• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಕ್ರಿಯಾವತಾರಿ ಶ್ರೀ ಲಾಹಿರಿ ಮಹಾಶಯರು

cknewsnow desk by cknewsnow desk
September 30, 2023
in CKPLUS, EDITORS'S PICKS, GUEST COLUMN, NATION, STATE
Reading Time: 2 mins read
0
ಕ್ರಿಯಾವತಾರಿ ಶ್ರೀ ಲಾಹಿರಿ ಮಹಾಶಯರು
962
VIEWS
FacebookTwitterWhatsuplinkedinEmail

ಮಹಾವತಾರ ಬಾಬಾಜಿ ಅವರ ಪ್ರಥಮ ಶಿಷ್ಯರು; ಇಂದು ಲಾಹಿರಿ ಅವರ ಜನ್ಮದಿನ

by Dr.Guruprasad Hawaldar

ಎಲ್ಲ ಭಕ್ತರು ತಮ್ಮ ಗುರುವಿಗೆ ಸಂಪೂರ್ಣವಾಗಿ ಶರಣಾಗುವುದು ಅತ್ಯಗತ್ಯ. ಒಬ್ಬನು ಗುರುವಿಗೆ ಎಷ್ಟು ಗಾಢವಾಗಿ ಶರಣಾಗುವನೋ ಅಷ್ಟು ಹೆಚ್ಚು ತನ್ನ ಗುರುಗಳಿಂದ ಯೋಗದ ಸೂಕ್ಷ್ಮ ತಂತ್ರಗಳನ್ನು ಕಂಡುಕೊಳ್ಳುತ್ತಾನೆ. ಸಮರ್ಪಣೆಯಿಲ್ಲದೆ ಗುರುವಿನಿಂದ ಏನನ್ನೂ ಪಡೆಯಲಾಗುವುದಿಲ್ಲ ಎಂದ ಕ್ರಿಯಾವತಾರಿ, ಯೋಗಾವತಾರ ಶ್ರೀ ಗುರು ಶ್ಯಾಮ್ ಚರಣ ಲಾಹಿರಿ ಮಹಾಶಯರು ಹೇಳಿದ್ದಾರೆ. ಇಂದು ಅವರ ಜನ್ಮದಿನ.

ಶ್ಯಾಮ ಚರಣ ಲಾಹಿರಿಯವರು 1828ನೇ ಸೆಪ್ಟಂಬರ್, 30ರಂದು ಬ್ರಿಟೀಷರ ಆಡಳಿತದಲ್ಲಿದ್ದ ಬಂಗಾಳ ಪ್ರಾಂತ್ಯದ ಗುರ್ನಿ ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಶಿವನ ಪರಮಭಕ್ತೆಯಾಗಿದ್ದರು.1846ರಲ್ಲಿ ಅವರ ವಿವಾಹ ಕಾಶಿ ಮೋನಿ ಅವರೊಂದಿಗೆ ನೆರವೇರಿತು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ಅವರ ಇಬ್ಬರು ಗಂಡು ಮಕ್ಕಳನ್ನೂ ಸಂತರೆಂದೇ ಪರಿಗಣಿಸಲಾಗಿತ್ತು. ಅವರ ಪತ್ನಿ ಅವರ ಶಿಷ್ಯೆಯಾದರು ಮತ್ತು ಆಕೆಯನ್ನು ಗೌರವಪೂರ್ಣವಾಗಿ ಗುರು-ಮಾ ಎಂದು ಕರೆಯಲಾಗುತ್ತಿತ್ತು.

1861ರಲ್ಲಿ ಹಿಮಾಲಯದ ಬುಡದಲ್ಲಿರುವ ರಾಣೀಖೇತ್‍ಗೆ ಲಾಹಿರಿ ಅವರ ವರ್ಗಾವಣೆಯಾಯಿತು. ಆಗ ಒಂದು ದಿನ ಬೆಟ್ಟವನ್ನು ಹತ್ತುತ್ತಿರುವಾಗ ಯಾರೋ ತಮ್ಮನ್ನು ಕರೆಯುತ್ತಿದ್ದಾರೆ ಎಂದು ಅವರಿಗೆ ಭಾಸವಾಯಿತು. ಬೆಟ್ಟವನ್ನು ಮತ್ತುಷ್ಟು ಏರಿದ ಮೇಲೆ ಲಾಹಿರಿಯವರಿಗೆ ಮಹಾವತಾರ ಬಾಬಾಜಿ ಅವರ ದರ್ಶನವಾಯಿತು.

ಮಹಾವತಾರ ಬಾಬಾಜಿ

ಬಾಬಾಜಿ ಅವರು ಲಾಹಿರಿಯವರಿಗೆ ಕ್ರಿಯಾ ಯೋಗದ ದೀಕ್ಷೆಯನ್ನು ನೀಡಿ, ‘ನಿನ್ನ ಉಳಿದ ಜೀವನವನ್ನು ಈ ಕ್ರಿಯಾ ಯೋಗದ ಸಂದೇಶವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ಮೀಸಲಿಡು’ ಎಂದು ಆದೇಶಿಸಿದರು.ಲಾಹಿರಿ ಮಹಾಶಯರು ಭಗವದ್ಗೀತೆಯನ್ನು ಅಧ್ಯಯನ ಮಾಡತ್ತಾ ಮತ್ತು ಜನರನ್ನು ಪ್ರೋತ್ಸಾಹಿಸುವ ಆಧ್ಯಾತ್ಮಿಕ ಚರ್ಚೆಯನ್ನು ಮಾಡುತ್ತಿದ್ದರು.

ಅಂದಿನ ಕಾಲಘಟ್ಟದ ಸಮಾಜದಲ್ಲಿ ಧಾರ್ಮಿಕ ಮತ್ತು ವರ್ಗ ವ್ಯತ್ಯಾಸಗಳು ಬಹಳ ಎದ್ದು ಕಾಣುತ್ತಿದ್ದಂತಹ ಸಮಯದಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎನ್ನದೇ ಸಮಾನವಾಗಿ ಭಾಗವಹಿಸುತ್ತಿದ್ದರು.1886ರಲ್ಲಿ ಅವರು ನಿವೃತ್ತಿಯಾಗುವವರೆಗೂ ಕೌಟುಂಬಿಕ ಜೀವನ ಮತ್ತು ಆಧ್ಯಾತ್ಮಿಕ ಜೀವನ ಎರಡನ್ನೂ ಮುನ್ನಡೆಸಿದರು, ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವರ ಬಳಿಗೆ ಬರಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ , ಒಬ್ಬ ಬ್ರಾಹ್ಮಣನು ಎಲ್ಲಾ ಜಾತಿಗಳ ಜನರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅತ್ಯಂತ ಅಸಾಮಾನ್ಯವಾಗಿತ್ತು.

ಅವರ ಬೋಧನೆಯ ಕೇಂದ್ರ ಭಾಗ – ಕ್ರಿಯಾ ಯೋಗ – ಪ್ರಾಣಾಯಾಮ ತಂತ್ರಗಳನ್ನು ಆಧರಿಸಿತ್ತು, ಇದರಲ್ಲಿ ಅವರು ತಮ್ಮ ಧರ್ಮ ಅಥವಾ ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಹೇಳಿಕೊಡುತ್ತಿದ್ದರು. ತನ್ನಲ್ಲಿ ಬಂದವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ, ಅವರು ಈ ಯೋಗದ ಹೆಚ್ಚು ತೀವ್ರವಾದ ಅಭ್ಯಾಸವನ್ನು ಶಿಫಾರಸು ಮಾಡುತ್ತಿದ್ದರು.

ಲಾಹಿರಿ ಮಹಾಶಯರು

ಯುಕ್ತೇಶ್ವರ ಗಿರಿ, ಪ್ರಣವಾನಂದ, ಕೇಶವಾನಂದ, ಪಂಚಾನನ ಭಟ್ಟಾಚಾರ್ಯ, ಭೂಪೇಂದ್ರನಾಥ್ ಸನ್ಯಾಲ್, ಭಾಸ್ಕರಾನಂದ ಸರಸ್ವತಿ, ಬಾಲಾನಂದ ಬ್ರಹ್ಮಚಾರಿ ಮತ್ತು ಪರಮಹಂಸ ಯೋಗಾನಂದರ ತಂದೆ-ತಾಯಿಗಳು ಅವರ ಪ್ರಮುಖ ಶಿಷ್ಯರು.

‘ಒಬ್ಬರು ಒಂದು ಪ್ರಾಮಾಣಿಕ ಜೀವನವನ್ನು ನಡೆಸುವುದಕ್ಕೆ ದುಡಿಯುತ್ತಿದ್ದು ಪ್ರಾಮಾಣಿಕತೆಯನ್ನು ಅಭ್ಯಸಿಸುತ್ತಿದ್ದಲ್ಲಿ, ದೇವರ ಇವರನ್ನು ಕಾಣುವುದಕ್ಕಾಗಿ ತಮ್ಮ ಬಾಹ್ಯ ಜೀವನವನ್ನು ಗಮನಾರ್ಹ ರೀತಿಯಲ್ಲಿ ಬದಲಾಯಿಸಿಕೊಳ್ಳುವ ಆವಶ್ಯಕತೆಯಿಲ್ಲ’ ಎಂದು ಲಾಹಿರಿಯವರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಒಬ್ಬ ಶಿಷ್ಯ ಅವನ ಪ್ರಾಪಂಚಿಕ ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಅವನನ್ನು ಅವರು ಸರಿಪಡಿಸುತ್ತಿದ್ದರು.

“ನೀವು ಯಾರಿಗೂ ಸೇರಿದವರಲ್ಲ ಅಥವಾ ಯಾರೂ ನಿಮಗೆ ಸೇರಿದವರಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ. ಒಂದು ದಿನ ನೀವು ಈ ಜಗತ್ತಿನಲ್ಲಿ ಎಲ್ಲವನ್ನೂ ತೊರೆಯಬೇಕಾಗುತ್ತದೆ ಎಂಬ ಅಂಶದ ಬಗ್ಗೆ ಯೋಚಿಸಿ – ಆದ್ದರಿಂದ ಈಗ ದೇವರೊಂದಿಗೆ ಪರಿಚಯ ಮಾಡಿಕೊಳ್ಳಿ. ದೇವರ ಗ್ರಹಿಕೆಯ ಬಲೂನಿನಲ್ಲಿ ಪ್ರತಿದಿನ ಹಾರುವ ಮೂಲಕ ಮುಂಬರುವ ಸಾವಿನ ಪ್ರಯಾಣಕ್ಕೆ ಸಿದ್ಧರಾಗಿ. ಭ್ರಮೆಯ ಮೂಲಕ, ನೀವು ಮೂಳೆಗಳು ಮತ್ತು ಮಾಂಸದ ರಾಶಿಯಾಗಿ ನಿಮ್ಮನ್ನು ಅನುಭವಿಸುತ್ತೀರಿ, ಅದು ತೊಂದರೆಯ ಗೂಡು. ನಿರಂತರವಾಗಿ ಧ್ಯಾನ ಮಾಡಿ. ಇದರಿಂದ ನೀವು ಶೀಘ್ರದಲ್ಲೇ ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಿ ಅನಂತ ಸಾರವಾಗಿ ನಿಮ್ಮನ್ನು ನೋಡಬಹುದು. ದೇಹದ ಬಂಧಿಯಾಗಬೇಡಿ; ಕ್ರಿಯೆಯ ರಹಸ್ಯ ಕೀಲಿಯನ್ನು ಬಳಸಿ, ಆತ್ಮದೊಳಗೆ ತಪ್ಪಿಸಿಕೊಳ್ಳಲು ಕಲಿಯಿರಿ. ಲಾಹಿರಿ ಮಹಾಶಯರ ಮಾತುಗಳು ಇವು.

ಲಾಹಿರಿ ಮಹಾಶಯರು ತಮ್ಮ ಜೀವಿತ ಕಾಲದಲ್ಲಿ ಯಾವ ಸಂಸ್ಥೆಯನ್ನೂ ಹುಟ್ಟುಹಾಕಲಿಲ್ಲ. ಅವರು ತಮ್ಮ ಶಿಷ್ಯರಾದ ಸ್ವಾಮಿ ಯುಕ್ತೇಶ್ವರ ಗಿರಿ ಮುಂತಾದವರಿಗೆ; ‘ಈಗ ಯಾವುದೇ ಸಂಸ್ಥೆಯನ್ನು ಕಟ್ಟುವ ಆವಶ್ಯಕತೆಯಿಲ್ಲ. ಇದಕ್ಕಾಗಿ ಈಗಾಗಲೇ ಒಬ್ಬ ಮಹಾನ್ ವ್ಯಕ್ತಿಯನ್ನು ಗುರುತಿಸಲಾಗಿದೆ. ನನ್ನ ಮಹಾ ಸಮಾಧಿಯ ನಂತರದ ದಿನಗಳಲ್ಲಿ ನನ್ನ ಬಗ್ಗೆ ಮತ್ತು ಕ್ರಿಯಾ ಯೋಗದ ಬಗ್ಗೆ ವಿಶ್ವದಾದ್ಯಂತ ತಿಳುವಳಿಕೆ ಉಂಟಾಗುತ್ತದೆ. ಯೋಗದ ಸಂದೇಶ ಸಂಪೂರ್ಣ ವಿಶ್ವವನ್ನು ಆವರಿಸುತ್ತದೆ. ಈ ಸಂದೇಶವನ್ನು ಮುಂದೆ ಕೊಂಡೊಯ್ಯುವುದಕ್ಕಾಗಿ ಒಂದು ಸಂಸ್ಥೆಯ ಉದ್ಭವವಾಗುತ್ತದೆ ಮತ್ತು ಅಲ್ಲಿಯವರೆಗೆ ತಮ್ಮ ಶಿಷ್ಯರಲ್ಲಿ ಯಾರೂ ಕೂಡ ಸಂಸ್ಥೆಯನ್ನು ಕಟ್ಟುವ ಬಗ್ಗೆ ಚಿಂತಿಸಬಾರದು’ ಎಂದು ಹೇಳಿದರು.

ಯುಕ್ತೇಶ್ವರ ಗಿರಿ ಅವರ ಶಿಷ್ಯರಾದ ಪರಮಹಂಸ ಯೋಗಾನಂದರ ಮೂಲಕ ಮತ್ತು ಅವರ ‘ಯೋಗಿಯ ಅತ್ಮಕಥೆ’ಯ ಮೂಲಕ ಲಾಹಿರಿ ಮಹಾಶಯರು ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಸಿದ್ಧರಾದರು.

ಪರಮಹಂಸ ಯೋಗಾನಂದ

ಜಗತ್ತಿನಿಂದ ಕಣ್ಮರೆಯಾಗುತ್ತಿರುವ ಕ್ರಿಯಾ ಯೋಗವನ್ನು ಜಗತ್ತಿಗೆ ಮತ್ತೆ ಪರಿಚಯಗೊಳಿಸುವುದಕ್ಕಾಗಿ ಮಹಾವತಾರ ಬಾಬಾಜಿಯವರು ಲಾಹಿರಿಯವರನ್ನು ಆಯ್ಕೆ ಮಾಡಿದರು. ಲಾಹಿರಿ ಮಹಾಶಯರವರು; ‘ಬಾಲಕ ಯೋಗಾನಂದ ಒಬ್ಬ ಯೋಗಿಯಾಗುತ್ತಾನೆ ಮತ್ತು ಒಂದು ಆಧ್ಯಾತ್ಮಿಕ ಸಾಧನದಂತೆ ಹಲವಾರು ಆತ್ಮಗಳನ್ನು ದೇವರ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದು ಭವಿಷ್ಯ ನುಡಿದಿದ್ದರು. ಅದರಂತೆಯೇ ಪರಮಹಂಸ ಯೋಗಾನಂದರು 1917ರಲ್ಲಿ ಭಾರತದಲ್ಲಿ ‘ಯೋಗ ಸತ್ಸಂಗ ಸೊಸೈಟಿ ಆಫ್ ಇಂಡಿಯಾ’ ಮತ್ತು ನಂತರದಲ್ಲಿ ಅಮೆರಿಕದಲ್ಲಿ ‘ಸೆಲ್ಫ್ ರಿಯಲೈಝೇಷನ್ ಫೆಲೋಶಿಪ್’ಗಳನ್ನು ಸಂಸ್ಥಾಪಿಸಿ ಕ್ರಿಯಾ ಯೋಗದ ಮಹತ್ವವನ್ನು ಪ್ರಪಂಚದಾದ್ಯಂತ ತಿಳಿಸಲಾರಂಭಿಸಿದರು.

ಇದೇ ಸೆಪ್ಟೆಂಬರ್ 26ರಂದು ಲಾಹಿರಿ ಮಹಾಶಯರ ಮಹಾಸಮಾಧಿಯ ದಿವಸವನ್ನು ಮತ್ತು ಸೆಪ್ಟೆಂಬರ್ 30ರಂದು ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ.ಮಹಾಯೋಗಿ ಆ ಗುರುವಿಗೆ ಅನಂತ ಪ್ರಣಾಮಗಳು.

***

Dr.Guruprasad Hawaldar

ಇವರ ವೃತ್ತಿ ಉಪನ್ಯಾಸ. ಪ್ರವೃತ್ತಿ ಬರವಣಿಗೆ. ಇವರ ಬರಹಗಳು ಈಗಾಗಲೇ ನಾಡಿನ ಅನೇಕ ಪತ್ರಿಕೆಗಳು ಮತ್ತು ಪ್ರಮುಖ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿವೆ.

Tags: birth anniversaryckcknewsnowguest columnHimalayaKriya yogaLahiri mahashayaMahavatar BabajiParamahansa yogananda
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಅಂತಾರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಎಂದರೆ ಇದೇನಾ ಡಾ.ಸುಧಾಕರ್‌ ಅವರೇ..?

ಚಿಕ್ಕಬಳ್ಳಾಪುರ, ಕೋಲಾರ: ವಿಷನೀರಿನ 3ನೇ ಹಂತದ ಶುದ್ಧೀಕರಣ; ಸಣ್ಣ ನೀರಾವರಿ ಸಚಿವರ ಹೊಸ ಪಠಣ!!

Leave a Reply Cancel reply

Your email address will not be published. Required fields are marked *

Recommended

ಎಂ.ಚಿದಾನಂದಮೂರ್ತಿ; ಕನ್ನಡದ ಆತ್ಮಬಂಧು, ಶರಣ ಚಿಂತನೆಯ ಪ್ರಖರತೆ,  ಸಂಶೋಧನೆಯ ಪ್ರಾಮಾಣಿಕತೆ, ದಿಟ್ಟ ಚೇತನ ನಿರ್ಗಮನಕ್ಕೆ ವರ್ಷ

ಎಂ.ಚಿದಾನಂದಮೂರ್ತಿ; ಕನ್ನಡದ ಆತ್ಮಬಂಧು, ಶರಣ ಚಿಂತನೆಯ ಪ್ರಖರತೆ, ಸಂಶೋಧನೆಯ ಪ್ರಾಮಾಣಿಕತೆ, ದಿಟ್ಟ ಚೇತನ ನಿರ್ಗಮನಕ್ಕೆ ವರ್ಷ

4 years ago
ರಕ್ತದಾನ ಶ್ರೇಷ್ಠ ದಾನ ಎಂದ ಡಾ.ನರಸಿಂಹಮೂರ್ತಿ

ರಕ್ತದಾನ ಶ್ರೇಷ್ಠ ದಾನ ಎಂದ ಡಾ.ನರಸಿಂಹಮೂರ್ತಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ