ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶಿಫಾರಸು; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ನೇಮಕ
by GS Bharath Gudibande
ಗುಡಿಬಂಡೆ: ಸರ್ಕಾರಿ ಆಸ್ಪತ್ರೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಮೂಲಕ ಬಡ ರೋಗಿಗಳಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗುಡಿಬಂಡೆ ತಾಲೂಕು ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿಯ 8 ಸದಸ್ಯರ ತಂಡಕ್ಕೆ ಬುಲೆಟ್ ಶ್ರೀನಿವಾಸ್ ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ.
ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರ ಶಿಫಾರಸ್ಸಿನ ಮೆರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆದೇಶ ಹೊರಡಿಸಿದ್ದಾರೆ.
ಗುಡಿಬಂಡೆ ಪಟ್ಟಣದ 2ನೇ ವಾರ್ಡಿನ ನಿವಾಸಿ ಬುಲೆಟ್ ಶ್ರೀನಿವಾಸ್ ಅವರು ಗುಡಿಬಂಡೆ ಪಟ್ಟಣದ ಜನರಿಗಾಗಿ ಸಾಕಷ್ಟು ಸಮಾಜ ಮುಖಿ ಕೆಲಸ ಮಾಡಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಸ್ಟ್ರೇಲಿಯಾದ ನರೇಂದ್ರ ಅವರ ಸಹಕಾರದಿಂದ ಆಕ್ಸಿಜನ್ ಕಾನ್ಸೆಟ್ರೇಟರ್ ತರಿಸುವಲ್ಲಿ ಪ್ರಮುಖ ಪಾತ್ರ ವಹಸಿದ್ದರು.
ಅಲ್ಲದೇ ಕೋವಿಡ್ ನಲ್ಲಿ ಮೃತರಾದ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ನಿಧಿ ಕೊಡಿಸುವಲ್ಲಿ ಅವರು ಯಶಸ್ವಿ ಆಗಿದ್ದರು. ಆರೋಗ್ಯ ಸೇವೆಯ ಬಗ್ಗೆ ಬಹಳ ಕಾಳಜಿಯನ್ನು ಇಟ್ಟುಕೊಂಡು ಯಾರೇ ವ್ಯಕ್ತಿ ಸಹಾಯ ಕೋರಿದರೂ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ
ಅಲ್ಲದೇ ಕೆಲವು ಸಮಯದಲ್ಲಿ ಬೆಂಗಳೂರಿನವರೆಗೂ ಇವರ ಆರೋಗ್ಯ ಸೇವೆ ಹಬ್ಬಿದೆ ಎಂದರೆ ತಪ್ಪಾಗಲಾರದು.
ಶ್ರೀನಿವಾಸ್ ಅವರ ಜತೆಯಲ್ಲಿ ಇನ್ನೂ ಏಳು ಮಂದಿಯನ್ನು ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸಿ.ರಮೇಶ್, ನಂಜುಂಡಪ್ಪ, ನಿರ್ಮಲಮ್ಮ, ಕೆ.ಟಿ.ನಂಜುಂಡಪ್ಪ, ಕೃಷ್ಣೇಗೌಡ, ಬಿ.ಎಂ. ರಹಮತ್ತುಲ್ಲಾ, ನಯಾಜ್ ಪಾಷಾ ನೇಮಕಗೊಂಡ ಸದಸ್ಯರು.
ಇವರ ಪೈಕಿ ಬುಲೆಟ್ ಶ್ರೀನಿವಾಸ್ (ಕೆ.ವಿ.ಶ್ರೀನಿವಾಸ್) ಅವರನ್ನು ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಶುಭಾಶಯಗಳ ಸುರಿಮಳೆ
ಗುಡಿಬಂಡೆ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬುಲೆಟ್ ಶ್ರೀನಿವಾಸ್ ಅವರಿಗೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಗೀನಾ ಫಯಾಜ್, ಉಪಾಧ್ಯಕ್ಷ ವಿಕಾಸ್, ತಾಹಸೀಲ್ದಾರ್ ಮನಿಶಾ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿ ಸೇರಿದಂತೆ ಗುಡಿಬಂಡೆ ತಾಲ್ಲೂಕಿನ ಜನರು ಶುಭ ಕೋರಿದ್ದಾರೆ.