• About
  • Advertise
  • Careers
  • Contact
Saturday, May 17, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ವಿರುದ್ಧ Go Back ಚಳವಳಿ!

cknewsnow desk by cknewsnow desk
March 30, 2024
in NATION, POLITICS, STATE
Reading Time: 3 mins read
0
ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ವಿರುದ್ಧ Go Back ಚಳವಳಿ!
1k
VIEWS
FacebookTwitterWhatsuplinkedinEmail

Local vs Non Local ಅಭಿಯಾನ ಆರಂಭ; ಎಡ-ಬಲದಲ್ಲಿ ನಲುಗಿದ್ದ ಕೈ ಪಕ್ಷಕ್ಕೆ ಹೊಸ ಪೀಕಲಾಟ

ಕೋಲಾರ: ಎಡಗೈ ಬಲಗೈ ವಿವಾದದ ನಡುವೆ ಸಿಕ್ಕಿಬಿದ್ದಿದ್ದ ಕೋಲಾರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಕೊನೆಗೂ ಬೆಂಗಳೂರು ಮೂಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಅದರ ಬೆನ್ನಲ್ಲಿಯೇ ಸಮಸ್ಯೆಯ ಸುಳಿಗೆ ಸಿಲುಕಿದೆ.

ಬಿಜೆಪಿಯ ಘಟಾನುಘಟಿ ನಾಯಕರೇ ಎದುರಿಸಿ ಕಂಗಾಲಾಗಿದ್ದ ಗೋ ಬ್ಯಾಕ್ ಚಳವಳಿ ಬಿಸಿ ಈಗ ಕೈ ಪಾಳೆಯಕ್ಕೂ ತಟ್ಟಿದೆ. ಕೋಲಾರ ಕ್ಷೇತ್ರಕ್ಕೆ ಬೆಂಗಳೂರಿನ ಕಾರ್ಪೋರೇಟರ್‌ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ.ಗೌತಮ್‌ ಅವರಿಗೆ ಟಿಕೆಟ್‌ ನೀಡಿರುವ ಬಗ್ಗೆ ಕಾಂಗ್ರೆಸ್‌ ಅಸಮಾಧಾನಿರು ಇರಲಿ, ಜನರೇ ಅಖಾಡಕ್ಕೆ ಇಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

#GoBack #GoBackGowtham ಎಂಬ ಹ್ಯಾಷ್ ಟ್ಯಾಗ್ ಗಳು ಹಾಗೂ ಸ್ಲೋಗನ್ ಗಳು ಜಾಲತಾಣಗಳಲ್ಲಿ ಕಣ್ಣಿಗೆ ರಾಚುತ್ತಿವೆ. ಅಭ್ಯರ್ಥಿ ಬಗ್ಗೆ ಎಐಸಿಸಿ ಅಧಿಕೃತ ಪ್ರಕಟಣೆ ಹೊರಬಿದ್ದ ಮೇಲೆ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ವಿರೋಧಿಯಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಸ್ತುಸ್ಥಿತಿ ಹಾಗಲ್ಲ.

ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಶತಾಯ ಗತಾಯ ಟಿಕೆಟ್‌ ತಪ್ಪಿಸಲೇಬೇಕೆನ್ನಯವ ಹಠಕ್ಕೆ ಬಿದ್ದಿದ್ದ ರಮೇಶ್‌ ಕುಮಾರ್‌ ಬಣಕ್ಕೆ ಇಲ್ಲಿ ಕೈ ಮೇಲಾಗಿದೆ. ಏಕೆಂದರೆ; ಅವರಿಗೆ ಪತ್ರಕರ್ತ ಸಿ.ಎಂ.ಮುನಿಯಪ್ಪಗೋ ಅಥವಾ ಎಲ್.‌ಹನುಮಂತಯ್ಯ ಅವರಿಗೋ ಟಿಕೆಟ್‌ ಕೊಡಿಸುವ ಉದ್ದೇಶಕ್ಕಿಂತ ಮುನಿಯಪ್ಪ ಅವರನ್ನು ಹಣಿಯುವುದು ಮುಖ್ಯವಾಗಿತ್ತು. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನಿಂದ ಬಂದು ಕೋಲಾರದಲ್ಲಿ ಅಭ್ಯರ್ಥಿ ಆಗಿರುವ ಗೌತಮ್‌ ಅವರು ರಮೇಶ್‌ ಕುಮಾರ್‌ ಬಣಕ್ಕೆ ಕೊನೆಯ ಆಯ್ಕೆ ಆಗಿತ್ತು ಎಂಬುದನ್ನು ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರೇ ಬಾಯಿ ಬಿಟ್ಟಿದ್ದಾರೆ.

ಇದೊಂದೆಡೆ ಇದ್ದರೆ, ಇನ್ನೊಂದೆಡೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಲೋಕಲ್ vs ನಾನ್ ಲೋಕಲ್ ಎಂಬ ಅಭಿಯಾನ ಕ್ಷೇತ್ರದಲ್ಲಿ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು local v/s non local ಅಭಿಯಾನ ಆರಂಭ ಮಾಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೋಲಾರಕ್ಕೂ ಗೌತಮ್‌ಗೂ ಏನು ಸಂಬಂಧ? ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲಿಕ್ಕಾಗಿಯೇ ಹೊರಗಿನ ವ್ಯಕ್ತಿಗೆ ಟಿಕೆಟ್‌ ಕೊಡಲಾಗಿದೆ ಎಂದೆನಿಸುತ್ತಿದೆ ಎಂದು ಕೆಲವರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ ಕ್ಷೇತ್ರದ ಮತದಾರರ ಫೇಸ್‌ ಬುಕ್‌, ವಾಟ್ಸಾಫ್‌ ಖಾತೆಗಳಲ್ಲಿ #GoBack #GoBackGowtham ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಅದಕ್ಕೆ ಯಾವ ರೀತಿ ಕೌಂಟರ್‌ ಕೊಡುವುದು ಎನ್ನುವುದು ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ತಲೆ ನೋವಾಗಿದೆ. #ಗೌತಮ್‌_ಬೇಡವೇಬೇಡ, #ಗೌಥಮ್_ಕಥೆ_ಗೋವಿಂದಾ!!! ಇಂಥ ಹ್ಯಾಶ್‌ ಟ್ಯಾಗ್‌ʼಗಳು ಭಾರೀ ಪ್ರಮಾಣದಲ್ಲಿ ಟ್ರೋಲ್‌ ಆಗುತ್ತಿವೆ.

ಟಿಕೆಟ್‌ ಘೋಷಣೆಯಾದ ಮರುದಿನವೇ ಅಭ್ಯರ್ಥಿ ಗೌತಮ್‌ ಜಿಲ್ಲೆಯ ಜನರಿಂದ ಅನಾದರಕ್ಕೆ ಒಳಗಾಗಿದ್ದರೆ, ಇನ್ನೊಂದೆಡೆ ಸಿಟ್ಟು ಮಾಡಿಕೊಂಡಿರುವ ಸಚಿವ ಮುನಿಯಪ್ಪ ಅವರ ಅವರನ್ನು ಮನವೊಲಿಸಲು ಕಾಂಗ್ರೆಸ್‌ ವರಿಷ್ಠರೇ ಹರಸಾಹಸ ನಡೆಸಿದ್ದಾರೆ.

ಸ್ವತಃ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಂದೀಪ್‌ ಸುರ್ಜೇವಾಲ ಅವರೇ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು; “ಕೋಲಾರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವ್ಯಾಪಕ ಚರ್ಚೆಯಾಗಿದೆ. ಸಚಿವ ಮುನಿಯಪ್ಪ ಅವರು ನಮ್ಮ ಅಭ್ಯರ್ಥಿ ಗೆಲ್ಲುವ ತಂತ್ರಗಾರಿಕೆಯ ಬಗ್ಗೆ ಹೇಳಿದ್ದರು. ಎಸ್ಸಿ ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂದು ಅವರು ಮನವರಿಕೆ ಮಾಡಿಕೊಟ್ಟಿದ್ದರು” ಹೇಳಿದ್ದಾರೆ. ಕೋಲಾರದ ತಿಕ್ಕಾಟ ಸುರ್ಜೇವಾಲ ಅವರ ಕೈ ಮೀರಿದೆ ಎಂಬುದನ್ನು ಅವರ ಹೇಳಿಕೆಯೇ ಸಾರಿ ಹೇಳಿದಂತಿದೆ. ಹೀಗಾಗಿ, ಇದೆಲ್ಲಾ ಬೇಗುದಿಯನ್ನು ಬೆಂಗಳೂರಿನಿಂದ ಕೋಲಾರಕ್ಕೆ ಬಂದಿರುವ ಅಭ್ಯರ್ಥಿ ಅನುಭವಿಸಲೇಬೇಕು.

ಕಾಂಗ್ರೆಸ್ ಪಕ್ಷದ ಸೆಲ್ಪ್ ಸೂಸೈಡ್

ಕೆ.ವಾಸುದೇವ ರೆಡ್ಡಿ ಎಂಬುವವರು ಪೇಸ್‌ ಬುಕ್‌ ನಲ್ಲಿ ಹಾಕಿರುವ ಸ್ಟೇಟಸ್‌ ವಿಶೇಷವಾಗಿದೆ ಹಾಗೂ ಕಾಂಗ್ರೆಸ್‌ ಪಕ್ಷದ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದೆ.

ಯಾರ್ರೀ ಈ ಗೌತಮ್…? ಕೋಲಾರದಲ್ಲಿ ಕಾಂಗ್ರೆಸ್ ಸೋಲಲು ಸಿದ್ದವಾಗಿದಿಯೇ.? ಕೋಲಾರಕ್ಕೂ ಈ ಗೌತಮ್ ರವರಿಗೂ ಏನು ಸಂಬಂಧ? ಕ್ಷೇತ್ರದ ಮತದಾರರು ಈ ಮನುಷ್ಯನ ಮುಖ ನೋಡಿಯೇ ಇಲ್ಲ..! ಕ್ಷೇತಕ್ಕೆ ಹೊರಗಿನವರು, ಕನಿಷ್ಠ ಪಕ್ಷ ಕ್ಷೇತ್ರದ ಜನರಿಗೆ 0.1% ಸಹಾ ಮುಖ ಪರಿಚಯ ಇಲ್ಲದ ಯಾರೋ ಅನಾಮಿಕ ವ್ಯಕ್ತಿಯನ್ನು ತಂದು ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಾಡುತ್ತಿದೆ..ಇದೊಂದು ರೀತಿ ಕಾಂಗ್ರೆಸ್ ಪಕ್ಷದ ಸೆಲ್ಪ್ ಸೂಸೈಡ್ (ರಾಜಕೀಯ ಆತ್ಮಹತ್ಯೆ) ತೀರ್ಮಾನವಾಗಿದೆ… ಸ್ಥಳೀಯರಿಗೆ, ಸುಶಿಕ್ಷಿತ, ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ಬಹಳ ಸುಲಭವಾಗಿ ಕೋಲಾರದಲ್ಲಿ ಗೆಲ್ಲುತ್ತಿತ್ತು…ಆದರೆ ಕಾಂಗ್ರೆಸ್ ಅನವಶ್ಯಕವಾಗಿ ಎಡ-ಬಲ ಅಂತ ಬಿಕ್ಕಟ್ಟು ಸೃಷ್ಟಿಸಿಕೊಂಡು ಕೊನೆ ಕ್ಷಣದಲ್ಲಿ ಯಾವುದೊ ಕಾಣದ ಕೈಗಳ ಒತ್ತಡಗಳಿಂದ ಇಂತಹ ಅನಾಮಿಕ ವ್ಯಕ್ತಿಗಳನ್ನು ತಂದು ಕ್ಷೇತದ ಜನರ ಮೇಲೆ ಏಕಾಏಕಿ ಹೇರುವುದರ ಮೂಲಕ ಕ್ಷೇತ್ರದ ಮತದಾರರನ್ನು ಕನ್ವಿನ್ಸ್ ಮಾಡಲು ಸಾಧ್ಯವಿಲ್ಲ.. ಅದಕ್ಕೆ ಸಮಯಾವಕಾಶವೂ ಇಲ್ಲ.. ಅನೇಕ ಸ್ಥಳೀಯ , ಜನ ಪರಿಚಿತ ಅಭ್ಯರ್ಥಿಗಳಿದ್ದರು ಸಹ ಅಂತಹ ಉತ್ತಮ ಅಭ್ಯರ್ಥಿ ವ್ಯಕ್ತಿಯೇ ಕಾಂಗ್ರೆಸ್ ಗೆ ಸಿಗಲಿಲ್ಲವೇ .? ಗೌತಮ್ ರವರೇ ಅಂತಿಮವಾದರೆ ಡೌಟೇ ಬೇಡ.. ಕಾಂಗ್ರೆಸ್ ಈ ಚುನಾವಣೆಗೆ ಮೊದಲೇ ಸೋಲುವ ಮೊದಲ ಕ್ಷೇತ್ರ ಕೋಲಾರ ಆಗಲಿದೆ… ಅಭ್ಯರ್ಥಿಯನ್ನು ಬದಲಿಸಿ ಸ್ಥಳಿಯರಿಗೆ ನೀಡಲಿ.

#gobackgowtham#ಗೌತಮ್_ಬೇಡವೇಬೇಡ#ಗೌಥಮ್_ಕಥೆ_ಗೋವಿಂದಾ..!!!

ಕೋಲಾರದಲ್ಲಿ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಮಗ ಗೌತಮ್ ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ!
ಇಬ್ಬರ ಜಗಳ 3ನೇಯವರಿಗೆ ಲಾಭವೆಂದು ಭಾವಿಸಬೇಕಿಲ್ಲ. KH ಮುನಿಯಪ್ಪ ಅಳಿಯನಿಗೆ, ರಮೇಶ್ ಕುಮಾರ್ ಬಣಕ್ಕೆ ಟಿಕೆಟ್ ತಪ್ಪಿದೆ ಎಂದು ಭಾವಿಸಿದರೆ ತಪ್ಪು. ಬಲಗೈನವರಿಗೆ ಟಿಕೆಟ್ ಕೊಡಿಸಬೇಕು ಎಂಬುದು ಹೈಡ್ರಾಮಾ ಉದ್ಧೇಶ ಆಗಿರಲಿಲ್ಲ.1/2#ಕೋಲಾರ

— Channakrishna PK (@pkchannakrishna) March 30, 2024

ಮುನಿಯಪ್ಪ ಅಳಿಯನಿಗೆ ಟಿಕೆಟ್ ಮಿಸ್ ಮಾಡಿಸಬೇಕು ಎನ್ನುವುದಷ್ಟೇ ಆ ಪ್ರಹಸನದ ಗುರಿ ಆಗಿತ್ತು. ಸ್ವಾಮಿ ಕೈ ಮೇಲಾಗಿದೆ, ವ್ಯವಸ್ಥಿತವಾಗಿ ಎಡಗೈನವರನ್ನು ಒಡೆಯಲಾಗಿದೆ. ಎದುರಿಸಿ ತಿರುಗೇಟು ಕೊಡುವ ಸಮಯ ಎಲ್ಲಾ ದಲಿತರಿಗೆ ಸಿಕ್ಕಿದೆ. ಎಡ- ಬಲ ಎಂದು ವಿಭಜಿಸಿದವರಿಗೆ ಶಾಸ್ತಿ ಆಗಬೇಕು.2/2#ಎಡvsಬಲ

— Channakrishna PK (@pkchannakrishna) March 30, 2024
Tags: Bengaluruckcknewsnowcongress candidateGo Back movementGowthamkarnatakakolarPolitics
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಬೆಳಗ್ಗೆ 10.15 ಗಂಟೆಗೆ ದ್ವಿತೀಯ PUC ಪರೀಕ್ಷೆ; ಶುಭವಾಗಲಿ ವಿದ್ಯಾರ್ಥಿಗಳೇ

ನಾಳೆ ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ʼಗೊಬೆಲಪ್ಪʼ, ʼಬ್ರೋಕರಪ್ಪʼ ಎಂದ ಮಾಜಿ ಸಿಎಂ

ಹೌದು, ಸಿದ್ದರಾಮಯ್ಯಗೆ ನಾನೇ ವಿಲನ್!

2 years ago
ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಕೊಟ್ಟ ಜೆಡಿಎಸ್‌

7 ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ; ವಕ್ಕಲೇರಿ ರಾಮು ಕೋಲಾರ ಅಭ್ಯರ್ಥಿ

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ