• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಧನ್ವಂತರಿ ಭಾರತೀಯರ ಮೊದಲ ವೈದ್ಯ

cknewsnow desk by cknewsnow desk
October 25, 2022
in GUEST COLUMN, STATE
Reading Time: 1 min read
0
ಧನ್ವಂತರಿ ಭಾರತೀಯರ ಮೊದಲ ವೈದ್ಯ
942
VIEWS
FacebookTwitterWhatsuplinkedinEmail

ಆಯುರ್ವೇದ ದಿನ

By Guruprasad Hawaldar

ಓಂ ನಮೋ ಭಗವತೇ ಮಹಾಸುದರ್ಶನ ವಾಸುದೇವಾಯ|
ಧನ್ವಂತರಾಯ ಅಮೃತ ಕಳಶ ಹಸ್ತಾಯ, ಸಕಲ ಭಯ ವಿನಾಶಾಯ |
ಸರ್ವರೋಗ ನಿವಾರಣಾಯ, ತ್ರಿಲೋಕ ಪತಯೇ ತಿಲೋಕ ನಿಧಯೇ|
ಓಂ ಶ್ರೀ ಮಹಾವಿಷ್ಣು ಸ್ವರೂಪಾಯ ಶ್ರೀ ಧನ್ವಂತರಿ ಸ್ವರೂಪ|
ಓಂ ಶ್ರೀಶ್ರೀ ಔಷಧ ಚಕ್ರ ನಾರಾಯಣಾಯ ನಮಃ ||

ಸೋಮವಾರ (ಅಕ್ಟೋಬರ್‌ 24) ಧನ್ವಂತರಿ ಮತ್ತು ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತದೆ.


ಧನ್ವಂತರಿ ಭಾರತದ ಮೊದಲ ವೈದ್ಯನೆಂಬ ನಂಬಿಕೆ ಭಾರತೀಯರಲ್ಲಿ ಇದೆ. ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಿಂದೂ ಸಂಪ್ರದಾಯದಲ್ಲಿ ಹಲವು ಸಸ್ಯಗಳ, ಗಿಡಮೂಲಿಕೆಗಳ ಪಾರಿಸರಿಕ ಬಳಕೆಯಿಂದ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ. ಆಯುರ್ವೇದದ ಮುಖ್ಯ ಗುರಿ ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯವನ್ನು ಉತ್ತೇಜಿಸುವುದು. ಭಗವಾನ್ ಧನ್ವಂತರಿಯನ್ನು ಆಯುರ್ವೇದದ ದೇವರು ಎಂದು ಕರೆಯಲಾಗುತ್ತದೆ.

ಆಯುರ್ವೇದ ವೈದ್ಯರು ಧನ್ವಂತರಿ ತ್ರಯೋದಶಿಯಂದು ಧನ್ವಂತರಿ ಜಯಂತಿಯನ್ನು ಆಚರಿಸುತ್ತಾರೆ. ಅಂದು ತಮಗೆ ವಿದ್ಯೆ ಕಲಿಸಿದ ಗುರುವಿಗೆ ವಂದನೆ ಸಲ್ಲಿಸುವುದು ಪದ್ದತಿ.
ಆರೋಗ್ಯದ ಆದಿದೇವತೆಯಾದ ಧನ್ವಂತರಿ ಯನ್ನು ಕೇಂದ್ರ ಸರ್ಕಾರ ಆಯುರ್ವೇದ ದಿನವನ್ನಾಗಿ 2016 ರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಧನ್ವಂತರಿ ಎನ್ನುವುದಕ್ಕೆ ವಿಶೇಷ ಅರ್ಥವಿದೆ. ಏನೆಂದರೆ ಧನ+ಏವ+ಅಂತಃ+ಅರಿ= ಧನ್ವಂತರಿ. ಇನ್ನೊಂದು ಅರ್ಥ ಧನಷಾ+ತರತೇ+ತಾರಯತೇ+ಪಾಪತ್= ಧನ್ವಂತರಿ (ಪಾಪ ವಿಮುಕ್ತಿ). ಚಾಕ್ಷುಷ ಮನ್ವಂತರದಲ್ಲಿ ದೂರ್ವಾಸ ಋಷಿಗಳ ಶಾಪದಿಂದ ಇಂದ್ರನು ಸಂಪತ್ತುರಹಿತನಾಗಿ ಚರ್ತುಮುಖ ಬ್ರಹ್ಮದೇವರ ಹತ್ತಿರ ಬಂದು ತಮ್ಮ ಸ್ಥಿತಿಯನ್ನು ವಿವರಿಸಿದ. ಬ್ರಹ್ಮದೇವರು ಮಹಾವಿಷ್ಣುವಿನಲ್ಲಿ ಶರಣು ಹೊಂದಲು ತಿಳಿಸಿದರು. ಅದೇ ಪ್ರಕಾರ ದೇವತೆಗಳು ಮಹಾವಿಷ್ಣುವಿನ ಬಳಿಗೆ ಹೋಗಿ ಸ್ತೋತ್ರ ಮಾಡಿದರು. ದೇವತೆಗಳ ಸ್ತೋತ್ರದಿಂದ ಪ್ರಸನ್ನನಾದ ವಿಷ್ಣು, ಅವರಿಗೆ ಅಭಯವನ್ನು ನೀಡಿದ. ಅಸುರರ ಜೊತೆ ಸಂಧಿ ಮಾಡಿಕೊಂಡು ಸಮುದ್ರಮಥನ ಮಾಡಲು ತಿಳಿಸಿದ. ಆಗ ‘ಮಂದರ ಪರ್ವತ’ವನ್ನು ಕಡಗೋಲನ್ನಾಗಿ ಹಾಗೂ ‘ವಾಸುಕೀ’ ಎಂಬ ಸರ್ಪವನ್ನು ಹಗ್ಗವನ್ನಾಗಿ ಮಾಡಿ ಸಮುದ್ರವನ್ನು ಕಡೆಯುತ್ತಿರಲು ಮೊದಲು ಹಾಲಾಹಲ ವಿಷ ಬಂತು. ಅದನ್ನು ಶಿವನು ಸ್ವೀಕರಿಸಿ ವಿಷಕಂಠನಾದ. ಮತ್ತೆ ಮಥನ ಕಾರ್ಯ ಮುಂದುವರೆದಾಗ ಕಾಮಧೇನು ಬಂತು. ಅದನ್ನು ಯಜ್ಞ ಮಾಡುವ ಋಷಿಗಳು ಸ್ವೀಕರಿಸಿದರು. ನಂತರ ಉಚೈ ಶ್ರವಸ್ ಕುದುರೆ ಬಂತು. ಅದನ್ನು ಬಲಿರಾಜ ಸ್ವೀಕರಿಸಿದ. ಜೊತೆಗೆ ಐರಾವತ ಆನೆ ಬಂತು. ಅದನ್ನು ಇಂದ್ರ ತೆಗೆದುಕೊಂಡ. ಪಾರಿಜಾತವೆಂಬ ಕಲ್ಪವೃಕ್ಷ ಬರಲು ಅದು ದೇವಲೋಕವನ್ನು ಅಲಂಕರಿಸಿತು ಹಾಗೂ ಅಪ್ಸರ ಸ್ತ್ರೀಯರು ಹುಟ್ಟಿ ಬಂದರು. ಆನಂತರವೂ ಮಥನ ಕಾರ್ಯ ಮುಂದುವರೆದಾಗ ವೈದ್ಯನಾದ ಮಹಾವಿಷ್ಣುವು ದಿವ್ಯಗಂಧಾನುಲೇಪಿತನಾಗಿ ‘ಅಮೃತ ಕಲಶ’ ಕೈಯಲ್ಲಿ ಹಿಡಿದು ‘ಧನ್ವಂತರಿ ಅಪರಾವತಾರ’ ತಾಳಿಬಂದದ್ದು ಆಶ್ವೀಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಎಂದು ಪುರಾಣಗಳು ಹೇಳುತ್ತವೆ.

ಮಹಾ ವಿಷ್ಣುವು ಧನ್ವಂತರಿಯಾಗಿ ಅವತಾರ ರೂಪದಲ್ಲಿ ಬರಲು ಬಲವಾದ ಕಾರಣ ಏನೆಂದರೆ- ದೇವತೆಗಳು ಅಸುರರೊಂದಿಗೆ ಹೋರಾಡುವ ಸಂದರ್ಭದಲ್ಲಿ ಗುಣಪಡಿಸಲಾಗದ ನೋವು- ವ್ಯಾಧಿಗಳಿಗೆ ತುತ್ತಾಗುತ್ತಿದ್ದರು. ಇದನ್ನು ಕಂಡು ವಿಷ್ಣುವು ವೈದ್ಯನಾಗಿ ಚಿಕಿತ್ಸೆ ನೀಡಲು ಬಂದ. ಆ ದಿನವು ಕಾರ್ತೀಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನವಾಗಿತ್ತು. ಅಂದಿನಿಂದ ಆ ದಿನವನ್ನು ಧನ್ವಂತರಿ ಜಯಂತಿ ಆಚರಿಸಲಾಗುತ್ತದೆ.

ಧನ್ವಂತರಿಯು ಬಲಗೈಯಲ್ಲಿ ಜ್ಞಾನಮುದ್ರೆಯನ್ನೂ, ಎಡಗೈಯಲ್ಲಿ ಅಮೃತಕಲಶವನ್ನೂ ಹಿಡಿದುಕೊಂಡಿದ್ದಾನೆ. ನಮ್ಮ ಹೃದಯದಲ್ಲಿ ಅಗ್ನಿಮಂಡಲ, ಚಂದ್ರಮಂಡಲ, ಸೂರ್ಯಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣನನ್ನು ಚಿಂತಿಸಿ, ಗಾಯತ್ರಿ ಮಂತ್ರವನ್ನು ಜಪಿಸುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತಿಸಿ ಜಪಿಸಿದಾಗ ,ಹೃದಯದ ಚಂದ್ರಮಂಡಲದಲ್ಲಿರುವ ಧನ್ವಂತರಿಯು 72000 ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುತ್ತಾನೆ. ಅಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳ ನಡುವೆ, ಕಿರುನಾಲಿಗೆಯಲ್ಲಿ, ಹೊಕ್ಕಳಿನಲ್ಲಿ ಮತ್ತು ಕೆಳಭಾಗ ದಲ್ಲಿರುವ ಷಟ್​ಚಕ್ರಗಳಲ್ಲಿಯೂ ಇದೇ ಧನ್ವಂತ ರಿಯು ಅಮೃತಧಾರೆಯನ್ನು ಸುರಿಸುತ್ತಾನೆ ಎಂದು ಪಂಡಿತರು ಹೇಳುತ್ತಾರೆ.

ಆಯುರ್ವೇದವೆಂದರೆ ಅದು ಬದುಕಿನ ಅಧ್ಯಯನ. ಆಯುರ್ ಎಂದರೆ ಬದುಕು, ವೇದ ಎಂದರೆ ತಿಳಿದುಕೊಳ್ಳುವುದು & ಆಯು—ಆಯಸ್ಸು; ವೇದ—ಜ್ಞಾನ ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ, 7೦೦೦ ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿ ಸರ್ವ ರೋಗಗಳಿಗೂ ಔಷಧಿಎಂಬುದನ್ನು ತಿಳಿಸುತ್ತದೆ.

ಆಯುರ್ವೇದದ ಉಲ್ಲೇಖವನ್ನು ನಾವು ಅಥರ್ವಣ ವೇದದಲ್ಲಿ ಕಾಣಬಹುದು. ಆಯುರ್ವೇದ ಶಾಸ್ತ್ರ ಕುರಿತಂತೆ ಮೂರು ಮುಖ್ಯಗ್ರಂಥಗಳನ್ನು ಕಾಣಬಹುದು. ಅವೆಂದರೆ ಚರಕ ಸಂಹಿತೆ (ಕ್ರಿ.ಪೂ.ಮೊದಲನೆ ಶತಮಾನದ ಆತ್ರೇಯ ಋುಷಿ ವಿದ್ಯಾಲಯದ ಚರಕರಿಂದ), ಸುಶ್ರುತ ಸಂಹಿತೆ (ಕ್ರಿ.ಪೂ.6ನೇ ಶತಮಾನದ ಧನ್ವಂತರಿ ದೇವ ಶಾಲೆಯ ಸುಶ್ರುತರಿಂದ), ಅಷ್ಠಾಂಗ ಹೃದಯ (ಆರನೇ ಶತಮಾನದ ಕಾಶ್ಯಪ ಋುಷಿ ಶಾಲೆಯ ವಾಗ್ಭಟರಿಂದ). ಇನ್ನುಳಿದಂತೆ ಸಾರಂಗಧಾರ ಸಂಹಿತೆ, ಮಾಧವ ನಿಧಾನ, ಭಾವ ಪ್ರಕಾಶದಲ್ಲೂ ಆಯುರ್ವೇದದ ಉಲ್ಲೇಖವಿದೆ.

ಆಯುರ್ವೆದ ಅತ್ಯಂತ ಪುರಾತನವಾದದ್ದು. ಮನುಷ್ಯ ಅಸ್ವಸ್ಥನಾದಾಗ ಗಿಡಮೂಲಿಕೆಗಳಿಂದ ಕಷಾಯ, ಕಾಡೆಗಳನ್ನು ತಯಾರಿಸಿ ಕುಡಿಸಿ ಅಥವಾ ಬೇರು, ಎಲೆ, ಹೂವು, ಕಾಂಡಗಳನ್ನು ಅರೆದು ಗಾಯಗಳಿಗೆ ಲೇಪಿಸುತ್ತೇವೆ. ಔಷಧೀಯ ಗುಣಗಳನ್ನು ಸಸ್ಯಗಳು ಹೊಂದಿವೆ. ಪ್ರತಿ ರೋಗಕ್ಕೂ ಒಂದು ಗಿಡಮೂಲಿಕೆ ಇದೆ. ಮೊದಲು ವೈದ್ಯರು ಗುಡ್ಡ, ಬೆಟ್ಟ, ಕಾಡುಗಳನ್ನು ಅಲೆದು ಔಷಧೀಯ ಸಸ್ಯಗಳನ್ನು ತಂದು ಮದ್ದನ್ನು ತಯಾರಿಸುತ್ತಿದ್ದರು. ಹಿಂದೆ ರಾಮಾಯಣ ಕಾಲದಲ್ಲಿ ನಡೆದ ಘಟನೆ ಈ ಆಯುರ್ವೆದಕ್ಕೆ ಸಾಕ್ಷಿ ಆಗಿದೆ. ರಾಮ, ಲಕ್ಷ್ಮಣರು ಕಾಡಿನಲ್ಲಿದ್ದಾಗ ಒಂದು ಸಂದರ್ಭದಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ರಾಮ ಗಾಬರಿಗೊಂಡು ತನ್ನ ಭಕ್ತನಾದ ಹನುಮಂತನಿಗೆ, ಕಿಷ್ಕಿಂಧಾ ಪರ್ವತಕ್ಕೆ ಹೋಗಿ ಸಂಜೀವಿನಿ ಕಡ್ಡಿ ತರಲು ಹೇಳುತ್ತಾನೆ. ತಕ್ಷಣ ಹನುಮಂತ ಆ ಪರ್ವತಕ್ಕೆ ಹೋಗಿ ಹುಡುಕಿದಾಗ ಸಂಜೀವಿನಿ ಸಿಗದ ಕಾರಣ ಪರ್ವತವನ್ನೇ ಹೊತ್ತು ತರುತ್ತಾನೆ. ಅದರಿಂದ ಸಂಜೀವಿನಿಯನ್ನು ತೆಗೆದು ಲಕ್ಷ್ಮಣನ ಪ್ರಾಣವನ್ನು ಉಳಿಸಲಾಗುತ್ತದೆ. ಹಿಂದೆ ಋಷಿಮುನಿಗಳು ಹಾಗೂ ಗುಡ್ಡಗಾಡು ಜನರು ಹಣ್ಣು, ಗಡ್ಡೆ, ಗೆಣಸು ತಿಂದು ಅಪಾರ ಶಕ್ತಿಯನ್ನು ಪಡೆದಿದ್ದರು. ಹಾಗೆಯೇ ಆರೋಗ್ಯ ಸರಿಯಿಲ್ಲದಾಗ ಆಯುರ್ವೆದವನ್ನೇ ಬಳಸುತ್ತಿದ್ದರು.

ಹಿಂದೂ ಧರ್ಮದ ಪ್ರಕಾರ, ಧನ್ವಂತರಿಯ ಜನ್ಮದಿನವನ್ನು ಕಾರ್ತಿಕ ಕೃಷ್ಣ ತ್ರಯೋದಶಿಯಂದು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಧನ್ವಂತರಿಯು ಅಮೃತ ಕಲಶದೊಂದಿಗೆ ಹೊರಹೊಮ್ಮಿದನೆಂದು ನಂಬಲಾಗಿದೆ. , ಈ ವರ್ಷ ಕೇಂದ್ರ ಆಯುಷ್ ಸಚಿವಾಲಯವು ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನದ ಆಗಿ “ಪ್ರತಿ ದಿನ ಪ್ರತಿ ಮನೆಯಲ್ಲಿ ಆಯುರ್ವೇದ-2022 ” (Har Din Har Ghar Ayurveda’.) ಥೀಮ್ ನೊಂದಿಗೆ ಆಚರಿಸಲಾಗುತ್ತದೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಆಯುರ್ವೇದ ಔಷಧ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ ಯಾವುದೇ ತರಹದ ಅಡ್ಡ ಪರಿಣಾಮಗಳು ಇಲ್ಲದೇ ಇರುವುದರಿಂದ ಜನರು ಹೆಚ್ಚು ನಂಬುತ್ತಿದ್ದಾರೆ.ಆರ್ಯುವೇದ ಅದರ ಪದ್ದತಿ ಔಷಧಿಗಳು ಇಂದು ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ ಅಲ್ಲದೇ ದೇಶವಿದೇಶಗಳಲ್ಲಿ ಭಾರತೀಯ ಈ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

***

ಡಾ.ಗುರುಪ್ರಸಾದ್‌ ಹವಾಲ್ದಾರ್‌
  • ವೃತ್ತಿಯಲ್ಲಿ ಶಿಕ್ಷಕರು, ಪ್ರವೃತ್ತಿಯಲ್ಲಿ ಲೇಖಕರು. ಅಧ್ಯಾತ್ಮ ಮತ್ತು ಪುರಾಣ ಕಥನಗಳ ಬರವಣಿಗೆಯಲ್ಲಿ ಎತ್ತಿದ ಕೈ. ಸಮಕಾಲೀನ ಸಂದರ್ಭಗಳ ಬಗ್ಗೆಯೂ ಅವರ ಬರಹ ಬಹಳ ಮೊನಚು. ರಾಜ್ಯದ ಅನೇಕ ಪತ್ರಿಕೆ, ವೆಬ್‌ ತಾಣ್‌, ಡಿಜಿಟಲ್‌ ಮಾಧ್ಯಮಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.
Tags: Ayurvedaayurvedic treatmentcknewsnowindiaNational Ayurveda Day
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ರಿಷಿ ಸುನಕ್ ಬ್ರಿಟನ್ ಪ್ರಧಾನಿ

ರಿಷಿ ಸುನಕ್ ಬ್ರಿಟನ್ ಪ್ರಧಾನಿ

Leave a Reply Cancel reply

Your email address will not be published. Required fields are marked *

Recommended

ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು

ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು

4 years ago
ಸರಳ ಜಂಬೂ ಸವಾರಿ; ಅಭಿಮನ್ಯು ಹೊತ್ತ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಚಾಮುಂಡೇಶ್ವರಿ ಅಮ್ಮನವರಿಗೆ ನಮಿಸಿದ ನಾಡಜನ

ಈ ವರ್ಷವೂ ಸರಳ, ಸಾಂಪ್ರದಾಯಿಕ ದಸರಾ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ