• About
  • Advertise
  • Careers
  • Contact
Friday, May 1, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS NATION

ನೀರಾವರಿ ಟೆಂಡರ್‌ ಮೊತ್ತ 20,000 ಕೋಟಿ ಅಲ್ಲ! 21,764 ಕೋಟಿ ರೂ. ಅಂತೆ!? ಹಾಗಾದರೆ ಟೋಟಲ್‌ ಕಮೀಷನ್‌ ಲೆಕ್ಕ ಎಷ್ಟು?

cknewsnow desk by cknewsnow desk
June 18, 2021
in NATION, POLITICS, STATE
Reading Time: 2 mins read
1
ಹೊಸ ಅಪಾಯದ ಬಗ್ಗೆ ಆಲೋಚಿಸೋಣ: ಓಲ್ಡ್‌ ಸಿಟಿಯ ಓವೈಸಿಗಳು ವ್ಯಾಪಕವಾಗಿ ವ್ಯಾಪಿಸುತ್ತಿದ್ದಾರೆ, ಹುಷಾರಾಗದಿದ್ದರೆ ಉಸಿರಾಡುವುದೂ ಕಷ್ಟ
921
VIEWS
FacebookTwitterWhatsuplinkedinEmail

ಒಳಗೆ ಅರುಣ್‌ ಸಿಂಗ್‌ ರಾಯಭಾರ; ಹೊರಗೆ ರಾಜ್ಯವನ್ನು ಬೆಚ್ಚಿಬೀಳಿಸಿದ ಟೆಂಡರ್‌ ಲೆಕ್ಕಾಚಾರ

  • ಬಿ.ವೈ.ವಿಜಯೇಂದ್ರ

ಬೆಂಗಳೂರು: ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರವ ಜಗಳ ಒಂದೆಡೆಯಾದರೆ, ಹೆಚ್.ವಿಶ್ವನಾಥ್‌ ಸಿಡಿಸಿರುವ ʼನೀರಾವರಿ ಟೆಂಡರ್‌ ಬಾಂಬ್‌ʼ ಇನ್ನೊಂದೆಡೆ ರಾಜ್ಯವನ್ನು ಬೆಚ್ಚಿ ಬೀಳೀಸಿದೆ.

ಗುರುವಾರವೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಮಾಡಿದ್ದ ಆರೋಪಗಳನ್ನು ಶುಕ್ರವಾರವೂ ಪುನರುಚ್ಛರಿಸಿದ ವಿಶ್ವನಾಥ್‌, ಕಾವೇರಿ ನೀರಾವರಿ ನಿಗಮ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಹಣಕಾಸು ಇಲಾಖೆ ಕ್ಲಿಯೆರೆನ್ಸ್‌ ಇಲ್ಲದೆ, ಬೋರ್ಡ್‌ ಮೀಟಿಂಗ್‌ಗಳನ್ನೂ ನಡೆಸದೇ ವಿಜಯೇಂದ್ರ ಸೂಚನೆ ಮೇರೆಗೆ 20,000 ಕೋಟಿ ರೂ. ಟೆಂಡರ್‌ ಅಂತಿಮಗೊಳಿಸಲಾಗಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಕಿಕ್‌ಬ್ಯಾಕ್‌ ವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಈ ಟೆಂಡರ್‌ಗಳಿಗೆ ಸಂಬಂಧಿಸಿದ ಕೆಲ ಮಹತ್ತ್ವದ ದಾಖಲೆಗಳನ್ನು ಮಾಧ್ಯಮಗಳ ಮುಂದೆ ವಿಶ್ವನಾಥ್‌ ಪ್ರದರ್ಶಿಸಿದಸಿ, ʼಇದು ಕಾಂಟ್ರಾಕ್ಸರ್‌ಗಳ ಸರಕಾರʼ (ಗುತ್ತಿಗೆದಾರರ ಸರಕಾರ) ಎಂದು ನೇರವಾಗಿ ಆರೋಪಿಸಿದರು. ಈ ಆರೋಪ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಕಾಂಗ್ರೆಸ್‌ ಹೇಳಿದ ಹೊಸ ಫಿಗರ್!!

ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್‌ ಪಕ್ಷ, ಆ ಟೆಂಡರ್‌ ಮೊತ್ತ 20,000 ಕೋಟಿ ರೂ.ಗಳಲ್ಲ, 21,764 ಕೋಟಿ ರೂ. ಟೆಂಡರ್‌ ಅದು ಎಂದಿದೆ. ಅಂದರೆ, ವಿಶ್ವನಾಥ್‌ ಹೇಳಿದ್ದಕ್ಕಿಂತ 1,764 ಕೋಟಿ ರೂ. ಹೆಚ್ಚು ಎಂದು ಹೊಸ ಅಂಕಿ-ಅಂಶ ನೀಡಿದೆ. ವಿಶ್ವನಾಥ್‌ ದೂರಿರುವಂತೆ 10% ಕಮೀಷನ್‌ ಎಂದರೂ 2,100 ಕೋಟಿ ರೂ.ಗಳಿಗೂ ಹೆಚ್ಚು ಬರೀ ಕಮೀಷನ್‌ ಲೆಕ್ಕವೇ ಆಗುತ್ತದೆ ಎಂದು ಕೈ ಪಾಳೆಯ ಆರೋಪ ಮಾಡಿದೆ. ಬಿಜೆಪಿಗೆ ಇದೊಂದು ದೊಡ್ಡ ಆಘಾತ ಮಾತ್ರವಲ್ಲದೆ, ಈ ಕಿಕ್‌ಬ್ಯಾಕ್‌ ಪಾಲು ಹೈಕಮಾಂಡ್‌ಗೂ ಹೋಗುತ್ತಿದೆ ಎಂದು ಕೆಲವರು ಬಿಜೆಪಿಗರೇ ಹೇಳಿಕೊಂಡು ಓಡಾಡುತ್ತಿದ್ದಾರೆಂದು ವಿಶ್ವನಾಥ್‌ ಮಾಡಿರುವ ಆಪಾದನೆಯನ್ನು ಕಾಂಗ್ರೆಸ್‌ ಬೊಟ್ಟು ಮಾಡಿ ತೋರಿಸಿದೆ.

  • ಹೆಚ್.ವಿಶ್ವನಾಥ್‌

ವಿಶ್ವನಾಥ್‌ ಹೇಳಿದ್ದೇನು?

“ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ಕುಟುಂಬ, ಮಕ್ಕಳ ಕಾರಣದಿಂದ ಜೈಲಿಗೆ ಹೋಗಿದ್ದರು. ಈಗ ಮತ್ತೆ ಅದೇ ಪುನರಾವರ್ತನೆ ಆಗಬಾರದು ಎಂಬ ಸದುದ್ದೇಶದಿಂದ ಈ ಮಾತು ಹೇಳುತ್ತಿದ್ದೇನೆ” ಎಂದು ವಿಶ್ವನಾಥ್‌ ಮಾಧ್ಯಮಗಳ ಮುಂದೆ ಹೇಳಿಕೊಂಡರು.

“ಪಕ್ಷದಲ್ಲಿರುವ ನಿಯಮದಂತೆ 75 ವರ್ಷ ವಯಸ್ಸು ಮೀರಿದವರು ಅಧಿಕಾರ ತ್ಯಜಿಸಬೇಕು. ಯಡಿಯೂರಪ್ಪ ಅವರಿಗೆ ಮಾತ್ರ ಎರಡು ವರ್ಷ ವಿನಾಯಿತಿ ನೀಡಲಾಗಿತ್ತು. ಆದರೆ, ಅವರಿಗೆ ಈಗ ವಯಸ್ಸು ಆಗಿರುವುದರ ಜತೆಗೆ, ತೀರಾ ಬಳಕೆ, ಅನಾರೋಗ್ಯ ಕಾಡುತ್ತಿದೆ. ಕೋವಿಡ್‌ ಸೇರಿ ರಾಜ್ಯವು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಹೀಗಾಗಿ ಯಡಿಯೂರಪ್ಪ ಜಾಗಕ್ಕೆ ಅದೇ ಸಮುದಾಯದ ಇನ್ನೊಬ್ಬರನ್ನು ವರಿಷ್ಠರು ತರಲಿ ಎಂದಷ್ಟೇ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? 80% ಶಾಸಕರು ಯಡಿಯೂರಪ್ಪ ಬದಲಾಗಬೇಕು ಎಂದು ಅರುಣ್‌ ಸಿಂಗ್‌ ಮುಂದೆ ಹೇಳಿದ್ದಾರೆ. ಆದರೆ ಅವರು ಹೊರಗೆ ಹಾಗೆ ಹೇಳಲು ಅವರಿಗೆ ಧೈರ್ಯವಿಲ್ಲʼ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ಪಕ್ಷದ ಇನ್ನಿಬ್ಬರು ಬಿಜೆಪಿ ಶಾಸಕರು ವಿಶ್ವನಾಥ್‌ ವಿರುದ್ಧ ಬೀದಿಜಗಳಕ್ಕೆ ನಿಂತಿದ್ದರಿಂದ ಬಿಜೆಪಿ ಪ್ರತಿಷ್ಠೆ ಬೀದಿ ಪಾಲಾಗಿದೆ. ವಿಚಿತ್ರವೆಂದರೆ, ಅರುಣ್‌ ಸಿಂಗ್‌ ಬಂದ ಮೇಲೆ ಪಕ್ಷದ ಬಿಕ್ಕಟ್ಟು ಶಮನವಾಗುವುದರ ಬದಲು ಮತ್ತೂ ಬಿಗಡಾಯಿಸಿದೆ.

ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಕೂತು ಅರುಣ್‌ ಸಿಂಗ್‌ ಅವರು ಶುಕ್ರವಾರವೂ ನಾಯಕರ ಜತೆ ಮಾತುಕತೆ ನಡೆಸಿ ಬಿಕ್ಕಟ್ಟಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದರೆ, ಹೊರಗೆ ‌ವಿಶ್ವನಾಥ್ ಇಷ್ಟೆಲ್ಲ ಬಾಂಬ್‌ಗಳನ್ನು ಸಿಡಿಸಿದರು. ಶಾಸಕರಾದ ರೇಣುಕಾಚಾರ್ಯ, ಹರತಾಳು ಹಾಲಪ್ಪ ಮುಂತಾದವರು ಅಡಗೂರು ವಿರುದ್ಧ ಮಾತಿನ ಯುದ್ಧಕ್ಕೆ ನಿಂತರು.

ಯಾರೂ ಬಹಿರಂಗ ಹೇಳಿಕೆ ನೀಡಬಾರದು, ನಾಯಕತ್ವದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಪಕ್ಷ ಸ್ಪಷ್ಟ ಸೂಚನೆ ನೀಡಿದ್ದರೂ ಇವರಾರೂ ಈ ಸೂಚನೆಗೆ ಮೂರು ಕಾಸಿನ ಕಿಮ್ಮತ್ತೂ ನೀಡಲಿಲ್ಲ.

ತಾರಕಕ್ಕೇರಿದ ಮಾತಿನ ಜಗಳ

ವಿಶ್ವನಾಥ್‌ ವಿರುದ್ಧ ಪ್ರತಿದಾಳಿಗಿಳಿದ ಸಿಎಂ ನಿಷ್ಠ ಶಾಸಕ ರೇಣುಕಾಚಾರ್ಯ, “ವಿಶ್ವನಾಥ್‌ ಇನ್ನಾದರೂ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಅವರು ನಮ್ಮ ಬಗ್ಗೆ, ಮುಖ್ಯಮಂತ್ರಿ ಕುಟುಂಬದ ಬಗ್ಗೆ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಮ್ಮಲ್ಲಿರುವ ಅವರ ಆಡಿಯೋ ವಿಡಿಯೋಗಳನ್ನು ಲೀಕ್‌ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದರು. ನೀರಾವರಿ ಇಲಾಖೆಯಲ್ಲಿ ಟೆಂಡರ್‌ ಫೈನಲ್‌ ಆಗಿದೆ ಎಂಬ ವಿಶ್ವನಾಥ್‌ ಅವರ ಆರೋಪ ಸತ್ಯಕ್ಕೆ ದೂರ ಎಂದರು ಅವರು.

ಶಾಸಕ ಹರತಾಳು ಹಾಲಪ್ಪ ಕೂಡ ವಿಶ್ವನಾಥ್‌ ವಿರುದ್ಧ ದಾಳಿ ನಡೆಸಿದರು. ಅವರು ಇನ್ನೊಬ್ಬರ ವೈಯಕ್ತಿಕ ವಿಚಾರಗಳನ್ನು ಮಾತಾಡುವುದು ಬಿಡಬೇಕು. ಇಲ್ಲವಾದರೆ ಅವರ ಬಗ್ಗೆ ನಾವು ಮಾತನಾಡಬೇಕಾಗುತ್ತದೆ ಎಂದರು..

ಇದೆಲ್ಲದರ ನಡುವೆ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಹೆಚ್.ವಿಶ್ವನಾಥ್‌ ಇವತ್ತು ಹರಿಹಾಯ್ದರು. ಈಶ್ವರಪ್ಪ ಕೂಡ ಕುಟುಂಬ ರಾಜಕಾರಣದ ಗಿರಾಕಿ ಎಂದು ಛೇಡಿಸಿದರು.

20,000 ಕೋಟಿ ಅಲ್ಲ, 21,764 ಕೋಟಿ ಟೆಂಡರ್‌: ಕಾಂಗ್ರೆಸ್‌

ಹೆಚ್.ವಿಶ್ವನಾಥ್‌ ಆರೋಪದ ಹಿನ್ನೆಲೆಯಲ್ಲೇ ಟೆಂಡರ್‌ ವಿಷಯಕ್ಕೆ ಹೊಸ ತಿರುವು ನೀಡಿದ ಕಾಂಗ್ರೆಸ್‌, ನೀರಾವರಿ ಇಲಾಖೆಯಲ್ಲಿ ಟೆಂಡರ್‌ ಅಂತಿಮ ಮಾಡಿರುವ ಮೊತ್ತ 20,000 ಕೋಟಿ ರೂ. ಅಲ್ಲ, 21,764 ಕೋಟಿ ರೂ. ಎಂದು ತಿಳಿಸಿದೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌, ವಿಶ್ವನಾಥ್ ಆರೋಪ ನೂರಕ್ಕೆ ನೂರು ಸತ್ಯ ಇದೆ. ಇದರಲ್ಲಿ ಕೇಂದ್ರದ ಪಾಲು ಇದೆ. ಈ ಬಗ್ಗೆ ಹೈಕೋರ್ಟ್, ಇಡಿ, ಸಿಬಿಐಗೆ ದೂರು ಕೊಡ್ತೇವೆ. ನಮ್ಮಲ್ಲೂ ಈ ಟೆಂಡರ್‌ ಬಗ್ಗೆ ದಾಖಲೆಗಳಿವೆ. ಕೆಲ ಅಧಿಕಾರಿಗಳು ನಮಗೂ ಮಾಹಿತಿ ನೀಡಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದರು.

ನೀರಾವರಿ ಇಲಾಖೆ ಎಲ್ಲ ಇಲಾಖೆಗಳ ಅಣ್ಣ ಇದ್ದಂತೆ. ರಮೇಶ್ ಜಾರಕಿಹೊಳಿ ಅವರ ಬಳಿ ಈ ಇಲಾಖೆ ಇತ್ತು. ಈಗ ಸಿಎಂ ಬಳಿ ಇದೆ. ನೀರಾವರಿ ಇಲಾಖೆಯಲ್ಲಿ ಸರಿಯಾಗಿ ಟೆಂಡರ್ ಕರೆಯದೆ ಟೆಂಡರ್ ಫೈನಲ್‌ ಆಗಿದೆ. 21,764 ಕೋಟಿ ರೂ. ಹಣ ದುರುಪಯೋಗ ಆಗಿದೆ. 100 ಕೋಟಿಗೂ ಹೆಚ್ಚಿನ ಯೋಜನೆ ಇದ್ದರೆ ಟೆಂಡರ್ ಕರೆಯಬೇಕು. ಇದಕ್ಕೆ ಆದ ಸರಿಯಾದ ಮಾರ್ಗಸೂಚಿ ಇದೆ. ಅದೆಲ್ಲವನ್ನು ಬಿಟ್ಟು ನೇರವಾಗಿ ರಾಜ್ಯ ಸರಕಾರ ಟೆಂಡರ್ ಕೊಟ್ಟಿದೆ. ಈಗಾಗಲೇ ಇದರಲ್ಲಿ 4,000 ಕೋಟಿ ರೂ.ಗಳನ್ನು ಟೆಂಡರ್‌ದಾರನಿಗೆ ಕೊಟ್ಟಿದ್ದಾರೆ. ಇದನ್ನು ಆಂಧ್ರ ಪ್ರದೇಶ, ಗುಜರಾತ್‌‌ ರಾಜ್ಯಗಳ ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. 10% ಕಮೀಷನ್ ಕೊಟ್ಟಿದ್ದಾರೆಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ ಎಂದು ಲಕ್ಷ್ಮಣ್‌ ದೂರಿದರು.

ಇಡೀ ಟೆಂಡರ್‌ನಲ್ಲಿ 10% ಕಮೀಷನ್‌ ವ್ಯವಹಾರ ನಡೆದಿದೆ ಎಂದು ವಿಶ್ವನಾಥ್‌ ದೂರಿದ್ದಾರೆ. ಅಂದರೆ, 2,100 ಕೋಟಿ ರೂ. ಬರೀ ಕಮೀಷನ್‌ ವ್ಯವಹಾರವೇ ನಡೆದಿದೆ ಎಂದು ಲಕ್ಷ್ಮಣ್‌ ದೂರಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರಕಾರಗಳನ್ನು 10% ಸರಕಾರಗಳೆಂದು ಟೀಕೆ ಮಾಡಿದ್ದರು. ಈಗ ಯಡಿಯೂರಪ್ಪ ಸರಕಾರ ಏನು? ಅದು ಎಷ್ಟು ಪರ್ಸೆಂಟ್‌ ಸರಕಾರ? ನಿಮಗೆಷ್ಟು ಪರ್ಸೆಂಟ್‌ ಸಿಕ್ಕಿದೆ? ಎಂದು ಅವರು ಮೋದಿ ಅವರನ್ನು ಪ್ರಶ್ನಿಸಿದರು.

Tags: Arun singhbs yediyurappaBY VijayendraH Vishwanathkarnataka bjp politicsKarnataka irrigation scamkickback for high comand
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
20,000 ಕೋಟಿ ರೂ. ಟೆಂಡರ್‌ ಬಗ್ಗೆ ಶಾಸಕ ಹೆಚ್‌.ವಿಶ್ವನಾಥ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ!!

20,000 ಕೋಟಿ ರೂ. ಟೆಂಡರ್‌ ಬಗ್ಗೆ ಶಾಸಕ ಹೆಚ್‌.ವಿಶ್ವನಾಥ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ!!

Comments 1

  1. Pingback: ಜಲ ಸಂಪನ್ಮೂಲದ ಸಿಕ್ಕು ಬಿಡಿಸಿ ಖಾತೆ ಹಂಚಿದ ಬೊಮ್ಮಾಯಿ - cknewsnow

Leave a Reply Cancel reply

Your email address will not be published. Required fields are marked *

Recommended

ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಬಂದ ಶ್ರೀಗಳು!

ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ಬಂದ ಶ್ರೀಗಳು!

5 years ago
ಶ್ರೀ ಆದಿ ಶಂಕರರು: ಕಾಲ್ನಡಿಗೆಯಿಂದಲೇ ಭಾರತಕ್ಕೆ ಜ್ಞಾನದ ಉಸಿರು ತುಂಬಿದ ಮಹಾನ್‌ ಸಂತ, ಧರ್ಮೋದ್ಧಾರದ ಜತೆಗೆ ಸಮೈಕ್ಯತೆ ಸಾರಿದ ಯುಗಪುರುಷ

ಶ್ರೀ ಆದಿ ಶಂಕರರು: ಕಾಲ್ನಡಿಗೆಯಿಂದಲೇ ಭಾರತಕ್ಕೆ ಜ್ಞಾನದ ಉಸಿರು ತುಂಬಿದ ಮಹಾನ್‌ ಸಂತ, ಧರ್ಮೋದ್ಧಾರದ ಜತೆಗೆ ಸಮೈಕ್ಯತೆ ಸಾರಿದ ಯುಗಪುರುಷ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ