• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಅತಿಯಾದ ಆತ್ಮವಿಶ್ವಾಸವೇ ಕೆಸಿಆರ್‌ ಅವನತಿಗೆ ಕಾರಣ

P K Channakrishna by P K Channakrishna
December 3, 2023
in EDITORS'S PICKS, ELECTION2024, NATION, NEWS & VIEWS, POLITICS
Reading Time: 2 mins read
0
ಅತಿಯಾದ ಆತ್ಮವಿಶ್ವಾಸವೇ ಕೆಸಿಆರ್‌ ಅವನತಿಗೆ ಕಾರಣ
1k
VIEWS
FacebookTwitterWhatsuplinkedinEmail

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆಲ್ಲಲು 5 ಕಾರಣ

ಹೈದರಾಬಾದ್:‌ ಹ್ಯಾಟಿಕ್‌ ಹೊಡೆಯುವ ಉಮೇದಿನಲ್ಲಿದ್ದ ತೆಲಂಗಾಣದ ಬಿಆರ್‌ʼಎಸ್‌ ಪಕ್ಷದ ಅಧಿನಾಯಕ ಕೆ.ಚಂದ್ರಶೇಖರ್‌ ರಾವ್‌ ಅವರು ಅತಿಯಾದ ಆತ್ಮವಿಶ್ವಾಸದಿಂದಲೇ ಕಾಂಗ್ರೆಸ್‌ ಪಕ್ಷದ ಮುಂದೆ ಮುಗ್ಗರಿಸಿದ್ದಾರೆ.

ನಿಜ, ಕೆಸಿಆರ್‌ ನಿಸ್ಸಂಶಯವಾಗಿ ಅತ್ಯುತ್ತಮ ಆಡಳಿತಗಾರ, ಸಮರ್ಥ ಮುಖ್ಯಮಂತ್ರಿ. ಹತ್ತು ವರ್ಷಗಳಲ್ಲಿ ತೆಲಂಗಾಣದ ಚಿತ್ರಣವನ್ನೇ ಬದಲಿಸಿದ ದಿಟ್ಟ ನಾಯಕ. ಈಗ ಮುಖ್ಯಮಂತ್ರಿ ಪದವಿಗೇರಲಿರುವ ರೇವಂತ್‌ ರೆಡ್ಡಿ ಖಂಡಿತವಾಗಿಯೂ ಕೆಸಿಆರ್‌ ಅವರಷ್ಟು ಸಮರ್ಥ, ದಕ್ಷ ಸಿಎಂ ಆಗಲಾರರು, ಅನುಮಾನವೇ ಬೇಡ. ಇದು ಆ ರಾಜ್ಯದ ಮತದಾರರು ಹಾಗೂ ಮಾಧ್ಯಮಗಳಿಗೆ ಗೊತ್ತು. ಸ್ವತಃ ಕೆಸಿಆರ್‌ ಅವರಿಗೂ ರೇವಂತ್‌ ರೆಡ್ಡಿ ಪ್ಲಸ್‌, ಮೈನಸ್ಸುಗಳು ತಿಳಿದಿವೆ. ಹಾಗಾದರೆ, ಅವರು ಎಡವಿದ್ದು ಎಲ್ಲಿ? ಅದಕ್ಕೆ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕಾರಣ 1; ಕೆಸಿಆರ್‌ ಉಡಾಫೆತನವೇ ರೇವಂತ್‌ ರೆಡ್ಡಿ ಬಂಡವಾಳ
ಕೆಸಿಆರ್‌ ಕರ್ನಾಟಕದ ಕಾಂಗ್ರೆಸ್‌ ನಾಯಕರು ತೆಲಂಗಾಣಕ್ಕೆ ಲಗ್ಗೆ ಇಟ್ಟು ಪ್ರಚಾರಕ್ಕೆ ಧುಮುಕಿದಾಗ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾಲ್ಕು ಗ್ಯಾರಂಟಿಗಳ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿ ತೆಲುಗು ಭಾಷೆ ಬಲ್ಲ ಗಡಿ ಪ್ರದೇಶಗಳ ನಾಯಕರನ್ನು ತೆಲಂಗಾಣದಲ್ಲಿ ಕ್ಯೂ ನಿಲ್ಲಿಸಿ ಪ್ರಚಾರ ಮಾಡಿಸಿದಾಗಲೂ ಕೆಸಿಆರ್‌ ಆತ್ಮವಿಶ್ವಾಸ ಕುಗ್ಗಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವು, ಗ್ಯಾರಂಟಿಗಳ ಪರಿಣಾಮದ ಬಗ್ಗೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ರೇವಂತ್‌ ರೆಡ್ಡಿ ಅವರು ಕೆಸಿಆರ್‌ ಅವರ ಈ ಉಡಾಫೆತನವನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ಫಸಲು ತೆಗೆದಿದ್ದಾರೆ.

ರೇವಂತ್‌ ರೆಡ್ಡಿ

ಕಾರಣ 2 ; ತಂತ್ರಗಾರಿಕೆ ಇಲ್ಲದ ಕೆಸಿಆರ್
ಕಾಂಗ್ರೆಸ್‌ ಗ್ಯಾರಂಟಿಗಳು ಹಾಗೂ ಬಿಆರ್‌ ಎಸ್‌ ʼಬಂಧುʼಗಳ ನಡುವಿನ ಪೈಪೋಟಿಯನ್ನು ಸಮರ್ಥವಾಗಿ ಕೆಸಿಆರ್‌ ಗುರುತಿಸಲಿಲ್ಲ ಹಾಗೂ ಗ್ಯಾರಂಟಿಗಳನ್ನು ಸರಿಯಾಗಿ ಕೌಂಟರ್‌ ಕೂಡ ಮಾಡಲಿಲ್ಲ. ಅಗತ್ಯಕ್ಕೆ ತಕ್ಕ ಚುನಾವಣಾ ನಿಪುಣರನ್ನೂ ಅವಲಂಭಿಸಲಿಲ್ಲ. ಕೆಲ ಕಾಲ ತಮ್ಮ ಚುನಾವಣಾ ಸಲಹೆದಾರರಾಗಿದ್ದ ಪ್ರಶಾಂತ್‌ ಕಿಶೋರ್‌ ಅವರನ್ನು ಕೆಸಿಆರ್‌ ಕೈಯ್ಯಾರೆ ಕಳೆದುಕೊಂಡರು. ಎಲೆಕ್ಷನ್‌ ತಂತ್ರಗಾರಿಕೆ ಮಾಡುವ ಬದಲು, ಕೆಸಿಆರ್‌ʼಗಿಂತ ದೊಡ್ಡ ತಂತ್ರಗಾರ, ನಿಪುಣ ಇನ್ನೊಬ್ಬರಿಲ್ಲ ಎಂದು ಅವರ ಪುತ್ರ ಕೆಟಿಆರ್‌, ಆಳಿಯ ಹರೀಶ್‌ ರಾವ್‌ ಭುಜ ತಟ್ಟಿಕೊಂಡರು. ಆ ಉಡಾಫೆಯಲ್ಲಿಯೇ ಬಿಆರ್‌ ಎಸ್‌ ಕೊಚ್ಚಿ ಹೋಯಿತು.‌ ಆದರೆ, ಕಾಂಗ್ರೆಸ್‌ ಈ ತಪ್ಪು ಮಾಡಲಿಲ್ಲ. ಕೆಸಿಆರ್‌ ಅವರ ಪ್ರತೀ ಹೆಜ್ಜೆಯನ್ನೂ ಕ್ಲುಪ್ತವಾಗಿ ಗಮನಿಸುತ್ತಿದ್ದ ಕೈ ಪಾಳೆಯವು ಕರ್ನಾಟಕದಲ್ಲಿ ಕೆಲಸ ಮಾಡಿದ್ದ ಸುನೀಲ್‌ ಕನಗೋಳು ಸೇರಿ ಎಲ್ಲಾ ತಂತ್ರಗಾರರನ್ನೂ ತೆಲಂಗಾಣದಲ್ಲಿಯೇ ನಿಯೋಜನೆ ಮಾಡಿತ್ತು.

ಕಾರಣ 3; ಕಾಂಗ್ರೆಸ್‌ ವಿರೋಧಿ ಮತ ಛಿದ್ರಗೊಳಿಸಿದ ಬಿಜೆಪಿ!
ದಕ್ಷಿಣ ಭಾರತ ಈಗ ಬಿಜೆಪಿ ಮುಕ್ತ. ಕಾಂಗ್ರೆಸ್‌ ಮುಕ್ತ ಭಾರತದ ಎಂದು ಜಪ ಮಾಡಿದ್ದ ಪಕ್ಷಕ್ಕೆ ಈಗ ವಿಂದ್ಯ ಪರ್ವತಕ್ಕಿಂತ ಈಚೆ ಈಗ ಅಧಿಕಾರವಿಲ್ಲ. ಪುದುಚೆರಿ ಹೊರತುಪಡಿಸಿದರೆ ಉಳಿದ ಯಾವ ರಾಜ್ಯದಲ್ಲಿಯೂ ಆ ಪಕ್ಷ ಗದ್ದುಗೆಯಲ್ಲಿ ಇಲ್ಲ. ಕರ್ನಾಟಕದಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡಿದೆ. ಜೆಡಿಎಸ್‌ ಪಕ್ಷವನ್ನೇ ಚುನಾವಣೆ ಹೊತ್ತಿನಲ್ಲಿ ಅಗತ್ಯಕ್ಕೂ ಹೆಚ್ಚು ಟಾರ್ಗೆಟ್‌ ಮಾಡಿದ್ದರ ಫಲವನ್ನು ಈಗ ಬಿಜೆಪಿ ಉಣ್ಣುತ್ತಿದೆ. ತೆಲಂಗಾಣದಲ್ಲೂ ಬಿಜೆಪಿ ಹೀಗೆಯೇ ಮಾಡಿ ತಾನೂ ಮುಗ್ಗರಿಸಿ, ಕೆಸಿಆರ್‌ ಅವರನ್ನೂ ಬೀಳಿಸಿದೆ. ಅಲ್ಲೂ ಕಾಂಗ್ರೆಸ್‌ ವಿರೋಧಿ ಮತಗಳನ್ನು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಒಡೆದಿದೆ. ಒಂದು ರೀತಿಯಲ್ಲಿ ತಿಳಿದೂ ತಿಳಿದು ಕಾಂಗ್ರೆಸ್‌ ಪಕ್ಷಕ್ಕೇ ಬಿಜೆಪಿ ಸಹಾಯ ಮಾಡಿದೆ ಎನ್ನುವಂತಿದೆ ಫಲಿತಾಂಶ. ಕೊನೆ ಕ್ಷಣದಲ್ಲಿ ಬಿಜೆಪಿ-ಬಿಆರ್‌ʼಎಸ್‌ ನಡುವೆ ಕುದುರಿದ ಒಳ ಒಡಂಬಡಿಕೆ ಕಾರ್ಯಕರ್ತರ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಅಲ್ಲಿಯೂ ನರೇಂದ್ರ ಮೋದಿ ಅವರ ಪ್ರಚಾರ ಬಿಆರ್‌ʼಎಸ್‌ ಮತಗಳಿಗೆ ಪೆಟ್ಟು ಕೊಟ್ಟಿದೆ.

ಕಾರಣ 4; ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೈಕೊಟ್ಟ ಫಲ ಉಂಡ ಕೆಸಿಆರ್
ಜೆಡಿಎಸ್‌ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಕೆಸಿಆರ್‌ ಕೈಕೊಟ್ಟಿದ್ದು ಕಲ್ಯಾಣ ಕರ್ನಾಟಕದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿಆರ್‌ ಎಸ್‌ ಗೆ ನಷ್ಟವನ್ನೇ ಉಂಟು ಮಾಡಿದೆ. ಟಿಆರ್‌ʼಎಸ್‌ -ಬಿಆರ್‌ʼಎಸ್‌ ಆಗಿ ಮರು ನಾಮಕಾರಣ ಮಾಡುವ ತನಕ ಪ್ರತಿಯೊಂದಕ್ಕೂ ಕುಮಾರಸ್ವಾಮಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಓಲೈಸುತ್ತಿದ್ದ ಕೆಸಿಆರ್‌; ಕರ್ನಾಟಕದ ವಿಧಾನಸಭೆ ಚುನಾವಣೆ ಇನ್ನೇನು ಘೋಷಣೆ ಆಗುವ ನೆಕ್‌ ಮೂಮೆಂಟ್‌ʼನಲ್ಲಿಯೇ ವರಸೆ ಬದಲಿಸಿ ಕುಮಾರಸ್ವಾಮಿ ಅವರಿಗೆ ನಾಟ್‌ ರೀಚೆಬಲ್‌ ಆದರು. ತೆಲಂಗಾಣದಲ್ಲಿ ಮುಸ್ಲೀಂ ಮತಗಳನ್ನು ಕ್ರೋಢೀಕರಣ ಮಾಡಿ ಕಾಂಗ್ರೆಸ್‌ ಗೆಲ್ಲಿಸಿದ್ದೇನೆ ಎಂದು ಬೀಗುತ್ತಿರುವ ಕರ್ನಾಟಕದ ಹಾಲಿ ಮಂತ್ರಿಯೊಬ್ಬರು ಹಾಗೂ ದಿಲ್ಲಿ ದೊರೆಗಳ ಕಿವಿ ಕಚ್ಚುವಿಕೆಯ ಹಿತ ಅನುಭವಿಸಿದ ಕೆಸಿಆರ್‌, ಹೇಳಿಕೆ ಮಾತು ಕೇಳಿ ಕುಮಾರಸ್ವಾಮಿ ಅವರನ್ನು ನಿರ್ಲಕ್ಷ್ಯ ಮಾಡಿದರು. ಜೆಡಿಎಸ್‌ ಪರ ಪ್ರಚಾರಕ್ಕೆ ಇಡೀ ಸಂಪುಟವನ್ನೇ ಕಳಿಸುತ್ತೇನೆ ಎಂದು ಬಡಾಯಿ ಕೊಚ್ಚಿದ್ದ ಅವರು, ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದರು. ದುರಂತವೆಂದರೆ, ಅವರ ಕಿವಿ ಕಚ್ಚಿದ ಕರ್ನಾಟಕದ ಮಂತ್ರಿಯೇ ತೆಲಂಗಾಣದಲ್ಲಿ ಮುಸ್ಲೀಂ ವೋಟುಗಳು ಬಿಆರ್‌ ಎಸ್‌ʼಗೆ ಹೋಗದಂತೆ ತಡೆದರು! ದಿಲ್ಲಿಯ ಬಿಜೆಪಿ ದೊರೆಗಳಂತೂ ಮೇಲಿಂದ ಮೇಲೆ ಹಾರಿಬಂದು ಕಾಂಗ್ರೆಸ್‌ ವಿರೋಧಿ ಮತಗಳನ್ನು ಛಿದ್ರಗೊಳಿಸಿದರು!! ಅಲ್ಲಿಗೆ ಕೆಸಿಆರ್‌ ಸೋಲು ಖಚಿತವಾಗಿತ್ತು.‌ ತಮಗೆ ಕೈಕೊಟ್ಟರೂ ಹಳೆಯದನ್ನು ಮರೆತ ಹೆಚ್‌ ಡಿಕೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಧ್ಯ,ಗೋಷ್ಠಿ ನಡೆಸಿ ಕೆಶಿಆರ್‌ ಪರ ಮಾತನಾಡಿದ್ದರು. ಗ್ಯಾರಂಟಿಗಳ ಬಗ್ಗೆ ಅವರ ಹೇಳಿಕೆಗಳು ಕಾಂಗ್ರೆಸ್‌ ನಾಯರನ್ನು ಕಂಗೆಡಿಸಿತ್ತು. ಒಂದು ವೇಳೆ ಎಲ್ಲವೂ ಸರಿ ಇದ್ದು ಕುಮಾರಸ್ವಾಮಿ ಅವರೂ ಕೆಸಿಆರ್‌ ಪರ ಪ್ರಚಾರ ನಡೆಸಿದ್ದಿದ್ದರೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಮಾರೆಡ್ಡಿ, ಸಂಗಾರೆಡ್ಡಿ, ವಿಕಾರಬಾದ್‌, ನಾರಾಯಣಪೇಟ್‌, ಜೋಗುಲಾಂಬ ಜಿಲ್ಲೆಗಳಲ್ಲಿ ಬಿಆರ್‌ ಎಸ್‌ ಒಳ್ಳೆಯ ಸ್ಕೋರ್‌ ಮಾಡುತ್ತಿತ್ತು. ಆದರೆ, ಕುಮಾರಸ್ವಾಮಿ ಅವರನ್ನು ತೆಲಂಗಾಣಕ್ಕೆ ಕರೆಸಿಕೊಂಡು ಪ್ರಚಾರ ಮಾಡಿಸಿಕೊಳ್ಳುವ ಅವಕಾಶವನ್ನು ಕೆಸಿಆರ್‌ ಅತಿ ಬುದ್ಧಿವಂತಿಕೆ ಮಾಡಿಲಿಕ್ಕೆ ಹೋಗಿ ಕೈಚೆಲ್ಲಿಕೊಂಡರು.

•ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಬೆಂಗಳೂರಿನಲ್ಲಿ ಭೇಟಿ ಆಗಿದ್ದ ಕೆಸಿಆರ್‌ / ಹೈದರಾಬಾದ್‌ʼನಲ್ಲಿ ಕೆಸಿಆರ್‌-ಹೆಚ್‌ʼಡಿಕೆ ಭೇಟಿ ಸಂದರ್ಭ.

ಕಾರಣ 5; ಕುಟುಂಬ ರಾಜಕಾರಣ
ಕೆಸಿಆರ್‌ ಅವರಿಗೆ ಇನ್ನೊಂದು ಆಘಾತಕ್ಕೆ ಕಾರಣವಾಗಿದ್ದು ಫ್ಯಾಮಿಲಿ ಪಾಲಿಟಿಕ್ಸ್.‌ ಕೆಸಿಆರ್‌ ಮುಖ್ಯಮಂತ್ರಿ. ಮಗ ಕೆಟಿಆರ್‌ ಮಂತ್ರಿ, ಆಳಿಯ ಕೂಡ ಮಂತ್ರಿ. ಮಗಳು ಸಂಸದೆ. ಎಲ್ಲಾ ಪವರ್‌ ಸೆಂಟರ್‌ ಗಳೂ ಕುಟುಂಬದ ಒಳಗೇ ಇದ್ದವು. ಹಿಂದೆ ಕಾಂಗ್ರೆಸ್‌ ಶಾಸಕರನ್ನೇ ಆಪರೇಷನ್‌ ಮಾಡಿದ್ದ ಕೆಸಿಆರ್‌ʼಗೆ ಈ ಸಲ ಇದೇ ತಿರುಗುಬಾಣ ಆಗಿತ್ತು. ನೂರಾರು ಜನ ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಜಂಪ್‌ ಆದರು. ಅವರಲ್ಲಿ ಕೆಲವರು ಟಿಕೆಟ್‌ ಗಿಟ್ಟಿಸಿ ಗೆಲುವು ಕಂಡಿದ್ದಾರೆ. ವಿಚಿತ್ರ ಎಂದರೆ; ಕಾಮಾರೆಡ್ಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವೆಂಕಟರಮಣ ರೆಡ್ಡಿ ಅವರ ಎದುರು ಸ್ವತಃ ಕೆಸಿಆರ್‌ ಹಾಗೂ ಕಾಂಗ್ರೆಸ್‌ ಪಕ್ಷದ ಸಿಎಂ ಅಭ್ಯರ್ಥಿ ರೇವಂತ್‌ ರೆಡ್ಡಿ ಸೋತಿದ್ದಾರೆ. 6,741 ಮತಗಳ ಅಂತರದಿಂದ ಕೆಸಿಆರ್‌ ಸೋತಿದ್ದಾರೆ.

Tags: assembly electionbrsckcknewsnowCongresskcrrevanth ReddyTelangana
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಮುಂದಿನ ತಿಂಗಳೇ 5 ಗ್ಯಾರಂಟಿ!

ಆರೇ ತಿಂಗಳಲ್ಲಿ ಮಾಧ್ಯಮ ಪ್ರಚಾರಕ್ಕೆ 140 ಕೋಟಿ ರೂ. ಖರ್ಚು ಮಾಡಿದ ಸಿದ್ದರಾಮಯ್ಯ ಸರಕಾರ

Leave a Reply Cancel reply

Your email address will not be published. Required fields are marked *

Recommended

ಅಬ್ಬರದ ಮಳೆ ನಡುವೆ ಡಿಕೆಶಿ ಭಾಷಣ; ಕನಕಪುರ ಬಂಡೆಗೆ ಕೊಡೆ ಹಿಡಿದು ರಕ್ಷಣೆ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಅಬ್ಬರದ ಮಳೆ ನಡುವೆ ಡಿಕೆಶಿ ಭಾಷಣ; ಕನಕಪುರ ಬಂಡೆಗೆ ಕೊಡೆ ಹಿಡಿದು ರಕ್ಷಣೆ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

4 years ago
ಶಿರಾ ಗೆದ್ದು ರಾಜ್ಯವನ್ನು ಗೆಲ್ಲುತ್ತೇವೆ; ಆದರೆ, ಉಪ ಚುನಾವಣೆಯಿಂದ ಸರಕಾರ ಬೀಳಲ್ಲ ಎಂದ ಡಿಕೆಶಿ

ನಾಡೋಜ ಹಂಪನಾ ವಿರುದ್ಧ ಪೊಲೀಸ್ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ರಾಜ್ಯ ಸರಕಾರದ್ದು ಕೀಚಕ ನಡೆಯ ಪ್ರತೀಕ ಎಂದು ಟೀಕಿಸಿದ ಡಿ.ಕೆ. ಶಿವಕುಮಾರ್

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ