• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಅಯೋಧ್ಯೆ ಶ್ರೀರಾಮ ಸನ್ನಿಧಿ ಸೇರಲು ತವಕಿಸುತ್ತಿವೆ 800 ವರ್ಷಗಳಷ್ಟು ಹಳೆಯ ಅಪರೂಪದ ಸಪ್ತ ರಾಮಾಯಣ ಗ್ರಂಥಗಳು!

cknewsnow desk by cknewsnow desk
January 21, 2024
in NATION, STATE, Travel
Reading Time: 2 mins read
0
ಅಯೋಧ್ಯೆ ಶ್ರೀರಾಮ ಸನ್ನಿಧಿ ಸೇರಲು ತವಕಿಸುತ್ತಿವೆ 800 ವರ್ಷಗಳಷ್ಟು ಹಳೆಯ ಅಪರೂಪದ ಸಪ್ತ ರಾಮಾಯಣ ಗ್ರಂಥಗಳು!
1.2k
VIEWS
FacebookTwitterWhatsuplinkedinEmail

ತಾಳೆಗರಿಗಳ ಮೇಲೆ ರಚಿತವಾದ ರಾಮಚರಿತೆ; ಗುಡಿಬಂಡೆ ಪಟ್ಟಣದಲ್ಲಿದೆ ಅತಿ ವಿರಳ ಸಂರಕ್ಷಿತ ರಾಮಗ್ರಂಥ ಸಂಗ್ರಹ

by GS Bharath Gudibande

ಗುಡಿಬಂಡೆ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದ್ದು, ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದಂತೆ ಏಳು ವಿಭಿನ್ನ, ಅಪರೂಪದ ತಾಳೆಗರಿಯ ಗ್ರಂಥಗಳು ಗುಡಿಬಂಡೆಯಿಂದ ರಾಮ ಸನ್ನಿಧಿಗೆ ತೆರಳಲು ತವಕಿಸುತ್ತಿವೆ.

ಈ ಸಪ್ತ ರಾಮಾಯಣ ಗ್ರಂಥಗಳನ್ನು ಅಯೋಧ್ಯೆಯ ಶ್ರೀರಾಮನಿಗೇ ಅರ್ಪಿಸಿ ಗುಡಿಬಂಡೆ ಹೆಸರನ್ನು ರಾಮ ಸನ್ನಿಧಿಯಲ್ಲಿ ಚಿರಸ್ಥಾಯಿಗೊಳಿಸುವ ಪ್ರಯತ್ನ ನಡೆದಿದೆ.

ಸುಮಾರು 800 ವರ್ಷಗಳ ಹಿಂದೆ ಪೆನ್ನು, ಪೆನ್ಸಿಲ್, ಪುಸ್ತಕ, ಮುದ್ರಣ ಇಲ್ಲದ ಕಾಲದಲ್ಲಿ ಅಂದಿನ ವಿದ್ವಾಂಸರು ತಾಳೆಗರಿಗಳಲ್ಲಿ ಹಳಗನ್ನಡ ಹಾಗೂ ಸಂಸ್ಕೃತದಲ್ಲಿ ಈ ರಾಮಾಯಣಗಳನ್ನು ರಚನೆ ಮಾಡಿದ್ದಾರೆ. ಅಲ್ಲದೇ, ಅವುಗಳನ್ನು ಬಹಳ ಜೋಪಾನವಾಗಿ ರಕ್ಷಣೆ ಮಾಡಲಾಗಿದೆ.

ತಾಳೆಗರಿಗಳಲ್ಲಿ ಬರೆದಿಡಲಾದ ರಾಮಾಯಣ ಗ್ರಂಥಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಖ್ಯಾತ ವೇದ ಪಂಡಿತರೂ, ಹಿರಿಯ ಪತ್ರಕರ್ತರೂ ಆಗಿದ್ದ ದಿವಂಗತ ಎಸ್.ನರಸಿಂಹ ಮೂರ್ತಿ ಅವರ ಸಂಗ್ರಹದಲ್ಲಿವೆ. ಈ ರಾಮಯಾಣ ಗ್ರಂಥಗಳನ್ನು ಅಯೋಧ್ಯೆ ರಾಮ ಮಂದಿರಕ್ಕೆ ಒಪ್ಪಿಸಲು ಅವರ ಮಕ್ಕಳು ನಿರ್ಧರಿಸಿದ್ದು, ರಾಮನ ಸನ್ನಿಧಿಗೆ ಅವರೆಲ್ಲರೂ ತೆರಳಲು ಕಾತರದಿಂದ ಕಾಯುತ್ತಿದ್ದಾರೆ ಹಾಗೂ ಅವುಗಳನ್ನು ರಾಮ ಸನ್ನಿಧಿಗೆ ಅರ್ಪಿಸುವುದಕ್ಕಾಗಿ ಅವರೆಲ್ಲರೂ ಚಾತಕ ಪಕ್ಷಿಗಳಂತೆ ನಿರೀಕ್ಷೆಯಲ್ಲಿದ್ದಾರೆ.

ಎಸ್.ನರಸಿಂಹ ಮೂರ್ತಿ

ವಿಶೇಷವಾಗಿ ತಾಳೆಗರಿಗಳಲ್ಲಿ ಬರೆದಿರುವ ಸಪ್ತ ರಾಮಾಯಣಗಳು ಅಪರೂಪದಲ್ಲಿಯೇ ಅಪರೂಪ. ಭಕ್ತಿ, ಶ್ರದ್ಧೆಯಿಂದ ಕಾಪಾಡಿಕೊಂಡು ಬರಲಾದ ಈ ಅಮೂಲ್ಯ ಗ್ರಂಥಗಳು ಆದಷ್ಟು ಬೇಗ ಅಯೋಧ್ಯೆಯ ರಾಮ ಸನ್ನಿಧಿಯನ್ನು ಸೇರಲಿವೆ ಎಂದಿದ್ದಾರೆ ಎಸ್.ನರಸಿಂಹ ಮೂರ್ತಿ ಅವರ ಪುತ್ರ, ಉಪನ್ಯಾಸಕ, ವೇದ ಪಂಡಿತರಾದ ಸ.ನ.ನಾಗೇಂದ್ರ.

ಸಪ್ತ ರಾಮಾಯಣಗಳು ಯಾವುವು?

1.ವಾಲ್ಮೀಕಿ ರಾಮಾಯಣ ಯುದ್ಧಕಾಂಡ
2.ಆಧ್ಯಾತ್ಮ ರಾಮಾಯಣ
3.ವಿದರ್ಭರಾಜ ವಿರಚಿತ ಚಂಪೂಕಾವ್ಯ ರಾಮಾಯಣ
4.ಕೌಮುದ ರಾಮಾಯಣ
5.ಶ್ರೀಮದ್ವಾಲ್ಮೀಕಿ ರಾಮಾಯಣ ಅರಣ್ಯಕಾಂಡ ಚತುರ್ಥ ಸರ್ಗದಿಂದ ಆರಂಭ ಕೃತಿ
6.ಸಂಪೂರ್ಣ ರಾಮಾಯಣ
7.ಸಂಪೂರ್ಣ ರಾಮಕರುಣಾಮೃತಂ

ತಾಳೆಗರಿ ರಾಮಾಯಣ ಗ್ರಂಥಗಳ ಅಧ್ಯಯನ ನಿರತ ಸ.ನ.ನಾಗೇಂದ್ರ.

ಈ ಸಪ್ತ ರಾಮಾಯಣ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆದಿದೆ. ಬಸವಾ ಭಟ್ಟರ ಮನೆತನದ ಪ್ರಯತ್ನಕ್ಕೆ ಶ್ರೀ ಶೃಂಗೇರಿ ಶಾರದಾ ಪೀಠದ ಅಧ್ಯಯನದ ಸಹಯೋಗದೊಂದಿಗೆ ಬೆಂಗಳೂರಿನ ಸಂಶೋಧನಾ ಸಂಸ್ಥೆಯೂ ಕೈ ಜೋಡಿಸಿದೆ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.

ಎಸ್.ನರಸಿಂಹಮೂರ್ತಿ ಅವರು ತಮ್ಮ ಜೀವಿತಾವಧಿಯಲ್ಲಿ ಧರ್ಮಕಾರ್ಯ, ಇತಿಹಾಸ, ಪುರಾಣಗಳ ಅಧ್ಯಯನಕ್ಕೆ ಬಹುಪಾಲು ಜೀವನವನ್ನು ಮೀಸಲಿಟ್ಟಿದ್ದರು. ಅಲ್ಲದೆ, ವೇದಗಳನ್ನು ಗಾಢವಾಗಿ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದ್ದರು. ಕೆಲ ದಿನಗಳ ಹಿಂದೆ ಅವರು ವಿಧಿವಶರಾಗಿದ್ದರು. ಬಳಿಕ ಅವರ ಪುತ್ರ ನಾಗೇಂದ್ರ ಅವರು ತಂದೆಯವರ ದಾರಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದು; ವೇದ, ಪುರಾಣಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ.

ಎಸ್.ನರಸಿಂಹಮೂರ್ತಿ ಹಾಗೂ ಎಸ್.ಎನ್.ನಾಗೇಂದ್ರ ಅವರು ತಮ್ಮ ಪೂರ್ವಜರ ಕಾಲದಿಂದಲೂ ಅವರ ಮನೆಯಲ್ಲಿದ್ದ ತಾಳೆಗರಿಗಳ ಗ್ರಂಥಗಳ ಸಂಗ್ರಹವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ತಾಳೆಗರಿಗಳ ಮೇಲೆ ಬರೆಯಲ್ಪಟ್ಟಿರುವ ಸಪ್ತ ರಾಮಾಯಣ ಗ್ರಂಥಗಳನ್ನು ರಕ್ಷಣೆ ಮಾಡಿಕೊಂಡು ಬಂದಿರುವುದು ಬಹಳ ಸವಾಲಿನ ಕೆಲಸವಾಗಿದೆ.

ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ತಾಳೆಗರಿಗಳ ಲಿಪಿಯಲ್ಲಿ ತೆಲುಗು ಮಿಶ್ರಿತ ರಾಮಾಯಣ, 1791ರಲ್ಲಿ ರಚಿತ ʼಸಂಪೂರ್ಣ ರಾಮ ಕರುಣಾಮೃತʼ ರಾಮಾಯಣ ಗ್ರಂಥವನ್ನು ನಾಗೇಂದ್ರ ಅವರ ಮನೆಯಲ್ಲಿ ಕಾಣಬಹುದು. ಈಗ ಇವೆಲ್ಲಾ ಗ್ರಂಥಗಳನ್ನು ಅಷ್ಟೇ ಜತನದಿಂದ ಅಯೋಧ್ಯೆಯ ರಾಮ ಸನ್ನಿಧಿಗೆ ಒಪ್ಪಿಸಬೇಕು. ಅವೆಲ್ಲವೂ ಶ್ರೀರಾಮನ ಆಸ್ತಿಯಾಗಿ ಆಯೋಧ್ಯೆಯಲ್ಲಿಯೇ ಶಾಶ್ವತವಾಗಿ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿದೆ.

ಪೆನ್ನು, ಪೆನ್ಸಿಲ್, ನೋಟ್‍ ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಗ್ರಂಥಗಳನ್ನು ಬರೆದಿದ್ದು, ಅದನ್ನು ಆಧುನಿಕ ಪ್ರಿಂಟಿಂಗ್ ತಂಜ್ರಜ್ಞಾನಕ್ಕೆ ಮಾರ್ಪಡಿಸುವ ಅವಶ್ಯಕತೆ ಇದೆ. ಇಂತಹ ಅಮೂಲ್ಯ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ.

ಸ.ನ.ನಾಗೇಂದ್ರ, ವೇದ ಪಂಡಿತರು
Tags: ayodhyachikkaballapurckcknewsnowgreat epicgudibandeindiakarnatakalord ramaramayanaramayana on palm leafseven ramayana
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮತ್ತು ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆ LIVE

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮತ್ತು ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆ LIVE

Leave a Reply Cancel reply

Your email address will not be published. Required fields are marked *

Recommended

ನೇರವಂತಿಕೆಯ ರಾಜಕಾರಣಿ, ಮಿಗಿಲಾಗಿ ಅಂತಃಕರುಣಿ

ನೇರವಂತಿಕೆಯ ರಾಜಕಾರಣಿ, ಮಿಗಿಲಾಗಿ ಅಂತಃಕರುಣಿ

3 years ago
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡದೇ ಅನ್ಯಾಯ ಮಾಡಲೇಬೇಕು ಎಂಬುದೆ ಬಿಜೆಪಿ ಸರಕಾರದ ದುರುದ್ದೇಶ ಎಂದ ಕೃಷ್ಣಭೈರೇಗೌಡ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ