• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಬಾಗೇಪಲ್ಲಿ ಗಡಿಯಲ್ಲಿ ಕಮ್ಯುನಿಸ್ಟ್‌ ಕಲರವ

cknewsnow desk by cknewsnow desk
October 26, 2021
in STATE
Reading Time: 2 mins read
0
ಬಾಗೇಪಲ್ಲಿ ಗಡಿಯಲ್ಲಿ ಕಮ್ಯುನಿಸ್ಟ್‌ ಕಲರವ
1.1k
VIEWS
FacebookTwitterWhatsuplinkedinEmail

ಪಾತಪಾಳ್ಯದಲ್ಲಿ ಸಿಪಿಐ(ಎಂ) 11ನೇ ತಾಲೂಕು ಸಮ್ಮೇಳನ

by Ra Na Gopala Reddy Bagepalli

ಬಾಗೇಪಲ್ಲಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್’ವಾದಿ)ದ 11ನೇ ಬಾಗೇಪಲ್ಲಿ ತಾಲೂಕು ಸಮ್ಮೇಳನವು ಪಾತಪಾಳ್ಯದಲ್ಲಿ ನಡೆಯಿತು.

ಕೆಂಬಾವುಟ ಧ್ವಜಾರೋಹಣೆ ಮಾಡುವುದರ ಮೂಲಕ ಪ್ರಾರಂಭವಾದ ಸಮ್ಮೆಳನವು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ, ರಾಜಕೀಯ ಭ್ರಷ್ಷಾಚಾರದ ನಿರ್ಮಲನೆಗಾಗಿ ಹಾಗೂ ಮುಂದಿರುವ ಸಮಸ್ಯೆಗಳು ಮತ್ತು  ಸವಾಲುಗಳ ಬಗ್ಗೆ ಚರ್ಚೆ ವಿಮರ್ಶೆ ನಡೆಸಿತು.

ಅಂಬಟಿ ರತ್ನಂಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಆರಂಭವಾಗುವುದಕ್ಕಿಂತ ಮೊದಲು ವೇದಿಕೆ ಮುಂಭಾಗ ಕೆಂಬಾವುಟವನ್ನು ಧ್ವಜಾರೋಹಣೆ ಮಾಡಿ, ಲಾಲ್ ಸಲಾಂಗಳನ್ನು ಅರ್ಪಿಸಿದರು. ಅನೇಕ ವೀರೋಚಿತ ಹೋರಾಟಗಳಲ್ಲಿ ಭಾಗವಹಿಸಿ, ಅಮರರಾದ ಅಮರವೀರರನ್ನು ಸ್ಮರಣೆ ಮಾಡಲಾಯಿತು.

ಶಿಕ್ಷಣ ವ್ಯಾಪಾರೀಕರಣ, ಅಸಮರ್ಪಕ ಪಡಿತರ ವ್ಯವಸ್ಥೆ, ಮೂಲಭೂತ ಸೌಲಭ್ಯಗಳ ಕೊರತೆ, ಕೋಮುವಾದ, ಧಮಾಂಧತೆ ಬಿತ್ತುವ ಮತಾಂಧ ಶಕ್ತಿಗಳ ವಿರುದ್ಧ, ನೀರಾವರಿ ಸಮಸ್ಯೆಗಳು, ಕೃಷಿ ಹಾಗೂ ರೈತರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳು, ಭ್ರಷ್ಠಾಚಾರ, ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಅತ್ಯಾಚಾರಗಳ ಬಗ್ಗೆ, ಸರ್ಕಾರ ತಂದಿರುವ ಜಾಗತೀಕರಣ ಹಾಗೂ ಉದಾರೀಕರಣ, ಖಾಸಗೀಕರಣ ನೀತಿಗಳು ತಾಲೂಕನ್ನು ಬಾಧಿಸುತ್ತಿದ್ದು, ರೈತರಿಗೆ ಆಗುತ್ತಿರುವ ತೊಂದರೆ ಇತ್ಯಾದಿ ಸಮಗ್ರ ಜನಪರ ವಿಷಯಗಳ ಬಗ್ಗೆ ಹಾಗೂ ಕೇಂದ್ರದ ರೈತ ವಿರೋಧಿ ನೀತಿಗಳು, ವಿದ್ಯುತ್ ಖಾಸಗಿಕರಣ, ಭೂಸುದಾರಣೆ ಕಾಯಿದೆ, ಎಪಿಎಂಸಿ ಕಾಯಿದೆಗಳ ವಿರುದ್ಧ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಜಿ.ವಿ.ರಾಘವುಲು ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಬಸವರಾಜ್ ಅವರು ಮಾತನಾಡಿದರು.

ತಾಲೂಕಿನಲ್ಲ್ಲಿಯಾವುದೇ ರೀತಿಯಾದ ಶಾಶ್ವತ ನೀರಾವರಿ ಯೋಜನೆಗಳಾಗಲಿ, ನದಿ ನಾಲೆಗಳಾಗಲಿ ಇಲ್ಲ.  ಆದರೆ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕಾಗಿದೆ ಬಾಗೇಪಲ್ಲಿ. ಕೆರೆಗಳಲ್ಲಿ ಹೂಳು ತುಂಬಿಕೊಂಡು ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಬಹು ದೂರದ ಊರುಗಳಿಗೆ ಜನ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳಿಂದ, ಸಾಮಾನ್ಯ ಜನರ ಜೀವನದಿಂದ ಪಾತಪಾಳ್ಯದಲ್ಲಿ ನಡೆಯುತ್ತಿರುವ 11ನೇ ತಾಲ್ಲೂಕಿನ ಸಮ್ಮೇಳನವು ಮಹತ್ವವನ್ನು ಪಡೆದುಕೊಂಡಿತು.

 ಈ ಸಮ್ಮೇಳನದಲ್ಲಿ ಮುಖಂಡರಾದ ಡಾ. ಅನಿಲ್‌ಕುಮಾರ್, ರಘುರಾಮರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ, ಮಂಜುನಾಥ ರೆಡ್ಡಿ, ಬಿಳ್ಳೂರು ನಾಗರಾಜ್, ಜಿ.ಪಂ.ಸದಸ್ಯ ಬಿ. ಸಾವಿತ್ರಮ್ಮ, ಪಿ. ಓಬಳರಾಜು, ಜೆಬಿವುಲ್ಲಾ, ಮಹಮದ್ ಅಕ್ರಂ, ಹೆಚ್.ಪಿ. ಲಕ್ಷ್ಮೀನಾರಾಯಣ, ಶೋಭಾರಾಣಿ, ಮುನಿಕೃಷ್ಣಪ್ಪ, ಸುಜಾತಮ್ಮ, ಶ್ರೀರಾಮಪ್ಪ, ಶ್ರೀರಾಮನಾಯಕ್, ಆಂಜನೇಯ ರೆಡ್ಡಿ, ವೇಮಚಂದ್ರ, ಅಶ್ವತ್ಥಪ್ಪ, ಜಯರಾಮರೆಡ್ಡಿ ಮತ್ತಿತರೆ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ತಾಲೂಕಿನ ಗೂಳೂರು ಕಮ್ಯುನಿಸ್ಟ್ ಪಕ್ಷದ ತವರೂರು ಮತ್ತು ಕೆಂಪುಕೋಟೆ ಎಂದು ಹೆಸರಾಗಿತ್ತು, ಅದಕ್ಕೂ ಮೊದಲು ಈ ಭಾಗದಲ್ಲಿ ಜಮೀನುದಾರರದ್ದೇ ಪ್ರಾಬಲ್ಯವಿತ್ತು ಇಲ್ಲಿ. ನಂತರ 1952ರಲ್ಲಿ ಬಸವ ಪುನ್ನಮಿಯ ದಿನ, ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ರೈತ ಸಂಘ ಕಟ್ಟಿದರು, ಅಂದಿನಿಂದ ಅನೇಕ ಹೋರಾಟಗಳನ್ನು ಮಾಡಿ, ತಾಲೂಕಿನ ಕಮ್ಯುನಿಸ್ಟ್ ಪಕ್ಷಗಳ ಇತಿಹಾಸದ ಪುಟಗಳಲ್ಲಿ ಅನೇಕ ಧೀರೋದ್ಧಾತ್ತ ಹೋರಾಟಗಳು ದಾಖಲೆಯಾಗಿವೆ.

1947ರ ನಂತರ ಕಮ್ಯುನಿಸ್ಟ್ ಚಳವಳಿ ನಡೆದು, ಭೂಹೀನರಿಗೆ ಭೂಮಿ ಸಿಕ್ಕುವಂತಾಗಿದ್ದು, 1952ರಲ್ಲಿ ಜೋಡಿ ಇನಾಂತಿ ರದ್ದತಿ ಹೋರಾಟ, 1972ರಲ್ಲಿ ಅರಣ್ಯ ಭೂಮಿ, ಬಂಜರು ಭೂಮಿ ಹೋರಾಟ, ಉಳುವವನಿಗೆ ಭೂಮಿ ಹೋರಾಟಗಳು, ಆಗಸ್ಟ್ 7, 1980ರ ಹೋರಾಟ, ವಿಜಯನಗರದ ಉಕ್ಕು, ಕನ್ನಡಿಗರ ಹಕ್ಕು ಹೋರಾಟ, 1990 ರಲ್ಲಿ ಡಂಕಲ್‌ ಗ್ಯಾಂಟ್ ಒಪ್ಪಂದದ ವಿರುದ್ದ ಹೋರಾಟ, ಬಾಬರಿ ಮಸೀದಿ ಧ್ವಂಸ ಮಾಡಿದ ವಿರುದ್ಧ ಹೋರಾಟ, ಕುಡಿಯುವ ನೀರಿಗಾಗಿ ಚಿತ್ರಾವತಿ ಅಣೆಕಟ್ಟೆಯ ಹೋರಾಟ, ಶಾಶ್ವತ ವೀರಾವರಿ ಹೋರಾಟ ಹೀಗೆ ಒಂದೇ ಎರಡೆ ಅಸಂಖ್ಯಾತ ಹೋರಾಟಗಳ ಮೂಲಕ ಜನರಲ್ಲಿ ಚೈತನ್ಯ ಮೂಡಿಸಿ, ಅನೇಕ ಹಕ್ಕುಗಳನ್ನು ದೊರಕಿಸಿಕೊಂಡಿತು, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿತು.

ಅಂದಿನ ದಿನಗಳಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೋರೋ ಸದಸ್ಯೆ ಕಾಂ.ಬಿ.ಟಿ.ರಣದಿವೆ, ಕಾಂ.ವಿಮಲಾ ರಣದಿವೆ, ಕಾಂ.ಎ.ಕೆ. ಗೋಪಾಲನ್, ಕಾಂ.ಇ.ಎಂ.ಎಸ್ ನಂಬೂದರಿಪಾಡ್, ಕಾಂ.ಬಿ.ವಿ. ಕಕ್ಕಿಲಾಯ, ಕಾಂ.ವರ್ತೂರು ಎಸ್. ಸೂರ್ಯನಾರಾಯಣರಾವ್, ಕಾಂ.ಬಿ.ವಿ. ರಾಘವುಲು, ಕಾಂ.ಪಿ.ಸುಂದರಯ್ಯ, ಕಾ.ಗಪೂರ್, ಕಾಂ.ಜಗನ್ನಾಥ್, ಕಾಂ.ಪ್ರಕಾಶ್ ಕಾರಟ್, ಕಾಂ.ಬೃಂದಾ ಕಾರಟ್, ಕಾಂ.ಸೀತಾರಾಮ್‌ ಯಾಚೂರಿ ಅವರಂಥ ಅತಿರಥ ಮಹಾರಥ ದಿಗ್ಗಜರು ಇಲ್ಲಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ವಿಶೇಷ ಅಲಂಕಾರ

ಪಾತಪಾಳ್ಯದ ಮುಖ್ಯ ಬೀದಿ ಹಾಗೂ ಮುಖ್ಯ ರಸ್ತೆಗಳಲ್ಲಿ ಕೆಂಪು ಬಾವುಟದ ತೋರಣ, ಬಣ್ಣ ಬಣ್ಣದ ಪ್ಲೆಕ್‌ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ತಾಲೂಕಿನಾದ್ಯಂತ ವ್ಯಾಪಕ ಪ್ರಚಾರ ಮಾಡಲಾಗಿತ್ತು.

Tags: bagepalli taluk conferencecknewsnowcpi(m)gv ragavaluKarnataka andra pradesh bordernewsred flag
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಅಗಲಿದ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರಿಗೆ ನುಡಿ ನಮನ

ಅಗಲಿದ ಡಾ.ರಂಗಾರೆಡ್ಡಿ ಕೋಡಿರಾಂಪುರ ಅವರಿಗೆ ನುಡಿ ನಮನ

Leave a Reply Cancel reply

Your email address will not be published. Required fields are marked *

Recommended

ಗುಡಿಬಂಡೆಯಲ್ಲಿ ಗಿಡ ನೆಟ್ಟು ವಿಜಯದಶಮಿ ಆಚರಣೆ

ಗುಡಿಬಂಡೆಯಲ್ಲಿ ಗಿಡ ನೆಟ್ಟು ವಿಜಯದಶಮಿ ಆಚರಣೆ

4 years ago
ಆರೋಗ್ಯ ಕೈಕೊಟ್ಟಾಗ ಗೋಲ್ಡನ್‌ ಅವರ್‌ ಎನ್ನುವುದು ಬಹಳ ಮುಖ್ಯ

ಆರೋಗ್ಯ ಕೈಕೊಟ್ಟಾಗ ಗೋಲ್ಡನ್‌ ಅವರ್‌ ಎನ್ನುವುದು ಬಹಳ ಮುಖ್ಯ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ