• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಕೋಟೆಗೋಡೆಗೆ ಇನ್ನೆಷ್ಟು ಹೆಣಗಳ ಮೆಟ್ಟಿಲು?

cknewsnow desk by cknewsnow desk
August 11, 2022
in EDITORS'S PICKS, GUEST COLUMN, STATE
Reading Time: 2 mins read
0
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ
965
VIEWS
FacebookTwitterWhatsuplinkedinEmail

ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಬಿಜೆಪಿಯನ್ನು ಬೆನ್ನಬಿಡದೇ ಕಾಡುತ್ತಿದೆ. ಕಾರ್ಯಕರ್ತರಿಗೆ ರಕ್ಷಣೆ ನೀಡದ ಅಸಹಾಯಕ ಪಕ್ಷ ಎನ್ನುವ ಅಪಹಾಸ್ಯಕ್ಕೂ ಗುರಿಯಾಗಿದೆ. ಇನ್ನೊಂದೆ ನಾಯಕರ ವರ್ತನೆಗಳು ಕಾರ್ಯಕರ್ತರಿಗೆ ರೇಜಿಗೆ ಹುಟ್ಟಿಸಿವೆ. ಓದಿ ಇದು ದು.ಗು.ಲಕ್ಷ್ಮಣ ಅವರ ಅಂಕಣ.

ಬೆಳ್ಳಾರೆಯಲ್ಲಿ ಪ್ರವೀಣ ನೆಟ್ಟಾರ್‌ ಎಂಬ ಹಿಂದು ಕಾರ್ಯಕರ್ತನೊಬ್ಬನ ಹತ್ಯೆ. ಅನಂತರ ನಡೆದ ವಿಷಮ ವಿದ್ಯಮಾನಗಳು ಹಿಂದು ಸಮಾಜದ ಸಾಕ್ಷಿ ಪ್ರಜ್ಞೆಯನ್ನೇ ಬಡೆದೆಬ್ಬಿಸುವಂತೆ ಮಾಡಿರುವುದು ಸುಳ್ಳಲ್ಲ. ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತನೂ ಆಗಿದ್ದ, ದೇಶಧರ್ಮಗಳ ಕಾರ್ಯದ ಬಗ್ಗೆ ಅತೀವ ಶ್ರದ್ಧೆ, ನಿಷ್ಠೆ ಇಟ್ಟುಕೊಂಡಿದ್ದ ಆ ಕಾರ್ಯಕರ್ತನ ಹತ್ಯೆಯಾಗಿ ಸರಿಯಾಗಿ 13 ದಿನಗಳೇ ಉರುಳಿವೆ. ಯಾರೋ ಕೆಲವರನ್ನು ಪೊಲೀಸರು ಬಂಧಿಸಿದ್ದು ಬಿಟ್ಟರೆ ನಿಜವಾದ ಕೊಲೆಪಾತಕಿಯನ್ನು ಪತ್ತೆಹಚ್ಚಿ, ಆತನ ಮೇಲೆ ಕಾನೂನುಕ್ರಮ ಜರುಗಿಸುವ ಯಾವುದೇ ಗಂಭೀರ ಕ್ರಮಗಳೂ ಜರುಗಿಲ್ಲ.

ಪ್ರವೀಣನ ಹತ್ಯೆಯ ಮರುದಿನ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರ ಭಾರಿ ಆಕ್ರೋಶವೇ ಸ್ಫೋಟಗೊಂಡಿತ್ತು. ʼಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ, ಸಾವೂ ನಮ್ಮದೇʼ ಎಂಬ ಈ ಒಂದು ಸಂದೇಶವೇ ಸಾಕು – ಕಾರ್ಯಕರ್ತರ ಆಕ್ರೋಶ ಯಾವ ಪರಿಯಲ್ಲಿತ್ತು ಎಂಬುದಕ್ಕೆ. ಅದಕ್ಕೂ ಕಾರಣವಿದೆ. ಈ ಹತ್ಯೆಯ ಘಟನೆಗೆ ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹರ್ಷನೆಂಬ ಹಿಂದು ಕಾರ್ಯಕರ್ತನ ಕಗ್ಗೊಲೆ ನಡೆದಿತ್ತು. ಆರೋಪಿಗಳನ್ನು ಬಂಧಿಸಲಾಗಿದೆಯಾದರೂ ಜೈಲಿನಲ್ಲಿ ವಿಡಿಯೋ ಕಾಲ್‌ ಮೂಲಕ ಅವರೆಲ್ಲ ಸಂಭ್ರಮದಲ್ಲಿರುವ ವಿದ್ಯಮಾನ ಹಿಂದು ಕಾರ್ಯಕರ್ತರ ಸಹನೆಯನ್ನು ಕೆಣಕಿತ್ತು. ಈಗ ಇನ್ನೊಬ್ಬ ಕಾರ್ಯಕರ್ತ ಹತ್ಯೆಗೀಡಾದಾಗಲೂ ಸರ್ಕಾರ ʼಕಠಿಣಕ್ರಮʼದ ಭರವಸೆ ನೀಡುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿದ್ದು ಕಾರ್ಯಕರ್ತರ ಕೋಪಾಗ್ನಿ ಕೊತಕೊತ ಕುದಿಯುವಂತೆ ಮಾಡಿದೆ.

ಮುಖ್ಯವಾಗಿ ಬಹುತೇಕ ಕಾರ್ಯಕರ್ತರ ಮನಸ್ಸಿನಲ್ಲಿ ಕುದಿಯುವ ಪ್ರಶ್ನೆಗಳೆಂದರೆ: ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ 23 ಹಿಂದು ಕಾರ್ಯಕರ್ತರ ಬರ್ಬರ ಹತ್ಯೆಗಳಾದವು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಳಿಕವೂ ಕಾರ್ಯಕರ್ತರ ಹತ್ಯಾಸರಣಿ ನಿಂತಿಲ್ಲ. ಸಾಲುಸಾಲು ಹತ್ಯೆಗಳು ಜರುಗುತ್ತಲೇ ಇವೆ. ಹಾಗಿದ್ದರೆ ನಮ್ಮ ಪರವಾದ ಸರ್ಕಾರ ಇದೆಂದು ಯಾವ ಬಾಯಲ್ಲಿ ಹೇಳಿಕೊಳ್ಳುವುದು? ʼಹತ್ಯೆ ಮಾಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು, ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲʼ ಎಂಬ ಮುಖ್ಯಮಂತ್ರಿ, ಗೃಹಮಂತ್ರಿ ಮತ್ತಿತರ ಬಿಜೆಪಿ ಮುಖಂಡರ ಘೋಷಣೆಗಳೆಲ್ಲ ಬರಿದೇ ಬೊಗಳೆ. ಕೇವಲ ಕಣ್ಣೊರೆಸುವ ತಂತ್ರ, ಬೀಸುವ ದೊಣ್ಣೆಯಿಂದ ಸದ್ಯಕ್ಕೆ ಪಾರಾಗುವ ರಣಹೇಡಿ ತಂತ್ರ ಎಂದು ಬೊಗಸೆಯಷ್ಟು ವಿವೇಕ ಇರುವ ಯಾವ ಕಾರ್ಯಕರ್ತನಿಗಾದರೂ ಅರ್ಥವಾಗದೆ ಇರುತ್ತದೆಯೆ? ಗೃಹಮಂತ್ರಿಗಳು ತಾನೊಬ್ಬ ಸಮರ್ಥ ಗೃಹಮಂತ್ರಿಯೆಂದು ತಮಗೆ ತಾನೇ ಬೆನ್ನುತಟ್ಟಿಕೊಳ್ಳುತ್ತಿರಬಹುದು, ಆದರೆ ಅವರು ಗೃಹಮಂತ್ರಿಯಾದ ಬಳಿಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಅವರಿಗೆ ಗೊತ್ತೇ ಆಗಿಲ್ಲ. ತನ್ನ ಸುತ್ತಲಿನ ಭಟ್ಟಂಗಿಗಳ ಮಾತನ್ನೇ ವೇದವಾಕ್ಯವೆಂದು ನಂಬುವವರಿಗೆ ಗ್ರೌಂಡ್‌ ರಿಯಾಲಿಟಿ ಗೊತ್ತಾಗುವುದಾದರೂ ಹೇಗೆ? ಇನ್ನೂ ವಿಪರ್ಯಾಸದ ಸಂಗತಿಯೆಂದರೆ, ಗೃಹಸಚಿವರ ಬೆಂಗಳೂರಿನ ಅಧಿಕೃತ ನಿವಾಸದ ಮುಂದೆ ಸಂಘಪರಿವಾರದ ಸಂಘಟನೆಯಾಗಿರುವ ಎಬಿವಿಪಿ ಕಾರ್ಯಕರ್ತರೇ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆಯೂ ನಡೆದಿದೆ.

ಇದಕ್ಕಿಂತಲೂ ಅಸಹ್ಯ ಹುಟ್ಟಿಸುವ ವಿದ್ಯಮಾನಗಳು ನಡೆದಿರುವುದು ಬಿಜೆಪಿ ಪಾಲಿಗೆ ಯಾವ ಶೋಭೆಯನ್ನೂ ಖಂಡಿತ ತರುವುದಿಲ್ಲ. ಪಕ್ಷದಲ್ಲಿ 12 ಕೋಟಿ ಕಾರ್ಯಕರ್ತರಿದ್ದಾರೆ. ಒಂದಿಬ್ಬರು ಹೋದರೆ ಕೊರತೆಯೇನಿಲ್ಲ ಎಂದು ದಾವಣಗೆರೆಯ ಬಿಜೆಪಿ ಸಂಸದ ಸಿದ್ದೇಶ್‌ ನೀಡಿದ ಹೇಳಿಕೆ, ಒಬ್ಬ ಕಾರ್ಯಕರ್ತ ಹೋದರೆ ಮತ್ತೊಬ್ಬ ಬರುತ್ತಾನೆ ಅಂತ ಶಿವಮೊಗ್ಗದ ಹಿರಿಯ ಶಾಸಕ, ಮಾಜಿ ಮಂತ್ರಿ ಈಶ್ವರಪ್ಪ ಅವರ ಹೇಳಿಕೆ ಯಾವುದೇ ಪ್ರಾಮಾಣಿಕ ಕಾರ್ಯಕರ್ತನೊಬ್ಬನ ಅಂತಃಕರಣವನ್ನು ಚುಚ್ಚದೆ ಇರಲು ಸಾಧ್ಯವೆ? ಕಾರ್ಯಕರ್ತನೊಬ್ಬನ ದಾರುಣ ಹತ್ಯೆ ನಡೆದ ಸಂದರ್ಭದಲ್ಲಿ ಏನು ಮಾತನಾಡಬೇಕು, ಏನನ್ನು ಮಾತನಾಡಬಾರದು ಎಂಬ ಕನಿಷ್ಠ ಸಾಮಾನ್ಯ ತಿಳುವಳಿಕೆಯೂ ಈ ಮುಖಂಡರಿಗಿಲ್ಲವೆಂದರೆ ಇವರಿಗೂ ಕಾಂಗ್ರೆಸ್‌ ಮುಖಂಡರಿಗೂ ಏನು ವ್ಯತ್ಯಾಸ? ಕಾಂಗ್ರೆಸ್‌ ಮುಖಂಡರಿಗಿರದ ಸಂಸ್ಕಾರ, ಸಭ್ಯತೆ ಇವರಲ್ಲಿ ಏನಿದೆ? ಎಂದೆನಿಸುವುದು ತೀರಾ ಸಹಜ.

ಬಿಜೆಪಿ ಮುಖಂಡರ ಮಕ್ಕಳೇ ಹೀಗೆ ಬರ್ಬರ ಹತ್ಯೆಗೀಡಾಗಿದ್ದರೆ ಇಂತಹ ಉಡಾಫೆಯ, ನಿಷ್ಕರುಣೆಯ ಹೇಳಿಕೆ ನೀಡುತ್ತಿದ್ದರೆ? ಬಿಜೆಪಿಯ ಮುಖಂಡರ ಮಕ್ಕಳ್ಯಾರೂ ಅಂತಹ ಬರ್ಬರ ಹತ್ಯೆಗೀಡಾಗುವುದಿಲ್ಲ, ಬಿಡಿ (ಆಗುವುದೂ ಬೇಡ!). ಏಕೆಂದರೆ ಅವರೆಲ್ಲ ಯಾವಾಗಲೂ Comfort Zone ನಲ್ಲೇ ಬದುಕುವವರು. ಅಧಿಕಾರವನ್ನೂ ಅಷ್ಟೇ ಸುಲಲಿತವಾಗಿ ಕೈವಶ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವಂಥವರು! ಕಾರ್ಯಕರ್ತರಿಗೆ ಮಾತ್ರ ಹುದ್ದೆ, ಅಧಿಕಾರವೂ ಇಲ್ಲ. ಇತ್ತ ವಿರೋಧಿಗಳಿಂದ ಹತ್ಯೆಗೀಡಾಗುವ ʼಶಿಕ್ಷೆʼಯೂ ತಪ್ಪಿಲ್ಲ. ಇದು ಕಾರ್ಯಕರ್ತರ ಗ್ರಹಚಾರವಲ್ಲದೆ ಮತ್ತೇನು?

ಕೇರಳದಲ್ಲಿ ಬಿಜೆಪಿಯ ಸರ್ಕಾರವಿಲ್ಲ. ಅಲ್ಲಿರುವ ಕಮ್ಯುನಿಸ್ಟ್‌ ಸರ್ಕಾರದಡಿಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ಈಗಲೂ ನಿರಂತರ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸರ್ಕಾರವಿಲ್ಲ. ಅಲ್ಲಿರುವ ಮಮತಾ ದೀದಿಯ ಟಿಎಂಸಿ ಸರ್ಕಾರದಡಿಯಲ್ಲಿ ಹಿಂದು ಕಾರ್ಯಕರ್ತರು…ಭೀಕರ ಸಾವಿಗೀಡಾಗುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯದೇ ಸರ್ಕಾರವಿದ್ದರೂ ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದರೆ ಬಿಜೆಪಿಗೆ ಹಿಂದುತ್ವದ ಬಗ್ಗೆ, ಹಿಂದು ಕಾರ್ಯಕರ್ತರ ಬಗ್ಗೆ ಇರುವ ಕಾಳಜಿ ಕೇವಲ ಸೋಗಲಾಡಿತನದ್ದು ಎಂದು ಹೇಳಲು ಪಾಂಡಿತ್ಯ ಬೇಕೆ?

ಹಿಂದುತ್ವದ ಬಗ್ಗೆ, ಹಿಂದು ಕಾರ್ಯಕರ್ತರ ಬಗ್ಗೆ, ಬಿಜೆಪಿ ಮುಖಂಡರಿಗೆ ನೈಜವಾದ ಕಾಳಜಿ, ಕಳಕಳಿ ಇದ್ದಿದ್ದೇ ಆಗಿದ್ದರೆ ಒಬ್ಬನಾದರೂ ಬಿಜೆಪಿ ಜನಪ್ರತಿನಿಧಿ ತನ್ನ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರಗೆ ಬರುವ ಪ್ರಾಮಾಣಿಕ ಧೈರ್ಯ ಪ್ರದರ್ಶಿಸಬೇಕಾಗಿತ್ತು. ಆ ನೈತಿಕತೆ ಒಬ್ಬರಿಗೂ ಇಲ್ಲ. ಯಾರೋ ಯುವಮೋರ್ಚಾದ ಕೆಳಗಿನ ಸ್ತರದ ಕೆಲವು ಪದಾಧಿಕಾರಿಗಳು ತಮ್ಮ ಸಣ್ಣಪುಟ್ಟ ಹುದ್ದೆಗಳಿಗೆ ರಾಜೀನಾಮೆ ನೀಡಿದರೇನು ಬಂತು ಭಾಗ್ಯ? ಬೊಮ್ಮಾಯಿ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಸಂಘಪರಿವಾರದ ವ್ಯಕ್ತಿಯೊಬ್ಬರಿಗೆ ಪ್ರವೀಣ್‌ ಹತ್ಯೆಯ ಸಂದರ್ಭದಲ್ಲಿ ಯಾಕೆ ಹೀಗಾಗುತ್ತಿದೆ ಎಂದು ಕೇಳಿದಾಗ ಅವರು ಅಸಹಾಯಕರಾಗಿ ಹೇಳಿದ್ದು: “ಏನೂ ಮಾಡಲು ತೋಚುತ್ತಿಲ್ಲ. ನಮ್ಮ ಆಡಳಿತ ವ್ಯವಸ್ಥೆ – ಅದರಲ್ಲೂ ಗೃಹ ಇಲಾಖೆ ಖಡಕ್‌ ಆಗಿಲ್ಲ. ನಮ್ಮ ಇಂಟೆಲಿಜೆನ್ಸ್‌ ಕೂಡ ಸರಿ ಇಲ್ಲ ಅನ್ನೋದು ಸ್ಪಷ್ಟ”, ಅಷ್ಟು ಹೇಳಿ ಅವರೂ ಕೈತೊಳೆದುಕೊಂಡುಬಿಟ್ಟರು!

ಬೆಳ್ಳಾರೆಯಲ್ಲಿ ಪ್ರವೀಣನ ಬರ್ಬರ ಹತ್ಯೆ ನಡೆದ ಸುದ್ದಿ ಕೇಳಿದಾಕ್ಷಣ ರಾಜ್ಯ ಬಿಜೆಪಿ ಮುಖಂಡರು ಸ್ಥಳಕ್ಕೆ ಧಾವಿಸಿ ಬರಬೇಕಿತ್ತು. ಏಕೆಂದರೆ ಹತ್ಯೆಗೀಡಾದ ವ್ಯಕ್ತಿ ಬಿಜೆಪಿ ಯುವು ಮೋರ್ಚಾದ ಒಬ್ಬ ಸಕ್ರಿಯ ಪದಾಧಿಕಾರಿ. ಆದರೆ ಮುಖಂಡರು ಅಲ್ಲಿಗೆ ಬಂದಿದ್ದು ಮಾತ್ರ ಪ್ರವೀಣನ ಪಾರ್ಥಿವ ಶರೀರದ ಅಂತಿಮಯಾತ್ರೆ ಇನ್ನೇನು ಮುಗಿಯುವ ಹಂತದಲ್ಲಿದ್ದಾಗ! ಬಿಜೆಪಿ ಮುಖಂಡರ ಈ ಬೇಜವಾಬ್ದಾರಿತನವು ಕಾರ್ಯಕರ್ತರನ್ನು ಕೆರಳಿಸದೆ ಇರಲು ಸಾಧ್ಯವೆ? ಅದಕ್ಕೇ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರಿದ್ದ ಕಾರನ್ನು ಘೇರಾಯಿಸಿ ಹಿಡಿದು ಅಲ್ಲಾಡಿಸಿದ್ದು. ಕಾರಿನ ಬಾಗಿಲನ್ನೇನಾದರೂ ತೆರೆಯಲು ಸಾಧ್ಯವಾಗಿದ್ದಿದ್ದರೆ ಕಟೀಲ್‌ ಕಾರ್ಯಕರ್ತರ ಕಪಾಳಮೋಕ್ಷಕ್ಕೆ ಖಂಡಿತ ಒಳಗಾಗಬೇಕಿರುತ್ತಿತ್ತು. ರಾಜ್ಯಾಧ್ಯಕ್ಷರು ಏನೇ ಕೆಲಸಗಳಿದ್ದರೂ ಹತ್ಯೆಯಾದ ದಿನವೇ ಬೆಳ್ಳಾರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಿದ್ದರೆ, ಕಾರ್ಯಕರ್ತರೊಡನೆ ಮಾತನಾಡಿ ವಿಶ್ವಾಸ, ಭರವಸೆ ತುಂಬಿದ್ದರೆ ಮರುದಿನದ ಅಂತಿಮಯಾತ್ರೆಯ ದೃಶ್ಯದ ಖದರೇ ಬದಲಾಗಿರುತ್ತಿತ್ತು. ಆದರೆ ಕಟೀಲ್‌ ಆ ಕೆಲಸ ಮಾಡಲಿಲ್ಲ. ಉಳಿದ ಶಾಸಕರು, ಸಚಿವರೂ ಹಾಗೆ ನಡೆದುಕೊಳ್ಳಲಿಲ್ಲ. ಪ್ರತಿಯೊಬ್ಬರೂ ತಮ್ಮ ʼಸುರಕ್ಷತೆʼಯ ಬಗ್ಗೆಯೇ ಕಾಳಜಿ ವಹಿಸಿ ದೂರವೇ ಉಳಿದರು. ಕಾರ್ಯಕರ್ತನೊಬ್ಬನ ಬರ್ಬರ ಹತ್ಯೆಯಾದಾಗ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಲಿ, ಅ.ಭಾ.ಸಂಘಟನಾ ಕಾರ್ಯದರ್ಶಿಯಾಗಲಿ, ತಮ್ಮೆಲ್ಲ ʼತುರ್ತುʼ ಕೆಲಸ ಬದಿಗಿಟ್ಟು ಬೆಳ್ಳಾರೆಗೆ ಧಾವಿಸಿ ಬರಬೇಕಾಗಿತ್ತು. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಬೇಕಾಗಿತ್ತು. ಪಾಪ, ಅವರ್ಯಾರಿಗೂ ಬಿಡುವೇ ಇರಲಿಲ್ಲ! ಪ್ರವೀಣ ಹತ್ಯೆಯಾಗಿ ೧೩ ದಿನ ಕಳೆದ ಮೇಲೂ ಈಗಲೂ ಅವರಿಗೆ ಬೆಳ್ಳಾರೆಗೆ ಬರಲು ಬಿಡುವಿಲ್ಲ! ಸಂಘಟನೆಯ ಅದ್ಯಾವ ಮಹತ್ತರ ಕಾರ್ಯಗಳಿವೆಯೋ..!

ಪ್ರವೀಣನ ಹತ್ಯೆಯ ಬಳಿಕ ನಡೆದ ಸುರತ್ಕಲ್‌ ಫಾಜಿಲನ ಹತ್ಯೆಯ ಆರೋಪಿಗಳನ್ನೆಲ್ಲ 24 ಗಂಟೆಯೊಳಗೇ ಪೊಲೀಸರು ಸೆರೆಹಿಡಿದಿದ್ದಾರೆ. ಆದರೆ ಪ್ರವೀಣನ ಹತ್ಯೆಯ ಪ್ರಮುಖ ಆರೋಪಿಗಳ ಬಂದನ ಈಗಲೂ ಆಗಿಲ್ಲ. ಈಗ ಬಂಧನಕ್ಕೊಳಗಾಗಿರುವವರು ಹತ್ಯೆಗೆ ನೆರವು ನೀಡಿದ ಕೆಲವರು, ಅಷ್ಟೇ. ಹಾಗಿದ್ದರೆ ಸರ್ಕಾರದ ʼಕಠಿಣ ಕ್ರಮʼ ದ ಭರವಸೆ ಠುಸ್‌ ಪಟಾಕಿಯಲ್ಲದೆ ಮತ್ತೇನು? ಗೃಹ ಇಲಾಖೆ, ಇಂಟಲಿಜೆನ್ಸ್‌ ಸಂಪೂರ್ಣ ವಿಫಲವಾಗಿರುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

1984ರಷ್ಟು ಹಿಂದೆಯೇ ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರು ʼಕಟ್ಟುವೆವು ನಾವುʼ ಎಂಬ ಕವನವೊಂದರಲ್ಲಿ ಬರೆದಿದ್ದರು:

“ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!”

ಅವರು ಆ ಕವನ ರಚಿಸಿದ್ದ ಹಿನ್ನೆಲೆ ಬೇರೆ. ಆದರೀಗ ಆ ಕವನದ ʼಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು/ ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲುʼ ಎಂಬ ಸಾಲುಗಳು ಹಿಂದು ಕಾರ್ಯಕರ್ತರನ್ನುದ್ದೇಶಿಸಿಯೇ ಬರೆದಂತಿದೆ, ಎಂದು ಈಗ ಯಾರಿಗಾದರೂ ಅನಿಸಿದರೆ ಆಶ್ಚರ್ಯವಿಲ್ಲ.

ರಾಜಕೀಯ ಪಕ್ಷಗಳ ಅಧಿಕಾರದ ಕೋಟೆಗೋಡೆಗೆ ಇನ್ನೆಷ್ಟು ಹೆಣಗಳು ಮೆಟ್ಟಿಲಾಗಬೇಕು? ಈ ಪ್ರಶ್ನೆಗೆ ಉತ್ತರಿಸುವರಾರು?


ದು.ಗು. ಲಕ್ಷ್ಮಣ
  • ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

ದು ಗು ಲಕ್ಷ್ಣರ ಇನ್ನೊಂದು ಅಂಕಣ; ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ
ದತ್ತೋಪಂತ ಠೇಂಗಡಿ ಹೇಳಿದ ಬಂಗಾರದಂಥ ಮಾತುಗಳನ್ನು ಮರೆತ ಯಡಿಯೂರಪ್ಪ ಟೀಂ; ಎ.ಕೆ.ಗೋಪಾಲನ್‌ ಮಾತು ಅಲಕ್ಷಿಸಿ ಕಮ್ಯುನಿಸ್ಟರು ಹಾಳಾದರು, ಇತಿಹಾಸದಿಂದ ಪಾಠ ಕಲಿಯದ ಬಿಜೆಪಿಗರು!!
Tags: bjpcrimeguest columnkarnataka costalMangalorePraveen nettaruPraveen Nettaru murder case
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಶಿಕ್ಷಣ ನೀತಿ ಬಗ್ಗೆ ಅಲ್ಪಸಂಖ್ಯಾತರಿಗೆ ಅನುಮಾನ ಬೇಡ

ಕಲಾಪ ಕರೆಯಿರಿ ಎಂದ ಮಾಜಿ ಸಿಎಂ ಒತ್ತಾಯಕ್ಕೆ ಉನ್ನತ ಶಿಕ್ಷಣ ಸಚಿವರ ಅಪಹಾಸ್ಯ

Leave a Reply Cancel reply

Your email address will not be published. Required fields are marked *

Recommended

ಸ್ವಿಮ್ಮಿಂಗ್‌ ಮಾಡಲು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಗೆ ಬನ್ನಿ

ಸ್ವಿಮ್ಮಿಂಗ್‌ ಮಾಡಲು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಗೆ ಬನ್ನಿ

3 years ago
ಸಿಎಂ ಸಿದ್ದರಾಮಯ್ಯ ಕುಟುಂಬದ ಅವಹೇಳನ; ಬಿಜೆಪಿ ನಾಯಕಿ ಬಂಧನ, ಬಿಡುಗಡೆ

ಸಿಎಂ ಸಿದ್ದರಾಮಯ್ಯ ಕುಟುಂಬದ ಅವಹೇಳನ; ಬಿಜೆಪಿ ನಾಯಕಿ ಬಂಧನ, ಬಿಡುಗಡೆ

2 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ