• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE

ಉತ್ತರ ಕರ್ನಾಟಕ ಶಾಸಕರ ಆವಾಜ್‌ಗೆ ಪತರಗುಟ್ಟಿದ ಸರಕಾರ

P K Channakrishna by P K Channakrishna
September 7, 2022
in STATE
Reading Time: 1 min read
0
ಉತ್ತರ ಕರ್ನಾಟಕ ಶಾಸಕರ ಆವಾಜ್‌ಗೆ ಪತರಗುಟ್ಟಿದ ಸರಕಾರ
1.1k
VIEWS
FacebookTwitterWhatsuplinkedinEmail

ಒತ್ತಡಕ್ಕೆ ಮಣಿದು ಜನೋತ್ಸವ ಮುಂದೂಡಿಕೆ ಘೋಷಣೆ; 3 ದಿನ ಶೋಕಾಚರಣೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರದ ಸಾಧನೆಗಳನ್ನು ಅಬ್ಬರದ ಮೆರವಣಿಗೆ ಮಾಡಲು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಜನೋತ್ಸವʼ ಕಾರ್ಯಕ್ರಮವನ್ನು ಶತಾಯಗತಾಯ ಗುರುವಾರ ನಡೆಸಲೇಬೇಕೆಂದು ಹೊರಟಿದ್ದ ಕೆಲವರು ಉತ್ತರ ಕರ್ನಾಟಕದ ಶಾಸಕರ ಆವಾಜ್‌ಗೆ ಪತರಿಗುಟ್ಟಿಹೋಗಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳವಾರ ರಾತ್ರಿ ನಿಧನರಾದ ಹಾಲಿ ಸಚಿವ ಉಮೇಶ್ ಕತ್ತಿ ಅವರ ಗೌರವಾರ್ಥ ಮೂರು ದಿನಗಳ ಶೋಕಾಚರಣೆಯನ್ನು ಒಂದು ದಿನಕ್ಕಷ್ಟೇ ಇಳಿಸಿ ʼಜನೋತ್ಸವʼದ ಅಬ್ಬರದಲ್ಲಿ ತೇಲಿಹೋಗಲು ಉದ್ದೇಶಿಸಿದ್ದ ಬಿಜೆಪಿಯ ʼಕೆಲವರಿಗೆʼ ಸಂಘ ಪರಿವಾರದ ಉನ್ನತ ನಾಯಕರು ಹಾಗೂ ಉತ್ತರ ಕರ್ನಾಟಕದ ಬಿಜೆಪಿಯ ಬಹುತೇಕ ಶಾಸಕರು ಸರಿಯಾಗಿಯೇ ಬೆವರಿಳಿಸಿದ್ದಾರೆ ಎಂದು ನಿಖರ ಮೂಲಗಳಿಂದ ಗೊತ್ತಾಗಿದೆ.

ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿರುವ ʼಜನೋತ್ಸವʼ ಕಾರ್ಯಕ್ರಮವನ್ನು ಈಗಾಗಲೇ ಎರಡು ಸಲ ಮುಂದಕ್ಕೆ ಹಾಕಲಾಗಿದೆ. ಕರಾವಳಿಯ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಕಾರಣಕ್ಕೆ ಮೊದಲ ಬಾರಿಗೆ ಮುಂದೂಡಲಾಗಿತ್ತು. ಆಮೇಲೆ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಬರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎರಡನೇ ಸಲವೂ ಒಲ್ಲದ ಮನಸ್ಸಿನಿಂದಲೇ ಮುಂದಕ್ಕೆ ಹಾಕಲಾಗಿತ್ತು. ಈಗ ಮೂರನೇ ಸಲ ವಿಧಿ ಇಲ್ಲದೆ ಮುಂದೂಡಲಾಗಿದೆ.

ಮುಖ್ಯಮಂತ್ರಿ ಸುತ್ತಲೂ ಸದಾ ಗಿರಕಿ ಹೊಡೆಯುತ್ತಲೇ ಇರುವ ಪಟಾಲಂವೊಂದು ಜನೋತ್ಸವದ ಉಸ್ತುವಾರಿ ಹೊಂದಿದ್ದು, ಎರಡೂ ಸಲವೂ ಈ ಸಮಾವೇಶವನ್ನು ಒಲ್ಲದ ಮನಸ್ಸಿನಿಂದಲೇ ಮುಂದೂಡಿದ್ದರು. ಈಗ ಮೂರನೇ ಬಾರಿಯೂ ಉಮೇಶ್‌ ಕತ್ತಿ ಅವರ ಅಕಾಲಿಕ ನಿಧನದಿಂದ ಮುಂದೂಡಬೇಕಾಗಿ ಬಂದಿದೆ.

ಎಂ.ಎಸ್.‌ರಾಮಯ್ಯ ಆಸ್ಪತ್ರೆಯಲ್ಲಿ ಕತ್ತಿ ಅವರು ನಿಧನರಾಗುತ್ತಿದ್ದಂತೆ ಬಿಜೆಪಿ ಮತ್ತು ಸರಕಾರದಲ್ಲಿರುವ ಆ ʼಕೆಲವರಿಗೆʼಜನೋತ್ಸವದ ಚಿಂತೆ ಹತ್ತಿಕೊಂಡಿತ್ತು. ಸಾವಿನ ಮನೆಯಲ್ಲಿ ಉತ್ಸವ ಮಾಡಬೇಕೆ? ಬೇಡವೇ? ಎಂದು ರಾತ್ರಿಯೆಲ್ಲ ಗಂಭೀರ ಸಂದಿಗ್ಧದಲ್ಲಿ ಮುಳುಗಿದ್ದರು. ಹಾಲಿ ಸಚಿವರೊಬ್ಬರು ನಿಧನರಾದ ಕಠಿಣ ಸಂದರ್ಭದಲ್ಲಿಯೂ ಆ ʼಕೆಲವರʼ ಹುನ್ನಾರದಿಂದ ಸರಕಾರ ಕೇವಲ ಒಂದು ದಿನದ ಮಟ್ಟಿಗೆ ಕಾಟಾಚಾರದ ಶೋಕಾಚರಣೆ ನಡೆಸಿ, ಗುರುವಾರ ʼಜನೋತ್ಸವʼ ನಡೆಸುವ ಉಮೇದಿನಲ್ಲಿತ್ತು.

ಸರಕಾರದ, ಅದರಲ್ಲೂ ಆ ʼಕೆಲವರʼಚಿತಾವಣಿಯೂ ಉತ್ತರ ಕರ್ನಾಟಕದ ಶಾಸಕರ ಕಿವಿಗೆ ಬಿದ್ದಿದೆ. ಕೂಡಲೇ ತಮ್ಮದೇ ಶೈಲಿಯಲ್ಲಿ ಅವರು ಬಿಟ್ಟ ಆವಾಜ್‌ಗೆ ಈ ಪಟಾಲಂ ಬೆದರಿ ಹೋಗಿದೆ. ಪರಿಣಾಮವಾಗಿ ಗುರುವಾರ ನಡೆಯಬೇಕಿದ್ದ ʼಜನೋತ್ಸವʼವನ್ನು ಭಾನುವಾರಕ್ಕೆ ಮರುನಿಗದಿ ಮಾಡಲಾಗಿದೆ.

ಕೇವಲ ಒಂದು ದಿನಕ್ಕಷ್ಟೇ ಶೋಕಾಚರಣೆ ಘೋಷಿಸಿ, ಬೆಳಗಾವಿ ಜಿಲ್ಲೆಯಲ್ಲಷ್ಟೇ ಸಾರ್ವಜನಿಕ ರಜೆ ಘೋಷಿಸಿದ್ದ ಸರಕಾರದ ನಡೆ ಅನೇಕ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸರಕಾರವು ಕತ್ತಿ ಅವರನ್ನು ಅಪಮಾನಿಸುತ್ತಿದೆ ಎಂದು ಅನೇಕರು ಭಾವಿಸಿದರು. ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಕ್ಯಾಬಿನೇಟ್‌ ಸಚಿವರೊಬ್ಬರು ನಿಧನರಾದ ದುಃಖದ ಸಂದರ್ಭದಲ್ಲಿ ಜನೋತ್ಸವ ಅಗತ್ಯವೇ?” ಎಂದು ಪ್ರಶ್ನೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿತ್ತು. ಮಾಧ್ಯಮಗಳು ಕೂಡ, ಸೂತಕದ ಮನೆಯಲ್ಲಿ ಉತ್ಸವ ಬೇಕೆ ಎಂದು ಕೇಳಿದ್ದವು.

ಅಲ್ಲಿಗೆ ದೊಡ್ಡಬಳ್ಳಾಪುರದ ಜನೋತ್ಸವ ಭಾನುವಾರಕ್ಕೆ ಮುಂದೂಡಲ್ಪಟ್ಟಿತು.

ಅಂತ್ಯಕ್ರಿಯೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸ್ವಗ್ರಾಮ ಬೆಲ್ಲದಬಾಗೇವಾಡಿಯ ತಮ್ಮ ತೋಟದಲ್ಲಿ ಕತ್ತಿ ಅವರ ಅಂತ್ಯಕ್ರಿಯೆ ನಡೆಯಿತು. ಬುಧವಾರ ರಾತ್ರಿ ಸಕಲ ಸರಕಾರಿ ಗೌರವಗಳನ್ನು ಅರ್ಪಿಸಿ ಅವರನ್ನು ಬೀಳ್ಕೊಡಲಾಯಿತು.

ಕತ್ತಿ ಅವರ ಅತ್ಯಕ್ರಿಯೆಯಲ್ಲಿ ಅನೇಕ ಸ್ವಾಮೀಜಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ,ಬಹುತೇಕ ಶಾಸಕರು, ಸಚಿವರು ಭಾಗಿಯಾಗಿ ಅಗಲಿದ ನಾಯಕನಿದ ಭಾವಪೂರ್ಣ ವಿದಾಯ ಹೇಳಿದರು.

Tags: belagavibjpcknewsnowjanotsava cancelled
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ನೇರವಂತಿಕೆಯ ರಾಜಕಾರಣಿ, ಮಿಗಿಲಾಗಿ ಅಂತಃಕರುಣಿ

ನೇರವಂತಿಕೆಯ ರಾಜಕಾರಣಿ, ಮಿಗಿಲಾಗಿ ಅಂತಃಕರುಣಿ

Leave a Reply Cancel reply

Your email address will not be published. Required fields are marked *

Recommended

ಮನೆ ಬಾಗಿಲಿಗೇ ಬಂದ ಕಂದಾಯ ಇಲಾಖೆ

ಮನೆ ಬಾಗಿಲಿಗೇ ಬಂದ ಕಂದಾಯ ಇಲಾಖೆ

4 years ago
ಕನಸುಗಾರ ಕನ್ನಡಿಗ ಮತ್ತು ಕಿಟ್ಟೆಲ್  ; ಸ್ಯಾಂಡಲ್‌ವುಡ್‌ನಲ್ಲಿ ಕೋವಿಡ್‌ ನಂತರ ಹೊಸ ಕನವರಿಕೆ

ಕನಸುಗಾರ ಕನ್ನಡಿಗ ಮತ್ತು ಕಿಟ್ಟೆಲ್ ; ಸ್ಯಾಂಡಲ್‌ವುಡ್‌ನಲ್ಲಿ ಕೋವಿಡ್‌ ನಂತರ ಹೊಸ ಕನವರಿಕೆ

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ