• About
  • Advertise
  • Careers
  • Contact
Sunday, May 18, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕ-ಬುಕ್ಕರ ವಂಶಸ್ಥರು ಇನ್ನೂ ಇದ್ದಾರಾ? ಅಸಲಿಗೆ ಈ ಸಹೋದರರು ಯಾರು? ಇತಿಹಾಸ ಹೇಳಿದ್ದು ಸತ್ಯವೋ? ಅಸತ್ಯವೋ?

cknewsnow desk by cknewsnow desk
April 18, 2021
in GUEST COLUMN, STATE
Reading Time: 2 mins read
0
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕ-ಬುಕ್ಕರ ವಂಶಸ್ಥರು ಇನ್ನೂ ಇದ್ದಾರಾ? ಅಸಲಿಗೆ ಈ ಸಹೋದರರು ಯಾರು? ಇತಿಹಾಸ ಹೇಳಿದ್ದು ಸತ್ಯವೋ? ಅಸತ್ಯವೋ?
7.1k
VIEWS
FacebookTwitterWhatsuplinkedinEmail
ಇಂದು (ಏಪ್ರಿಲ್ 18) ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು. ಆದರೆ, ಎಲ್ಲರೂ ಚಕಿತರಾಗುವ ಪ್ರಶ್ನೆಯೊಂದು ಈಗ ಧುತ್ತನೆದ್ದು ಕೂತಿದೆ. ಅಸಲಿಗೆ ಈ ಹಕ್ಕ-ಬುಕ್ಕರು ಯಾರು? ಇವರು ವಾಲ್ಮೀಕಿ ವಂಶಸ್ಥರಾ? ಅಥವಾ… ಸಾಹಿತಿ-ಚಿಂತಕ ರಮೇಶ್‌ ಹಿರೇಜಂಬೂರು ಈವರೆಗಿನ ಚೆರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಇಂದು, ಅಂದರೆ ಏಪ್ರಿಲ್ 18 ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು.

ನಾಯಕ ಸಮುದಾಯದ ಮುಮ್ಮಡಿ ಸೀಗನಾಯಕ ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು ಬದುಕಿದ. ಅದಾದ ನಂತರ ಸೀಗನಾಯಕನ ಮಗ ಕಂಪಿಲರಾಯ ತಂದೆಯ ಸಾಮ್ರಾಜ್ಯದ ಜೊತೆಗೆ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಣೆ ಮಾಡಿದ. ಕಂಪಿಲರಾಯನ ಮಕ್ಕಳಾದ ಗಂಡುಗಲಿ ಕುಮಾರರಾಮ, ಮಾರೆವ್ವ ಮಹಾನ್ ಚತುರರು. ಗಂಡುಕಲಿ ಕುಮಾರರಾಮ ಕೂಡ ಇತಿಹಾಸದಲ್ಲಿ ತನ್ನದೇ ಆದ ಕದಂಬ ಬಾಹುಗಳನ್ನ ಚಾಚಿ ಅಜರಾಮರವಾಗುವಂತೆ ಮಾಡಿದವನು. ಇವರೆಲ್ಲರೂ ವಾಲ್ಮೀಕಿ ಕುಡಿಗಳೇ.

ಮತ್ತೊಂದು ಕಡೆ ಕುರಗೋಡು ವಂಶಸ್ಥರಾದ ಭೂತನಾಯಕ ಮತ್ತೊಂದು ಕಡೆ ಸಂಸ್ಥಾನವನ್ನು ನಿರ್ಮಾಣ ಮಾಡಿಕೊಂಡು ಬದುಕಿದವನು. ಆತನ ಮಗನೇ ಸಂಗಮ. ಈ ಸಂಗಮ ಗಂಡುಗಲಿ ಕುಮಾರರಾಮನ ಸೋದರಿ ಮಾರೆವ್ವಳನ್ನು ವಿವಾಹವಾಗುತ್ತಾನೆ. ಈ ದಂಪತಿಯ ಮಕ್ಕಳೇ ಹಕ್ಕ-ಬುಕ್ಕರು.

ಈ ಹಕ್ಕ-ಬುಕ್ಕರಿಬ್ಬರೂ ಮಹಾನ್ ಯುದ್ಧ ಚತುರರು. ಆ ಕಾರಣಕ್ಕೇ ಇವರಿಬ್ಬರೂ ತಮ್ಮದೇ ಆದ ಒಂದು ಹೊಸ ಸಾಮ್ರಾಜ್ಯ ನಿರ್ಮಾಣ ಆಡಬೇಕು ಎಂದು ತೀರ್ಮಾನಿಸುತ್ತಾರೆ. ಆಗ ಸೃಷ್ಟಿಯಾಗಿದ್ದೇ ವಿಜಯನಗರ ಸಂಸ್ಥಾನ. ಸಂಗಮನಂತೆಯೇ ಮಕ್ಕಳೂ ಕೂಡ ವೀರಾಧಿ ವೀರರು. ಹೀಗಾಗಿ ಸೋರರಿಬ್ಬರೂ ಸೇರಿ ಯುದ್ಧಕ್ಕೆ ನಿಂತರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ಅಂತಹ ವೀರರಿವರು. ಹೀಗಾಗಿಯೇ ವಿಜಯನಗರ ಸಂಸ್ಥಾನದ ಕುರುಹುಗಳು ಇಂದಿಗೂ ಸಾಕ್ಷಿಯಾಗಿ ನಿಂತಿರುವುದು.

ಹಕ್ಕರಾಯ, ಬುಕ್ಕರಾಯರ ಮೂಲವೇನು?

ಹಕ್ಕ-ಬುಕ್ಕರಿಬ್ಬರೂ ನಾಯಕ ಸಮುದಾಯದ ಅರಸರು. ಹರಿಹರ ರಾಯ, ಹಕ್ಕರಾಯ, ಬುಕ್ಕರಾಯ ಎಂದು ಹೆಸರು ಬರಲು ಬಹಳ ಪ್ರಮುಖ ಕಾರಣ ವಿಜಯನಗರ ಸಂಸ್ಥಾನದ ನಂತರ ತಮ್ಮ ರಾಜ್ಯಕ್ಕೆ ಒಬ್ಬ ಆದಿಶಕ್ತಿ ದೇವತೆಯನ್ನು ನಿರ್ಮಿಸಿ ಅವಳಿಗೆ ʼರಾಯಮ್ಮʼ ಎಂದು ಕರೆಯುತ್ತಾರೆ. ʼರಾಯʼ ಎಂದರೆ ರಾಜ ಎಂಬರ್ಥ, ಅಮ್ಮ ಎಂದರೆ ತಾಯಿ ಅಥವಾ ಮಾತೆ. ರಾಜಮಾತೆ ಎಂದು ಕರೆಯಲು ರಾಯಮ್ಮ ಎಂದು ತಮ್ಮ ರಾಜ್ಯದ ಅಧಿದೇವತೆಯನ್ನು ಸೃಷ್ಟಿಸುತ್ತಾರೆ. ಈಗ ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ನಾಯಕ ಸಮುದಾಯದ ಗುರುಗಳಾದ ತಿಪ್ಪೇಸ್ವಾಮಿ ಬಂದು ನೆಲೆಸಿದ ಕಾರಣಕ್ಕೆ ಅಥವಾ ಅವರನ್ನು ಎಲ್ಲರೂ ಒಟ್ಟುಗೂಡಿ ಆರಾಧಿಸುತ್ತಿರುವ ಕಾರಣಕ್ಕೆ ಈಗಲೂ ಅಲ್ಲಿ ಬಹುತೇಕ ಜನರಿಗೆ ನಾಯಕ ಸಮುದಾಯದಲ್ಲಿ ತಿಪ್ಪೇಸ್ವಾಮಿ ಎಂದೇ ಹೆಸರಿಡುತ್ತಾರೆ. ಹೀಗೆ ವಿಜಯನಗರ ಸಾಮ್ರಾಜ್ಯದಲ್ಲಿ ರಾಯಮ್ಮ ದೇವಿಯ ಪೂಜನೀಯ ಕಾರಣಕ್ಕಾಗಿ ಹಕ್ಕರಾಯ, ಬುಕ್ಕರಾಯ ಎಂದು ಮರುನಾಮಕರಣ ಮಾಡಿಕೊಂಡರು. ಜತೆಗೆ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರ ಮನೆ ದೇವರು ದಾರಮಾದಲಿಂಗೇಶ್ವರಸ್ವಾಮಿ.

ಹೀಗಾಗಿ ಮುಂದೆ ಅನೇಕ ದೇವತೆಗಳು ಸ್ವಾಮಿ ಎಂಬ ಹೆಸರಿನಲ್ಲೇ ಕೊನೆಗಾಣುವ ರೀತಿಯಲ್ಲಿ ಅನೇಕ ದೇವರು, ದೇವತೆಗಳನ್ನು ಸೃಷ್ಟಿ ಮಾಡಲಾಗಿದೆ. ದಾರಮಾದಲಿಂಗೇಶ್ವರಸ್ವಾಮಿ ದೇಗುಲ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಲಿಕುಂಟೆ ಬಳಿ ಇದೆ. ಅದರ ಜೀರ್ಣೋದ್ದಾರಕ್ಕಾಗಿ ಹಾಗೂ ಈಗಾಗಲೇ ಹುಲಿಕುಂಟೆಯಲ್ಲಿ ಸಿಕ್ಕಿರುವ ಶಿಲಾಶಾಸನದ ಪ್ರಕಾರ ಹಕ್ಕಬುಕ್ಕರಿಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಲಿಕುಂಟೆಗೂ ಸಂಬಂಧ ಇದೆ. ಕೊನೆಯದಾಗಿ ಹಕ್ಕ-ಬುಕ್ಕರ ವಂಶಸ್ಥರು ತಮ್ಮ ಮನೆ ದೇವರು ದಾರಮಾದಲಿಂಗೇಶ್ವರಸ್ವಾಮಿ ಸನ್ನಿಧಿಯ ಬಳಿ ಬಂದು ಕೆಲಸಿದ್ದಕ್ಕೆ ಇನ್ನೂ ಕುರುಹುಗಳಿದ್ದು, ಅವುಗಳ ಉತ್ಕನನವಾಗಬೇಕಿದೆ. ಅದನ್ನೇ ಉದ್ದೇಶವಾಗಿಟ್ಟುಕೊಂಡು ಹುಲಿಕುಂಟೆ ಗ್ರಾಮಸ್ಥರು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಸರಕಾರ ಅದರ ಅಧ್ಯಯನ ನಡೆಸಲು ಅನುವು ಮಾಡಿಕೊಡಬೇಕಿದೆ.

ಇದರ ನಡುವೆ ಹಕ್ಕ-ಬುಕ್ಕರು ಕುರುಬ ಸಮುದಾಯದವರು ಎಂದು ವದಂತಿ ಹಬ್ಬಿಸಿ, ಹತ್ತು ಸುಳ್ಳುಗಳನ್ನು ಹೆಣೆದು ಸತ್ಯ ಮಾಡುವ ಹುನ್ನಾರಗಳು ನಡೆಯುತ್ತಿವೆ. ಆದರೆ ಅದು ಅತಿರೇಕದ ಪರಮಾವಧಿಯೇ ಹೊರತು, ಸತ್ಯವಾಗುವುದಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಹಕ್ಕ-ಬುಕ್ಕರು ಕೇವಲ ನಾಯಕ ಸಮುದಾಯಕ್ಕೆ ಮಾತ್ರ ಸೀಮಿತವಾಗಿ ಎಂದೂ ಕೆಲಸ ಮಾಡಿದವರಲ್ಲ.

ರಾಜರಾದವರು ಜಾತಿ ನೋಡಿಕೊಂಡು ರಾಜ್ಯಭಾರ ಮಾಡಿದವರಲ್ಲ. ಆದರೆ ಇಂದು ಕೆಲವರು ಹಕ್ಕ-ಬುಕ್ಕರ ಇತಿಹಾಸವನ್ನೇ ತಿರುಚಿ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದುರ ಜೊತೆಗೆ ಅದನ್ನು ತಮಗೆ ಹೇಗೆ ಬೇಕೋ ಹಾಗೆ ಇತಿಹಾಸ ಬದಲಿಸುವ ಪ್ರಯತ್ನ ನಡೆಸುತ್ತಿರುವುದು ತೀರಾ ದುರ್ದೈವದ ಸಂಗತಿ. ಹೀಗಾಗಿಯೇ ಈಗ ಹಕ್ಕ-ಬುಕ್ಕರು, ಅವರ ವಂಶಜರು ನಾಯಕ ಅಥವಾ ವಾಲ್ಮೀಕಿ ಸಮುದಾಯದವರು ಎಂದು ಒತ್ತಿ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ.

ಜಾತಿಯಿಂದ ಯಾವ ಮಹಾಪುರುಷರನ್ನೂ ಅಳೆಯಬಾರದು. ಅದರೆ ಇತಿಹಾಸವನ್ನೇ ತಮಗೆ ಹೇಗೆ ಬೇಕೋ ಹಾಗೆ ತಿರುಚುವ ಕಾಲ ಸೃಷ್ಟಿಯಾದಾಗ ಸತ್ಯ ಬಾಯಿ ಬಿಡದೇ ಹೋದರೆ ತಪ್ಪಾಗುತ್ತದೆ.

ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಮಾತಿದೆ. ಅದು ಸತ್ಯ ಕೂಡ. ಹಿಂದೆ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿ ಎಂದರೆ ದೂರ ನಿಲ್ಲುತ್ತಿದ್ದವರೆಲ್ಲ ಈಗ ನಮ್ಮನ್ನೂ ಪರಿಶಿಷ್ಟ ವರ್ಗಕ್ಕೆ ಸೇರಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅದರೆ ಜತೆಗೆ ತಮಗೆ ಅನುಕೂಲವಾಗುವಂತೆ ಇತಿಹಾಸವನ್ನೂ ತಿರುಚಿ ಹೇಳುತ್ತಿದ್ದಾರೆ. ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಸತ್ಯವಾಗದು. ಸತ್ಯಕ್ಕೆ ಎಂದೂ ಸಾವಿಲ್ಲ. ಅದನ್ನು ಅರಿಯದ ಕೆಲ ಮನಸ್ಸುಗಳು ಈ ರೀತಿಯ ಹುನ್ನಾರ ಮಾಡುತ್ತಿವೆ. ಆದರೆ ಇಂದು ನಾಯಕ ಸಮುದಾಯ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಡೀ ರಾಜ್ಯಾದ್ಯಂತ ನಾಯಕ ಸಮುದಾಯದ ಹಿರಿಯರಾದ ಹಕ್ಕ-ಬುಕ್ಕರು ನಿರ್ಮಾಣ ಮಾಡಿದ ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಆಚರಿಸುತ್ತಿದ್ದಾರೆ.

****

ರಮೇಶ್ ಹಿರೇಜಂಬೂರು
  • ಪ್ರತಿಭಾವಂತ ಪತ್ರಕರ್ತ, ಲೇಖಕ. ನಾಡಿನ ಪ್ರಮುಖ ಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಫೊಟೋಗ್ರಫಿಯಲ್ಲೂ ಆಸಕ್ತರು. ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.

ಪ್ರಿಯ ಓದುರಗೇ ಗಮನಿಸಿ..
ಗೆಸ್ಟ್‌ ಕಾಲಂಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಉತ್ತರದಾಯಿಗಳು. ಆಸಕ್ತಿ ಇದ್ದರೆ ತಾವೂ ಪ್ರತಿಕ್ರಿಯೆ ವ್ಯಕ್ತಪಡಿಸಬಹುದು. ಐತಿಹಾಸಿಕ ದಾಖಲೆಗಳಿದ್ದರೆ ಅವುಗಳೊಂದಿಗೆ ಈ ಲೇಖನದ ಬಗ್ಗೆ ಚರ್ಚಿಸಬಹುದು. ಅಭಿಪ್ರಾಯಗಳಿಗೆ ಸ್ವಾಗತ. ಆರೋಗ್ಯಕರ ಹಾಗೂ ಉಪಯುಕ್ತ ಸಂವಾದವನ್ನು ಸಿಕೆನ್ಯೂಸ್‌ ನೌ ಗೌರವಿಸುತ್ತದೆ.
–ಸಂಪಾದಕ 

ಲೀಡ್‌ ಚಿತ್ರದ ಕೃಪೆ: ಜಿ.ಕೆ.ಸತ್ಯ ಮತ್ತು ರಾಷ್ಟ್ರೋತ್ಥಾನ ಪರಿಷತ್
Tags: 1336bukkahakkakarnataka historysri krishnadevarayathe vijayanagar empirevijayanagara
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಸಿದ್ದರಾಮಯ್ಯ v/s ಸರಕಾರ; ಕೋವಿಡ್ ನಡುವೆ ಸಖತ್ ಪಾಲಿಟಿಕ್ಸ್

ಬೆಂಗಳೂರು ಪರಿಸ್ಥಿತಿ ಕೈಮೀರುತ್ತಿದೆ ಎಂದು ಒಪ್ಪಿಕೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್;‌ ಸಮಾಧಾನಕರ ಸಂಗತಿ ಎಂದರೆ, ರೆಮೆಡಿಸಿವಿರ್ & ಆಕ್ಸಿಜನ್ ಕೊರತೆ ಇಲ್ಲವಂತೆ!!

Leave a Reply Cancel reply

Your email address will not be published. Required fields are marked *

Recommended

ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ

ಜಲ ಸಂಪನ್ಮೂಲದ ಸಿಕ್ಕು ಬಿಡಿಸಿ ಖಾತೆ ಹಂಚಿದ ಬೊಮ್ಮಾಯಿ

4 years ago
ಕಂಬ ಹತ್ತಿದ ದೋಸ್ತ್‌ʼಗೆ ಏಣಿಯಾದ ಜೀವದ ಗೆಳೆಯ; ಕರ್ತವ್ಯನಿಷ್ಠೆಗೆ ಹೊಸಬಾಷ್ಯ ಬರೆದ ಬಾಗೇಪಲ್ಲಿ ಬೆಸ್ಕಾಂ‌ ಬಾಯ್ಸ್ !!

ಕಂಬ ಹತ್ತಿದ ದೋಸ್ತ್‌ʼಗೆ ಏಣಿಯಾದ ಜೀವದ ಗೆಳೆಯ; ಕರ್ತವ್ಯನಿಷ್ಠೆಗೆ ಹೊಸಬಾಷ್ಯ ಬರೆದ ಬಾಗೇಪಲ್ಲಿ ಬೆಸ್ಕಾಂ‌ ಬಾಯ್ಸ್ !!

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ