• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ರೂಪಾಯಿಯ ಮಾನ ಕಾಪಾಡಿದ ಮಹಾ ಮೇಧಾವಿ!

P K Channakrishna by P K Channakrishna
September 6, 2023
in CKPLUS, EDITORS'S PICKS, NATION, STATE
Reading Time: 1 min read
0
ವಿಪರ್ಯಾಸವೆಂದರೆ ಇದೆ! ಯಾರ ಸಹವಾಸ ಬೇಡವೆಂದು ರಾಜಕೀಯ ನಿವೃತ್ತಿಗೆ ಯೋಚಿಸಿದ್ದರೋ ಕೊನೆಗೆ ಅವರದೇ ಶ್ರದ್ಧಾಂಜಲಿ ಸಭೆ ಅಧ್ಯಕ್ಷತೆ ವಹಿಸಬೇಕಾಯಿತು ಪಿ.ವಿ.ನರಸಿಂಹರಾವ್
924
VIEWS
FacebookTwitterWhatsuplinkedinEmail

ಅಪಮಾನ ಸಹಿಸುತ್ತಲೇ ತೆರೆಮರೆಗೆ ಸರಿದ ಆಧುನಿಕ ಚಾಣಾಕ್ಷ

ಮಾಜಿ ಪ್ರಧಾನಿಗಳಾದ ಶ್ರೀ ಪಿ.ವಿ.ನರಸಿಂಹರಾವ್ ಅವರ ಬಗ್ಗೆ ಎಷ್ಟು ಬರೆದರೂ, ಅದೆಷ್ಟು ಹೇಳಿದರೂ ಸಾಲದು.ಪಿವಿಎನ್ ಅವರ ಬಗ್ಗೆ ಕೆದಕುತ್ತಾ ಹೋದರೆ ಹಿಂದೂ ಮಹಾಸಾಗರಕ್ಕೆ ಹೊಕ್ಕಂತೆಯೇ. ಆಳವೂ ಕಾಣದು, ಅಗಲವೂ ತಿಳಿಯದು. ಪಿವಿಎನ್ ಅವರೂ ಹಾಗೆಯೇ.

ವಿತ್ತ, ವಿದೇಶ, ರಾಜನೀತಿ, ಚಾಣಕ್ಯ ನೀತಿ ಸೇರಿ ಭಾಷೆ, ಕಲೆ, ವಿಜ್ಞಾನ, ಸಂಗೀತ, ಸಾಹಿತ್ಯ.. ಹೀಗೆ ಹೇಳುತ್ತಾ ಹೋದರೆ ಅವರಿಗೆ ಪ್ರವೇಶವಿಲ್ಲದ ವಿಷಯವೇ ಇಲ್ಲವೇ ಎನಿಸಿ ಸೋಜಿಗಕ್ಕೂ ಸೊಕ್ಕಡಗಿದಂತೆ ಭಾಸವಾಗುತ್ತದೆ.

ನಿಜಕ್ಕಾದರೆ, ಅವರು ಭಾರತೀಯ ರಾಜಕೀಯ ಕ್ಷಿತಿಜದಲ್ಲಿ ತೆರೆಮರೆಯಲ್ಲಿಯೇ ಅತಿಹೆಚ್ಚು ಕಂಗೊಳಿಸಿದ ಧೃವತಾರೆ. ಹೆದರಿಸಿ ಬೆದರಿಸುವ ರಾಜಕಾರಣಕ್ಕಿಂತ ತಲೆ ಓಡಿಸಿ ದಾಳ ಉರುಳಿಸುತ್ತಿದ್ದ ಚಾಣಾಕ್ಷ. ರೈಡು ರಾಜಕಾರಣದಲ್ಲಿ ನಂಬಿಕೆ ಇಲ್ಲದಿದ್ದ ಮುತ್ಸದ್ಧಿ. ದುರಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು, ಸಂಕಷ್ಟ ಸಂದರ್ಭದಲ್ಲಿ ಭಾರತವನ್ನು ಮುನ್ನಡೆಸಿದ ಮಹಾನ್ ಜ್ಞಾನಿ. ಅಸ್ಥಿರ ಸಂದರ್ಭದಲ್ಲಿಯೂ ರೂಪಾಯಿಯ ಮಾನ ಕಾಪಾಡಿದ ಮೇಧಾವಿ. ಹಳ್ಳ ಹಿಡಿದುಹೋಗಿದ್ದ ಆರ್ಥಿಕತೆಯನ್ನು ಹಳಿಗೆ ತಂದು ಗಟ್ಟಿಯಾಗಿ ನಿಲ್ಲಿಸಿದ ನಿಜನಾಯಕ.

ಅಂಥವರ ಬಗ್ಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ದಕ್ಷಿಣ ಭಾರತೀಯರ ಬಗ್ಗೆ ಉತ್ತರ ಭಾರತದವರಿಗೆ ಇರುವ ನಿರಂತರ ಅನಾದರ ಎಂತದ್ದು ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರ ಸಾವಿನ ಕ್ಷಣದಲ್ಲಿಯೂ ಸೌಜನ್ಯ ಮೆರೆಯದ ಆ ಪಕ್ಷದ ಬಗ್ಗೆ ಬಹಳ ಬೇಸರವಾಗುತ್ತದೆ. ದಿವಾಳಿ ಎದ್ದು ಹೋಗಿದ್ದ ದೇಶವನ್ನು ಆರ್ಥಿಕವಾಗಿ ಪುನರುಜ್ಜೀವನಗೊಳಿಸಿ ಸ್ವಾವಲಂಬನೆಯತ್ತ ಮುನ್ನಡೆಸಿದ ಆ ನೇತಾರನಿಗೆ ದಿಲ್ಲಿಯಲ್ಲಿ ಒಂದು ಸಮಾಧಿಗೂ ದಿಕ್ಕಿಲ್ಲದಂತಾಯಿತು.

ಇನ್ನು, ಪಿವಿಎನ್ ಅವರ ಆರ್ಥಿಕ ಸುಧಾರಣಾ ಪರ್ವದ ಸಾರಥ್ಯ ವಹಿಸಿದ್ದ ಡಾ.ಮನಮೋಹನ್ ಸಿಂಗ್ ಅವರ ಪಕ್ಷದಲ್ಲಿನ ಅಸ್ತಿತ್ವವೂ ಅಗಮ್ಯಗೋಚರವೇ ಆಗಿದೆ. ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕೊಡುವಾಗ ಭಾಷಣ ಮಾಡಿದ ನಾಯಕರಿಗೆ ನೆಹರು, ಲಾಲ ಬಹದ್ದೂರ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ನೆನಪಾದರೆ ಹೊರತು ಅಪ್ಪಿತಪ್ಪಿಯೂ ನರಸಿಂಹರಾಯರು, ಮನಮೋಹನ್ ಸಿಂಗ್ ಅವರೂ ನೆನಪಾಗಲೇ ಇಲ್ಲ. ಹೊಗಳಿಕೆಯಲ್ಲೂ ಊಳಿಗ ಕಂಡಿದ್ದು ಆಗಲೇ.

ಉಸಿರು ಕೊಟ್ಟ ಕೊರಳಿಗೇ ವಿಷವುಣಿಸುವ ಕೈ ಪಕ್ಷವು ನರಸಿಂಹರಾಯರಿಗೆ ಮಾಡಿದ ಅನ್ಯಾಯವನ್ನು ನೆನಪು ಮಾಡಿಕೊಂಡರೆ ರಕ್ತ ಕುದಿಯುತ್ತದೆ. ದಕ್ಷಿಣದ ಇನ್ನೊಬ್ಬರು ದೇವೇಗೌಡರು ಪ್ರಧಾನಿ ಆಗಿದ್ದನ್ನು ಸಂಭ್ರಮಿಸಿದ್ದವರು ರಾಯರು. ಸೀತಾರಾಂ ಕೇಸರಿಯನ್ನು ಮುನ್ನಲೆಗಿಟ್ಟು ಗೌಡರನ್ನು ಕೆಳಗಿಳಿಸಿತ್ತು ಕಾಂಗ್ರೆಸ್. ಆ ಪಕ್ಷದ ಅಂಗೈನಲ್ಲೇ ಅಡಗಿರುವ ದಕ್ಷಿಣದವರ ಕುರಿತಾದ ಆಳದ್ವೇಷ ಜಗಜ್ಜಾಹೀರಾಗಿದ್ದು ಅಕಾರಣವಾಗಿ ದೇವೇಗೌಡರ ಸರಕಾರವನ್ನು ತೆಗೆದಾಗಲೇ.

ನರಸಿಂಹರಾಯರು ತಮ್ಮ ಅಮೋಘ ಜ್ಞಾನದಿಂದಲೇ ಅಜರಾಮರರಾದವರು. ದಿಲ್ಲಿ ಗದ್ದುಗೆಯ ಮೇಲೆ ಕೂತಿದ್ದಾಗಲೂ ಕಲಿಕೆ, ಆಲಿಕೆಯ ಮನಃಸ್ಥಿತಿ ಹೊಂದಿದ್ದವರು, ಕರಗದ ಜ್ಞಾನ ಕಣಜ ಅವರಾಗಿದ್ದರು. ಪ್ರಧಾನಿ ಆಗಿದ್ದಾಗ ಒಮ್ಮೆ ಹೈದ್ರಾಬಾದ್ ನಲ್ಲಿ ಶ್ರೀ ಮಾಡುಗಲ ನಾಗಫಣಿ ಶರ್ಮ ಅವರ ಅಷ್ಟಾವಧಾನದಲ್ಲಿ ಭಾಗಿಯಾಗಿದ್ದರು. ಆ ದಿನ ಅವರು ಮಾಡಿದ್ದ ಭಾಷಣ, ಅನನ್ಯ ವಿದ್ವತ್ತಿಗೆ ತೊಡಿಸಿದ ರಮಣೀಯ ಆಭರಣ. ಸಾಕ್ಷಾತ್ ಸರಸ್ವತಿ ಪುತ್ರರೇ ಆಗಿದ್ದ ಪಿವಿಎನ್ ಮಾತುಗಳನ್ನು ಕೇಳುತ್ತಲೇ ನಾನು ಮೈ ಮರೆತದ್ದು ಅತ್ಯಂತ ವಿರಳ ರಸಕ್ಷಣವೇ ಸರಿ.

ಭಾಷೆಯ ಬಳಕೆ, ಭಾಷೆಯ ಶುದ್ದಿ, ವ್ಯಾಕರಣ, ಮಾತೃಭಾಷೆ, ತೆಲುಗು ಸಾಹಿತ್ಯ, ಅನ್ಯಭಾಷೆಗಳ ಸಾಹಿತ್ಯ, ಮುಖ್ಯವಾಗಿ ಉತ್ತರ ಭಾರತೀಯ ಸಾಹಿತ್ಯ, ಕಾವ್ಯ, ಸಾಹಿತ್ಯದಲ್ಲಿ ಭಾವುಕತೆ, ಶಾಬ್ದಿಕ ರಮ್ಯತೆ, ರಸಜ್ಞತೆ, ಭಾಷೆ ಮತ್ತು ಭಾವ, ಆಗಷ್ಟೇ ಕಂಪ್ಯೂಟರ್ ಸೃಷ್ಟಿಸುತ್ತಿದ್ದ ತಲ್ಲಣಗಳು.. ಹೀಗೆ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು.

ಕೆಳಗೆ ಲಿಂಕ್ ಇದೆ. ಕೇಳಬಹುದು.. ಆದರೆ.. ಭಾಷಣ ತೆಲುಗಿನಲ್ಲಿದೆ.

Tags: ckcknewsnowCongressdr manmohan singhformer prime ministerindiaPVNarasimhaRao
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬಿಲ್ಡರುಗಳಿಂದ ₹2,000 ಕೋಟಿ ಸುಲಿಗೆ;‌ ಕಾಂಗ್ರೆಸ್‌ ಸರಕಾರದ ಟಾರ್ಗೆಟ್

ಬಿಲ್ಡರುಗಳಿಂದ ₹2,000 ಕೋಟಿ ಸುಲಿಗೆ;‌ ಕಾಂಗ್ರೆಸ್‌ ಸರಕಾರದ ಟಾರ್ಗೆಟ್

Leave a Reply Cancel reply

Your email address will not be published. Required fields are marked *

Recommended

ಕನ್ಯಾಕುಮಾರಿಯಿಂದ ಬಾಗೇಪಲ್ಲಿಗೆ ಬಂದ ಅಮೃತ ಮಹೋತ್ಸವ ಸಿಆರ್ಪಿಎಫ್ ಸೈಕಲ್ ಜಾಥಾ

ಕನ್ಯಾಕುಮಾರಿಯಿಂದ ಬಾಗೇಪಲ್ಲಿಗೆ ಬಂದ ಅಮೃತ ಮಹೋತ್ಸವ ಸಿಆರ್ಪಿಎಫ್ ಸೈಕಲ್ ಜಾಥಾ

4 years ago
ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

ನವೆಂಬರ್ 16ರಿಂದ ಶಬರಿಮಲೆ ಮಂಡಲೋತ್ಸವ; ಕೋವಿಡ್ ನೆಗೆಟೀವ್ ಪತ್ರ ಇದ್ದರೆ ಮಾತ್ರ ಅಯ್ಯಪ್ಪ ದರ್ಶನ

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ