• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ವಿಕಲಚೇತನರ ಮೇಲೆ KSRTCಗೆ ಕಣ್ಣುರಿ! ಬಸ್‌ ಹತ್ತಿಸಿಕೊಂಡು ಹೊರದಬ್ಬುವ ವಿಕೃತಿ!!

cknewsnow desk by cknewsnow desk
July 12, 2022
in STATE
Reading Time: 2 mins read
0
ವಿಕಲಚೇತನರ ಮೇಲೆ KSRTCಗೆ ಕಣ್ಣುರಿ! ಬಸ್‌ ಹತ್ತಿಸಿಕೊಂಡು ಹೊರದಬ್ಬುವ ವಿಕೃತಿ!!
1.7k
VIEWS
FacebookTwitterWhatsuplinkedinEmail

ಚಿಕ್ಕಬಳ್ಳಾಪುರ ವಿಭಾಗ ತಡೆರಹಿತ ಬಸ್ಸುಗಳಲ್ಲಿ ವಿಕಲಚೇತನಿರಿಗೆ ಪ್ರವೇಶವಿಲ್ಲ; ಸಾರಿಗೆ ಸಚಿವರಿಗೆ ದೂರು ನೀಡಲು ಮುಂದಾದ ನೊಂದ ವಿಕಲಚೇತನರು; ಮುಖ್ಯಮಂತ್ರಿಗೆ ದೂರು; ಕ್ರಮದ ಭರವಸೆ

By Siddhu Devanahalli

ದೇವನಹಳ್ಳಿ: ವಿಕಲಚೇತನರಿಗೆ ರಾಜ್ಯ ಸರಕಾರ ವಿವಿಧ ಕಲ್ಯಾಣ ಸೌಲಭ್ಯಗಳ ಅಡಿಯಲ್ಲಿ ಉಚಿತ ಬಸ್ ಪಾಸ್ ನೀಡಿದ್ದರೂ ಕೆಎಸ್’ಆರ್’ಟಿಸಿ ಚಾಲಕ, ನಿರ್ವಾಹಕರು ನಿರ್ದಯವಾಗಿ ವಿಕಲಚೇತನರನ್ನು ಬಸ್ಸುಗಳಿಂದ ಹೊರದಬ್ಬುತ್ತಿರುವ ಅಮಾನುಷ ಘಟನೆಗಳು ನಡೆಯುತ್ತಿವೆ.

ಸಾರಿಗೆ ಬಸ್ಸುಗಳಲ್ಲಿ ವಿಕಲಚೇತನರ ಬಸ್ ಪಾಸ್ʼಗಳಿಗೆ ಅವಕಾಶ ಇದ್ದರೂ, ಅಂಥ ಪಾಸ್ʼಗಳಿಗೆ ಅವಕಾಶ ಇಲ್ಲ ಎನ್ನುವ ಕಾನೂನುಬಾಹಿರ ನೆಪವೊಡ್ಡಿ ದಾರಿ ಮಧ್ಯೆಯೇ ವಿಕಲಚೇತನರನ್ನು ಬಸ್ಸುಗಳಿಂದ ಹೊರದಬ್ಬಲಾಗುತ್ತಿದೆ. ಇಂಥ ಹಲವಾರು ಘಟನೆಗಳು ನಡೆದಿದ್ದು, ಆ ಬಗ್ಗೆ ಸಿಕೆನ್ಯೂಸ್ ನೌ ವೆಬ್ʼತಾಣಕ್ಕೆ ನಿಖರ ಮಾಹಿತಿ ಸಿಕ್ಕಿದೆ.

ರಾಜ್ಯ ಸರಕಾರದ ಹಲವು ಕಲ್ಯಾಣ ಯೋಜನೆಗಳ್ಳಲ್ಲಿ ಮುಖ್ಯವಾಗಿ ವಿಕಲ ಚೇತನರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅವರ ಮನೋಸ್ಥೈರ್ಯ ಹೆಚ್ಚಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಪಿಂಚಣಿ ಮತ್ತು ಅವರು ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಓಡಾಡಲು ಉಚಿತ ಬಸ್ ಪಾಸ್ ಸೌಲಭ್ಯ ನೀಡಿ ಸರಕಾರ ಅವಕಾಶ ನೀಡಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನುವ ಹಾಗೆ ಆಗಿಬಿಟ್ಟಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಎಸ್’ಆರ್’ಟಿಸಿ ವಿಭಾಗದ ನಿರ್ಲಕ್ಷ್ಯ ನೀತಿ.

ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಚಾಲಕ, ನಿರ್ವಾಹಕರ ಅಸಡ್ಡೆಯಿಂದ ತಮಗೆ ನ್ಯಾಯಯುತ ಹಕ್ಕಿನಿಂದ ವಂಚಿತರಾಗಿ ನಲುಗುತ್ತಿರುವವರು ವಿಕಲಚೇತನರು ಮಾತ್ರ. ಸಾರಿಗೆ ಇಲಾಖೆಯ ಅಂಧಾ ದರ್ಬಾರ್ʼಗೆ ಅನೇಕ ವಿಕಲಚೇತನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಏನಿದು ಯೋಜನೆ ಮತ್ತು ಸಮಸ್ಯೆ?

ಸರಕಾರ ರೂಪಿಸಿರುವ ವಿಕಲಚೇತನ ಬಸ್ ಪಾಸ್ ಯೋಜನೆ ಪ್ರಕಾರ ನೋಂದಾಯಿತ ಅರ್ಹ ವಿಕಲಚೇತನರು ವಾಸ ಇರುವ ಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ 660 ರೂ. ಮೌಲ್ಯದ ವಾರ್ಷಿಕ ಅವಧಿಯ ಪಾಸ್ ಪಡೆದು ಕೆಎಸ್‌ಆರ್‌ಟಿಸಿಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಸಾರಿಗೆ ಬಸ್ಸುಗಳಲ್ಲಿ ಸಂಚಾರ ಮಾಡಬಹುದು. ಇದು ಬೆಂಗಳೂರಿನ ಬಿಎಂಟಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮುಕ್ತವಾಗಿ ಪ್ರಯಾಣಿಸಬಹುದು.

ಅಷ್ಟೇ ಅಲ್ಲ, ವಿಕಲಚೇತನರ ಕೋರಿಕೆಯ ಮೇಲೆ ಅವರು ಕೇಳುವ ಸ್ಥಳಗಳಲ್ಲಿ ಬಸ್ಸನ್ನು ಕಡ್ಡಾಯವಾಗಿ ನಿಲುಗಡೆ ಮಾಡಬೇಕು, ಅವರನ್ನು ಸುರಕ್ಷಿತವಾಗಿ ಇಳಿಸಬೇಕು ಎಂಬ ನಿಯಮವೂ ಇದೆ. ಬಸ್ಸಿನಲ್ಲಿ ವಿಕಲಚೇತನರಿಗೆ ಇರುವ ಆಸನಗಳನ್ನು ನಿರ್ವಾಹಕರು ತೆರವುಗೊಳಿಸಿ ಕೊಡಬೇಕು.

ನಿರ್ದಯಿ ನಡವಳಿಕೆ

ಚಿಕ್ಕಬಳ್ಳಾಪುರದ ಕೆಎಸ್‌ಆರ್‌ಟಿಸಿ ಘಟಕವು ವಿಕಲಚೇನರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದೆ. ʼತಡೆರಹಿತʼ ಎಂಬ ನಾಮಫಲಕ ಹಾಕಿಕೊಂಡ ಬಸ್ಸುಗಳು ಹಾಗೂ ಏಕಗವಾಕ್ಷಿ ಸೇವೆ (ನಿರ್ವಾಹಕ ರಹಿತ ಅಥವಾ ಡ್ರೈವರ್ ಕಂ ಕಂಡಕ್ಟರ್) ಒಳಗೊಂಡ ಬಸ್ಸಿಗೆ ವಿಕಲಚೇತನರನ್ನು ಹತ್ತಲು ಬಿಡುತ್ತಿಲ್ಲ. ಒಂದು ಅವರು ಹತ್ತಿಕೊಂಡರೂ ನಡುದಾರಿಯಲ್ಲೇ ಇಳಿಸಲಾಗುತ್ತಿದೆ. ಇಂಥ ದೋರಣೆಯಿಂದ ವಿಕಲಚೇತನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ರಾತ್ರಿ ವೇಳೆಯಲ್ಲೂ ನಿಷ್ಕಾರುಣ್ಯ ನಡೆ

ಭಾನುವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಹೆಬ್ಬಾಳದ ನಿಲ್ದಾಣಕ್ಕೆ ಬಂದ ವಿಕಲಚೇತನ ವ್ಯಕ್ತಿಯೊಬ್ಬರನ್ನು ಚಿಕ್ಕಬಳ್ಳಾಪುರ ಘಟಕದ ಬಸ್ಸು ನಿರ್ವಾಹಕ ಕಂ ಚಾಲಕ ಹತ್ತಿಸಿಕೊಳ್ಳಲು ನಿರಾಕರಿಸಿದ್ದಾನೆ. ಇದು ತಡೆರಹಿತ ಬಸ್ಸು ಎಂದು ಚಿಕ್ಕಬಳ್ಳಾಪುರದ ಘಟಕದ ಬಸ್ಸಿನ ಚಾಲಕ-ನಿರ್ವಾಹಕ ಹೇಳಿದರೆ, ಅದೇ ಮಾರ್ಗದಲ್ಲಿ ಸಂಚರಿಸುವ ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸುಗಳ ಚಾಲಕ ಅಥವಾ ನಿರ್ವಾಹಕರು ವಿಕಲಚೇನ ವ್ಯಕ್ತಿಗೆ ಪಾಸ್‌ ಇದೆ ಎನ್ನುವ ಕಾರಣಕ್ಕೆ ಬಸ್ಸು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೆಲವೊಮ್ಮೆ ಇವರನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಕ್ರಮಿಸಿದ ಮೇಲೆ ಪಾಸ್‌ ನಡೆಯುವುದಿಲ್ಲ ಎಂದು ಕಾರಣ ಕೊಟ್ಟ ಹೆದ್ದಾರಿ ಮಧ್ಯೆಯೇ ನಿರ್ದಯವಾಗಿ ಇಳಿಸಿ ಹೋಗಿರುವ ಘಟನೆಗಳು ಕೂಡ ನಡೆದಿವೆ.

pic.twitter.com/HbRDS1PIu2

— siddhu (@siddhu96570686) July 10, 2022

ವಿಕಚೇತನರ ಪಾಸ್‌ ಪ್ರತಿಯ ಹಿಂದೆಯೇ ಆ ಪಾಸ್‌ ಬಳಕೆಯ ಬಗ್ಗೆ ನಿರ್ದಿಷ್ಟವಾಗಿ ಮಾರ್ಗಸೂಚಿಗಳನ್ನು ಬರೆಯಲಾಗಿದ್ದರೂ ಅವುಗಳನ್ನು ಓದಿಕೊಳ್ಳುವ ವ್ಯವಧಾನ ನಿರ್ವಾಹಕರಿಗೆ ಇಲ್ಲ. ಇನ್ನು ಹೆಚ್ಚು ಪ್ರಶ್ನೆ ಮಾಡಿದರೆ, “ನಮಗೆ ಗೊತ್ತಿಲ್ಲ. ವಿಕಲಚೇತನರ ಪಾಸ್‌ ಅನ್ನು ಈ ಬಸ್ಸಿನಲ್ಲಿ ಅಂಗೀಕರಿಸುವುದಿಲ್ಲ. ನೀವು ಬೇಕಾದರೆ ಡಿಪೋ ಮ್ಯಾನೇಜರ್‌ ಅವರಿಗೆ ದೂರು ಕೊಡಿ” ಎಂದು ಹೊರಟೇಬಿಡುತ್ತಾರೆ.

ಅರ್ಹ ಪಾಸ್‌ ಇರುವ ವಿಕಲಚೇತನರೊಬ್ಬರು ಚಿಕ್ಕಬಳ್ಳಾಪುರ ಡಿಪೋದ ತಡೆರಹಿತ ಸಾರಿಗೆ ಬಸ್ಸು ಹತ್ತಲು ಯತ್ನಿಸಿದಾಗ ನಿರ್ದಯವಾಗಿ ವರ್ತಿಸುವ ಚಾಲಕ ಕಂ ನಿರ್ವಾಹಕ (ಕೆಳಗಿ ಟ್ವಿಟ್ಟರ್‌ ವಿಡಿಯೋ ಹಾಕಲಾಗಿದೆ)

ಅಲ್ಲಿಗೂ ತನ್ನ ಭಗೀರಥ ಪ್ರಯತ್ನ ಬಿಡದ ಕೆಲ ವಿಕಲಚೇತನರು ಚಿಕ್ಕಬಳ್ಳಾಪುರ ಘಟಕದ ಡಿಪೋ ಮ್ಯಾನೇಜರ್ ಮಲ್ಲಪ್ಪ ಎಂಬುವವರಿಗೆ ಕರೆ ಮಾಡಿ ದೂರು ನೀಡಿದರೆ, ಅವರಿಂದಲೂ ಹಾರಿಕೆಯ ಉತ್ತರ ಹಾಗೂ ತಡೆರಹಿತ ಬಸ್ಸುಗಳಲ್ಲಿ ವಿಕಲಚೇತನರ ಪಾಸ್‌ ನಡೆಯುವುದಿಲ್ಲ ಎನ್ನುವ ಮಾತು. ಸ್ವಲ್ಪ ಸಮಯದ ನಂತರ ಅವರೇ ಮೊಬೈಲ್‌  ಕರೆ ಮಾಡಿ; “ನಿಮ್ಮ ಪಾಸ್‌ʼಗೆ ತಡೆರಹಿತ ಬಸ್ಸುಗಳಲ್ಲಿ ಅನುಮತಿ ಇದೆ. ನೀವು ಪ್ರಯಾಣಿಸಿ” ಎಂದು ಹೇಳುತ್ತಾರೆ. ಇದಾದ ಮೇಲೆ ಮರುದಿನವೂ ತಡೆರಹಿತ ಬಸ್ಸುಗಳ ದೋರಣೆ ಬದಲಾಗಿರುವುದಿಲ್ಲ. ವಿಕಲಚೇತನರಿಗೆ ಕಿರುಕುಳ ನೀಡುವುದೂ ತಪ್ಪುವುದಿಲ್ಲ.

ನಿಮ್ಮ ದೂರನ್ನು ದಾಖಲಿಸಲಾಗಿದೆ ಮತ್ತು ಪರಿಶೀಲನೆಗಾಗಿ ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ

— KSRTC (@KSRTC_Journeys) July 10, 2022

ತುಂಬಾ ಧನ್ಯವಾದಗಳು ಸಾರ್ .. ನಮ್ಮ ನೋವಿಗೆ ಇಷ್ಟು ಬೇಗನೆ ಉತ್ತರ ಸಿಗುವುದೆಂದು.. ತಿಳಿದಿರಲಿಲ್ಲ…

— siddhu (@siddhu96570686) July 10, 2022
ಸಾರಿಗೆ ಸಚಿವರಿಗೆ ಮೊರೆ

ಸರಕಾರಿ ಬಸ್ಸುಗಳ ಡಿಪೋ ಮ್ಯಾನೇಜರುಗಳು, ಚಾಲಕರು ಮತ್ತು ನಿರ್ವಾಹಕರ ಅಸಡ್ಡೆಯಿಂದ ಬೇಸೆತ್ತ ವಿಕಲಚೇತನರು ಈಗ ಸಾರಿಗೆ ಸಚಿವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಜತೆಗೆ, ವಿಕಲಚೇತನರೊಬ್ಬರು ಸಾರಿಗೆ ಇಲಾಖೆಯ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ದೂರು ನೀಡಿದ್ದು, ಅಲ್ಲಿ ಇವರಿಗೆ ಸಮಸ್ಯೆ ಪರಿಹಾರದ ಉತ್ತರ ಸಿಕ್ಕಿದೆ. “ನಿಮ್ಮ ದೂರನ್ನು ದಾಖಲಿಸಲಾಗಿದೆ ಮತ್ತು ಪರಿಶೀಲನೆಗಾಗಿ ಸಂಬಂಧಿಸಿದ ವಿಭಾಗಕ್ಕೆ ಕಳುಹಿಸಲಾಗಿದೆ” ಎಂದು ಅವರಿಗೆ ಉತ್ತರಿಸಲಾಗಿದೆ. ಇನ್ನೊಂದೆಡೆ ಅನೇಕ ವಿಕಲಚೇತನರು ಒಂದೆರಡು ದಿನಗಳಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ದೂರು ನೀಡಲು ನಿರ್ಧರಿಸಿದ್ದಾರೆ.

Tags: b sriramuluchikkaballapuracknewsnowdevanahallihebbal
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಚಂದ್ರನ ವಶಕ್ಕೆ ಚೀನ ತಂತ್ರ

ಚಂದ್ರನ ವಶಕ್ಕೆ ಚೀನ ತಂತ್ರ

Leave a Reply Cancel reply

Your email address will not be published. Required fields are marked *

Recommended

ಐಐಟಿ ಕನಸಿದ್ದರಿಗೂ ಅನುಕೂಲ: CET, NEET‌ & JEE ವಿದ್ಯಾರ್ಥಿಗಳಿಗೂ GetCETgo ಆನ್‌ಲೈನ್‌ ಕೋಚಿಂಗ್; ವೆಬ್‌, ಯುಟ್ಯೂಬ್, ಆಪ್‌ ಮೂಲಕವೂ ಸರಳವಾಗಿ ಕಲಿಯಬಹುದು

ಐಐಟಿ ಕನಸಿದ್ದರಿಗೂ ಅನುಕೂಲ: CET, NEET‌ & JEE ವಿದ್ಯಾರ್ಥಿಗಳಿಗೂ GetCETgo ಆನ್‌ಲೈನ್‌ ಕೋಚಿಂಗ್; ವೆಬ್‌, ಯುಟ್ಯೂಬ್, ಆಪ್‌ ಮೂಲಕವೂ ಸರಳವಾಗಿ ಕಲಿಯಬಹುದು

4 years ago
ಭಾನುವಾರ ಬಂದರೆ ಚಿಕಿನ್-ಮಟನ್‌ ಖರೀದಿ ಭರಾಟೆ; ಸೋಮವಾರಕ್ಕೆ ಸೋಂಕಿತರು ಹೆಚ್ಚುವ ಆತಂಕ, ಬಾಗೇಪಲ್ಲಿಯಲ್ಲಿ ಕರ್ಫ್ಯೂ ಬಗ್ಗೆ ಅಲಕ್ಷ್ಯ

ಭಾನುವಾರ ಬಂದರೆ ಚಿಕಿನ್-ಮಟನ್‌ ಖರೀದಿ ಭರಾಟೆ; ಸೋಮವಾರಕ್ಕೆ ಸೋಂಕಿತರು ಹೆಚ್ಚುವ ಆತಂಕ, ಬಾಗೇಪಲ್ಲಿಯಲ್ಲಿ ಕರ್ಫ್ಯೂ ಬಗ್ಗೆ ಅಲಕ್ಷ್ಯ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ