• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CHIKKABALLAPUR

ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಹತಾಶೆಯಿಂದ ಒಡಹುಟ್ಟಿದ ಅಣ್ಣನ ಐದು ವರ್ಷದ ದಿವ್ಯಾಂಗ ಮಗಳನ್ನೇ ಕತ್ತುಕುಯ್ದು ಕೊಂದ ಪರಮ ಪಾತಕಿ

cknewsnow desk by cknewsnow desk
January 12, 2021
in CHIKKABALLAPUR, CRIME, STATE
Reading Time: 1 min read
0
ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಹತಾಶೆಯಿಂದ ಒಡಹುಟ್ಟಿದ ಅಣ್ಣನ ಐದು ವರ್ಷದ ದಿವ್ಯಾಂಗ ಮಗಳನ್ನೇ ಕತ್ತುಕುಯ್ದು ಕೊಂದ ಪರಮ ಪಾತಕಿ
916
VIEWS
FacebookTwitterWhatsuplinkedinEmail

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ

  • ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ: ಅತ್ಯಂತ ಪೈಶಾಚಿಕ, ನಾಗರೀಕ ಸಮಾಜವೇ ತಲೆತಗ್ಗಿಸುವಂಥ ಘೋರ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದುಬಿಟ್ಟಿದೆ.

ಸ್ವಂತ ಚಿಕ್ಕಪ್ಪನೇ ಐದು ವರ್ಷದ ದಿವ್ಯಾಂಗ ಬಾಲಕಿಯ ಕತ್ತುಕುಯ್ದು ಹೆತ್ತ ತಾಯಿಯ ಎದುರಿನಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ತಾಲ್ಲೂಕಿನ ಅಂಗರೇಕನಹಳ್ಳಿ ಗ್ರಾಮದಲ್ಲಿ ಸಂಜೆ ನಾಲ್ಕೂವರೆ ಗಂಟೆ ಸುಮಾರಿಗೆ ನಡೆದಿದೆ.

ಚರ್ವಿತ ಕೊಲೆಯಾದ ನತದೃಷ್ಟ ಬಾಲಕಿ. ಕೃಷ್ಣಮೂರ್ತಿ, ಶಶಿಕಲಾ ಅವರ ಹಿರಿಯ ಮಗಳು. ಕತ್ತು ಸೀಳಿದ ಕಿರಾತಕ ಶಂಕರ್‌ ಆ ಮಗುವಿನ ಚಿಕ್ಕಪ್ಪ. ಸ್ವಂತ ಅಣ್ಣನ ಮಗಳನ್ನೇ ಇಷ್ಟು ನಿರ್ದಯವಾಗಿ ಅತ್ತಿಗೆಯ ಸಮಕ್ಷಮದಲ್ಲೇ ಹತ್ಯೆ ಮಾಡಿದ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ತನ್ನ ಕಣ್ಣೆದುರೇ ತನ್ನ ಕಂದನನ್ನು ಕೊಂದ ಕ್ರೂರಕ್ಷಣಗಳನ್ನು ಕಂಡೊಡನೆ ಆ ತಾಯಿ ಕುಸಿದುಬಿದ್ದಿದ್ದಾರೆ.

ಹಂತಕ ಶಂಕರ್‌ ಕೃತ್ಯ ಎಸಗಿದೊಡನೆ ಪರಾರಿಯಾಗಿದ್ದಾನೆ. ಮಗುವಿನ ತಂದೆ ಕೃಷ್ಣಮೂರ್ತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

  • ಚರ್ವಿತ

ಪಾತಕಿ ಶಂಕರನ ಈ ಕೃತ್ಯಕ್ಕೆ ಕಾರಣವೇನು?

ಕೃಷ್ಣಮೂರ್ತಿ ಮತ್ತು ಹಂತಕ ಶಂಕರ್‌ ಒಡಹುಟ್ಟಿದ ಸಹೋದರರು. ಸೊಣ್ಣಪ್ಪ ಇವರ ತಂದೆ. ಒಟ್ಟು ಏಳು ಜನ ಅಣ್ಣ-ತಮ್ಮಂದಿರ ಕುಟುಂಬ. ತಂದೆ-ತಾಯಿಯ ಜತೆ ಒಟ್ಟಾಗಿದ್ದ ಅವಿಭಕ್ತ ಕುಟುಂಬ. ಇಂಥ ಮನೆಯಲ್ಲಿ ಶಂಕರನಿಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು. ಆದರೆ, ಬಂದವರು ಹೆಣ್ಣು ಕೊಡದೇ ಕೈಕೊಡುತ್ತಿದ್ದರು. ದಿವ್ಯಾಂಗ ಬಾಲಕಿ ಚರ್ವಿತಳಿಂದಲೇ ನನಗೆ ಮದುವೆಯಾಗುತ್ತಿಲ್ಲ ಎಂಬ ಭಾವನೆ ಆತನ ಮನಸ್ಸಿನಲ್ಲಿ ಮೂಡಿತ್ತು. ಅದೇ ರೀತಿಯ ದಿವ್ಯಾಂಗ ಮಗು ನನಗೂ ಹುಟ್ಟಬಹುದು ಎಂಬ ಕಾರಣಕ್ಕೆ ನನಗೆ ಯಾರು ಹೆಣ್ಣು ಕೊಡುತ್ತಿಲ್ಲ ಎಂಬ ಮೂಢನಂಬಿಕೆ ಆತನಲ್ಲಿ ಬಲವಾಗಿ ಬೇರೂರತೊಡಗಿತ್ತು.

  • ಹಂತಕ ಶಂಕರ್‌

ಚರ್ವಿತಾ ಹುಟ್ಟಿದ ಒಂದು ವರ್ಷದ ನಂತರ ಆ ಮಗುವಿನ ವಿಷಯಕ್ಕಾಗಿ ಅನೇಕ ಸಲ ಶಂಕರ್‌ ಮನೆಯಲ್ಲಿ ಎಲ್ಲರ ಜತೆ ಜಗಳವಾಡುತ್ತಿದ್ದ. ಮಗು ಬೆಳೆಯುತ್ತಿದ್ದಂತೆಲ್ಲ ಆತನ ಅಸಹನೆಯೂ ಹೆಚ್ಚುತ್ತಲೇ ಹೋಯಿತು. ಚರ್ವಿತ ಮನೆಯ ಪಾಲಿಗೆ ದರಿದ್ರ, ಅಪಶಕುನ ಎಂದೆಲ್ಲ ನಕಾರಾತ್ಮಕ ಭಾವನೆಗಳನ್ನು ತಲೆಗೆ ತುಂಬಿಕೊಂಡಿದ್ದ. ಈ ಮಗು ಮನೆಯಲ್ಲಿ ಇರಬಾರದು ಎಂದು ಯಾವಾಗಲೂ ಕ್ಯಾತೆ ತೆಗೆಯುತ್ತಿದ್ದ. ಆ ಬಾಲಕಿಯನ್ನು ಕೊಲ್ಲಲು ಮೂರು ಸಲ ವಿಫಲ ಯತ್ನ ನಡೆಸಿದ್ದ ಅವನನ್ನು ಎಲ್ಲರೂ ಮನೆಯಿಂದ ಹೊರಹಾಕಿದ್ದರು. ಆಮೇಲೆ ತೋಟದ ಶೆಡ್‌ಯಲ್ಲಿ ವಾಸವಿದ್ದ. ತನಗೆ ಬೇಕಾದ ಹಾಗೆ ಬಿಡಾಡಿಯಾಗಿದ್ದ ಶಂಕರ ಮನೆಯವರಿಗೂ ದೊಡ್ಡ ತಲೆನೋವಾಗಿದ್ದ. ಕೊನೆಗೆ ಐದು ತಿಂಗಳ ಹಿಂದೆಯಷ್ಟೇ ತಂದೆ-ತಾಯಿ ಮತ್ತೆ ಮನೆಗೆ ಸೇರಿಸಿಕೊಂಡಿದ್ದರು. ಮನೆಗೆ ಮರಳಿದ ಮೇಲೆಯೂ ಆ ಮುಗ್ಧ ಬಾಲಕಿಯ ಹತ್ಯೆಗೆ ಹೊಂಚು ಹಾಕಿಕೊಂಡೇ ಇದ್ದ.

ಆ ಕ್ಷಣಕ್ಕಾಗಿ ಕಾಯುತ್ತಿದ್ದ ಪಾತಕಿ

ಪಾಪಿ ಶಂಕರ್‌ ಹೇಗಾದರೂ ಚರ್ವಿತಳನ್ನು ಕೊಲ್ಲಲೇಬೇಕು ಎಂದು ನಿಶ್ಚಿಯಿಸಿದ್ದ. ಅದಕ್ಕಾಗಿ ನಿರಂತರವಾಗಿ ಹೊಂಚು ಹಾಕಿ ಕಾಯುತ್ತಿದ್ದ. ಮಂಗಳವಾರ ಸಂಜೆ ಅದಕ್ಕೆ ಸಮಯ ನಿಗದಿ ಮಾಡಿಕೊಂಡಿದ್ದ. ಬಾಲಕಿ ಮನೆಯ ಹತ್ತಿರದ ದೇವಸ್ಥಾನದ ಬಳಿ ಅಕ್ಕಪಕ್ಕದ ಮಕ್ಕಳ ಜತೆ ಅನಂದದಿಂದ ಆಟವಾಡುತ್ತಿತ್ತು. ಅವಳ ತಾಯಿ ಶಶಿಕಲಾ ಕೂಡ ಅಲ್ಲೇ ಏನೋ ಕೆಲಸ ಮಾಡಿಕೊಂಡಿದ್ದರು. ಅಷ್ಟರಲ್ಲಿ ಅಲ್ಲಿಗೆ ರಾಕ್ಷಸನಂತೆ ನುಗ್ಗಿಬಂದ ಶಂಕರ್‌, ಮಗುವನ್ನು ಹಿಡಿದು ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ ಚಾಕುವಿನಿಂದ ಕತ್ತುಕುಯ್ದಿದ್ದಾನೆ. ಏನು ನಡೆಯುತ್ತಿದೆ ಎನ್ನುವಷ್ಟರಲ್ಲಿ ಆ ಪಾಪಿ ಮಗುವನ್ನು ಬಲಿ ಪಡೆದು ಓಡಿಹೋದ. ಕಣ್ಣೆದುರೇ ನಡೆದ ಕೃತ್ಯವನ್ನು ಕಂಡ ಶಶಿಕಲಾ ಕುಸಿದುಬಿದ್ದರು. ಅದೆಲ್ಲವನ್ನು ಪ್ರತ್ಯಕ್ಷವಾಗಿ ನೋಡಿದ ಊರಿನ ಜನರೂ ತೀವ್ರ ಆಘಾತಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಧಾವಿಸಿ ಬರುವಷ್ಟರಲ್ಲಿ ಶಂಕರ ಆ ಚಾಕುವನ್ನು ಅಲ್ಲೇ ಬಿಸಾಡಿ ಓಡಿ ಹೋಗಿದ್ದಾನೆ.

ಘಟನೆ ನಡೆದಾಗ ಮಗುವಿನ ತಂದೆ ಕೃಷ್ಣಮೂರ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ʼನಿನ್ನ ತಮ್ಮನೇ ನಿನ್ನ ಮಗಳ ಕತ್ತು ಕುಯ್ದಿದ್ದಾನೆʼ ಎಂದು ಊರಿನವರೊಬ್ಬರು ಓಡಿಬಂದು ತಿಳಿಸಿದಾಗ ಕೃಷ್ಣಮೂರ್ತಿಯೂ ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಅಸುನೀಗಿತ್ತು.

ಕೃಷ್ಣಮೂರ್ತಿ, ಶಶಿಕಲಾ ಆಕ್ರಂದನ ಮುಗಿಲುಮುಟ್ಟಿದೆ. ಅವರ ಮನೆ ಮತ್ತು ಗ್ರಾಮದಲ್ಲಿ ಮೌನ ಆವರಿಸಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಊರಿನ ಜನರೇ ಮುಗ್ಧ ಮಗುವಿಗಾಗಿ ಕಣ್ಣೀರು ಹಾಕಿದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶಂಕರನ ಬಂಧನಕ್ಕೆ ಬಲೆ ಬೀಸಿದ್ದಾರೆ.

Tags: chikkaballapurcrimedisabled girlmurder
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಮುನಿರತ್ನ ಇಲ್ಲದೆ ಏಳು ಸಚಿವರು ಪ್ರಮಾಣ ಸ್ವೀಕರಿಸಿದ್ದೇನೋ ಸರಿ! ಆದರೆ, ನಾಗೇಶ್ ವಿಕೆಟ್ ಪತನವಾಗಿದ್ದೇಕೆ? ಅನ್ಯಾಯ ಆಗಿದ್ದು ಕೋಲಾರಕ್ಕೆ, ಖುಷಿಯಾಗಿದ್ದು ವಿರೋಧಿಗಳಿಗೆ

ಮುನಿರತ್ನ ಇಲ್ಲದೆ ಏಳು ಸಚಿವರು ಪ್ರಮಾಣ ಸ್ವೀಕರಿಸಿದ್ದೇನೋ ಸರಿ! ಆದರೆ, ನಾಗೇಶ್ ವಿಕೆಟ್ ಪತನವಾಗಿದ್ದೇಕೆ? ಅನ್ಯಾಯ ಆಗಿದ್ದು ಕೋಲಾರಕ್ಕೆ, ಖುಷಿಯಾಗಿದ್ದು ವಿರೋಧಿಗಳಿಗೆ

Leave a Reply Cancel reply

Your email address will not be published. Required fields are marked *

Recommended

30 ವರ್ಷಗಳ ಹಿಂದೆ ದಿವಂಗತ ಶಂಕರ್‌ ನಾಗ್‌ ಕಂಡ ಕನಸು ನನಸು;  ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ; ಒಂದು ವರ್ಷದಲ್ಲಿ ಯೋಜನೆ ಪೂರ್ಣ, ಆವಲಬೆಟ್ಟಕ್ಕೂ ರೋಪ್‌ ವೇ ಭಾಗ್ಯ

30 ವರ್ಷಗಳ ಹಿಂದೆ ದಿವಂಗತ ಶಂಕರ್‌ ನಾಗ್‌ ಕಂಡ ಕನಸು ನನಸು; ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ; ಒಂದು ವರ್ಷದಲ್ಲಿ ಯೋಜನೆ ಪೂರ್ಣ, ಆವಲಬೆಟ್ಟಕ್ಕೂ ರೋಪ್‌ ವೇ ಭಾಗ್ಯ

4 years ago
ನಂದಿಬೆಟ್ಟಕ್ಕೆ ರೋಪ್‌ ವೇ; ಒಂದು ತಿಂಗಳಲ್ಲೇ ಟೆಂಡರ್‌

ನಂದಿಬೆಟ್ಟಕ್ಕೆ ರೋಪ್‌ ವೇ; ಒಂದು ತಿಂಗಳಲ್ಲೇ ಟೆಂಡರ್‌

3 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ