ವಿಕೋಪಗಳು ಗುಬ್ಬಚ್ಚಿಗಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಮುನುಷ್ಯನ ಜೊತೆಜೊತೆಗೆ ಬಾಳುವೆ ನಡೆಸಿಕೊಂಡು ಬರುತ್ತಿರುವ ಈ ಸುಂದರವಾದ ಹೆಬ್ಬೆಟ್ಟು ಗಾತ್ರದ ಗುಬ್ಬಚ್ಚಿಗಳ ಬದುಕನ್ನು ಮನುಷ್ಯರಾದ ನಾವು ಒಂದಷ್ಟು ಹಾರೈಕೆ ಮಾಡಿ ನಮ್ಮ ಸುತ್ತಲಿನ ವೈವಿಧ್ಯತೆ ಜಗತ್ತಿನಲ್ಲಿ ಇವುಗಳ ಕಲರವವನ್ನು ಉಳಿಸಿಕೊಳ್ಳಬೇಕಿದೆ.

ಈಗಾಗಲೇ ಜಗತ್ತಿನಾದ್ಯಂತ 80% ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದ್ದು ಈ ಪುಟ್ಟ ಪ್ರಪಂಚದ ಸುಂದರ ಗುಬ್ಬಚ್ಚಿಗಳನ್ನು ಉಳಿಸಿಕೊಳ್ಳಲು ಕೆಲವು ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಮಾಡಬೇಕಿದೆ. ಜಗತ್ತಿನ ನಾಗರಿಕರೆಲ್ಲ ಆಯಾ ಪ್ರದೇಶಗಳಲ್ಲಿರುವ ಗುಬ್ಬಚ್ಚಿಗಳಿಗೆ ಆಹಾರ ಧಾನ್ಯ ಮತ್ತು ನೀರನ್ನು ವ್ಯವಸ್ಥೆ ಮಾಡಬೇಕು. ಸಾಧ್ಯವಾದಷ್ಟು ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸಬೇಕು. ಎಲೆಕ್ಟಿçಕ್ ಸಲಕರಣೆಗಳು ಮತ್ತು ಸಲ್‌ಫೋನ್ ಬಳಕೆಯನ್ನು ಕಡಿಮೆ ಮಾಡಿ ಕೀಟನಾಶಕಗಳನ್ನು ಬುದ್ಧಿವಂತಿಕೆಯಿಂದ ಬಳಸಬೇಕಿದೆ. ವಾಹನಗಳಲ್ಲಿ ಉತ್ತಮ ಗುಣಮಟ್ಟದ ಇಂಧನವನ್ನು ಬಳಸಿ ಪರಿಸರ ಮಾಲಿನ್ಯವನ್ನು ಕಾಪಾಡಿಕೊಳ್ಳಬೇಕಿದೆ. ಈ ಸುಂದರ ಗುಬ್ಬಚ್ಚಿಗಳ ಕಲರವ ಎಂದೆAದಿಗೂ ನಮ್ಮ ಸುತ್ತಲಿನ ಪರಿಸರದಲ್ಲಿ ಉಳಿದುಕೊಳ್ಳುವಂತೆ ಮಾಡುವ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕಿದೆ.*


ಡಾ.ಎಂ.ವೆಂಕಟಸ್ವಾಮಿ
ವಿಶ್ರಾಂತ ಭೂ ವಿಜ್ಞಾನಿ, ಹೆಸರಾಂತ ಲೇಖಕ

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಚಿಕ್ಕಬಳ್ಳಾಪುರದಲ್ಲಿ RRR ಇವೆಂಟ್‌, ಜನರಿಗೆ ಕಾದಿದೆ ಕೋವಿಡ್‌ ಹಾರರ್!

ಚಿಕ್ಕಬಳ್ಳಾಪುರದಲ್ಲಿ RRR ಇವೆಂಟ್‌, ಜನರಿಗೆ ಕಾದಿದೆ ಕೋವಿಡ್‌ ಹಾರರ್!

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ; ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು

ಬಾಗೇಪಲ್ಲಿಯಲ್ಲಿ ಸಾರಿಗೆ ಮುಷ್ಕರ ಸಂಪೂರ್ಣ ಯಶಸ್ವಿ; ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್ಸುಗಳು, ಬೆಂಬಲ ನೀಡಿದ ಪ್ರಜಾಸಂಘರ್ಷ ಸಮಿತಿ & ರೈತ ಸಂಘಟನೆಗಳು

4 years ago
ಸಚಿವ ಉಮೇಶ್ ಕತ್ತಿಗೆ ಏನಾಗಿದೆ?

ಸಚಿವ ಉಮೇಶ್ ಕತ್ತಿಗೆ ಏನಾಗಿದೆ?

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ