• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಸಿಕೆನ್ಯೂಸ್ ನೌ ಬಿಗ್ ಇಂಪ್ಯಾಕ್ಟ್; ಗುಡಿಬಂಡೆ ಅರಣ್ಯದ 284 ಎಕರೆ ಸೇಫ್‌

cknewsnow desk by cknewsnow desk
December 9, 2021
in EDITORS'S PICKS, STATE
Reading Time: 2 mins read
0
ಗುಡಿಬಂಡೆ ಅರಣ್ಯದ 284 ಎಕರೆ ನುಂಗಿದ ಗೌರಿಬಿದನೂರು ಕಂದಾಯ ಇಲಾಖೆ

ಮಟ್ಟಾವಲಹಳ್ಳಿಯ ಡೀಮ್ಡ್‌ ಫಾರೆಸ್ಟ್‌ʼನ ಒಂದು ನೋಟ.

1.2k
VIEWS
FacebookTwitterWhatsuplinkedinEmail

ತಪ್ಪು ಸರಿಪಡಿಸಿದ ಅಧಿಕಾರಿಗಳು; ಡೀಮ್ಡ್‌ ಫಾರೆಸ್ಟ್‌ ಮರಳಿ ನೀಡಿದ ಗೌರಿಬಿದನೂರು ಕಂದಾಯ ಇಲಾಖೆ

ಕಂದಾಯ ಅಧಿಕಾರಿಗಳ ನಿಗೂಢ ಹೆಜ್ಜೆಗಳ ಬಗ್ಗೆ ಸಂಶಯಗಳ ಹುತ್ತ; ಇನ್ನೂ ಬಗೆಯಲಿದೆ ಸಿಕೆನ್ಯೂಸ್‌ ನೌ

By GS Bharath Gudibande

ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಕೆನ್ಯೂಸ್‌ ನೌ ವರದಿ ಮತ್ತೊಮ್ಮೆ ಸದ್ದು ಮಾಡಿದೆ.

ಡೀಮ್ಡ್‌ ಅರಣ್ಯ ಪ್ರದೇಶವನ್ನು ಸರಕಾರಿ ಖರಾಬ್‌ ಮಾಡಿ ಕಲ್ಲು ಗಣಿಗಾರಿಕೆ ಕುಳಗಳಿಗೆ ಕೊಡಲು ಎಂಆರ್‌ (ಅರಣ್ಯದಿಂದ ಹಿಂಪಡಿಯುವಿಕೆ) ಮಾಡಲಾಗಿದ್ದ ಅಮೂಲ್ಯ ಅರಣ್ಯ ಪ್ರದೇಶವು ಬಚಾವಾಗಿದ್ದು, ಅದು ಪುನಾ ಅರಣ್ಯ ಇಲಾಖೆಯ ಸುಪರ್ದಿಗೇ ಹೋಗಿದೆ.

ಗುಡಿಬಂಡೆ ತಾಲೂಕು ಮೀಸಲು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ನಿಷ್ಠೆ ಹಾಗೂ ಸಿಕೆನ್ಯೂಸ್‌ ನೌ ಕೆಚ್ಚೆದೆಯ ವರದಿಯ ಪರಿಣಾಮ ಇದು ಸಾಧ್ಯವಾಗಿದ್ದು, ಈ ವರದಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಸ್ಪಂದಿಸಿದ್ದಾರೆ.

ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿರುವ 284 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಗೌರಿಬಿದನೂರು ತಾಲೂಕು ಕಂದಾಯ ಇಲಾಖೆಯು ಅನಧಿಕೃತವಾಗಿ ಪಹಣಿ ತಿದ್ದುಪಡಿ ಮಾಡಿತ್ತು. ಇದಕ್ಕೆ ಅಧಿಕೃತವಾಗಿ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯೇ ಆದೇಶ ನೀಡಿದ್ದರು. ಅದರ ಬಗ್ಗೆ ಸಿಕೆನ್ಯೂಸ್‌ ನೌ ದಾಖಲೆಗಳ ಸಮೇತ ವರದಿ ಮಾಡಿದ ಬೆನ್ನೆಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಆಗಿರುವ ತಪ್ಪು ಸರಿ ಮಾಡಿಕೊಂಡಿದ್ದಾರೆ.

ಗೌರಿಬಿದನೂರು ತಾಲೂಕಿನ ಮಟ್ಟಾವಲಹಳ್ಳಿಯ ಸರ್ವೆ ನಂ.37ರ 284 ಎಕರೆ ಅರಣ್ಯ ಪ್ರದೇಶವು ಗುಡಿಬಂಡೆ ಅರಣ್ಯ ಇಲಾಖೆಗೆ ಒಳಪಡುತ್ತದೆ, ಈ ಪ್ರದೇಶದ ಪಹಣಿಯಲ್ಲಿ ಸರಕಾರ ಖರಾಬ್ ಡಿ ದರ್ಜೆ ಅರಣ್ಯ ಪ್ರದೇಶವನ್ನು ತಿದ್ದುಪಡಿ ಮಾಡಿ, ಡಿ ದರ್ಜೆ ಅರಣ್ಯ ಪ್ರದೇಶ ಎಂಬ ಪದವನ್ನು ತೆಗೆದುಹಾಕಿ, ಕೇವಲ ಸರಕಾರಿ ಖರಾಬ್ ಎಂದು ಉಳಿಸಿಕೊಂಡು ಕಂದಾಯ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರ ಹಾಗೂ ಅರಣ್ಯ ಕಾಯ್ದೆಗಳನ್ನು ಉಲಂಘಿಸಿ  ತಿದ್ದುಪಡಿ ಮಾಡಿದ್ದರು, ಸಿಕೆನ್ಯೂಸ್‌ ನೌ ವರದಿ ಬಂದ ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿ, ಗೌರಿಬಿದನೂರು ತಾಲೂಕು ಆಡಳಿತ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಅರಣ್ಯ ಪ್ರದೇಶವನ್ನು ಮರಳಿ ಅರಣ್ಯ ಇಲಾಖೆಗೆ ನೀಡಿದ್ದಾರೆ.

ಈ ಸುದ್ದಿ ಓದಲು ಕೆಳಗಿನ ಲಿ<ಕ್‌ ಕ್ಲಿಕ್‌ ಮಾಡಿ..
ಗುಡಿಬಂಡೆ ಅರಣ್ಯದ 284 ಎಕರೆ ನುಂಗಿದ ಗೌರಿಬಿದನೂರು ಕಂದಾಯ ಇಲಾಖೆ

ಜಿಲ್ಲಾಧಿಕಾರಿ ಹೇಳಿದ್ದೇನು?

ಸಿಕೆನ್ಯೂಸ್‌ ನೌ ವರದಿಯನ್ನು ಉಲ್ಲೇಖಿಸಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ್ದಿಷ್ಟು;

ಎಂಆರ್ ಮುಟೇಷಬ್ ನಂ ಹಾಗೂ 1991ರಲ್ಲಿ ಡೀಮ್ಡ್ ಅರಣ್ಯ ಪ್ರದೇಶ ಇರುತ್ತದೆ. ಎಂಆರ್ 3/1991/92ರಲ್ಲಿ ಮಟ್ಟಾವಲಹಳ್ಳಿ ಸರ್ವೆ ನಂ.37ರ ಅರಣ್ಯ ಪ್ರದೇಶವನ್ನು ಕೈ ಬಿಡಲಾಗುತ್ತದೆ. ಈ ಸಂದರ್ಭದಲ್ಲಿ ಅರಣ್ಯ ಪ್ರದೇಶವನ್ನು ಸರಕಾರ ಖರಾಬ್ʼಗೆ ಸೇರಿಸಿತ್ತು. ನಂತರ 2017ರಲ್ಲಿ ಸರಕಾರದಿಂದ ಪ್ರಸ್ತಾವನೆಗೆ ಕಳುಹಿಸಿ ಸರಕಾರಿ ಡಿ ದರ್ಜೆ ಅರಣ್ಯ ಪ್ರದೇಶವಾಗಿ ಮಿಸಲಿಡಲಾಗಿದೆ. ಅದನ್ನು ಗಮನಿಸದೇ ತಹಸೀಲ್ದಾರ್ ತಿದ್ದುಪಡಿ ಮಾಡಿದ್ದಾರೆ ಹಾಗೂ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದು ಅರಣ್ಯ ಪ್ರದೇಶವನ್ನು ಉಪ ವಿಭಾಗಾಧಿಕಾರಿ ಪಹಣಿ ತಿದ್ದುಪಡಿಯನ್ನು ಕೋರ್ಟ್ ಪ್ರಕ್ರಿಯೆಗಳ ಮೂಲಕ ಹಿಂತಿರುಗಿಸಿದ್ದಾರೆ.

ಜಿಲ್ಲಾಧಿಕಾರಿ ಆರ್‌.ಲತಾ

ಎಂ.ಆರ್ ಮುಟೇಷನ್ 1991 ಹಾಗೂ 1992ರಲ್ಲಿ ನಡೆದ ಮಾಹಿತಿ ಆಧಾರದ ಮೇಲೆ ಈ ರೀತಿಯ ಸಮಸ್ಯೆಯಾಗಿದೆ. ಅದನ್ನು ಕೂಡಲೇ ಸರಿಪಡಿಸಿದ್ದಾರೆ ಹಾಗೂ ಯಾವುದೇ ಖಾಸಗೀ ವ್ಯಕ್ತಿಗೆ ಹೆಸರಿಗೆ  ಮಾಡಿಲ್ಲ. ಅದನ್ನು ಸರಕಾರಿ ಖರಾಬ್ ಅಂತಲೇ ಉಳಿಸಿಕೊಂಡಿದ್ದರಿಂದ ಏನು ಸಮಸ್ಯೆ ಇಲ್ಲ ಎನ್ನುವುದು ಅವರ ಮಾತು.

***

ಜಿಲ್ಲಾಧಿಕಾರಿಗಳ ಹೇಳಿಕೆಯನ್ನೇ ಗಮನಿಸಿದರೆ, ಸ್ವತಃ ಜಿಲ್ಲಾಡಳಿತದ ಗಮನಕ್ಕೆ ತಾರದೇ ಪಹಣಿ ತಿದ್ದುಪಡಿಗೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಅವರು ಗೌರಿಬಿದನೂರು ತಹಸೀಲ್ದಾರ್‌ ಅವರಿಗೆ ಆದೇಶ ನೀಡಿದ್ದಾರೆ. ಹಾಗಾದರೆ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ ಇಬ್ಬರೂ ಸ್ವತಃ ಜಿಲ್ಲಾಧಿಕಾರಿ ಗಮನಕ್ಕೆ ವಿಷಯವನ್ನು ತಾರದೇ ಪಹಣಿಗೆ ತಿದ್ದುಪಡಿ ತಂದು ಡೀಮ್ಡ್‌ ಅರಣ್ಯವನ್ನು ಸರಕಾರಿ ಖರಾಬ್‌ ಮಾಡಿದ್ದಾರೆ ಎನ್ನುವುದು ನೇರವಾಗಿಯೇ ಸಾಬೀತಾದಂತೆ ಆಗಿದೆ.

ಇದೇ ವೇಳೆ ಖಾಸಗಿ ವ್ಯಕ್ತಿಯೊಬ್ಬರು ಸರ್ವೇ ನಂ.37ರಲ್ಲಿ ಕಲ್ಲು ಕಣಿಗಾರಿಕೆ ಮನವಿ ಸಲ್ಲಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಗಳ ಮೇಲೆ ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಜಿಲ್ಲಾಧಿಕಾರಿಗಳು ಕೂಡ, ತಮ್ಮ ಗಮನಕ್ಕೆ ತಾರದೇ ತಹಸೀಲ್ದಾರ್‌ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು ಅರಣ್ಯ ಪ್ರದೇಶವನ್ನು ಎಂಆರ್‌ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಗೌರಿಬಿದನೂರು ತಹಸೀಲ್ದಾರ್‌ ಏನಂತಾರೆ?

ಇಡೀ ಪಹಣಿ ತಿದ್ದುಪಡಿ, ನಂತರ ಆದ ಪರಿಣಾಮಗಳು ಹಾಗೂ ಪುನಾ ಅರಣ್ಯ ಇಲಾಖೆಗೆ ಆ ಪ್ರದೇಶವನ್ನು ಒಪ್ಪಿಸಿದ ಅಷ್ಟೂ ವಿಷಯಗಳ ಬಗ್ಗೆ ಗೌರಿಬಿದನೂರು ತಹಸೀಲ್ದಾರ್‌ ಶ್ರೀನಿವಾಸ್‌ ಅವರು ಸಿಕೆನ್ಯೂಸ್‌ ನೌ ಜತೆ ಮಾತನಾಡಿದರು; ಅವರು ಹೇಳಿದ ವಿವರ ಹೀಗಿದೆ.

ಮಟ್ಟಾವಲಹಳ್ಳಿ ಸರ್ವೇ ನಂ.37 ಮೊದಲು ಡೀಮ್ಡ್‌ ಆರಣ್ಯ ಅಂತ ಇತ್ತು. 1991-92ರಲ್ಲಿ ಇದನ್ನು ಎಂಆರ್‌ (ಅರಣ್ಯದಿಂದ ಹಿಂಪಡಿಯುವಿಕೆ) ಮಾಡಲಾಗಿತ್ತು. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಆ ಪ್ರದೇಶವನ್ನು ಪಡೆಯಲಾಗಿತ್ತು. 2007ರಲ್ಲಿ ಅದನ್ನು ಡೀಮ್ಡ್‌ ಫಾರೆಸ್ಟ್‌ ಮಾಡುವ ಪ್ರಸ್ತಾವನೆಯೂ ಹೋಗಿದೆ. ಆ ಮಾಹಿತಿ ನಮ್ಮ ಇಲಾಖೆಗೆ ಇರಲಿಲ್ಲ, ನಮಗೂ ಗೊತ್ತಿರಲಿಲ್ಲ. ಹಳೆಯ ಎಂಆರ್‌ ಇಟ್ಟುಕೊಂಡೇ ನಾವೂ ಎಂಆರ್‌ ಮಾಡಿದ್ದೇವೆ. ಹೀಗೆ ಮಾಡುವಾಗ ಗುಡಿಬಂಡೆ ಆರ್‌ಎಫ್‌ಓ ಅವರು, ಇದು ಡೀಮ್ಡ್‌ ಫಾರೆಸ್ಟ್‌ ಅಂತ ನಮಗೆ ಮಾಹಿತಿ ನೀಡಿದರು. ಆಗ ನಾವು ದಾಖಲೆಗಳನ್ನೆಲ್ಲ ಪರಿಶೀಲನೆ ಮಾಡಿದಾಗ ಸರ್ವೇ ನಂ.37ನ್ನು ಡೀಮ್ಡ್‌ ಫಾರೆಸ್ಟ್‌ ಆಗಿ ಪ್ರಸ್ತಾವನೆ ಮಾಡಿದ್ದ ಮಾಹಿತಿ ಇತ್ತು. ಇಷ್ಟೂ ಅರಣ್ಯ ಪ್ರದೇಶವನ್ನು ಡೀಮ್ಡ್‌ ಅರಣ್ಯ ಪ್ರದೇಶ ಮಾಡುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗಿದೆ. ಆ ದಾಖಲೆಯನ್ನೂ ನಾವು ಪಡೆದುಕೊಂಡಿದ್ದೇವೆ. ಈ ದಾಖಲೆಗಳನ್ನು ಕೂಡಲೇ ನಾವು ಉಪ ವಿಭಾಗಾಧಿಕಾರಿ ಗಮನಕ್ಕೆ ತಂದೆವು. ತದ ನಂತರ ಎಂಆರ್‌ ಮಾಡಲಾಗಿದ್ದ ಸರ್ವೇ ನಂ.37ರ 284 ಎಕರೆ ಪ್ರದೇಶವನ್ನೂ ಪುನಾ ಡೀಮ್ಡ್‌ ಅರಣ್ಯ ಪ್ರದೇಶ ಎಂದು ದಾಖಲೆ ಮಾಡಿದ್ದೇವೆ. ಈ ಬಗ್ಗೆ ಉಪ ವಿಭಾಗಾಧಿಕಾರಿ ಅವರು ಆದೇಶ ಮಾಡಿದ್ದಾರೆ.

ಪಹಣಿ ತಿದ್ದುಪಡಿ ಮುನ್ನ ಪಹಣಿಯಲ್ಲಿ ಡೀಮ್ಡ್‌ ಫಾರೆಸ್ಟ್‌ ಎಂದು ನಮೂದಿಸಲಾಗಿದ್ದರೂ ನೀವು ಏಕೆ ಅದನ್ನು ಸರಕಾರಿ ಖರಾಬ್‌ ಮಾಡಿದಿರಿ? ಅದನ್ನು ನೀವು ಗಮನಿಸಲಿಲ್ಲವೇ? ಎಂದು ಸಿಕೆನ್ಯೂಸ್‌ ನೌ ನೇರವಾಗಿ ಪ್ರಶ್ನೆ ಮಾಡಿದಾಗ ಉತ್ತರಿಸಲು ತಡವರಿಸಿದ ತಹಸೀಲ್ದಾರ್‌ ಅವರು; “ಪಹಣಿ ಗಮನಿಸಿಲ್ಲ, ಎಂಆರ್‌ ಆಧಾರದ ಮೇಲೆ ಸರಕಾರಿ ಮಾಡಿದ್ದೇವೆ. ಅದನ್ನು ಸರಕಾರದ ಹೆಸರಿಗೇ ಮಾಡಿದ್ದೇವೆಯೇ ವಿನಾ ಯಾವುದೇ ಖಾಸಗಿ ವ್ಯಕ್ತಿ ಹೆಸರಿಗೆ ಅಲ್ಲ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.

ನೀವು ಹೇಳಿದ ದಾಖಲೆ ನಮಗೆ ಸಿಕ್ಕಿದ್ದಿದ್ದರೆ ಅದನ್ನು ಸರಕಾರಿ ಖರಾಬ್‌ ಮಾಡುತ್ತಲೇ ಇರಲಿಲ್ಲ. ಏನೇ ಆದರೂ ಸರಕಾರದ ಭೂಮಿ ಸರಕಾರದ ಹೆಸರಿನಲ್ಲೇ ಇತ್ತಲ್ಲ ಅಂತ ನಾವೆಲ್ಲ ಸ್ವಲ್ಪ ಸುಮ್ಮನಾಗಿದ್ದೆವು. ನಮ್ಮ ಗ್ರಾಮ ಲೆಕ್ಕಿಗ ಇರಬಹುದು, ಆರ್‌ ಐ ಇರಬಹುದು ಅಥವಾ ಶಿರಸ್ತೇದಾರ್‌ ಇರಬಹುದು ಎಲ್ಲ ಸುಮ್ಮನೆ ಇದ್ದರು. ನೀವು ವಿಷಯ ಪ್ರಸ್ತಾಪ ಮಾಡಿದ ಮೇಲೆಯೇ ನಮಗೆ ಗೊತ್ತಾಗಿದ್ದು, ಆಮೇಲೆ ಆರ್‌ ಎಫ್‌ ಓ, ಡಿಎಫ್‌ ಓ ಅವರಿಂದ ಮಾಹಿತಿ ಪಡೆದುಕೊಂಡೆ. ಡಿಎಫ್‌ ಓ ಕಚೇರಿಗೆ ನಮ್ಮ ಸಿಬ್ಬಂದಿಯನ್ನೇ ಕಳಿಸಿ ಮಾಹಿತಿ ಪಡೆದುಕೊಂಡೆ. ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲೂ ಈ ಬಗ್ಗೆ ಒಂದು ತೀರ್ಮಾನ ಆಗಿದೆ. ಆ ದಾಖಲೆಯನ್ನೂ ನಿಮಗೆ ಕೊಡಲಾಗುವುದು. ಆ ದಾಖಲೆಯಲ್ಲೂ ಡೀಮ್ಡ್‌ ಫಾರೆಸ್ಟ್‌ ಅಂತ ಇಲ್ಲ. ಆಮೇಲೆ ಡಿಎಫ್‌ ಓ ಕಚೇರಿಯಿಂದ ಯಾವುದೋ ದಾಖಲೆ ತರಿಸಿಕೊಂಡು ಆಗಿದ್ದ ಪ್ರಮಾದವನ್ನು ಸರಿ ಮಾಡಿದ್ದೇವೆ ಎಂದರು ತಹಸೀಲ್ದಾರ್‌ ಶ್ರೀನಿವಾಸ್.‌

ಈಗ ಡಿಎಫ್‌ ಓ ಕಚೇರಿಗೆ ಸರ್ವೇ ನಂ.37ರ ಅಷ್ಟೂ ಪ್ರದೇಶವನ್ನು ಅರಣ್ಯ ಅಂತ ಮಾಡಲು ಪ್ರಸ್ತಾವನೆ ಹೋಗಿದೆ. ಆ ಬಗ್ಗೆ ಉಪ ವಿಭಾಗಾಧಿಕಾರಿ ಆದೇಶವನ್ನು ಹೊರಡಿದ್ದಾರೆ. ಸಮಸ್ಯೆ ಸರಿ ಹೋಗಿದೆ ಎಂದರು ಅವರು.

ಕಂದಾಯ ಅಧಿಕಾರಿಗಳ ಕರಾಮತ್ತು

ಜಿಲ್ಲಾಧಿಕಾರಿ ಹೇಳಿಕೆ ಹಾಗೂ ಗೌರಿಬಿದನೂರು ತಹಸೀಲ್ದಾರ್‌ ಹೇಳಿಕೆಗಳನ್ನು ಗಮನಿಸಿದರೆ ಗೌರಿಬಿದನೂರು ಕಂದಾಯ ಇಲಾಖೆ ಅಧಿಕಾರಿಗಳ ಕರಾಮತ್ತಿನ ಬಗ್ಗೆ ನಾನಾ ಅನುಮಾನಗಳು ಮೂಡುತ್ತವೆ. ಇಡೀ ಪ್ರದೇಶವನ್ನು ಕಲ್ಲು ಗಣಿಗಾರಿಕೆ ಕುಳಗಳ ಕೈಗೆ ಒಪ್ಪಿಸಲು ನಡೆದಿರುವ ಪ್ರಯತ್ನಗಳ ಬಗ್ಗೆ ದಟ್ಟ ವಾಸನೆಯೂ ಬಡಿಯುತ್ತಿದೆ. ಈ ಬಗ್ಗೆ ಸಿಕೆನ್ಯೂಸ್‌ ನೌ ಇನ್ನಷ್ಟು ಆಳವಾಗಿ ವರದಿಗಳನ್ನು ಪ್ರಕಟಿಸಲಿದೆ.

Tags: back to forestchikkaballapuracknewsnowdeemed forest grabingexclusivegauribidanurgranitegudibandeindiakarnatakanews and viewsqueens rosestone query mafiaSupreme Court
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಹೋಗಿ ಬನ್ನಿ ಜನರಲ್

ಹೋಗಿ ಬನ್ನಿ ಜನರಲ್

Leave a Reply Cancel reply

Your email address will not be published. Required fields are marked *

Recommended

ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?

ಇನ್ನೆರಡು ವರ್ಷ ಕರ್ನಾಟಕಕ್ಕೆ ನಾನೇ ಸಿಎಂ ಎಂದು ಘೋಷಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

4 years ago
ಚಿಕ್ಕಬಳ್ಳಾಪುರ, ಕೋಲಾರಕ್ಕೆ ಎತ್ತಿನಹೊಳೆ ನೀರು ಬರಲು ಬಿಜೆಪಿ ಸರಕಾರ ಬಿಡುತ್ತಿಲ್ಲ: ಕೃಷ್ಣ ಭೈರೇಗೌಡ

ಚಿಕ್ಕಬಳ್ಳಾಪುರ, ಕೋಲಾರಕ್ಕೆ ಎತ್ತಿನಹೊಳೆ ನೀರು ಬರಲು ಬಿಜೆಪಿ ಸರಕಾರ ಬಿಡುತ್ತಿಲ್ಲ: ಕೃಷ್ಣ ಭೈರೇಗೌಡ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ