• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home COVID-19

ಸಿಕ್ಕಾಪಟ್ಟೆ ಸ್ಯಾನಿಟೈಸರ್; ಬರುತ್ತಾ ಕ್ಯಾನ್ಸರ್?

cknewsnow desk by cknewsnow desk
September 6, 2020
in COVID-19, GUEST COLUMN, NEWS IN USE
Reading Time: 1 min read
0
ಸಿಕ್ಕಾಪಟ್ಟೆ ಸ್ಯಾನಿಟೈಸರ್; ಬರುತ್ತಾ ಕ್ಯಾನ್ಸರ್?
913
VIEWS
FacebookTwitterWhatsuplinkedinEmail

ಕೋವಿಡ್-19 ವೈರಾಣುವಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದರ ಜತೆಗೆ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಎಂಬುದು ಸರಕಾರ ಮಾಡಿರುವ ತಾಕೀತು. ಆದರೆ, ಈಗ ಸ್ಯಾನಿಟೈಸರ್’ನಿಂದ ಆಗುತ್ತಿರುವ ಅಡ್ಡ ಪರಿಣಾಮಗಳ ಬಗ್ಗೆ ಸದ್ದಾಗುತ್ತಿದೆ. ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಅವರು ಈ ಬಗ್ಗೆ ಹೆಸರಾಂತ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಬರೆದಿದ್ದಾರೆ.


ಕೋವಿಡ್ 19 ಮಹಾಮಾರಿಯ ಈ ಸಂಕಷ್ಟ ಕಾಲದಲ್ಲಿ ಅತಿ ಹೆಚ್ಚು ಬೇಡಿಕೆಯ ಪದಾರ್ಥಗಳೆಂದರೆ ಕೈಗೆ ಬಳಿದುಕೊಳ್ಳುವ ಸ್ಯಾನಿಟೈಸರ್ ಎಂಬ ದ್ರಾವಣ ಮತ್ತು ಮುಖ, ಬಾಯಿ ಮುಚ್ಚುವ ಮಾಸ್ಕ್ ಗಳು.

ಯಾವುದೇ ವಸ್ತುವನ್ನು ಸ್ಪರ್ಶಿಸುವ ಮುನ್ನ ಕೈಯನ್ನು ಸ್ಯಾನಿಟೈಸರ್‌ನಿಂದ ಚೆನ್ನಾಗಿ ತೊಳೆದುಕೊಂಡರೆ ಕೊರೋನಾ ವೈರಾಣು ನಮ್ಮ ಕೈಗೆ ತಗಲುವುದಿಲ್ಲ. ಅದೇ ರೀತಿ ನಮ್ಮ ಕೈಗಳಲ್ಲಿ ಕೊರೋನಾ ವೈರಾಣುವೇನಾದರೂ ಇದ್ದರೆ ಅದು ನಾಶವಾಗುತ್ತದೆ ಎಂಬ ಕಾರಣಕ್ಕೆ ಸ್ಯಾನಿಟೈಸರ್ ಬಳಕೆ ಈಗ ಹೆಚ್ಚು ವ್ಯಾಪಕವಾಗಿದೆ. ಸರ್ಕಾರವೇ ಸುತ್ತೋಲೆ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ಯಾವುದೇ ಅಂಗಡಿ, ಮಾಲ್, ತರಕಾರಿ ಅಂಗಡಿ, ಕಚೇರಿ, ಸ್ಕೂಲ್ ಎಲ್ಲೇ ಹೋದರೂ ಅಲ್ಲಿ ಪ್ರವೇಶದ್ವಾರದಲ್ಲಿಟ್ಟಿರುವ ಸ್ಯಾನಿಟೈಸರ್ ಎಂಬ ದ್ರಾವಣವನ್ನು ನಮಗಿಷ್ಟವಿರಲಿ, ಇಲ್ಲದಿರಲಿ ಕೈಗೆ ಸುರಿದುಕೊಂಡು ತೊಳೆದುಕೊಳ್ಳಲೇಬೇಕು. ಅನೇಕರ ಮನೆಗಳಲ್ಲೂ ಪ್ರವೇಶದ್ವಾರದಲ್ಲಿ ಇದನ್ನು ಕಡ್ಡಾಯವಾಗಿ ಇರಿಸಲಾಗಿದೆ. ಸ್ಯಾನಿಟೈಸರ್‌ಗಳನ್ನು ನೀಟಾಗಿ ಜೋಡಿಸಿ ಕಾಲಿನಿಂದ ಒತ್ತಿದರೆ ತಾನಾಗಿಯೇ ನಿಮ್ಮ ಕೈಗೆ ಸುರಿಯುವಂತಹ ಸ್ಯಾನಿಟೈಸರ್ ಸ್ಟ್ಯಾಂಡ್ ಗಳೂ ಮಾರುಕಟ್ಟೆಗೆ ಬಂದಿವೆ. ಸ್ಯಾನಿಟೈಸರ್ ಉತ್ಪಾದಿಸುವ ಕಂಪನಿಗಳಿಗಂತೂ ಈಗ ಭರಪೂರ ವ್ಯಾಪಾರ. ಸುಗ್ಗಿಯೋ ಸುಗ್ಗಿ. ಆದರೆ ಸ್ಯಾನಿಟೈಸರ್ ಬಳಕೆ ಎಷ್ಟು ಸುರಕ್ಷಿತ? ದೀರ್ಘಕಾಲ ಬಳಸಿದರೆ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳೇನು? ಈ ಬಗ್ಗೆ ಬಹುತೇಕ ಮಂದಿ ಚಿಂತಿಸಿದಂತೆ ಕಾಣುತ್ತಿಲ್ಲ. ಜನರ ಅಜ್ಞಾನ ಎಲ್ಲಿಯವರೆಗಿದೆಯೆಂದರೆ -ಸ್ಯಾನಿಟೈಸರ್ ದ್ರಾವಣವನ್ನು ಕೈತುಂಬಾ, ಮೊಣಕೈವರೆಗೂ ಆಗಾಗ ಚೆನ್ನಾಗಿ ಹಚ್ಚಿ ತಿಕ್ಕಿಕೊಳ್ಳುತ್ತಿದ್ದರೆ ಕೊರೋನಾ ತಮ್ಮ ಹತ್ತಿರ ಕೂಡ ಸುಳಿಯದೆಂಬ ತಪ್ಪು ತಿಳಿವಳಿಕೆ ಹೆಪ್ಪುಗಟ್ಟಿದೆ.

ಕಳೆದ ವಾರ ನನ್ನ ಪತ್ನಿಯನ್ನು ಬೆಂಗಳೂರಿನ ವಿಜಯಾ ಹೈಸ್ಕೂಲ್‌ಗೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಪ್ರತಿನಿತ್ಯ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದಾಗ ಅಲ್ಲಿನ ಸೆಕ್ಯುರಿಟಿಗಳ ವರ್ತನೆ ನೋಡಿ ನನಗೆ ಗಾಬರಿಯಾಗಿತ್ತು. ಪ್ರವೇಶದ್ವಾರದಲ್ಲಿ ಪಹರೆ ಕಾಯುವ ಸೆಕ್ಯುರಿಟಿಗಳು ಒಳಹೊರಗೆ ಓಡಾಡುತ್ತಾ ಹೋಗುವಾಗೊಮ್ಮೆ ಬರುವಾಗೊಮ್ಮೆ ಅಲ್ಲೇ ಇಟ್ಟಿದ್ದ ಸ್ಯಾನಿಟೈಸರ್ ದ್ರಾವಣವನ್ನು ಪದೇ ಪದೇ ಕೈತುಂಬಾ ಹಚ್ಚಿಕೊಂಡು ತಿಕ್ಕಿಕೊಳ್ಳುತ್ತಿದ್ದರು. ಹೀಗೆ ದಿನಕ್ಕೆ ಹಲವಾರು ಬಾರಿ ಕೈಗೆ ಸ್ಯಾನಿಟೈಸರ್ ಬಳಿದುಕೊಂಡರೆ ಅವರ ಕೈಗಳ ಗತಿ ಏನಪ್ಪಾ ಎಂದು ನನಗೆ ಚಿಂತೆ ಕಾಡಿದ್ದು ನಿಜ. ಆದರೆ ಸೆಕ್ಯುರಿಟಿಗಳಿಗೆ ಅಂತಹ ಯಾವ ಚಿಂತೆಯೂ ಕಾಡಿರಲಿಲ್ಲ. ಮದುವೆ ಸಮಾರಂಭದಲ್ಲಿ ಪನ್ನೀರು ದಾನಿಯಿಂದ ಕೈಗೆ ಪನ್ನೀರು ಚಿಮುಕಿಸಿಕೊಂಡು ಸಂಭ್ರಮ ಪಡುವಂತೆ ಅವರು ಸ್ಯಾನಿಟೈಸರ್ ಎಂಬ ವಿಷವನ್ನು ಹಚ್ಚಿಕೊಂಡು ಖುಷಿಪಡುತ್ತಿದ್ದರು.

ದೇಶಾದ್ಯಂತ ಮೊದಲ ಲಾಕ್‌ಡೌನ್ ಘೋಷಣೆಯಾಗಿ ಮದ್ಯದಂಗಡಿಗಳು ಕೂಡ ಬಂದ್ ಆದಾಗ ಎಣ್ಣೆಪ್ರಿಯರು ಮೊರೆ ಹೋಗಿದ್ದು ಇದೇ ಸ್ಯಾನಿಟೈಸರ್‌ಗೆ! ಕೈಗೆ ಬಳಿದುಕೊಳ್ಳುವುದಕ್ಕಲ್ಲ, ಅದನ್ನವರು ಎತ್ತಿ ಕುಡಿದೇಬಿಟ್ಟಿದ್ದರು. ಅದರಲ್ಲಿ ಆಲ್ಕೋಹಾಲ್ ಇರುವುದರಿಂದ ಅದು ಕಿಕ್ ಕೊಟ್ಟು, ನಶೆ ಏರಿಸುತ್ತದೆ ಎಂಬ ಭ್ರಮೆಯಿಂದ ಹಲವರು ಸ್ಯಾನಿಟೈಸರ್ ಖರೀದಿಸಿ ಅನಾಮತ್ತಾಗಿ ಕುಡಿದುಬಿಟ್ಟಿದ್ದರು. ಹಲವರ ಆರೋಗ್ಯ ಇದರಿಂದ ತೀವ್ರವಾಗಿ ಬಿಗಡಾಯಿಸಿ ಆಸ್ಪತ್ರೆ ಸೇರಬೇಕಾಯಿತು. ಕೆಲವರು ಚಿಕಿತ್ಸೆ ಫಲಿಸದೆ ಸತ್ತೇಹೋದರು. ಕರ್ನಾಟಕದ ಹುಬ್ಬಳ್ಳಿ, ಕಲಘಟಗಿ, ಧಾರವಾಡಗಳಲ್ಲೇ ಐದಾರು ಮಂದಿ ಸಾವಿಗೀಡಾಗಿದ್ದರು. ಮದ್ಯ ದೊರೆಯಲಿಲ್ಲವೆಂದು ಅವಸರದಲ್ಲಿ ಸ್ಯಾನಿಟೈಸರ್ ದ್ರಾವಣ ಕುಡಿದ ತಮಿಳುನಾಡಿನ ಚೆಂಗಲ್‌ದಟ್ಟು ಎಂಬ ಊರಿನ ಮೂವರು ಸತ್ತುಹೋಗಿದ್ದರು. ದೇಶದಾದ್ಯಂತ ಹೀಗೆ ಸ್ಯಾನಿಟೈಸರ್ ಕುಡಿದು ಸತ್ತವರು ಹಲವಾರು ಮಂದಿ.

ಕೈಗಳಿಗೆ ಸ್ಯಾನಿಟೈಸರ್ ಸುರಿದುಕೊಂಡಾಗ ತಣ್ಣಗಿನ ಅನುಭವವಾಗಿ ಕೈಯೆಲ್ಲ ಸ್ವಚ್ಛವಾಯಿತೆಂದು ಅಂದುಕೊಳ್ಳುತ್ತೇವೆ. ಆದರೆ ಸ್ಯಾನಿಟೈಸರ್‌ನಲ್ಲಿರುವ ಆಲ್ಕೋಹಾಲ್, ಗ್ಲಿಸರಿನ್, ಟ್ರೈಕ್ಲೋಸಾನ್ ಅಥವಾ ಟ್ರೈಕ್ಲೋಕಾರ್ಬನ್ ಕೈಗಳಲ್ಲಿರುವ ಕಣ್ಣಿಗೆ ಕಾಣದ ವೈರಾಣುಗಳನ್ನು ನಾಶಪಡಿಸುವುದಲ್ಲದೆ ಕೈಗಳ ಆರೋಗ್ಯಕ್ಕೆ ಅಗತ್ಯವಾದ ವೈರಾಣುಗಳನ್ನು ಹಾಗೂ ಜೀವಕೋಶಗಳನ್ನೂ ನಾಶಪಡಿಸುತ್ತವೆ. ಆಗ ಸಹಜವಾಗಿ ದೇಹದಲ್ಲಿರುವ ರೋಗನಿರೋಧಕ ಜೀವಾಣುಗಳು ನಾಶವಾಗಿ, ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ದುರ್ಬಲವಾಗುವ ಸಾಧ್ಯತೆ ಇದೆ. ಅಮೆರಿಕದ ರೋಗ ನಿಯಂತ್ರಣ ಕೇಂದ್ರವೊಂದರಲ್ಲಿ ಎಪಿಡೆಮಿಕ್ ಇಂಟೆಲಿಜೆನ್ಸ್ ಸರ್ವೀಸ್ 2011ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಸೋಪು ಹಾಗೂ ನೀರಿನ ಬದಲು ಸ್ಯಾನಿಟೈಸರ್‌ನಿಂದಲೇ ದಿನಕ್ಕೆ 6 ಬಾರಿ ಕೈ ತೊಳೆಯುತ್ತಿದ್ದ ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ ವಿವಿಧ ಬಗೆಯ ದೈಹಿಕ ತೊಂದರೆಗಳು ಕಂಡುಬಂದವು.
ಸ್ಯಾನಿಟೈಸರ್‌ನಲ್ಲಿರುವ ಟ್ರೈಕ್ಲೋಸನ್ ಎಂಬ ರಾಸಾಯನಿಕ ಹಾರ್ಮೋನ್‌ಗಳ ವ್ಯತ್ಯಯಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಹಾರ್ಮೋನ್‌ಗಳ ಸಹಜ ಚಟುವಟಿಕೆಗೆ ಭಂಗ ಉಂಟಾಗುತ್ತದೆಂದು ಸಂಶೋಧನೆ ಶೃತಪಡಿಸಿದೆ. ನಮ್ಮ ದೇಹವನ್ನು ರೋಗಗಳಿಂದ ರಕ್ಷಿಸುವ ದೇಹದ ರೋಗ ನಿರೋಧಕ ವ್ಯವಸ್ಥೆಯೇ (ಇಮ್ಯೂನ್ ಸಿಸ್ಟಮ್) ಸ್ಯಾನಿಟೈಸರ್‌ನಲ್ಲಿರುವ ಟ್ರೈಕ್ಲೋಸನ್ ಹಾಳುಗೆಡವುತ್ತದೆ ಎಂದೂ ತಿಳಿದುಬಂದಿದೆ.

ವಿಷಕಾರಕ ರಾಸಾಯನಿಕಗಳನ್ನು ಸ್ಯಾನಿಟೈಸರ್ ಒಳಗೊಂಡಿರುವುದರಿಂದ ದೇಹದ ಮೇಲೆ ಅಂಗಾಂಗಗಳ ಮೇಲೆ ವಿವಿಧ ಬಗೆಯ ದುಷ್ಪರಿಣಾಮ ಬೀರುತ್ತದೆಂದು ಇನ್ನೊಂದು ಸಂಶೋಧನೆ ದೃಢಪಡಿಸಿದೆ. ತಲೆನೋವು, ವಾಂತಿ, ತೊದಲುವಿಕೆ, ಮಿದುಳಿನ ಆಘಾತ… ಹೀಗೆ ಹಲವು ಬಗೆಯ ತೊಂದರೆಗಳಿಗೆ ಸ್ಯಾನಿಟೈಸರ್‌ನ ನಿರಂತರ ಬಳಕೆ ಅವಕಾಶ ಮಾಡಿಕೊಡುತ್ತದೆ ಎಂದು ಡಾ. ಸಂಜಯ ಗುಪ್ತಾ ಹೇಳುತ್ತಾರೆ. ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಿ. ಮಕ್ಕಳಿಗಂತೂ ಸ್ಯಾನಿಟೈಸರ್ ಬಳಸದಂತೆ ಎಚ್ಚರಿಕೆ ವಹಿಸಿ ಎಂದು ಅವರು ಸಲಹೆ ಕೊಡುತ್ತಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಮಂಗಳೂರಿನ ಹಿರಿಯ ವೈದ್ಯ ಡಾ.ಬಿ.ಎಂ.ಹೆಗ್ಡೆ ಅವರು ಕೂಡ ಸ್ಯಾನಿಟೈಸರ್ ಬಳಕೆ ವಿರುದ್ಧ ಅಪಸ್ವರ ಎತ್ತಿದ್ದಾರೆ. ನೀವು ನಿರಂತರ ಎರಡು ವರ್ಷ ಕಾಲ ಸ್ಯಾನಿಟೈಸರ್ ಬಳಸಿ ಕೈ ತೊಳೆದರೆ ನಿಮಗೆ ಕ್ಯಾನ್ಸರ್ ತಗಲುವುದು ಗ್ಯಾರಂಟಿ ಎಂದು ನೇರವಾಗಿಯೇ ಅವರು ಎಚ್ಚರಿಸಿದ್ದಾರೆ. ಆದರೆ ಅವರು ಎಚ್ಚರಿಕೆಯನ್ನಷ್ಟೇ ನೀಡದೆ, ಪರಿಹಾರವನ್ನೂ ಸೂಚಿಸಿರುವುದು ಗಮನಾರ್ಹ. ಸ್ಯಾನಿಟೈಸರ್ ಬದಲಿಗೆ ಶುದ್ಧವಾದ ತೆಂಗಿನೆಣ್ಣೆ (ಕೊಬ್ಬರಿ ಎಣ್ಣೆ)ಗೆ ಮೂರ‍್ನಾಲ್ಕು ಎಸಳು ಬೆಳ್ಳುಳ್ಳಿ ಜಜ್ಜಿ ಹಾಕಿ ಮಿಶ್ರಣ ಮಾಡಿದ ಎಣ್ಣೆಯನ್ನು ಕೈಗೆ ಹಚ್ಚಿಕೊಂಡರೆ ಅದು ಸ್ಯಾನಿಟೈಸರ್‌ಗಿಂತಲೂ ಪರಿಣಾಮಕಾರಿ. ಕೊರೋನಾ ಮತ್ತಿತರೆ ಮಾರಕ ವೈರಾಣುಗಳೆಲ್ಲ ಹೇಳಹೆಸರಿಲ್ಲದಂತೆ ನಾಶವಾಗುತ್ತವೆ. ಅಲ್ಲದೆ ಯಾವುದೇ ಅಡ್ಡ ಪರಿಣಾಮವಾಗಲೀ ಹಾನಿಯಾಗಲೀ ಆಗದು ಎಂದವರು ಭರವಸೆ ನೀಡಿದ್ದಾರೆ. ಕೈಗಳು ಮತ್ತು ಮೂಗಿಗೆ ಬೆಳ್ಳುಳ್ಳಿ ಸೇರಿಸಿದ ಕೊಬ್ಬರಿ ಎಣ್ಣೆ ಹಚ್ಚಿಕೊಂಡರೆ ಕೊರೋನಾ ಮಾರಿ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲವೆಂದು ಅವರೇ ಹೇಳಿದ್ದಾರೆ. ಇನ್ನು ಕೆಲ ತಜ್ಞರು ಸಾವಯವ ಪದಾರ್ಥಗಳಿಂದ ಮಾಡಿದ ಸ್ಯಾನಿಟೈಸರ್ ಬಳಕೆ ಕೂಡ ಆರೋಗ್ಯವರ್ಧಕ. ಹಾನಿಕಾರಕವಲ್ಲ ಎಂದು ಸಾಬೀತುಪಡಿಸಿದ್ದಾರೆ.

ಡಾ.ಬಿ.ಎಂ. ಹೆಗ್ಡೆಯವರು ಸ್ವತಃ ಅಲೋಪತಿ ವೈದ್ಯರು. ಹಲವಾರು ವೈದ್ಯಕೀಯ ಪ್ರಬಂಧಗಳನ್ನು ಮಂಡಿಸಿದವರು. ಅವರೇ ಸ್ಯಾನಿಟೈಸರ್ ಬಳಕೆಯಿಂದಾಗುವ ಹಾನಿಯನ್ನು ಹೀಗೆ ಬಹಿರಂಗವಾಗಿ ಹೇಳಿರಬೇಕಾದರೆ ಅದರಲ್ಲಿ ಸತ್ಯಾಂಶವಿರಲೇಬೇಕು. ತೆಂಗಿನೆಣ್ಣೆಯನ್ನು ಪ್ರಮೋಟ್ ಮಾಡಿ, ತೆಂಗಿನೆಣ್ಣೆ ಕಾರ್ಖಾನೆಗಳಿಂದ ಕಮಿಷನ್ ಪಡೆಯುವ ಯಾವ ಹುನ್ನಾರವೂ ಅವರ ಈ ಹೇಳಿಕೆಯ ಹಿಂದೆ ಅಡಗಿಲ್ಲ.

ನಾನಂತೂ ಸಾಧ್ಯವಾದಷ್ಟೂ ತೆಂಗಿನೆಣ್ಣೆಯನ್ನೇ ಕೈಗೆ ಹಚ್ಚಿಕೊಂಡು ಹೊರಗೆ ಹೋಗುತ್ತಿರುವೆ. ಸ್ಯಾನಿಟೈಸರ್ ಬಳಸುವುದಿಲ್ಲ. ತೆಂಗಿನೆಣ್ಣೆ ಬಳಸುವುದರಿಂದ ಕೈಗಳಿಗೆ ಹಿತವಾಗಿ ಬೇಡದ ವೈರಾಣುಗಳನ್ನು ನಾಶಪಡಿಸುವುದಾದರೆ ನಾವೇಕೆ ತೆಂಗಿನೆಣ್ಣೆ ಬಳಸಬಾರದು? ತೆಂಗಿನೆಣ್ಣೆಯೂ ಬೇಡವೆಂದಾದರೆ ಸೋಪು ಮತ್ತು ನೀರಿನಿಂದ ಕೈತೊಳೆದುಕೊಂಡರೆ ಯಾವುದೇ ಹಾನಿಯಾಗದು. ಸೋಪಿನಿಂದ ಕೈ ತೊಳೆಯುವುದು ಸ್ಯಾನಿಟೈಸರ್ ಬಳಕೆಗಿಂತ ಕಡಿಮೆ ಅಪಾಯಕರ.

ಹಲವು ವಿದ್ಯಾವಂತರು ಕೈತುಂಬ ಆಗಾಗ ಸ್ಯಾನಿಟೈಸರ್ ಬಳಿದುಕೊಂಡು ತಾವು ಉಳಿದೆಲ್ಲರಿಗಿಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವರು ಎಂದು ಇಲ್ಲದ ಜಂಭ ಪ್ರದರ್ಶಿಸುವುದನ್ನು ನೋಡಿ ಮರುಕ ಉಂಟಾಯಿತು. ಸ್ಯಾನಿಟೈಸರ್ ಬಳಕೆಯ ದುಷ್ಪರಿಣಾಮದ ಇನ್ನೊಂದು ಮುಖವೂ ಅವರಿಗೆ ಗೊತ್ತಾಗಲಿ ಎಂದು ಈ ಲೇಖನ ಬರೆಯಬೇಕಾಯಿತು.


ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮಾರ್ಚ್‌ 1ರಿಂದ ದ್ವಿತೀಯ ಪಿಯು, 20ರಿಂದ sslc ಪರೀಕ್ಷೆ

by cknewsnow desk
December 3, 2024
0

ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ

ಪೋಡಿ ತ್ವರಿತ ಇತ್ಯರ್ಥಕ್ಕೆ 1,786 ಹುದ್ದೆ ಭರ್ತಿ

ಪೋಡಿ ತ್ವರಿತ ಇತ್ಯರ್ಥಕ್ಕೆ 1,786 ಹುದ್ದೆ ಭರ್ತಿ

by cknewsnow desk
August 12, 2024
0

1,000 ಗ್ರಾಮ ಲೆಕ್ಕಿಗರು, 750 ಸರ್ವೇಯರ‍್ಸ್, 36 ಎಡಿಎಲ್‌ಆರ್‌ಗಳ ನೇಮಕ

kptclನಲ್ಲಿ 902 ಹುದ್ದೆಗೆ ನೇಮಕ

kptclನಲ್ಲಿ 902 ಹುದ್ದೆಗೆ ನೇಮಕ

by cknewsnow desk
May 24, 2024
0

ನೇಮಕಾತಿ ಆದೇಶ ನೀಡಿದ ಸರಕಾರ

ಕೆಸಿಇಟಿ-24 ಪರೀಕ್ಷೆ: ಜನವರಿ 10ರಿಂದ online ಅರ್ಜಿ ಸಲ್ಲಿಕೆಗೆ ಅವಕಾಶ

CET EXAM; ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ; ವಿದ್ಯಾರ್ಥಿಗಳಿಗೆ ನಿರಾಳ

by cknewsnow desk
April 28, 2024
0

ತಜ್ಞರ ಶಿಫಾರಸು ಒಪ್ಪಿಕೊಂಡ ರಾಜ್ಯ ಸರಕಾರ

ದ್ವಿತೀಯ ಪಿಯುಸಿ ಫಲಿತಾಂಶ: ಧೂಳೆಬ್ಬಿಸಿದ ಬಾಲಕಿಯರು

ದ್ವಿತೀಯ ಪಿಯುಸಿ ಫಲಿತಾಂಶ: ಧೂಳೆಬ್ಬಿಸಿದ ಬಾಲಕಿಯರು

by cknewsnow desk
April 11, 2024
0

ವಿಜ್ಞಾನದಲ್ಲಿ ವಿದ್ಯಾಲಕ್ಷ್ಮಿ ಪ್ರಥಮ

ಬೆಳಗ್ಗೆ 10.15 ಗಂಟೆಗೆ ದ್ವಿತೀಯ PUC ಪರೀಕ್ಷೆ; ಶುಭವಾಗಲಿ ವಿದ್ಯಾರ್ಥಿಗಳೇ

ನಾಳೆ ಬೆಳಗ್ಗೆ 10 ಗಂಟೆಗೆ ದ್ವಿತೀಯ ಪಿಯುಸಿ ಫಲಿತಾಂಶ

by cknewsnow desk
April 9, 2024
0

11 ಗಂಟೆ ನಂತರ ಅಂತರ್ಜಾಲದಲ್ಲಿ ಫಲಿತಾಂಶ ನೋಡಬಹುದು

Next Post
ಅಯೋಧ್ಯಾ ಆಂದೋಲನ: ಭಾರತದ ಅಂತರಾತ್ಮದ ಧ್ವನಿ

ಅಯೋಧ್ಯಾ ಆಂದೋಲನ: ಭಾರತದ ಅಂತರಾತ್ಮದ ಧ್ವನಿ

Leave a Reply Cancel reply

Your email address will not be published. Required fields are marked *

Recommended

ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ರೆ ಕ್ರಿಮಿನಲ್ ಕೇಸ್: ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಟ್ಟ ಗುಡಿಬಂಡೆ ತಹಶೀಲ್ದಾರ್ ಸಿಬ್ಗತ್ ವುಲ್ಲಾ

ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ರೆ ಕ್ರಿಮಿನಲ್ ಕೇಸ್: ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಟ್ಟ ಗುಡಿಬಂಡೆ ತಹಶೀಲ್ದಾರ್ ಸಿಬ್ಗತ್ ವುಲ್ಲಾ

4 years ago
ಅಕ್ಟೋಬರ್ ಆತಂಕ; ಬೆಂಗಳೂರಿನಲ್ಲಿ ಜಗತ್ತಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

ಅಕ್ಟೋಬರ್ ಆತಂಕ; ಬೆಂಗಳೂರಿನಲ್ಲಿ ಜಗತ್ತಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ