• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕೋಲಾರ ಸಂಸದರ ಕುತ್ತಿಗೆ ಪಟ್ಟಿಗೆ ಕೈಹಾಕಿ ಹೊರದಬ್ಬಿದ ಎಸ್‌ ಪಿ!!

cknewsnow desk by cknewsnow desk
September 25, 2023
in CKPLUS, CKPRESS, EDITORS'S PICKS, STATE
Reading Time: 1 min read
0
ಕೋಲಾರ ಸಂಸದರ ಕುತ್ತಿಗೆ ಪಟ್ಟಿಗೆ ಕೈಹಾಕಿ ಹೊರದಬ್ಬಿದ ಎಸ್‌ ಪಿ!!

ಪೊಲೀಸರ ಜರೆ ಸಂಸದ ಮುನಿಸ್ವಾಮಿ ವಾಗ್ವಾದ.

1.5k
VIEWS
FacebookTwitterWhatsuplinkedinEmail

ಮುನಿಸ್ವಾಮಿ vs ಎಸ್.ಎನ್.ನಾರಾಯಣಸ್ವಾಮಿ ಗಲಾಟೆಯಲ್ಲಿ ಖಾಕಿಗಳ ಅಬ್ಬರ

ಜನತಾದರ್ಶನದಲ್ಲಿ ತೋಳೇರಿಸಿ ನಿಂತ ಶಾಸಕ-ಸಂಸದ; ಕೋಲಾರದಲ್ಲಿ ವಿಲಕ್ಷಣ ಘಟನೆ, ಭೂಗಳ್ಳ ಎಂದಿದ್ದಕ್ಕೆ ಸಿದ್ದಾದ ಎಸ್ಸೆನ್

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದರು ಹಾಗೂ ಶಾಸಕರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ರಸಂಗ ಇಂದಿಲ್ಲಿ ನಡೆದಿದೆ.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಜನತಾದರ್ಶನದಲ್ಲಿ ಈ ಘಟನೆ ನಡೆಯಿತು.

ಭೂಗಳ್ಳರನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನತಾದರ್ಶನ ನಡೆಸಿದರೆ ಉಪಯೋಗ ಏನು ಎಂದು ಸಂಸದ ಮುನಿಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತನ್ನು ತಮ್ಮನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಸಚಿವರ ಪಕ್ಕದಲ್ಲಿಯೇ ಕೂತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶಗೊಂಡರು.

ಒಬ್ಬ ಶಾಸಕನ ಬಗ್ಗೆ ಏನ್‌ ಮಾತಾಡ್ತಿದ್ದೀಯಾ? ಎಂದು ಶಾಸಕ ನಾರಾಯಣಸ್ವಾಮಿ ಕೂಗಿದರೆ, ಇದ್ದಿದ್ದನ್ನೇ ಹೇಳಿದ್ದೇನೆ ಎಂದು ಹೇಳಿದರು ಸಂಸದ ಮುನಿಸ್ವಾಮಿ. ಇಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಸಚಿವ ಭೈರತಿ ಸುರೇಶ್‌ ಶಾಸಕರ ಪರ ನಿಂತರು. ಅಲ್ಲಿಗೆ ಮತ್ತಷ್ಟು ಕೆರಳಿದ ಸಂಸದರು, ಶಾಸಕರ ಮೇಲೆ ಏರಿ ಬರಲು ಯತ್ನಿಸಿದರು. ಆಗ ಪೊಲೀಸರು ಸಕಾಲಕ್ಕೆ ಮಧ್ಯಪ್ರವೇಶ ಮಾಡಿ ಸಂಸದರನ್ನು ರಂಗಮಂದಿರದ ಹೊರಗೆ ಕರೆದು ಹೋದರು.

ಸಭೆಯಿಂದ ಸಂಸದರನ್ನು ಹೊರದಬ್ಬಿದ ಎಸ್‌ ಪಿ!!

ಈ ವೇಳೆ ಸಂಸದರನ್ನು ಪೊಲೀಸರು ಹೊರಗೆ ಕಳಿಸಲು ಪ್ರಯತ್ನಿಸಿದರು. ಆದರೆ, ಅವರೊಂದಿಗೆ ವಾಗ್ವಾದಕ್ಕಿಳಿದ ಅವರನ್ನು ಸಾಮಾನ್ಯರನ್ನು ಎತ್ತಿ ಹೊರಗೆ ಹಾಕುವಂತೆ ಪೊಲೀಸರು ಸಮಸದರನ್ನು ಹೊರದಬ್ಬಿದರು. ಅಲ್ಲದೆ, ಸಂಸದರ ವಿರುದ್ಧ ಪೊಲೀಸರು ಏರು ದನಿಯಲ್ಲಿ ಕೂಗಾಡಿದರು. ಈ ಸಂದರ್ಭದಲ್ಲಿ ಎಸ್‌ ನಾರಾಯಣ ಅವರಂತೂ ಸಂಸದರ ವಿರುದ್ಧ ಏರುದನಿಯಲ್ಲಿ ಕೂಗಾಡಿದರಲ್ಲದೆ, ಅವರ ಕುತ್ತಿಗೆಪಟ್ಟಿಗೆ ಕೈಹಾಕಿ ಹೊರದಬ್ಬಿದರು!

ಇದು ಕರ್ನಾಟಕ, ಬಿಹಾರವಲ್ಲ.
ಕೋಲಾರ: ಜನತಾದರ್ಶನದಲ್ಲಿ@bjp_muniswamy
ಅವರ ಭೂ ಕಬಳಿಕೆ ಆರೋಪ ದೊಡ್ಡ ಗಲಾಟೆಗೇ ಕಾರಣವಾಯಿತು. ಆ ವೇಳೆ ಸಂಸದರನ್ನು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ!! ಸಂಸದರ ಹಕ್ಕಿಗೇ ಕತ್ತರಿ, ಇದು ಹಕ್ಕುಚ್ಯುತಿ.#ಕೋಲಾರ #KarnatakaPolice@BJP4Karnataka pic.twitter.com/cU9PU1Ka44

— cknewsnow.com (@cknewsnow) September 25, 2023

ಎಸ್.ಎನ್ ನಾರಾಯಣಸ್ವಾಮಿ ಹೇಳಿದ್ದೇನು?

ಭೂಗಳ್ಳ ಅಂತ ಸಂಸದರು ಯಾರಿಗೆ ಕರೆದಿದ್ದಾರೆ? ಸಂಸದ ಮುನಿಸ್ವಾಮಿ ಒಬ್ಬ ಸೈಕೋ. ನಾಲ್ಕು ವರ್ಷಗಳಿಂದ ಪ್ರೆಸ್ʼಮೀಟ್ ಹಾಗೂ ಸಾರ್ವಜನಿಕವಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಸಾಭೀತು ಮಾಡು ಎಂದು ಹೇಳಿದ್ದೇನೆ. ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಬಳಸಿಕೊಂಡು ತಹಶೀಲ್ದಾರ್ ದಯಾನಂದ್ ಗೆ ಹಾಕಿಕೊಂಡು ಬಂದಿದ್ದ. ನನ್ನ ವಿರುದ್ಧ ಏನೂ ಮಾಡಿದ್ರು ಸಾಭೀತು ಮಾಡಲು ಆಗಲಿಲ್ಲ. ನಾನು ಯಾವುದೇ ಸರಕಾರಿ ಜಮೀನು ಕಬಳಿಕೆ ಮಾಡಿಲ್ಲ. ಬಡಾವಣೆಯನ್ನೂ ನಿರ್ಮಾಣ ಮಾಡಿಲ್ಲ.

ಮುನಿಸ್ವಾಮಿಗೆ ಭ್ರಷ್ಟ ಎನ್ನುವ ಪದದ ಅರ್ಥ ಗೊತ್ತಿದಿಯಾ? 15 ಕ್ರಿಮಿನಲ್ ಕೇಸ್ ನನ್ನ ಮೇಲೆ ಇದೆ ಅಂತ ಹೇಳ್ತಿದ್ದಾನೆ. ನನ್ನ ಮೇಲೆ ಯಾವುದೇ ಪೊಲೀಸ್ ಠಾಣೆಯಲ್ಲಿ ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲ. ವಿನಾಕಾರಣ ಮತನಾಡೋದು ಬಿಜೆಪಿ ಸಂಸ್ಕೃತಿ? ನನ್ನ ಬಗ್ಗೆ ಮಾತನಾಡಿದರೆ ಪರಿಣಾಮ ನೆಟ್ಟಗೆ ಇರೋದಿಲ್ಲ. ಮುಂದಿನ ಚುನಾವಣೆಯಲ್ಲಿ ಠೇವಣಿ ಇಲ್ಲದೆ ಸೋಲ್ತಿಯಾ ನೀನು. ಸಚಿವರ ಅಕ್ಕಪಕ್ಕ ಕುಳಿತಿರುವ ಭೂಗಳ್ಳರು ಅಂತ ಹೇಳಿದ್ದೀಯಾ. ಹಾಗಾದರೆ ನಾನು, ಕೋಲಾರ ಶಾಸಕ ಇಬ್ಬರು ಭೂಗಳ್ಳರಾ? ಪ್ರಚಾರ ಗಿಟ್ಟಿಸಿಕೊಳ್ಳೋದಕ್ಕೆ ನನ್ನ ವಿರುದ್ಧ ಮಾತನಾಡಬೇಡ. ನಾನು ಯಾವುದೇ ಕೆರೆಯಲ್ಲಿ ಒಂದು ಗುಂಟೆ ಒತ್ತುವರಿ ಮಾಡಿದ್ದರೆ ಸಾಭೀತು ಮಾಡು. ಸಾಭೀತು ಮಾಡಿದರೆ ನಿನ್ನ ಮನೆಯ ಕೆಲಸಗಾರನಾಗಿ ಇರ್ತೀನಿ. ಇಲ್ಲಾ ಅಂದ್ರೆ ನಮ್ಮ ಮನೆಯಲ್ಲಿ ವಾಚ್ ಮ್ಯಾನ್ ಕೆಲಸ ಇದೆ, ಬಂದು ಸೇರಿಕೋ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸಂಸದರಿಗೆ ಸವಾಲು ಹಾಲಿದರು.

ಸಂಸದ ಮುನಿಸ್ವಾಮಿ ಹೇಳಿದ್ದು

ಇಂದಿನ ಜನತಾ ದರ್ಶನ ಕಾರ್ಯಕ್ರಮ ಕಾಂಗ್ರೆಸ್ ಪ್ರೇರಿತ. ಅದು ಕಾಂಗ್ರೆಸ್‌ ದರ್ಶನವಾಗಿತ್ತು. ಜನಪ್ರತಿನಿಧಿಗಳು ಒಳ್ಳೆಯವರಾಗಿ ಭೂ ಕಬಳಿಕೆ ಮಾಡದೆ ಅಧಿಕಾರಿಗಳ ಮೇಲೆ ಬೆದರಿಕೆ ಹಾಕದೆ ಇರಬೇಕು. ಕಾರ್ಯಕ್ರಮದಲ್ಲಿ ಜನರಿಗಿಂತ ಅಧಿಕಾರಿಗಳೇ ಹೆಚ್ಚು ಇದ್ದರು. ಒಬ್ಬರ ಸಮಸ್ಯೆಯೂ ಇಲ್ಲಿ ಪರಿಹಾರ ಆಗಲಿಲ್ಲ. ಶ್ರೀನಿವಾಸಪುರ ತಾಲೂಕಿನಲ್ಲಿ ರೈತರ ಬೆಳೆ ನಾಶವಾಗಿದೆ. ಏಕಾಏಕಿ ಅರಣ್ಯ ಇಲಾಖೆಯವರು ತೆರವು ಮಾಡಿರೋದು ಖಂಡನೀಯ. ನಮ್ಮಂತ ಶಾಸಕರು, ಸಂಸದರು ಮಾಡಿರುವ ಒತ್ತುವರಿ ತೆರವು ಮಾಡಬೇಕು. ಭೂಗಳ್ಳರನ್ನು ಅಕ್ಕಪಕ್ಕ ಕೂರಿಸಿಕೊಂಡು ಸಭೆ ಮಾಡೋದು ಸರಿ ಅಲ್ಲ ಅಂತ ಉಸ್ತುವಾರಿ ಮಂತ್ರಿಗಳಿಗೆ ಹೇಳಿದೆ. ನಾನು ಯಾರ ಹೆಸರು ಹೇಳದೆ ಮಂತ್ರಿಗಳ ಬಳಿ ಹೇಳಿದ್ದೇನೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲ್ಯಾಕೆ ಮುಟ್ಟಿ ನೋಡಿಕೊಳ್ಳಬೇಕು.

ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮೇಲೆ ಐದಾರು ಕೇಸುಗಳಿವೆ. ಡಿ.ಕೆ.ರವಿ ಸಾವಿನ ಹಿಂದೆ ಎಸ್.ಎನ್ ನಾರಾಯಣಸ್ವಾಮಿ ಕೈವಾಡ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಗಾಲ್ಫ್ʼನಲ್ಲಿ 50 ಎಕರೆ ಮಾಡಿಕೊಂಡಿದ್ದಾಗ ಡಿ.ಕೆ.ರವಿ ತೆರವು ಮಾಡಿ ಫೆನ್ಸಿಂಗ್ ಹಾಕಿಸಿದ್ದರು. ಕೋರ್ಟ್ ನಲ್ಲಿ ತಡೆ ತರಲು ಹೋಗಿದ್ದರು. ಅದು ಸಹ ತೆರವು ಆಗಿದೆ. ಇವರ ಮಾಡಿರುವ ಎಸ್.ಎನ್ ಸಿಟಿ ಲೇಔಟ್ ನಲ್ಲಿ ಎರಡು ಮೂರು ಕೆರೆ ಒತ್ತುವರಿ ಆಗಿದೆ.

ಲೇಔಟ್ ಮುಂದಿರುವ ಜಾಗ ಸರಕಾರಿ ಗುಂಡುತೋಪು ಅಂತಿದೆ. 30 ಗುಂಟೆ ಒತ್ತುವರಿ ಆಗಿದೆ. ಇವತ್ತು ವೇದಿಕೆಯಲ್ಲಿ ಏಕಾಏಕಿ ಅವಾಚ್ಯವಾಗಿ ನಿಂದಿಸಿ ನನ್ನ ಮೇಲೆ ನಾರಾಯಣಸ್ವಾಮಿ ಬಂದ. ಭೂ ಕಬಳಿಕೆ ಕೇಸುಗಳು ಎಸ್.ಎನ್.ನಾರಾಯಣಸ್ವಾಮಿ ಮೇಲಿವೆ. ಕಳ್ಳರ ಬಳಿ ಹೋಗಿ ನ್ಯಾಯ ಕೇಳೋದಕ್ಕೆ ಆಗುತ್ತಾ? ಅವಾಚ್ಯ ಶಬ್ದಗಳಿಂದ ಬೈದಿರುವ ಅವರ ಮನಸ್ಥಿತಿ ಏನೂ ಅಂತ ಎಲ್ಲರಿಗೂ ಗೊತ್ತಿದೆ. ಎಸ್.ಎನ್ ನಾರಾಯಣಸ್ವಾಮಿ ಅವರ ತಾಯಿ ಹೆಸರಿನಲ್ಲಿ 4 ಎಕರೆ ಕಲ್ಲುಬಂಡೆ ಅಂತ ಮಂಜೂರು ಮಾಡಲಾಗಿದೆ. 50 ಎಕರೆ ಸರಕಾರಿ ಜಮೀನು ಮಾಡಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಕೊಂಡು ನೋಡ್ಕೊತಾರೆ. ಇವತ್ತಿನಿಂದ ಇದರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ನಾರಾಯಣಸ್ವಾಮಿ ಮೇಲೆ FIR ಆಗಿದ ಬಳಿಕ ನಮ್ಮ ಮನೆಯ ವಾಚ್ ಮ್ಯಾನ್ ಕೆಲಸ ಮಾಡಬೇಕಿತ್ತು. ಬೇಲಿನೇ ಎದ್ದು ಹೊಲ ಮೇಯ್ದಾಗ ಏನು ಮಾಡೋಕೆ ಆಗುತ್ತೆ? ಎಸ್.ಎನ್.ನಾರಾಯಣಸ್ವಾಮಿ ಅವರ ಒತ್ತುವರಿ ತೆರವು ಮಾಡಲಿ ಎಂದು ಸಂಸದರು ಒತ್ತಾಯಿಸಿದರು.

Tags: bangarapetecknewsnowdk ravikolarland grabemla sn narayanaswamymp muniswamynewspolice
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

ಕಾವೇರಿ ಬಿಕ್ಕಟ್ಟು; ಮೋದಿ ಮಧ್ಯಪ್ರವೇಶಕ್ಕೆ ಹೆಚ್.ಡಿ.ದೇವೇಗೌಡರ ಒತ್ತಾಯ

Leave a Reply Cancel reply

Your email address will not be published. Required fields are marked *

Recommended

ಪ್ರಭಾಸ್‌ ಜತೆ ಪ್ರಶಾಂತ್‌ ನೀಲ್‌ ಪಿಕ್ಚರ್;‌ ಟಾಲಿವುಡ್‌ನಿಂದ ನ್ಯೂಸ್‌ ಪ್ಲ್ಯಾಷ್

ಪ್ರಭಾಸ್‌ ಜತೆ ಪ್ರಶಾಂತ್‌ ನೀಲ್‌ ಪಿಕ್ಚರ್;‌ ಟಾಲಿವುಡ್‌ನಿಂದ ನ್ಯೂಸ್‌ ಪ್ಲ್ಯಾಷ್

4 years ago
ಒಂದು ಗಣಿ ಆಸ್ಪತ್ರೆಯ ಚಿನ್ನದಂಥ ಕಥೆ!!

ಒಂದು ಗಣಿ ಆಸ್ಪತ್ರೆಯ ಚಿನ್ನದಂಥ ಕಥೆ!!

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ