• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS CRIME

ಹಿಪ್ಪುನೇರಳೆ ಸೊಪ್ಪಿನ ಮೇಲೆ ಟಿಮಿಟ್ ಚೆಲ್ಲಿದ ದುಷ್ಕರ್ಮಿಗಳು; 15 ನಿಮಿಷದಲ್ಲಿ ಅಸುನೀಗಿದ ರೇಷ್ಮೆಹುಳ

cknewsnow desk by cknewsnow desk
April 9, 2022
in CRIME, STATE
Reading Time: 2 mins read
0
ಹಿಪ್ಪುನೇರಳೆ ಸೊಪ್ಪಿನ ಮೇಲೆ ಟಿಮಿಟ್ ಚೆಲ್ಲಿದ ದುಷ್ಕರ್ಮಿಗಳು; 15 ನಿಮಿಷದಲ್ಲಿ ಅಸುನೀಗಿದ ರೇಷ್ಮೆಹುಳ
1.2k
VIEWS
FacebookTwitterWhatsuplinkedinEmail

ಇನ್ನೆರಡು ದಿನದಲ್ಲಿ ಹಣ್ಣಾಗಲಿದ್ದ ರೇಷ್ಮೆಬೆಳೆ ಸರ್ವನಾಶ; ವೇಮಗಲ್‌ ಠಾಣೆ ವ್ಯಾಪ್ತಿಯಲ್ಲಿ ಪಾತಕ ಘಟನೆ

ಕೋಲಾರ: ದ್ವೇಷ ಮತ್ತು ಅಸೂಯೆಯಿಂದ ದುಷ್ಕರ್ಮಿಗಳು ಹಿಪ್ಪುನೇರಳೆ ಸೊಪ್ಪಿನ ಮೇಲೆ ವಿಷಕಾರಕ ಟಿಮಿ‌ಟ್ ಅನ್ನು ಚೆಲ್ಲಿದ ಪರಿಣಾಮ, ಸುಮಾರು ನೂರು ಮೊಟ್ಟೆಯಷ್ಟು ರೇಷ್ಮೆಬೆಳೆ ಸರ್ವನಾಶವಾಗಿರುವ ಧಾರುಣ ಘಟನೆ ತಾಲೂಕಿನ ವೇಮಗಲ್‌ ಪೊಲೀಸ್‌ ಠಾಣೆಯ ಕಾಜಿ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಿಪ್ಪುನೇರಳೆ ಸೊಪ್ಪಿನ ಮೇಲೆ ಟಿಮಿಟ್‌ ಚೆಲ್ಲಿರುವುದು.

ರೇಷ್ಮೆ ಹುಳು ಇನ್ನೆರಡು-ಮೂರು ದಿನಗಳಲ್ಲಿ ಹಣ್ಣಾಗಿ ವಾರದೊಳಗೆ ಗೂಡು ಮಾರುಕಟ್ಟೆಗೂ ಹೋಗುವುದಿತ್ತು. ಪ್ರಸ್ತುತ ಒಂದು ಕೆಜಿ ರೇಷ್ಮೆಗೂಡು 800 ರೂಪಾಯಿಗೂ ಹೆಚ್ಚು ದರಕ್ಕೆ ಮಾರಾಟವಾಗುತ್ತಿದ್ದು, ಕೈಗೆ ಬರಲಿದ್ದ ಬೆಳೆಯನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.

ಬೆಳೆ ಕಳೆದುಕೊಂಡ ರೇಷ್ಮೆ ಬೆಳೆಗಾರ ಚೌಡಪ್ಪ ಈಗ ತಲೆಮೇಲೆ ಕೈಹೊತ್ತು ಕೂತಿದ್ದು, ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಸುಮಾರು 80,000ದಿಂದ 1 ಲಕ್ಷ ರೂಪಾಯಿವರೆಗೂ ನಷ್ಟವಾಗಿದೆ.

ಬುಧವಾರ (ಏಪ್ರಿಲ್‌ 13) ಮಧ್ಯಾಹ್ನದ ನಂತರ ದುಷ್ಕರ್ಮಿಗಳು ಚೌಡಪ್ಪ ಅವರ ಹಿಪ್ಪುನೇರಳೆ ಸೊಪ್ಪಿನ ತೋಟದ ಮೇಲೆ ಟಿಮಿಟ್’ನ್ನು ಪೂರ್ಣವಾಗಿ ಚೆಲ್ಲಿದ್ದು, ಗುರುವಾರ ನಸುಕಿನಲ್ಲಿಯೇ, ಅಂದರೆ; ಬೆಳಗ್ಗೆ 5 ಗಂಟೆ ಸುಮಾರಿಗೆ ಅವರು ಸೊಪ್ಪು ಕುಯ್ದಿದ್ದಾರೆ. ಆ ಸಂದರ್ಭದಲ್ಲಿ ಕೊಂಚ ಕತ್ತಲಿದ್ದ ಕಾರಣಕ್ಕೆ ಅವರಿಗೆ ಟಿಮಿಟ್ ಚೆಲ್ಲಿರುವುದು ಗಮನಕ್ಕೆ ಬಂದಿಲ್ಲ.

ರೇಷ್ಮೆ ಸೊಪ್ಪಿನ ಮೇಲೆ ಟಿಮಿಟ್ ಚೆಲ್ಲಿರುವುದನ್ನು ರೇಷ್ಮೆ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದು, ಅವರೂ ಚೌಡಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವರದಿ ನೀಡುವುದಾಗಿ ರೈತನಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಅಸುನೀಗಿರುವ ರೇಷ್ಮೆಹುಳಗಳು.
ಈ ಬಗ್ಗೆ ಸಿಕೆನ್ಯೂಸ್‌ ನೌ ಜತೆ ಮಾತನಾಡಿದ ರೈತ ಚೌಡಪ್ಪ ಹೇಳಿದ್ದಿಷ್ಟು;

ಈ ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಇನ್ನೆರಡು ದಿನಗಳಲ್ಲಿ ರೇಷ್ಮೆಹುಳ ಹಣ್ಣಾಗುತ್ತಿತ್ತು. ವಾರದಲ್ಲಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಯಾರೋ ಕಿಡಿಗೇಡಿಗಳು ಈ ಬೆಳೆಯನ್ನು ನೋಡಿ ಸಹಿಸಲಾಗದೇ ದ್ವೇಷ ಮನೋಭಾವದಿಂದ ಇಂಥ ಹೀನ ಕೃತ್ಯ ಎಸಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಕೃತ್ಯವನ್ನು ಪರಿಚಿತರೇ ಎಸಗಿರಬಹುದು ಎಂದು ಚೌಡಪ್ಪ ಅನುಮಾನ ವ್ಯಕ್ತಪಡಿಸಿದ್ದು, ಶನಿವಾರ ರೇಷ್ಮೆ ಅಧಿಕಾರಿಗಳು ವರದಿ ನೀಡಿದ ನಂತರ ವೇಮಗಲ್‌ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನದ ನಂತರ ಕಿಡಿಗೇಡಿಗಳು ಟಿಮಿಟ್ ಚೆಲ್ಲಿರುವ ಸಂಶಯ ನಮಗಿದೆ. ನಾವು ಗುರುವಾರ ನಸುಕಿನಲ್ಲಿ ಸೊಪ್ಪು ಕೊಯ್ದೆವು. ಆಗ ನಮಗೆ ಟಿಮಿಟ್ ಚೆಲ್ಲಿರುವುದು ಗೊತ್ತಾಗಲಿಲ್ಲ. ಗುರುವಾರ ಬೆಳಗ್ಗೆ ಮಂಗಳವಾರ ಸಂಜೆ ಕತ್ತರಿಸಿದ್ದ ಸೊಪ್ಪು ಇತ್ತು, ಅದನ್ನೇ ರೇಷ್ಮೆಹುಳಕ್ಕೆ ಕೊಟ್ಟಿದ್ದೆವು. ಆದರೆ, ಅಂದು ರಾತ್ರಿ ಕೊಟ್ಟ ಸೊಪ್ಪಿನಲ್ಲಿ ಟಿಮಿಟ್ ಅಂಶವಿತ್ತು. ಸೊಪ್ಪು ಹಾಕಿದ 15 ನಿಮಿಷಕ್ಕೆಲ್ಲ ರೇಷ್ಮೆಹುಳಗಳು ವಿಸ್ತೇಜಗೊಂಡಂತೆ ಕಂಡುಬಂದವು. ನನಗೆ ಬಹಳಷ್ಟು ಗಾಬರಿಯಾಯಿತು. ಏನಾಗುತ್ತಿದೆ ಎಂದು ನಾನು ಯೋಚಿಸುವಷ್ಟರಲ್ಲಿ ಎಲ್ಲ ಹುಳಗಳು ಅಸುನೀಗಿದವು. ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು ಎಂದು ಚೌಡಪ್ಪ ದುಃಖ ತೋಡಿಕೊಂಡರು.

ಟಿಮಿಟ್‌ ಚೆಲ್ಲಿದ ಪಾತಕ ಕೃತ್ಯಕ್ಕೆ ಇಲ್ಲಿವೆ ಸಾಕ್ಷ್ಯ; ಚಿತ್ರಗಳ ಸ್ಲೈಡ್‌ ನೋಡಿ..

ನಮ್ಮ ತೋಟದ ಸುತ್ತ ಎಲ್ಲರೂ ರಾಗಿ ಬೆಳೆದಿದ್ದಾರೆ. ನಮ್ಮ ತೋಟದಲ್ಲಿ ಮಾತ್ರ ಹಿಪ್ಪುನೇರಳೆ ಸೊಪ್ಪು ಇತ್ತು. ಯಾರೋ ಬೇಕೆಂದೇ ಹೊಂಚು ಹಾಕಿ ಈ ಕೃತ್ಯ ಎಸಗಿದ್ದಾರೆ. ಪೊಲೀಸರಿಗೆ ದೂರು ಕೊಡುತ್ತೇನೆ. ಅವರು ಅಪರಾಧಿಗಳನ್ನು ಪತ್ತೆ ಹಚ್ಚುತ್ತಾರೆಂಬ ವಿಶ್ವಾಸವಿದೆ. ಕೋವಿಡ್‌ ಸಂಕಷ್ಟ ಕಾಲದಲ್ಲಿ ನಮ್ಮ ಪರಿಸ್ಥಿತಿ ಬಹಳ ದುಸ್ತರವಾಗಿತ್ತು. ಈಗಷ್ಟೇ ಬೆಳೆಗಳು ಕೈಗೆ ಬರುತ್ತಿದ್ದವು. ಅಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ನಡೆಸಿ ಸಂತ್ರಸ್ತ ರೈತನಿಗೆ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡರು ಒತ್ತಾಯ ಮಾಡಿದ್ದಾರೆ. ಶನಿವಾರ ರೈತ ಮುಖಂಡರು, ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ನನ್ನ ಕಣ್ಣೆದುರೇ ರೇಷ್ಮೆಹುಳಗಳೆಲ್ಲವೂ ಸತ್ತು ಹೋದವು. ಬಹಳ ದುಃಖವಾಯಿತು. ಬಹಳ ಕಷ್ಟಕಾಲದಲ್ಲಿ ಬೆಳೆ ಕೈಗೆ ಬರುವುದಿತ್ತು. ಆದರೆ, ಯಾರೋ ಕಿಡಿಗೇಡಿ ಇಂಥ ಹೀನ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ.

ಚೌಡಪ್ಪ, ಸಂತ್ರಸ್ತ ರೈತ
Tags: cknewsnowcrimefarmerkarnatakakolarsilkSilk cropsilk wormtimit attackvemagal
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಗುಡಿಬಂಡೆ ಕರವೇ ಅಧ್ಯಕ್ಷರಾಗಿ ಶ್ರೀನಿವಾಸ್ ಯಾದವ್‌

ಗುಡಿಬಂಡೆ ಕರವೇ ಅಧ್ಯಕ್ಷರಾಗಿ ಶ್ರೀನಿವಾಸ್ ಯಾದವ್‌

Leave a Reply Cancel reply

Your email address will not be published. Required fields are marked *

Recommended

ಹದಿನೈದು ಎಕರೆ ಅರಣ್ಯ ಒತ್ತುವರಿಗೆ ಮೋಕ್ಷ

ಹದಿನೈದು ಎಕರೆ ಅರಣ್ಯ ಒತ್ತುವರಿಗೆ ಮೋಕ್ಷ

4 years ago
ಎಲ್ಲಿದ್ದರೂ ಓಕೆ, ಯಾವಾಗ ಆದರೂ ಸರಿ, ಕಲಿಯಿರಿ‌: ಎಂಜಿನಿಯರಿಂಗ್, ಡಿಗ್ರಿ, ಡಿಪ್ಲೊಮೋದ 5 ಲಕ್ಷ‌ ವಿದ್ಯಾರ್ಥಿಗಳಿಗೆ  ಡಿಜಿಟಲ್‌ ಕ್ಲಾಸ್

ಎಲ್ಲಿದ್ದರೂ ಓಕೆ, ಯಾವಾಗ ಆದರೂ ಸರಿ, ಕಲಿಯಿರಿ‌: ಎಂಜಿನಿಯರಿಂಗ್, ಡಿಗ್ರಿ, ಡಿಪ್ಲೊಮೋದ 5 ಲಕ್ಷ‌ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಕ್ಲಾಸ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ