• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಬೆರಗು ಮೂಡಿಸುವ ಗೀಜಗನ ಕುಶಲತೆ & ಎಂಜಿನಿಯರಿಂಗ್

cknewsnow desk by cknewsnow desk
August 7, 2021
in CKPLUS, STATE
Reading Time: 2 mins read
0
ಬೆರಗು ಮೂಡಿಸುವ ಗೀಜಗನ ಕುಶಲತೆ & ಎಂಜಿನಿಯರಿಂಗ್

CkPhotography ಸಿಕೆಪಿ @ckphotographi

1.1k
VIEWS
FacebookTwitterWhatsuplinkedinEmail

ನಮ್ಮ ಸುತ್ತಮುತ್ತ ಹಾರಾಡಿಕೊಂಡು ಥೇಟ್‌ ಮನುಷ್ಯನಂತೆ ಬಾಳಿ ಬದುಕುವ ಗೀಜಗ ಹಕ್ಕಿಗಳನ್ನು ನೋಡುವುದೇ ಒಂದು ಆನಂದ. ಸಂಕುಲದಲ್ಲಿ ಹಕ್ಕಿಯಾದರೂ ಆ ಪಕ್ಷಿಗಿರುವ ಸಮಯಸ್ಫೂರ್ತಿ, ಬುದ್ಧಿವಂತಿಕೆ, ಬದ್ಧತೆ, ಪ್ರೀತಿ, ಅಚಲತೆ ಅವರ್ಣನೀಯ. ಓ ಪಕ್ಷಿಯ ಸುತ್ತ ಒಂದು ಲೇಖನ ಇಲ್ಲಿದೆ. ಇದು ವಾರಾಂತ್ಯದ ವಿಶೇಷ..

‌

by DG Pavan Kalyan Devikunte

ಪಕ್ಷಿ ಸಂಕುಲ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರಕೃತಿಯಲ್ಲಿ ಅನೇಕ ಬಗೆಯ ಹಕ್ಕಿಗಳನ್ನು ನೋಡಬಹುದು. ಈ ಎಲ್ಲಾ ಹಕ್ಕಿಗಳ ಪೈಕಿ ವಿಭಿನ್ನ ಲೈಫ್‌ ಸ್ಟೈಲ್‌ ಮತ್ತು ವೈವಿಧ್ಯಮಯ, ಬುದ್ಧಿವಂತಿಕೆಯ ಲಕ್ಷಣ ಹೊಂದಿರುವ ಹಕ್ಕಿ ಎಂದರೆ ಗೀಜಗ.

ಮುಂಗಾರು ಸಮಯದಲ್ಲಿ ಹೆಚ್ಚಾಗಿ ಗೀಜಗ ಹಕ್ಕಿಗಳು ಕಾಣಿಸಿಕೊಳ್ಳುತ್ತವೆ. ಹೊಲಗಳಲ್ಲಿ ಫಸಲು ತುಂಬಿರುವ ಸಮಯದಲ್ಲಿ ಅವು ಗೂಡು ಕಟ್ಟುವುದು ಸಾಮಾನ್ಯ. ಗುಂಪು ಹಾರುತ್ತಾ, ಹೊಲಗಳ ಬದುಗಳ ಮೇಲೆ ಸಾಲಾಗಿ ಕೂತು ಪಕ್ಷಿ ಪ್ರೇಮಿಗಳನ್ನು ಪುಳಕಗೊಳಿಸುತ್ತವೆ.

  • CkPhotography ಸಿಕೆಪಿ @ckphotographi

ಗೀಜಗ ಗೂಡು ಬಗೆ ಗೊತ್ತಾ?

ಮೊದಲು ಗಂಡು ಗೀಜಗ ಗೂಡು ಕಟ್ಟಲು ಪ್ರಾರಂಭಿಸುತ್ತದೆ. ತದ ನಂತರ ಮನುಷ್ಯರಂತೆ ಜೋಡಿ ಗೀಜಗ ಹಕ್ಕಿಗಳ ನಡುವೆಯೇ ಒಪ್ಪಂದಗಳಿರುತ್ತವೆ. ಆ ಒಪ್ಪಂದಗಳೇ ರೋಮಾಂಚಕ ಮತ್ತು ಕುತೂಹಲಕಾರಿ ಎಂದು ಆ ಪಕ್ಷಿಗಳನ್ನು ಬಾಲ್ಯದಿಂದ ನೋಡುತ್ತಾ ಬಂದಿರುವ ಹಳ್ಳಿಗಳ ಹಿರಿಯರು ಹೇಳುತ್ತಾರೆ.

ಗಂಡು ಗೀಜಗ ತಾನು ಕಟ್ಟಿದ ಅರ್ಧಗೂಡನ್ನು ಹೆಣ್ಣು ಗೀಜುಗಕ್ಕೆ ತೋರಿಸುತ್ತದೆ. ಅದು ಒಪ್ಪಿದರೆ ಆ ಗೂಡನ್ನು ಪೂರ್ಣಗೊಳಿಸುತ್ತದೆ. ಹೆಣ್ಣು ಗೀಜಗ ಮೊಟ್ಟೆ, ಮರಿಗಳ ಯೋಗ-ಕ್ಷೇಮ ನೋಡಿಕೊಂಡು ಗೂಡಿನಲ್ಲಿದ್ದರೆ, ಗಂಡು ಗೀಜುಗ ಆಹಾರ ಹುಡುಕಿ ತಂದು ಹೆಣ್ಣು ಗೀಜುಗ, ಪುಟಾಣಿ ಗೀಜುಗವನ್ನು ಪೋಷಿಸುತ್ತದೆ. ಥೇಟ್‌ ಗಂಡ-ಹೆಂಡತಿ ಸಂಸಾರದಂತೆ ಗೀಜಗ ಸಂಸಾರವೂ ಸಾಗುತ್ತದೆ.

ಇನ್ನು ಗಂಡು ಗೀಜಗ ಗೂಡು ಕಟ್ಟುವಾಗ ಕಠಿಣ ಪರಿಶ್ರಮದಿಂದ ದಿನಕ್ಕೆ ನೂರಾರು ಸಲ ಕಡ್ಡಿಗಳು, ಹುಲ್ಲನ್ನು ಹೊಲ ಗದ್ದೆಗಳಿಂದ ಹೆಕ್ಕಿ ತಂದು ಗೂಡು ಕಟ್ಟುತ್ತದೆ.

ಗೂಡು ಕಟ್ಟಲು ಗೀಜಗ ಸಾಮಾನ್ಯವಾಗಿ ಉದ್ದನೆಯ ಹುಲ್ಲು, ತೆಂಗಿನ ನಾರು, ರಾಗಿ ಹುಲ್ಲು, ಜೋಳದ ಹೊಲದಲ್ಲಿ ತನ್ನ ಕೊಕ್ಕಿನ ಸಹಾಯದಿಂದ ತಂದು ಗೂಡನ್ನು ಕಟ್ಟುತ್ತದೆ. ನಾವು ಮನೆ ಕಟ್ಟುವಾಗ ಒಂದೊಂದೇ ಇಟ್ಟಿಗೆಯನ್ನು ಪೇರಿಸಿದಂತೆ ಗೀಜಗ ಕೂಡ ಅದೇ ರೀತಿಯಲ್ಲಿ ತನ್ನ ಗೂಡನ್ನು ಹಂತ ಹಂತವಾಗಿ ನಾಜೂಕಾಗಿ ಕಟ್ಟುತ್ತಾ ಹೋಗುತ್ತದೆ.

ವಿಶೇಷವೆಂದರೆ; ಗೀಜಗ ತನ್ನ ಗೂಡನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟುತ್ತದೆ. ಕೆರೆಯ ನೀರಿನೆಡೆಗೆ ಬಾಗಿರುವ ಜಾಲಿ ಮರ, ಪಾಳು ಬಿದ್ದಿರುವ ಬಾವಿ, ಕುಂಟೆ, ಬಾವಿ, ನದಿ, ದೊಡ್ಡ ಕಾಲುವೆ ಮತ್ತಿತರೆ ದಡಗಳಲ್ಲಿರುವ ಬೇವಿನ ಮರ, ಈಚಲ ಮರ, ಹೊಂಗೆ ಮರ, ಜಾಲಿ ಮರ ಮತ್ತಿತರೆ ಮರಗಳ ಕೊಂಬೆ ಅಂಚಿನ ರೆಂಬೆಗಳಿಗೆ ಗೂಡು ಹೆಣಿಯುತ್ತದೆ.

  • ಬಾಗೇಪಲ್ಲಿ ದೇವಿಕುಂಟೆ ಈಚಲು ಮರದಲ್ಲಿ ಗೀಜಗ ಗೂಡುಗಳು.

ರೆಂಬೆಯ ಕೊನೆಯಂಚಿನಲ್ಲಿ ಗೀಜಗ ಗೂಡು ಕಟ್ಟಲು ಕಾರಣ ಏನೂ ಅಂತೀರಾ? ಗರುಡ, ಅಳಿಲು, ಮುಂಗುಸಿ, ಹಾವು ಆಕ್ರಮಣಕಾರಿ ಪ್ರಾಣಿಗಳ ಕೈಗೆಟುಕದಿರಲಿ ಎಂದು ಅಂಥ ಕಡೆ ಗೂಡು ಕಟ್ಟಿಕೊಳ್ಳುತ್ತದೆ. ಇದು ಗೀಜಗನ ಕುಶಲತೆ, ಬುದ್ದಿವಂತಿಕೆಗೆ ಸಾಕ್ಷಿ. ಈ ಹಕ್ಕಿಯನ್ನು ಯಾವುದೇ ಡಿಗ್ರಿ ಪಡೆಯದ ನೇಕಾರ ಅಥವಾ ಎಂಜಿನಿಯರ್ ಎಂದು ಜನರು ಅಕ್ಕರೆಯಿಂದ ಕರೆಯುತ್ತಾರೆ.

ಗೀಜಗ ಗುಂಪು ಜೀವಿ. ದವಸ ಧಾನ್ಯಗಳ ತೋಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ಪ್ರಕೃತಿಯಲ್ಲಿ ಸ್ವತಂತ್ರ್ಯವಾಗಿ ಹಾರಾಡುವ ಹಕ್ಕಿ. ತನ್ನದೇ ಆದ ವಿಶಿಷ್ಟ್ಯತೆಯನ್ನು ಹೊಂದಿದೆ.

ಅಂದಹಾಗೆ, ಗೀಜುಗ ಸಂಕುಲದಲ್ಲಿ ಮೂರು ಉಪ ಜಾತಿಗಳು ಇವೆ. ಮುಖ್ಯವಾಗಿ ಹಳದಿ ಬಣ್ಣದ ಗುಬ್ಬಚ್ಚಿ ರೀತಿಯ ಕಪ್ಪು ಮಚ್ಚೆಗಳು ಇರುವ ಗೀಜಗ. ಕಡುಕಪ್ಪು ಬಣ್ಣದ ಕೊಕ್ಕೆಯನ್ನು ಹೊಂದಿರುವ ಗೀಜಗವೂ ಇದೆ. ಗೀಜುಗ ಹಕ್ಕಿಗಳು ಹೆಚ್ಚಾಗಿ ಭಾರತ, ಬರ್ಮಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳ ಬಯಲು ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಈ ಹಕ್ಕಿಯ ಆಹಾರವು ಸಾಮಾನ್ಯವಾಗಿ ಚಿಕ್ಕ ಕ್ರಿಮಿ ಕೀಟಗಳು, ದವಸ ಧಾನ್ಯ.

ಗೀಜಗವು ಹೊಲಗಳಲ್ಲಿ ಭತ್ತ, ಮೆಕ್ಕೆ, ಜೋಳ, ಸಜ್ಜೆ, ರಾಗಿ ಬೆಳೆ ಕಟಾವಿನ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಗೀಜಗಗಳು ಹಿಂಡು ಹಿಂಡಾಗಿ ಬೆಳೆಗಳಲ್ಲಿ ಕೂತಿರುತ್ತವೆ.

ರೈತರ ಜಮೀನಿನಲ್ಲಿರುವ ಮರ, ಗಿಡ, ಪೊದೆಗಳಲ್ಲಿ ರಾತ್ರಿ ವೇಳೆ ಒಂದೇ ಮರದಲ್ಲಿ ನೂರಾರು ಗೀಜಗಗಳು ಒಂದೇ ಕಡೆ ಮಲಗುತ್ತವೆ. ಗೀಜಗನ ಹಕ್ಕಿ ಬದುಕು ಒಂದು ಅದ್ಭುತ.


ಡಿ.ಜಿ ಪವನ್ ಕಲ್ಯಾಣ್

  • ಓದಿದ್ದು ಇಂಗ್ಲೀಷ್‌ ಲಿಟರೇಚರ್.‌ ಆಸಕ್ತಿ ಇತಿಹಾಸ ಮತ್ತು ಪ್ರವೃತ್ತಿ ಇತಿಹಾಸ ಸಂಶೋಧನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐತಿಹಾಸಿಕ ತಾಣಗಳ ಬಗ್ಗೆ ಅತೀವ ಆಸಕ್ತಿ. ದೇವಿಕುಂಟೆ, ಗುಮ್ಮನಾಯಕನ ಪಾಳ್ಯ ಕೋಟೆಗಳ ಕುರಿತು ಆಳ ಶೋಧ ಮಾಡುತ್ತಿರುವ ಲೇಖಕರು, ರಾಜ್ಯದ ಗಡಿಭಾಗವನ್ನು ಆಳಿದ ವಿವಿಧ ಪಾಳೇಯಗಾರರ ಆಡಳಿತದ ಮೇಲೆ ಬೆಳಕು ಚೆಲುವ ಕೆಲಸ ಮಾಡುತ್ತಿದ್ದಾರೆ.
Tags: Baya weaverbirdsgeejugaKarnataka birdsnaturephilippinusvillages
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ದೇವರ ಹೆಸರಿನಲ್ಲಿ ಬೊಮ್ಮಾಯಿ ಪ್ರಮಾಣ

ಜಲ ಸಂಪನ್ಮೂಲದ ಸಿಕ್ಕು ಬಿಡಿಸಿ ಖಾತೆ ಹಂಚಿದ ಬೊಮ್ಮಾಯಿ

Leave a Reply Cancel reply

Your email address will not be published. Required fields are marked *

Recommended

ಬಾಗೇಪಲ್ಲಿಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಸಕ್ಸಸ್;‌ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನಜೀವನ ಬಹತೇಕ ಸ್ತಬ್ಧ

ಇವತ್ತು ಸೂರ್ಯೋದಯದಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 4 ದಿನ ಫುಲ್‌ ಲಾಕ್‌ಡೌನ್;‌ ಆಂಧ್ರ ಪ್ರದೇಶದವರಿಗೆ ಅವಕಾಶ ಇಲ್ಲ & ಕೋಲಾರ, ಬೆಂಗಳೂರು ಸೇರಿ ಹೊರಗಿನವರಿಗೆ ನೋ ಎಂಟ್ರಿ

4 years ago
ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ  ಮೇಲೆ ಏಕಕಾಲಕ್ಕೆ ದಾಳಿ

ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ