• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಇದು Likes Economy

cknewsnow desk by cknewsnow desk
July 28, 2020
in GUEST COLUMN
Reading Time: 1 min read
0
ಇದು Likes Economy

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಡ್ರೋಣ್ ಪ್ರತಾಪ್.

915
VIEWS
FacebookTwitterWhatsuplinkedinEmail

ಸುಭಾಶ್ ಹುಗಾರ್

ಇದೊಂದು ಮಾನಸಿಕ ರೋಗವಲ್ಲದೇ ಬೇರೇನೂ ಅಲ್ಲ. ದಿಢೀರ್ ಪ್ರಸಿದ್ಧಿ ಮತ್ತು ಏನಕೇನ ಯಶಸ್ಸು ಸಾಧಿಸಬೇಕೆಂಬ ಹುಚ್ಚುತನ ಮನುಷ್ಯನನ್ನು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗಿ ದಿಕ್ಕು ತಪ್ಪಿಸಿಬಿಡುತ್ತಿದೆ. ಲೈಕು, ಕಾಮೆಂಟು ಮತ್ತು ಶೇರುಗಳ ಪ್ರಸಕ್ತ ಸೋಷಿಯಲ್‌ ಮೀಡಿಯಾದ ಯುಗದಲ್ಲಂತೂ ಈ ಹುಚ್ಚು ಮೇರೆ ಮೀರಿದೆ. ಕೆಲವೊಮ್ಮೆ ಪ್ರಚಾರದ ಮುಂಬೆಳಕಿನಲ್ಲಿ ಮಿರಿ ಮಿರಿ ಮಿಂಚಿಸಿ ತಾತ್ಕಾಲಿಕವಾಗಿ ಭ್ರಮಾ ಲೋಕದಲ್ಲಿ ತೇಲಿಸಿಯೂ ಬಿಡುತ್ತದೆ. ಆದರೆ, ಮುಂದೊಮ್ಮೆ ವಾಸ್ತವದ ಅರಿವಾದಾಗ ಎಲ್ಲವೂ ಠುಸ್ ಆಗಿ, ಮಾನಸಿಕ ಖಿನ್ನತೆ ಉಂಟಾಗಿ ಊಹಿಸಲಸಾಧ್ಯವಾದ ಅನಾಹುತಗಳೂ ಸಂಭವಿಸಿಬಿಡುತ್ತವೆ.

ಜಾಗತಿಕ ತಾಪಮಾನದ ಬಗ್ಗೆ ದನಿ ಎತ್ತಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಮಣಿಪುರದ ಏಳು ವರ್ಷದ ಬಾಲ ಕಾರ್ಯಕರ್ತೆ ಲಿಸಿಪ್ರಿಯಾ ಕಂಗಜುಮ್ ಕಥೆ ನೀವು ಕೇಳಿರಬಹುದು. ಈಗ ಒಂಬತ್ತು ವರ್ಷದ ಬಾಲಕಿಯಾಗಿರುವ ಈ ಲಿಸಿಪ್ರಿಯಾ, 2019ರ ಮೇ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌‌ನ ಜಿನೀವಾದಲ್ಲಿ ಸಂಯುಕ್ತ ರಾಷ್ಟ್ರಗಳ ಸಂಘಟನೆ (UNO) Disaster Risk Reduction ಕುರಿತು ಆಯೋಜಿಸಿದ್ದ ಜಾಗತಿಕ ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾಳೆ ಎಂಬ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಳು. ಈ ಬಾಲಕಿಯ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಈಕೆಯನ್ನು #SheinspiresUs ಅಭಿಯಾನಕ್ಕೆ ನಾಮಕರಣ ಮಾಡಿದ್ದರು.

ಆದರೆ, ಪ್ರಧಾನಿಯ ಆಫರ್ ತಿರಸ್ಕರಿಸಿದ್ದ ಈ ಬಾಲ ಕಾರ್ಯಕರ್ತೆ, ಶಾಲಾ ಪಠ್ಯದಲ್ಲಿ ಪರಿಸರ ಜಾಗೃತಿಯ ಪಾಠಗಳನ್ನು ಸೇರಿಸಬೇಕೆಂಬ ನನ್ನ ಬೇಡಿಕೆಯನ್ನು ನೀವು ಈಡೇರಿಸಿಲ್ಲ. ಹೀಗಾಗಿ #SheinspiresUs ಕುರಿತು ನಿಮ್ಮ ಆಹ್ವಾನವನ್ನು ನಾನು ತಿರಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಳು. ವಿರೋಧ ಪಕ್ಷಗಳ ಮುಖಂಡರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಸಿಕ್ಕ ಈ ಅವಕಾಶವನ್ನು ಕೈ ಚೆಲ್ಲಲಿಲ್ಲ. ವಿಪಕ್ಷಗಳ ಘಟಾನುಘಟಿ ನಾಯಕರೆಲ್ಲರೂ ಈ ಬಾಲಕಿಯನ್ನು ಕೊಂಡಾಡಿ, ಪ್ರಧಾನಿ ಮೇಲೆ ಟೀಕಾಪ್ರಹಾರ ನಡೆಸಿದ್ದರು.

ವಾಸ್ತವವಾಗಿ UNO ದಿಂದ ಈ ಬಾಲೆಗೆ ಆಹ್ವಾನ ಬಂದಿದ್ದೇ ದೊಡ್ಡ ಸುಳ್ಳು. ಪ್ರಸಿದ್ಧಿ ಮತ್ತು ಯಶಸ್ಸಿನ ಹಪಾಹಪಿತನದಿಂದಾಗಿ ಈಕೆಯ ತಂದೆ ಈ ಎಲ್ಲಾ ಸುಳ್ಳುಗಳನ್ನು ಹೆಣೆದು ಜಗತ್ತಿಗೆ ಮೋಸ ಮಾಡಿದ್ದ. ಈಕೆಯ ಹೆಸರಿನಲ್ಲಿ ಇರುವ ಟ್ವಿಟರ್ ಅಕೌಂಟ್ ನ್ನು ಆಕೆಯ ತಾಯಿಯೇ ಹ್ಯಾಂಡಲ್ ಮಾಡುತ್ತಿದ್ದರು. 42 ಸಾವಿಕ್ಕೂ ಅಧಿಕ ಫಾಲೋವರ್ಸ್ ಇದ್ದ ಈ ಅಕೌಂಟನ್ನೂ ನಂತರ ಟ್ವಿಟರ್ ಸ್ಥಗಿತಗೊಳಿಸಿತ್ತು. ಸುಳ್ಳು ಮತ್ತು ಅಡ್ಡದಾರಿಯ ಮೂಲಕವಾದರೂ ಸರಿ, ಪ್ರಸಿದ್ಧಿ ಮತ್ತು ಯಶಸ್ಸು ಪಡೆಯಬೇಕೆಂಬ ಈ ಕಾಲದ ಮಾನಸಿಕ ಸ್ಥಿತಿಯ ಫಲಶ್ರುತಿ ಈ ಲಿಸಿಪ್ರಿಯಾ.

ಅಂತಾರಾಷ್ಟ್ರೀಯ ಖ್ಯಾತಿಯ ಹವಾಮಾನ ಬದಲಾವಣೆಯ ಕಾರ್ಯಕರ್ತೆ ಸ್ವಿಡನ್ನಿನ ಗ್ರೆಟಾ ಥನ್ಬರ್ಗ್ ಮತ್ತು ಮಹಿಳಾ ಹಾಗೂ ಮಕ್ಕಳ ಶಿಕ್ಷಣ ಕಾರ್ಯಕರ್ತೆಯೂ ಆದ ಪಾಕಿಸ್ತಾನದ ಯೂಸುಫಾ ಮಲಾಲಾ ಅವರಿಂದ ಪ್ರೇರಣೆ ಪಡೆದು ಜಗತ್ತಿನಾದ್ಯಂತ ಈಗ ಅನೇಕ Child Activistಗಳು ಸಕ್ರಿಯರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಜಗತ್ತನ್ನು ಬಾಧಿಸುವ ಸಮಸ್ಯೆಗಳ ಬಗ್ಗೆ ಕಾಳಜಿ ತೋರುವುದು ಮತ್ತು ಅವುಗಳ ಪರಿಹಾರಕ್ಕಾಗಿ ಹೋರಾಟ ನಡೆಸುವುದು ಸ್ವಾಗತಾರ್ಹ ಬೆಳವಣಿಗೆಯೇ.

ಆದರೆ, ಅದಕ್ಕೆ ಬೇಕಿರುವ ಶ್ರಮ, ತಾಳ್ಮೆ, ಬದ್ಧತೆ ಮತ್ತು ಪ್ರಾಮಾಣಿಕತೆ ಇಲ್ಲದೇ ಕೇವಲ ಸುಳ್ಳು ಮತ್ತು ಅಡ್ಡದಾರಿಗಳ ಮೂಲಕ ಯಶಸ್ಸಿನ ಕನಸು ಕಾಣುವುದು ದುರಂತಕ್ಕೆ ಕಾರಣವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಪಾಲಕರೇ ಇಂಥ ಅನಾಹುತಗಳಿಗೆ ಹೊಣೆಯಾಗಿರುತ್ತಾರೆ.

ಯಶಸ್ಸು ಮತ್ತು ಜನಪ್ರಿಯತೆ ಅಳೆಯುವ ವಿಧಾನಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುತ್ತವೆ. ಸೋಷಿಯಲ್‌ ಮೀಡಿಯಾ ಮತ್ತು ಇಂಟರ್ನೆಟ್‌ನ ಈ ಯುಗವನ್ನು ವಿದ್ವಾಂಸರ ವಲಯದಲ್ಲಿ Likes Economy ಎಂದು ಕರೆಯಲಾಗುತ್ತದೆ. ಲೈಕು, ಕಾಮೆಂಟ್ಸು, ಶೇರ್ಸ್, ವೀವ್ಸ್, ಹಿಟ್ಸ್ ಗಳ ಆಧಾರದಲ್ಲಿ ವ್ಯಕ್ತಿಯ ಜನಪ್ರಿಯತೆ, ವಿಶ್ವಾಸಾರ್ಹತೆಯನ್ನು ಅಳೆಯುವ ವಿಧಾನವನ್ನು Vanity Metrics ಎಂದೂ ಕರೆಯುತ್ತಾರೆ. ವ್ಯಕ್ತಿ ತನ್ನನ್ನು ತಾನೇ ಹೊಗಳಿಕೊಳ್ಳೋದು, ಸುಳ್ಳು, ತಪ್ಪು ಮಾಹಿತಿ ಹರಡಿಯಾದರೂ ಹೆಚ್ಚು ಜನರ ಗಮನ ಸೆಳೆಯುವುದು, ಹೆಚ್ಚು ಲೈಕು, ಕಾಮೆಂಟು, ಶೇರ್ಸ್ ಪಡೆಯುವ ಮೂಲಕ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುವುದು. ಆ ವ್ಯಕ್ತಿತ್ವ Fake ಅಂತ ಗೊತ್ತಿದ್ದರೂ ಅದರಿಂದಲೇ ಸುಖ ಅನುಭವಿಸುವುದು ಈ Likes Economy ಕಾಲದ ಸತ್ಯ. ಈ ಪ್ರಕ್ರಿಯೆಯಲ್ಲಿ ಸತ್ಯಕ್ಕೆ ಹೆಚ್ಚು ಬೆಲೆ ಇಲ್ಲ ಅಥವಾ ಬೆಲೆಯೇ ಇಲ್ಲ. ಈ ಕಾಲದಲ್ಲಿ ಸತ್ಯದ ಜಾಗವನ್ನು ಭಾವನಾತ್ಮಕತೆ ಆವರಿಸಿಕೊಂಡಿದೆ.

ನಾವು ಬದುಕುತ್ತಿರುವ ಈ ಕಾಲವನ್ನು Post Truth Era ಎಂದೂ ಸಹ ವಿದ್ವಾಂಸರು ಕರೆಯುತ್ತಾರೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತು ಈ ಕಾಲಕ್ಕೆ ಅನ್ವಯಿಸುವುದಿಲ್ಲ. ಅದೆಲ್ಲಾ ಹಳೆಯ ಕಾಲದ, ಹಳಸಲು ವಿಚಾರ ಮಾತ್ರ. ವಿವೇಚನೆ ಇಲ್ಲದೇ, ಸತ್ಯಾಸತ್ಯತೆ ಪರೀಕ್ಷಿಸದೇ ಕಂಡದ್ದು, ಕೇಳಿದ್ದನ್ನೆಲ್ಲಾ ನಂಬುವುದು, ಪರಿಣಾಮಗಳ ಬಗ್ಗೆ ಲೆಕ್ಕಿಸದೇ ಬಂದಿದ್ದನ್ನೆಲ್ಲಾ Forward ಮಾಡುವುದು Post Truth Era ದ ಲಕ್ಷಣಗಳು.

ಡ್ರೋಣ್ ಆವಿಷ್ಕಾರದ ಹೆಸರಿನಲ್ಲಿ ಮಂಡ್ಯದ ಹುಡುಗ ಪ್ರತಾಪ್‌ ಮಾಡಿರುವ ’ನಂಬಿಕೆ ದ್ರೋಹ’ದ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿರುವಾಗ ಈ ಎಲ್ಲಾ ಸಂಗತಿಗಳು ನೆನಪಿಗೆ ಬಂದವು.

‘ದೂದ್ ಕಾ ಜಲಾ, ಛಾಸ್ ಕೊ ಭೀ ಫೂಂಖ್ ಫೂಂಖ್ ಕೆ ಪೀತಾ ಹೈ’ ಎಂಬಂತೆ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತೆನಾಲಿ ರಾಮಕೃಷ್ಣನ ಬೆಕ್ಕಿನಂತೆ ನಾವೆಲ್ಲರೂ ಅತಿ ಜಾಗರೂಕತೆಯಿಂದ ಇರಲೇಬೇಕು. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ರಸಕ್ಕಿಂತ ಕಸವೇ ಹೆಚ್ಚು.

Lead photo: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರತಾಪ್. / ಚಿತ್ರಕೃಪೆ: ಫೇಸ್ಬುಕ್
*****


ಸುಭಾಶ್ ಹುಗಾರ್ ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರು. ಮೂಲತಃ ಹುಬ್ಬಳ್ಳಿಯವರಾದ ಅವರು ವಿಜಯ ಕರ್ನಾಟಕ ಮತ್ತಿತರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ವಿಕಕ್ಕಾಗಿ ಅವರು ದಿಲ್ಲಿಯೂ ಕೆಲಸ ಮಾಡಿದ್ದರು. ದಿಗ್ವಿಜಯ ಸುದ್ದಿವಾಹಿನಿಯ ಸಂಪಾದಕರೂ ಆಗಿದ್ದರು.

Tags: drone prathaplikes-economysocial media
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

ಒಬ್ಬರೇ ಒಬ್ಬರು! ಅವರೇ ಭಾರತರತ್ನ ಕರ್ಪೂರಿ ಠಾಕೂರ್.., ಹರಿದ ಕೋಟು, ಹರಿದ ಚಪ್ಪಲಿಯೊಂದಿಗೆ ಸಾಗಿದ ಮಹಾನ್‌ ದಂತಕಥೆ!!

by cknewsnow desk
January 27, 2024
0

"ಒಬ್ಬರ ಜನನವು ಅವರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ" ಎಂದ ಜನ ನಾಯಕ; ಅಪ್ಪಟ ಭಾರತರತ್ನ, ಮೀಸಲು ಕೊಟ್ಟು ಬದುಕು ಕಟ್ಟಿಕೊಟ್ಟ ಭಾರತದ ಭಾಗ್ಯವಿದಾತ

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

ಸರ್ದಾರ್ ಪಟೇಲರ ದೃಢ ಸಂಕಲ್ಪ, ಮುನ್ಷಿ ಅವರ ಪ್ರಚಂಡ ಧೈರ್ಯ ಮತ್ತು ಬಾಬು ರಾಜೇಂದ್ರ ಪ್ರಸಾದರ ರಾಜಿ ಇಲ್ಲದ ನಿಲುವು

by cknewsnow desk
January 21, 2024
0

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ಶ್ರೀರಾಮಪ್ರಭುವೇ ಕ್ಷಮಿಸು! ನಿನ್ನ ಹೆಸರಿಟ್ಟುಕೊಂಡವರೆಲ್ಲ ನಿನ್ನವರಲ್ಲ!!

ಅಯೋಧ್ಯಾ ಆಂದೋಲನ ಭಾರತದ ಅಂತರಾತ್ಮದ ಧ್ವನಿ; ಮಂದಿರಕ್ಕೆ ಅಂಕುರಾರ್ಪಣೆ ಆಗಿದ್ದು ಹೇಗೆ?

by cknewsnow desk
January 19, 2024
0

ಎಲ್.ಕೆ.ಆಡ್ವಾಣಿ ಅವರು ತಮ್ಮ ಆತ್ಮಕಥೆ My Country My Life ಕೃತಿಯಲ್ಲಿ ಬರೆದಿರುವ ಮಹತ್ವದ ಲೇಖನ ಸಿಕೆನ್ಯೂಸ್‌ ನೌ ನಲ್ಲಿ..

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

ನಿಡುಮಾಮಿಡಿ ಶ್ರೀಗಳು: ಕಾವಿಯೊಳಗೆ ನಿಗಿನಿಗಿ ಹೊಳೆಯುವ ಕೆಂಪುಸೂರ್ಯ

by cknewsnow desk
December 28, 2023
0

ನಿಜದ ಜಾಡು ಹಿಡಿದು ಹೊರಟ ನಿಡುಮಾಮಿಡಿ ಶ್ರೀಗಳ ಹೋರಾಟಕ್ಕೆ 33 ವರ್ಷ

ಅಖಂಡ ಭಾರತದ ಅಷ್ಟದಿಕ್ಕುಗಳ ಆಮೂಲಾಗ್ರ ಅಭಿವೃದ್ಧಿಗೆ ಸುವರ್ಣ ಅಧ್ಯಾಯ ಬರೆದವರೇ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ

ಅಟಲ್ ಎಂದರೆ ಅಜಾತಶತ್ರು

by cknewsnow desk
December 25, 2023
0

ಇಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಉತ್ತಮ ಆಡಳಿತ ದಿನ by Dr.Gurupeasad Hawaldar ಜಾಗತಿಕ ಮಟ್ಟದ ಶ್ರೇಷ್ಠ ನಾಯಕರ ಸಾಲಿನಲ್ಲಿ ಗೌರವಿಸಲ್ಪಡುವ  ನಿಸ್ವಾರ್ಥ ರಾಜಕಾರಣಿ,...

ಶಿಕ್ಷಣ, ಶಿಕ್ಷಕ ಮತ್ತು ಬದಲಾವಣೆ; ನೂತನ ಶಿಕ್ಷಣ ನೀತಿಯ ಹೊತ್ತಿನಲ್ಲಿ ಓಶೋ ಜೋಶ್..

ಓಶೋ: ಬೆರಗು, ಬೆಡಗು ಮತ್ತು ವಿಸ್ಮಯ

by cknewsnow desk
December 11, 2023
0

ಇಂದು ಓಶೋ ಜನ್ಮದಿನ

Next Post
ಒಬ್ಬರಿದ್ದರು! ಸಿದ್ದಾಂತಕ್ಕಿಂತ ಸುದ್ದಿ ದೊಡ್ಡದು ಎಂದಿದ್ದ ಸಂಪಾದಕರು!!

ಒಬ್ಬರಿದ್ದರು! ಸಿದ್ದಾಂತಕ್ಕಿಂತ ಸುದ್ದಿ ದೊಡ್ಡದು ಎಂದಿದ್ದ ಸಂಪಾದಕರು!!

Leave a Reply Cancel reply

Your email address will not be published. Required fields are marked *

Recommended

ಚಿರಸ್ಮರಣೀಯ ಚಿರಂಜೀವಿ

ಚಿರಸ್ಮರಣೀಯ ಚಿರಂಜೀವಿ

6 years ago
ಕಾಂಗ್ರೆಸ್ ಸಾಗರವಿದ್ದಂತೆ, ಆಕಾಶದಿಂದ ಬಿದ್ದ ನೀರು ಸಾಗರ ಸೇರಲೇಬೇಕು; ಮಧು ಬಂಗಾರಪ್ಪ ರಕ್ತಗತವಾಗಿ ಕಾಂಗ್ರೆಸ್ಸಿಗರು ಎಂದ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಸಾಗರವಿದ್ದಂತೆ, ಆಕಾಶದಿಂದ ಬಿದ್ದ ನೀರು ಸಾಗರ ಸೇರಲೇಬೇಕು; ಮಧು ಬಂಗಾರಪ್ಪ ರಕ್ತಗತವಾಗಿ ಕಾಂಗ್ರೆಸ್ಸಿಗರು ಎಂದ ಡಿ.ಕೆ. ಶಿವಕುಮಾರ್

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ