• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home EDITORS'S PICKS

ಸೋವಿಯತ್‌ ಹಾದಿಯಲ್ಲಿ ಚೀನಾ

P K Channakrishna by P K Channakrishna
September 25, 2022
in EDITORS'S PICKS, NATION, NEWS IN USE, STATE, WORLD, WORLD
Reading Time: 2 mins read
0
ಸೋವಿಯತ್‌ ಹಾದಿಯಲ್ಲಿ ಚೀನಾ
1k
VIEWS
FacebookTwitterWhatsuplinkedinEmail

ಕಮ್ಯುನಿಸ್ಟ್‌ ವ್ಯವಸ್ಥೆ ಪತನಕ್ಕೆ ಕ್ಸಿ ಗೃಹಬಂಧನ ಮುನ್ನುಡಿಯಾ?

ಬೀಜಿಂಗ್:‌ ಕಮ್ಯುನಿಸ್ಟ್‌ ಮುಖವಾಡ ತೊಟ್ಟು ಇಡೀ ಚೇನಾವನ್ನು ಸರ್ವಾಧಿಕಾರದ ಆಡಳಿತದತ್ತ ಹೊರಳಿಸಿದ್ದ ಅಧ್ಯಕ್ಷ ಕ್ಸಿ ಜಿನ್‌ʼಪಿಂಗ್‌ ಬಹುತೇಕ ಪದಚ್ಯುತಿ ಆಗಿರುವ ಸುದ್ದಿಗಳು ಬರುತ್ತಿದ್ದು, ಅವರಿನ್ನೂ ಗೃಹ ಬಂಧನದಲ್ಲಿಯೇ ಇದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಗಳಾಗಲಿ ಅಥವಾ ಅಲ್ಲಿನ ಕಮ್ಯುನಿಸ್ಟ್‌ ಮುಖವಾಣಿ ʼಗ್ಲೋಬಲ್‌ ಟೈಮ್ಸ್‌ʼ ಪತ್ರಿಕೆಯಾಗಲಿ, ಈವರೆಗೂ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ಅಕ್ಷರರವನ್ನೂ ಭಿತ್ತರಸಿಲ್ಲ. ಆದರೆ, ಚೀನಿಯನ್ನರು ಸಾಮಾಜಿಕ ಜಾಲತಾಣಗಳಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ ನಲ್ಲಿ ನಡೆಯುತ್ತಿರುವ ಘಟನೆಗಳು ಹಾಗೂ ಭಾರೀ ಪ್ರಮಾಣದಲ್ಲಿ ಸೇನಾ ತುಕಡಿಗಳನ್ನು ಬೀಜಿಂಗ್‌ ನಗರದಲ್ಲಿ ನಿಯೋಜನೆ ಮಾಡಲಾಗುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಸುದ್ದಿಗಳು ಜಗತ್ತಿಗೆ ಲೀಕ್‌ ಆಗುತ್ತಿರುವ ಬೆನ್ನಲ್ಲೇ ಅಲ್ಲಿನ ಸೇನೆ, ಬೀಜಿಂಗ್‌ ನಲ್ಲಿ ಇಂಟರ್‌ʼನೆಟ್‌ ಅನ್ನು ಸ್ಥಗಿತಗೊಳಿಸಿದೆ ಎನ್ನುವ ಮಾಹಿತಿ ಬಂದಿದೆ.

ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ಮಹಾ ದಂಡನಾಯಕನ ಸ್ಥಾನದಿಂದ ಕ್ಸಿಯನ್ನು ಕಿತ್ತೆಸೆದು, ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಗೊತ್ತಾಗಿದೆ.

ಕೆಲ ದಿನಗಳ ಹಿಂದೆ ನೆರೆಯ ಉಜ್ಬೇಕಿಸ್ಥಾನದಲ್ಲಿ ನಡೆದ ಶಾಂಘೈ ಸಹಕಾರಿ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿ ಬೀಜಿಂಗ್ ಗೆ ವಾಪಸಾದ ಕ್ಸಿ ಅವರನ್ನು ಸೆಪ್ಟೆಂಬರ್‌ ೧೬ರಂದು ವಿಮಾನ ನಿಲ್ದಾಣದಲ್ಲಿಯೇ ವಶಕ್ಕೆ ತೆಗೆದುಕೊಂಡು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈವರೆಗೆ ಕ್ಸಿ ಅವರು ತಮ್ಮ ಅಧಿಕಾರವನ್ನು ಚಲಾಯಿಸಿ ತಾವು ಹೊಂದಿದ್ದ ಚೀನಾದ ಅಧ್ಯಕ್ಷ ಹುದ್ದೆ, ಚೀನಾ ಲಿಬರೇಶನ್ ಆರ್ಮಿ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚೀನಾದ ಸರ್ವೋಚ್ಚ ನಾಯಕ (Paramount Leader) ಪದವಿಗಳಲ್ಲಿ ತಮ್ಮ ಜೀವಿತಾವಧಿವರೆಗೂ ಮುಂದುವರೆಯುವ ಹಾಗೆ ಕಾನೂನಾತ್ಮಕ ತಿದ್ದುಪಡಿಗಳನ್ನು ಮಾಡಿಕೊಂಡಿದ್ದರು.

ಅದಾದ ಮೇಲೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದ ಜಿನ್ ಪಿಂಗ್, ತಮ್ಮ ಕೆಳಗಿನ ಸೇನಾ ವ್ಯವಸ್ಥೆಯಲ್ಲಿ ಮನಸೋ ಇಚ್ಛೆ ಬದಲಾವಣೆಗಳನ್ನು ಮಾಡಿಕೊಂಡು ತಮಗೆ ಪರಮ ನಿಷ್ಠರಾದವರನ್ನೆ ನೇಮಕ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅದರಲ್ಲೂ ತಮ್ಮ ಆಪ್ತ ಭದ್ರತಾ ಸಿಬ್ಬಂದಿಯನ್ನು ಪದೇ ಪದೆ ಬದಲಾಯಿಸುತ್ತಿದ್ದರು ಎನ್ನಲಾಗಿದೆ.

ಜನರಲ್ ಲಿ ಕಿಯೋಮಿಂಗ್

ಮತ್ತೊಂದು ಕಡೆ ಚೀನಾ ಲಿಬರೇಶನ್ ಆರ್ಮಿಯ ಜನರಲ್ ಲಿ ಕಿಯೋಮಿಂಗ್ ಅವರು ಜಿನ್ ಪಿಂಗ್ ಜಾಗಕ್ಕೆ ಬರಬಹುದು ಎನ್ನುವ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲೇ, ಆ ದೇಶದಲ್ಲಿ ಮಾವೊತ್ಸೇತುಂಗ್ ನಿಂದ ಅನುಷ್ಠಾನಕ್ಕೆ ಬಂದ ಕಮ್ಯೂನಿಸ್ಟ್ ಆಡಳಿತ ಕೊನೆಗೊಳ್ಳುವುದಾ ಎನ್ನುವ ಅನುಮಾನವೂ ದಟ್ಟವಾಗಿದೆ.

1954ರಲ್ಲಿ ಸಂಪೂರ್ಣವಾಗಿ ಕಮ್ಯುನಿಸ್ಟ್ ವ್ಯವಸ್ಥೆಗೆ ಜಾರಿದ ಚೀನಾದಲ್ಲಿ ಈವರೆಗೆ 9 ಅಧ್ಯಕ್ಷರು ಆಗಿದ್ದಾರೆ. ಹಾಗೆಯೇ ಜಿನ್ ಪಿಂಗ್ 6ನೇ ಸರ್ವೋಚ್ಚ ನಾಯಕ. ಹು ಜಿಂಟಾವೊ ಅಧ್ಯಕ್ಷರಾಗಿ ಇರುವ ತನಕ ಮೃದು ಕಮ್ಯುನಿಸ್ಟ್ ನೀತಿ ಅನುಸರಿಸುತ್ತಾ ಮುಕ್ತ ಆರ್ಥಿಕ ಸುಧಾರಣೆಗಳು ಮತ್ತೂ ವೇಗವಾಗಿ ತೆರೆದುಕೊಂಡ ಚೀನಾ, ಅದೇ ಜಿನ್ ಪಿಂಗ್ ಅಧಿಕಾರಕ್ಕೆ ಬಂದ ಮೇಲೆ ಇಡೀ ಅಧಿಕಾರವಿಲ್ಲ ವ್ಯಕ್ತಿ ಕೇಂದ್ರಿತವಾಗಿ ಸರ್ವಾಧಿಕಾರ ಆಡಳಿತ ಛಾಯೆ ಮೂಡಿತು.

ನೆರೆಯ ರಷ್ಯಾದಲ್ಲಿ ಕೂಡ ಜಿನ್ ಪಿಂಗ್ ಗೆ ಮೊದಲೇ ಇನ್ನೂ 35 ವರ್ಷ ತಾನೇ ಅಧ್ಯಕ್ಷನಾಗಿ ಇರಬೇಕು ಎಂದು ವ್ಲಾಡಿಮಿರ್ ಪುಟಿನ್ ಸಂವಿಧಾನಕ್ಕೆ ತಿದ್ದುಪಡಿ ತಂದುಕೊಂಡ ರೀತಿಯಲ್ಲಿಯೇ ಚೀನಾದಲ್ಲಿ ಇವರು ಮಾಡಿಕೊಂಡರು.

ವ್ಯಕ್ತಿ ಕೇಂದ್ರಿತ ಸರ್ವಾಧಿಕಾರ ಚೀನಾದಲ್ಲಿ ಉಸಿರುಗಟ್ಟಿಸುವ ಮಾರಕ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು. ಸೇನೆಯ ಕೆಲ ಉನ್ನತ ಅಧಿಕಾರಿಗಳು ಕೂಡ ಜಿನ್ ಪಿಂಗ್ ವಿರುದ್ಧ ಕುಡಿಯುತ್ತಿದ್ದರು. ಕಮ್ಯುನಿಸ್ಟ್ ಪಕ್ಷದಲ್ಲೂ ಇದೇ ವ್ಯವಸ್ಥೆ ಇತ್ತು. ಕೋವಿಡ್ ಸೋಂಕು ಜಗತ್ತಿಗೇ ಹಬ್ಬಿಸಿ ಚೀನಾದ ಪ್ರತಿಷ್ಠೆಗೆ ಮಾರಣಾಂತಿಕ ಪೆಟ್ಟು ನೀಡಿದ್ದ ಜಿನ್ ಪಿಂಗ್, ಕೋವಿಡ್ ನಂತರ ಜನರ ಬಗ್ಗೆ ಇನ್ನೂ ರಕ್ಕಸ ಪ್ರವೃತ್ತಿಯಿಂದ ವರ್ತಿಸಿದ್ದರು. ಜನರಲ್ಲಿ ಇದೆಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು.

ಇವೆಲ್ಲ ಕಾರಣಗಳನ್ನು ನೋಡಿದರೆ, ಚೀನಾದ ಜನರು ಕಮ್ಯುನಿಸ್ಟ್ ವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕಮ್ಯುನಿಸ್ಟ್ ನಾಯಕರು ಅಧಿಕಾರ ಸಿಕ್ಕ ಮೇಲೆ ಸರ್ವಾಧಿಕಾರಿಗಳಾಗಿ ಬದಲಾಗುತ್ತಿರುವುದು ಚೀನಿಯರಲ್ಲಿ ಆತಂಕ ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಚೀನಾದ ಕಮ್ಯುನಿಸ್ಟ್ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ. ಮೇಲಾಗಿ ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟುಕೊಂಡಿರುವ ಟಿಬೆಟ್, ಹಾಂಕಾಂಗ್, ಪೂರ್ವ ತರ್ಕಿಸ್ಥಾನ್, ಅಕ್ಸಾಯ್ ಚಿನ್, ಮಂಗೂಲಿಯನ್ನರು ಹೆಚ್ಚಾಗಿರುವ ಉತ್ತರದ ಒಂದು ಭಾಗ ಸೇರಿ ಕೆಲ ಭಾಗಗಳು ಚೀನಾದ ಕೈ ತಪ್ಪಿ ಹೋಗುವ ಅಪಾಯವಿದೆ. ಸೋವಿಯತ್ ಒಕ್ಕೂಟದಂತೆ ಛಿದ್ರವಾಗುವ ಆತಂಕವನ್ನು ಕೂಡ ಎದುರಿಸುತ್ತಿದೆ.

ಈಗ ತೈವಾನ್ ದೇಶವನ್ನು ಆಕ್ರಮಣ ಮಾಡಿಕೊಳ್ಳುವ ಜಿನ್ ಪಿಂಗ್ ಆಡಳಿತ ಯಶ ಕಾಣುವ ಸಾಧ್ಯತೆ ಇಲ್ಲ.

ಅತಿಯಾದ ಮಹತ್ವಾಕಾಂಕ್ಷೆ, ಸರ್ವಾಧಿಕಾರಿ ಆಡಳಿತ, ಸೇನಾ ಹಸ್ತಕ್ಷೇಪ, ನೆರೆ ದೇಶಗಳ ಮೇಲೆ ಆಕ್ರಮಣಶೀಲತೆ, ಜೈವಿಕ ಅಸ್ತ್ರಗಳ ಪ್ರಯೋಗ ಇತ್ಯಾದಿ ಕಾರಣಗಳಿಂದ ಚೀನಾ ಪತನದತ್ತ ಸಾಗಿದೆ. ಕೋವಿಡ್ ನಂತರ ಆರ್ಥಿಕ ಹಿಂಜರಿತ, ನಿರುದ್ಯೋಗ, ಕೈಗಾರಿಕೆಗಳ ವಲಸೆ, ಕುಗ್ಗಿದ ವಿದೇಶಿ ಹೂಡಿಕೆ, ನಿರಂತರ ಮಾನವ ಹಕ್ಕುಗಳ ದಮನ ಇತ್ಯಾದಿಗಳನ್ನು ಮೈವೇತ್ತ ಚೀನಾವನ್ನು, ಈಗ ಉಂಟಾಗಿರುವ ರಾಜಕೀಯ ಕಂಪನ ಯಾವ ದಿಕ್ಕಿನತ್ತ ಒಯ್ಯುತ್ತದೆ ಎನ್ನುವ ಅನುಮಾನ ಜಗತ್ತನ್ನು ಕಾಡುತ್ತಿದೆ.‌

ಮೂರನೇ ಅವಧಿಗೆ ರೆಡಿಯಾಗಿದ್ದ ಕ್ಸಿ

ಅಕ್ಟೋಬರ್‌ 16ರಂದು ಬೀಜಿಂಗ್‌ ನಲ್ಲಿ ಚೀನಾ ಕಮ್ಯುನಿಸ್ಟ್‌ ಪಕ್ಷದ ಮಹಾಧಿವೇಶನ ಇದೆ. ಈ ಮಹಾಧಿವೇಶನದಲ್ಲಿ ಕ್ಸಿ ಮೂರನೇ ಅವಧೀಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಇನ್ನೂ ಐದು ವರ್ಷ ಆಡಳಿತ ನಡೆಸುವುದಕ್ಕೆ ಕಮ್ಯುನಿಸ್ಟ್‌ ಪಕ್ಷದ ಅಧಿಕೃತ ಮುದ್ರೆ ಪಡೆಯುವುದಿತ್ತು. ಆದರೆ, ಕೆಲ ದಿನಗಳಿಂದ ಪಕ್ಷದಲ್ಲಿ ಕುದಿಯುತ್ತಿದ್ದ ಭಿನ್ನಮತ ಏಕಾಏಕಿ ಸ್ಫೋಟಗೊಂಡು ಇಬ್ಬರು ಸಚಿವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಸಿ ಗಲ್ಲುಶಿಕ್ಷೆ ವಿಧಿಸಿರುವುದು ಹಾಗೂ ನಾಲ್ವರು ಉನ್ನತ ಅಧಿಕಾರಿಗಳಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವುದು ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.

ಶಿಕ್ಷೆಗೆ ಗುರಿಯಾಗಿರುವ ಈ ಆರು ಮಂದಿ ಅಧ್ಯಕ್ಷ ಕ್ಸಿ ಅವರ ಕಡು ವಿರೋಧಿಗಳು ಎಂದು ಜಾಗತಿಕ ಮಾಧ್ಯಮಗಳು ಹೇಳಿವೆ. ರಾಜಕೀಯ ದ್ವೇಷವೇ ಕ್ಸಿಗೆ ಮುಳುವಾಗಿದ್ದು, ಸೇನೆ ಕೂಡ ಈ ಸರ್ವಾಧಿಕಾರಿ ನೀತಿಗೆ ವಿರುದ್ಧವಾಗಿ ನಿಂತಿದೆ.

ಇದಲ್ಲದೆ, ಮಾವೋತ್ಸೆತುಂಗ್‌ ನಂತರ ಚೀನಾದ ಬಲಿಷ್ಠ ನಾಯಕ ಕ್ಸಿ ಎನ್ನುವಂತೆ ಚೀನಾದ ಮಾಧ್ಯಮಗಳು ಬಿಂಬಿಸುತ್ತಿದ್ದವು. ಅಲ್ಲದೆ, ಕ್ಸಿ ವರ್ತನೆಯೂ ಹಾಗೆಯೇ ಇತ್ತು ಎಂದು ವಿದೇಶಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಕ್ಸಿ ನಡೆದು ಬಂದ ಹಾದಿ

2012: ಚೀನಾ ಅಧ್ಯಕ್ಷರಾಗಿ, ಹು ಜಿಂಟಾವೋ ಉತ್ತರಾಧಿಕಾರಿ ಆಗಿ ಆಯ್ಕೆ
2018: ಅಧ್ಯಕ್ಷರ ಅಧಿಕಾರಾವಧಿ 2 ಅವಧಿ (10 ವರ್ಷ) ಎಂಬ ನಿಯಮಕ್ಕೆ ತಿದ್ದುಪಡಿ; ಜೀವಿತಾವಧಿ ಅಧ್ಯಕ್ಷರಾಗಿ ಕ್ಸಿ ಮುಂದುವರಿಯಲು ಕಮ್ಯುನಿಸ್ಟ್‌ ಪಕ್ಷ ಅನುಮೋದನೆ
2018: ಎಲ್ಲ ಅಧಿಕಾರಗಳನ್ನು ಕೇಂದ್ರಿಕರಿಸಿಕೊಂಡ ಕ್ಸಿ. ಭ್ರಷ್ಟಾಚಾರದ ನೆಪದಲ್ಲಿ ರಾಜಕೀಯ ವಿರೋಧಿಗಳ ನಿರ್ನಾಮ

ಭಾರತದ ಮೇಲೇನು ಪರಿಣಾಮ?

ಚೀನಾದ ಬೆಳವಣಿಗೆಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಚೀನಾದ ಆಡಳಿತ ಸೇನೆಯ ಕೈಗೆ ಹೋಗುವುದು ಸೇರಿದಂತೆ ವಿವಿಧ ಬೆಳವಣಿಗೆಗಳಿಂದ ತನ್ನ ಮೇಲಾಗುವ ಪರಿಣಾಮಗಳನ್ನು ಭಾರತ ಎಚ್ಚರಿಕೆಯಿಂದ ತುಲನೆ ಮಾಡುತ್ತಿದೆ.

ಕ್ಸಿ ಅವರು ಚೀನಾದ ಅಧ್ಯಕ್ಷರಾದ ಮೇಲೆ ಭಾರತ-ಚೀನಾ ಸಂಬಂಧ ಅನೇಕ ಸಲ ಹದಗೆಟ್ಟಿದೆ. ಅರುಣಾಪ್ರದೇಶ ಹಾಗೂ ಗಾಲ್ವಾನ್‌ ಕಣಿವೆಯಲ್ಲಿ ಎರಡೂ ದೇಶಗಳ ಸೇನೆಗಳು ಮುಖಾಮುಖಿಯಾಗಿದ್ದವು. ದಕ್ಷಿಣ ಏಷ್ಯಾದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಚೀನಾ, ಭಾರತದ ನೆರೆ ದೇಶಗಳಾದ ಶ್ರೀಲಂಕಾ, ಪಾಕಿಸ್ತಾನಗಳನ್ನು ನಮ್ಮ ಮೇಲೆ ಎತ್ತಿ ಕಟ್ಟುವ ಪ್ರಯತ್ನ ಮಾಡಿತ್ತು. ಚೀನಾದ ಸಾಲದ ಸುಳಿಗೆ ಸಿಲುಕಿರುವ ಲಂಕಾ & ಪಾಕಿಸ್ತಾನಗಳು ಆರ್ಥಿಕವಾಗಿ ಪಾಪರೆದ್ದು ಹೋಗಿವೆ.

ಇದರ ನಡುವೆ ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟಿ ಚಿತಾವಣೆ ಮಾಡಿದ್ದ ಚೀನಾ, ಆಪ್ಘಾನಿಸ್ತಾನದಲ್ಲಿ ಖನಿಜ ಸಂಪತ್ತು ಲೂಟಿ ಹೊಡೆಯಲು ಹುನ್ನಾರ ನಡೆಸಿ ತಾಲಿಬಾನಿಗಳಿಗೆ ಬೆಂಬಲ ನೀಡಿ, ಪ್ರಜಾಪ್ರಭುತ್ವ ಆಡಳಿತ ಪತನವಾಗಲು ಕಾರಣವಾಗಿತ್ತು. ಅಲ್ಲದೆ, ವಿಶ್ವಸಂಸ್ಥೆ ಸೇರಿ ಜಾಗತಿಕ ಮಟ್ಟದ ಎಲ್ಲಾ ವೇದಿಕೆಗಳಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡುತ್ತಲೇ ಬಂದಿದೆ.

ಕ್ಸಿ ಆಡಳಿತಾವಧಿಯಲ್ಲಿ ಚೀನಾ ವರ್ಚಸ್ಸಿಗೆ ಮಾರಕ ಪೆಟ್ಟು ಬಿದ್ದಿದೆ. ಕೋವಿಡ್‌ ಸೋಂಕನ್ನು ಜಗತ್ತಿನ ಮೇಲೆ ಬಿಟ್ಟ ಕುಖ್ಯಾತಿ ಕ್ಸಿ ಆಡಳಿಕ್ಕಿದೆ. ಮೇಲಾಗಿ ಅಮೆರಿಕ, ಕೆನಡಾ, ಬ್ರಿಟನ್‌, ಯುರೋಪ್‌, ಜಪಾನ್‌, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ಜತೆ ಸಂಬಂಧಗಳನ್ನು ಕೆಡಿಸಿಕೊಂಡಿದೆ. ಪಾಕಿಸ್ತಾನ, ರಷ್ಯಾ, ಉತ್ತರ ಕೊರಿಯಾ, ಆಫ್ರಿಕಾ ಖಂಡ ಕೆಲ ದೇಶಗಳ ಜತೆ ಮಾತ್ರ ಚೀನಾ ಉತ್ತಮ ಸಂಬಂಧಗಳನ್ನು ಹೊಂದಿದೆ. ಮುಖ್ಯವಾಗಿ ಅನೇಕ ಸಣ್ಣಪುಟ್ಟ ದೇಶಗಳನ್ನು ತನ್ನ ಸಾಲದ ಸುಳಿಗೆ ಸಿಲುಕಿಸಿಕೊಂಡಿದೆ. ಚೀನಾದ ಸಾಲ ರಾಜಕೀಯ ಬಹುತೇಕ ದೇಶಗಳಿಗೆ ಅರ್ಥವಾಗಿದೆ.

ಮತ್ತೊಂದೆಡೆ, ಚೀನಾದ ರಫ್ತು ಪ್ರಮಾಣ ಕುಸಿತದತ್ತಾ ಸಾಗುತ್ತಿದೆ. ಭಾರತ-ಚೀನಾ ವಾಣಿಜ್ಯ ಕೋವಿಡ್‌ ನಂತರ ಗಣಣೀಯವಾಗಿ ಕುಸಿತ ಕಂಡಿದೆ. ಯುರೋಪ್‌ ದೇಶಗಳು, ಅಮೆರಿಕ, ಕೆನಡಾ, ದಕ್ಷಿಣ ಏಷ್ಯಾದ ಅನೇಕ ದೇಶಗಳು ಚೀನಾ ವಸ್ತುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಇದು ಕಮ್ಯುನಿಸ್ಟ್‌ ಚೀನಾದಲ್ಲಿ ತಳಮಳಕ್ಕೆ ಕಾರಣವಾಗಿದೆ.



Tags: beijingchinachinese presidentcknewsnowEconomyindiajinping removednews and viewssocial mediaWorldxi jinping
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಭಾರತ ಐಕ್ಯತಾ ಯಾತ್ರೆಗೆ ಕಾರಣ ಕೊಟ್ಟ ರಾಹುಲ್‌ ಗಾಂಧಿ

ಭಾರತ ಐಕ್ಯತಾ ಯಾತ್ರೆಗೆ ಕಾರಣ ಕೊಟ್ಟ ರಾಹುಲ್‌ ಗಾಂಧಿ

Leave a Reply Cancel reply

Your email address will not be published. Required fields are marked *

Recommended

ಓಲೈಕೆ ಪಾಲಿಟಿಕ್ಸ್;‌ ಭಾರತೀಯ ಜನತಾ ಪಕ್ಷಕ್ಕೂ ಅಂಟಿಕೊಂಡ ಕಾಂಗ್ರೆಸ್‌ ಚಾಳಿ !!

ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ

4 years ago
ಚಿಕ್ಕಬಳ್ಳಾಪುರದಲ್ಲಿ ಜ್ಯೋತಿಬಾ ಫುಲೆ ಜಯಂತಿ: ಮಹಿಳೆಯರಿಗೆ ಕೋವಿಡ್‌ ಲಸಿಕೆ ಹಾಕಲು ಪಿಂಕ್‌ ಬೂತ್‌ಗೆ ಚಾಲನೆ ಕೊಟ್ಟ ಜಿಲ್ಲಾಧಿಕಾರಿ

ಚಿಕ್ಕಬಳ್ಳಾಪುರದಲ್ಲಿ ಜ್ಯೋತಿಬಾ ಫುಲೆ ಜಯಂತಿ: ಮಹಿಳೆಯರಿಗೆ ಕೋವಿಡ್‌ ಲಸಿಕೆ ಹಾಕಲು ಪಿಂಕ್‌ ಬೂತ್‌ಗೆ ಚಾಲನೆ ಕೊಟ್ಟ ಜಿಲ್ಲಾಧಿಕಾರಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ