• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಜಂಗಮರ ನಾಡಿನ ಶ್ರೀ ಚಂದ್ರಮೌಳೇಶ್ವರ; ಇಲ್ಲಿನ ಶಿವ ಲಿಂಗರೂಪಿಯಲ್ಲ!

cknewsnow desk by cknewsnow desk
March 10, 2024
in EDITORS'S PICKS, STATE
Reading Time: 3 mins read
0
ಜಂಗಮರ ನಾಡಿನ ಶ್ರೀ ಚಂದ್ರಮೌಳೇಶ್ವರ; ಇಲ್ಲಿನ ಶಿವ ಲಿಂಗರೂಪಿಯಲ್ಲ!
1.4k
VIEWS
FacebookTwitterWhatsuplinkedinEmail

ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯಲ್ಲಿ ಮೂರ್ತಿರೂಪದಲ್ಲಿ ನೆಲೆಸಿದ್ದಾರೆ ಶಿವಪಾರ್ವತಿಯರು! ದಕ್ಷಿಣ ಭಾರತದಲ್ಲಿಯೇ ಇಲ್ಲಿ ಮಾತ್ರ ಆದಿದಂಪತಿಯ ಇಂಥಾ ದರ್ಶನ!!

800 ವರ್ಷಗಳ ದೇವಸ್ಥಾನ, ಚೋಳರಿಂದ ನಿರ್ಮಾಣ; ಜಿಲ್ಲಾಡಳಿತದ ಅಸಡ್ಡೆ, ಮೂಲಭೂತ ಸೌಕರ್ಯದ ಕೊರತೆ

by GS Bharath Gudibande

ಗುಡಿಬಂಡೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರು ಅನೇಕ ದೇವಾಲಯಗಳಿಗೆ ತೆರಳುವುದು, ಈ ರಾತ್ರಿ ದೇವಾಲಯಗಳಲ್ಲಿಯೇ ಜಾಗರಣೆ ಮಾಡಿ ಶಿವಧ್ಯಾನದಲ್ಲಿ ಮುಳುಗುವುದು ಸಾಮಾನ್ಯ.

ಅದೇ ರೀತಿಯಲ್ಲಿ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಗಾಲಹಳ್ಳಿ ಗ್ರಾಮದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯ ಪುರಾಣ ಮತ್ತು ಐತಿಹಾಸಿಕ ಕಾರಣಗಳಿಗೆ ಬಹಳ ಪ್ರಖ್ಯಾತವಾಗಿ ತಾಲೂಕು ಮಾತ್ರವಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಇಲ್ಲಿ ಶಿವರಾತ್ರಿ ಪುಣ್ಯದಿನದಂದು ಭಕ್ತಸಾಗರವೇ ಹರಿದುಬರುತ್ತದೆ.

ಸಾಮಾನ್ಯವಾಗಿ ಶಿವನು ಎಲ್ಲೆಡೆ ಲಿಂಗ ಸ್ವರೂಪನಾಗಿ ದರ್ಶನ ನೀಡಿದರೆ, ಜಂಗಾಲಹಳ್ಳಿಯಲ್ಲಿ ಮಾತ್ರ ಶಿವಪಾರ್ವತಿಯರಿಬ್ಬರೂ ವಿಗ್ರಹ ರೂಪದಲ್ಲಿ ದರ್ಶನ ನೀಡುತ್ತಾರೆ. ದಕ್ಷಿಣ ಭಾರತದಲ್ಲಿಯೇ ಈ ರೀತಿಯಲ್ಲಿ ಶಿವಪಾರ್ವತಿಯರ ದರ್ಶನ ಎಲ್ಲಿಯೂ ಸಿಗುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಏನಿದು ಜಂಗಾಲಹಳ್ಳಿ?

ಮೂಲತಃ ಜಂಗಾಲಹಳ್ಳಿಯ ಹೆಸರಿನ ಜಂಗಮರ ಹೆಸರಿನೊಂದಿಗೆ ಬೆಸೆದುಕೊಂಡಿದೆ. ಜಂಗಮ ಎಂದರೆ ಶಿವಸ್ವರೂಪಿ ಅಥವಾ ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿಯಾದ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ ಎನ್ನುವ ನಾನಾ ಅರ್ಥಗಳು ಇವೆ. ಜಂಗಮದಿಂದ ಜಂಗಾಲಹಳ್ಳಿ ಬಂದಿದೆ.

ಹಾಗಿದ್ದರೆ ಜಂಗಮಕ್ಕೂ ಜಂಗಾಲಹಳ್ಳಿಗೂ ಏನು ಸಂಬಂಧ ಎಂದು ನೋಡಿದರೆ, ಈ ಭಾಗದಲ್ಲಿ ಪುರಾಣ, ಐತಿಹಾಸಿಕ ಕಾಲಘಟ್ಟದಲ್ಲಿ ದಟ್ಟ ಅರಣ್ಯವಿತ್ತು. ಅದು ಜಿಂಕೆ, ಆನೆ, ಪಶು ಪಕ್ಷಿಗಳಿಂದ ಸಮೃದ್ಧವಾಗಿದ್ದ ಬೀಡಾಗಿತ್ತು.

ಸುಮಾರು 800 ವರ್ಷಗಳ ಹಿಂದೆ ಜಿಂಕೆಗಳನ್ನು ಭೇಟೆಯಾಡಲು ಮೂವರು ನವರಾಜರೆಂಬ ತರುಣರು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದರು. ಆಗ ಅವರಿಗೆ ಕಂಡಿದ್ದು ಇದೇ ಜಂಗಾಲಹಳ್ಳಿಯ ಗ್ರಾಮ, ಅಂದರೆ ಜಂಗಮರ ಬೀಡು.

ಈ ಜಾಗಕ್ಕೆ ಬಂದ ಮೂವರು ರಾಜ ತರುಣರು ಜಿಂಕೆಯನ್ನು ಭೇಟೆಯಾಡಿದರು. ನಂತರ ಅದನ್ನು ಕತ್ತರಿಸಲು ಹೋದಾಗ ತೇಜೋಮಯವಾದ ಶಿವಲಿಂಗ ದರ್ಶನವಾಗಿದೆ. ಕೂಡಲೇ ಅವರಿಗೆ ತಪ್ಪಿನ ಅರಿವಾಗಿ, ಸಾಕ್ಷಾತ್‌ ಶಿವನಿಗೇ ಅಪಚಾರ ಮಾಡಿದೆವು ಎಂದು ಭಾವಿಸಿದ್ದಾರೆ.‌ ಇದೊಂದು ಮಹಿಮೆಯುಳ್ಳ ತಣವಾಗಿದ್ದು, ಇಲ್ಲಿಯೇ ಆ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಆ ಮೂವರು ತರುಣರು ನಿಶ್ಚಯ ಮಾಡಿಕೊಂಡರು.

ಕೊನೆಗೆ ಅದೇ ಜಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ಅವರು, ಆ ಲಿಂಗಕ್ಕೆ ಶ್ರೀ ಚಂದ್ರಮೌಳೇಶ್ವರ ಎಂದು ಕರೆಯುತ್ತಾರೆ ಹಾಗೂ ಸಣ್ಣ ಗುಡಿಯೊಂದನ್ನು ನಿರ್ಮಾಣ ಮಾಡಿ ಮಳೆ, ಗಾಳಿ, ಬಿಸಿಲಿನಿಂದ ಲಿಂಗಕ್ಕೆ ಹಾನಿಯಾಗಬಾರದು ಎಂದು ರಕ್ಷಣೆ ಮಾಡುತ್ತಾರೆ. ಹೀಗೆ ಜಂಗಮರ ನಾಡಿನಲ್ಲಿ ಶ್ರೀ ಚಂದ್ರಮೌಳೇಶ್ವರ ದೇವರು ಅವತರಿಸುತ್ತಾರೆ.

ಶಿವಲಿಂಗ ಪ್ರತಿಷ್ಠಾಪನೆಯಾದ ಮೇಲೆ ಈ ಭಾಗದಲ್ಲಿ ಸಾಕಷ್ಟು ಸಮೃದ್ಧಿ ಕಂಡು ಬಂದು ಜನರು ಸಂತೋಷದಿಂದ ಇದ್ದರು ಎನ್ನುವುದು ಸ್ಥಳ ಪುರಾಣದಿಂದ ಸಿಕ್ಕಿದ ಮಾಹಿತಿ. ಅಲ್ಲದೆ; ಶ್ರೀ ಚಂದ್ರಮೌಳೇಶ್ವರ ಮಹಾ ಮಹಿಮಾನ್ವಿತನಾದ ಕಾರಣಕ್ಕೆ ಜನರು ಹಗಲು ಹೊತ್ತಿನಲ್ಲಿ ಮಾತ್ರ ದೇವರ ದರ್ಶನ ಪಡೆಯುತ್ತಿದ್ದರು. ಸೂರ್ಯಾಸ್ತದ ನಂತರ ಯಾರೂ ದೇಗುಲದ ಕಡೆ ಬರುತ್ತಿರಲಿಲ್ಲವಂತೆ. ಸುತ್ತಮುತ್ತ ದಟ್ಟ ಅಡವಿ, ವನ್ಯಮೃಗಗಳು ಇದ್ದದ್ದೂ ಜನರ ಭೀತಿಗೆ ಕಾರಣವಾಗಿತ್ತು.

ವಿಶೇಷ ಶಿವಾಲಯ; ಏಕಸ್ಥಳದಲ್ಲಿ ಅನೇಕ ದೇವತೆಗಳು

ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಶಿವಪಾರ್ವತಿಯರು ದಕ್ಷಿಣಾಭಿಮುಖವಾಗಿ ನೆಲೆಸಿರುವ ವಿಶೇಷ ವಿಗ್ರಹವನ್ನು ಕಾಣಬಹುದು. ಅಲ್ಲದೇ ಉಮಾಮಹೇಶ್ವರಿ, ವೀರಭದ್ರ, ಕಾಲಭೈರವ, ಗಂಗಾದೇವಿ, ಬೇಡರ ಕಣ್ಣಪ್ಪ ಹಾಗೂ ಆಂಜನೇಯ ಸ್ವಾಮಿಯ ದೇವರುಗಳನ್ನು ಒಂದೇ ಸ್ಥಳದಲ್ಲಿ ಕಾಣಬಹುದು, ಇವರ ಆರಾಧನೆಯಿಂದ ಜ‌ನರ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಜನರ ದೃಢವಾದ ನಂಬಿಕೆ.

  • ಕೆಳಗಿನ ಸ್ಲೈಡ್‌ ಶೋ ಕ್ಲಿಕ್‌ ಮಾಡಿ

ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾರ್ತೀಕ ಸೋಮವಾರ ಹಾಗೂ ಪ್ರತೀ ವರ್ಷ ಮಹಾ ಶಿವರಾತ್ರಿ ಹಬ್ಬದ ದಿನದಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಈ ಸಂದರ್ಭದಲ್ಲಿ ಸುಮುತ್ತಲಿನ ಗ್ರಾಮಸ್ಥರು ಸೇರಿ ರಾತ್ರಿ ಇಡೀ ಜಾಗರಣೆ ಮಾಡುವುದರ ಜತೆಗೆ ಭಜನೆ ಮೂಲಕ ಪ್ರಾರ್ಥನೆ, ಜಾಗರಣೆ ಮಾಡುತ್ತಾರೆ.

ನಂದಿಯ ಮಹಿಮೆ

ದೇವಾಲಯದ ಒಳಭಾಗದಲ್ಲಿ ಶಿವಪಾರ್ವತಿ ದೇವರ ಎದರಾಗಿ ಇರುವ ನಂದಿ ವಿಗ್ರಹದ ಆಕರ್ಷಣೆ ಬಹಳ. ಭಕ್ತಾದಿಗಳು ತಮ್ಮ ಇಷ್ಟ ಕೋರಿಕೆಗಳನ್ನು ನಂದಿಗೆ ಹೇಳಿಕೊಳ್ಳುತ್ತಾರೆ. ಅಲ್ಲದೆ; ನಂದಿಯ ಕೆಳಗೆ ತೂರಿದಾಗ ಹೋದರೆ ಪ್ರಾರ್ಥನೆಗಳು ಈಡೇರುತ್ತವೆ ಎಂದು ಜನರು ನಂಬುತ್ತಾರೆ. ಪ್ರಾರ್ಥನೆಗಳು ಈಡೇರವುದಾದರೆ ನಂದಿಯ ಕೆಳಗಿಂದ ಸುಲಭವಾಗಿ ಹೊರ ಬರಬಹುದು, ಇಲ್ಲದಿದ್ದರೆ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದು ಸ್ಥಳೀಯರ ಮಾತು.

ಅಭಿವೃದ್ಧಿಯ ಬಗ್ಗೆ ಅಸಡ್ಡೆ

ಸುಮಾರು 800 ವರ್ಷಗಳ ಹಳೆಯ ದೇವಸ್ಥಾನ ಜಿಲ್ಲಾಡಳಿತ, ಸರಕಾರದ ಅಸಡ್ಡೆಯಿಂದ ಅನಾಥವಾಗಿದೆ. ಇಲ್ಲಿಗೆ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಇಲ್ಲ. ಇಂಥ ಪುಣ್ಯಕ್ಷೇತ್ರವನ್ನು ಗುರುತಿಸಿ ಅಭಿವೃದ್ಧಿಪಡಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತರ ಸೋತಿದೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.‌ಎನ್.‌ಸುಬ್ಬಾರೆಡ್ಡಿ ಅವರ ಕಣ್ಣಿಗೂ ಈ ದೇವಾಲಯ ಬಿದ್ದಿಲ್ಲದಿರುವುದು ದುರದೃಷ್ಟಕರ.

ಕಳ್ಳಕಾಕರ ಕಣ್ಣು

ಮೊದಲಿಂದಲೂ ಈ ದೇವಾಲಯ ಕಳ್ಳಕಾಕರ ವಕ್ರದೃಷ್ಟಿಗೆ ಬಿದ್ದಿದೆ. ಸೂಕ್ತ ಭದ್ರತೆ ಇಲ್ಲದ ಕಾರಣಕ್ಕೆ ಮೂವರು ರಾಜ ತರುಣರು ಪ್ರತಿಷ್ಠಾಪನೆ ಮಾಡಿದ್ದ ಮೂಲ ಶಿವಲಿಂಗವನ್ನು ಹತ್ತು ವರ್ಷಗಳ ಹಿಂದೆ ಯಾರೋ ದುಷ್ಟರು ಕಳವು ಮಾಡಿದ್ದರು. ವಿಚಿತ್ರವೆಂದರೆ, ಶಿವಲಿಂಗ ಕಳುವಾಗುವುದಕ್ಕೆ ಮೊದಲೇ ಈ ದೇವಾಲಯದಲ್ಲಿ ಶಿವಪಾರ್ವತಿಯೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.

ಮೂಲ ಶಿವಲಿಂಗವನ್ನು ಯಾರು ಕದ್ದರು? ಆ ಪ್ರಕರಣದ ಹಿನ್ನೆಲೆ, ತನಿಖೆ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸ್‌ ದೂರು ದಾಖಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಗ್ರಾಮಸ್ಥರಿಂದಲೂ ಈ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.

ಹೋಗುವುದು ಹೇಗೆ?

ಬೆಂಗಳೂರಿನಿಂದ ದೇವನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ NH-44 ರಲ್ಲಿ ಬಾಗೇಪಲ್ಲಿ ಕಡೆ ಸಾಗಿದರೆ ವರಲಕೊಂಡ ಎಂಬ ಗ್ರಾಮ ಬರುತ್ತದೆ. ಆ ಗ್ರಾಮದಲ್ಲಿ ಸರ್ವೀಸ್‌ ರಸ್ತೆಗೆ ಪ್ರವೇಶ ಪಡೆದು ಎಡಕ್ಕೆ ಚಲಿಸಿದರೆ ಗುಡಿಬಂಡೆ ಮಾರ್ಗವಾಗಿ ಚಲಿಸಿದರೆ, ಪೋಲಂಪಲ್ಲಿ ಗ್ರಾಮ ಸಿಗುತ್ತದೆ. ಆ ಗ್ರಾಮದಿಂದ ಕೆಲ ಮೀಟರ್‌ ಗಳಷ್ಟೇ ಮುಂದಕ್ಕೆ ಸಾಗಿದರೆ ಜಂಗಾಲಹಳ್ಳಿ ಕ್ರಾಸ್‌ ಬರುತ್ತದೆ. ಅಲ್ಲಿಂದ ಜಂಗಾಲಹಳ್ಳಿಗೆ ಬಹಳ ಹತ್ತಿರ. ಬೆಂಗಳೂರಿನಿಂದ ಗರಿಷ್ಠ ಎಂದರೂ ಒಂದೂವರೆ ತಾಸು ಪ್ರಯಾಣ (ಕಾರಿನಲ್ಲಾದರೆ). 80ರಿಂದ 85 ಕಿ.ಮೀ. ದೂರ.

Tags: chikkaballapurckcknewsnowfestivalgudibandejangalahallilord shivamhaha shivaratrishri chandra mouleshwara
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ

ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ

Leave a Reply Cancel reply

Your email address will not be published. Required fields are marked *

Recommended

ಅಮಾನವೀಯತೆಗೆ ಸೋತ ಭಾರತ!

ಅಮಾನವೀಯತೆಗೆ ಸೋತ ಭಾರತ!

4 years ago
ರೂಪಾಂತರಗೊಂಡ ಕೋವಿಡ್‌ ವೈರಾಣುವಿಗೆ ಬ್ರೇಕ್‌ ಹಾಕಲು ಬೆಂಗಳೂರು ಸೇರಿ ರಾಜ್ಯಾದ್ಯಂತ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನೈಟ್‌ ಕರ್ಫ್ಯೂ; ಇಂದಿನಿಂದಲೇ ಜಾರಿ

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯಿಂದ ಸೆಮಿ ಲಾಕ್‌ಡೌನ್‌; ನೈಟ್‌ ಕರ್ಫ್ಯೂ ಸಡಿಲಿಕೆ ಇಲ್ಲ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ